AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಭಾವನಾತ್ಮಕ ವಿಡಿಯೋ ಮೂಲಕ ಕೆಕೆಆರ್​ಗೆ ವಿದಾಯ ಹೇಳಿದ ಶುಭ್​ಮನ್ ಗಿಲ್; ವಿಡಿಯೋ ನೋಡಿ

IPL 2022: ಈ ವೀಡಿಯೊದಲ್ಲಿ, ಅವರು ಫ್ರಾಂಚೈಸಿಯೊಂದಿಗೆ ಕಳೆದ ಹಲವು ಕ್ಷಣಗಳನ್ನು ಕವರ್ ಮಾಡಿದ್ದಾರೆ. ಗಿಲ್ ಮೊದಲ ಸೀಸನ್‌ನಿಂದ ಕೊನೆಯ ಸೀಸನ್‌ವರೆಗಿನ ಕ್ಷಣಗಳನ್ನು ಈ ವಿಡಿಯೋದಲ್ಲಿ ಕವರ್ ಮಾಡಿದ್ದಾರೆ.

IPL 2022: ಭಾವನಾತ್ಮಕ ವಿಡಿಯೋ ಮೂಲಕ ಕೆಕೆಆರ್​ಗೆ ವಿದಾಯ ಹೇಳಿದ ಶುಭ್​ಮನ್ ಗಿಲ್; ವಿಡಿಯೋ ನೋಡಿ
ಗಿಲ್
Follow us
TV9 Web
| Updated By: ಪೃಥ್ವಿಶಂಕರ

Updated on: Jan 23, 2022 | 8:56 PM

ಭಾರತದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಈ ಬಾರಿ ಐಪಿಎಲ್-2022ರಲ್ಲಿ ಹೊಸ ಫ್ರಾಂಚೈಸಿ ಅಹಮದಾಬಾದ್‌ಗಾಗಿ ಆಡಲಿದ್ದಾರೆ. ಇದಕ್ಕೂ ಮೊದಲು, ಗಿಲ್ 2018 ರಿಂದ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿದ್ದರು. ಆದರೆ ಈ ಬಾರಿ ಕೆಕೆಆರ್​ ಗಿಲ್ ಅವರನ್ನು ಉಳಿಸಿಕೊಳ್ಳಲಿಲ್ಲ. ಹೀಗಾಗಿ ಅವರನ್ನು ಅಹಮದಾಬಾದ್ ತಂಡ ಖರೀದಿಸಿತು. ಇದರೊಂದಿಗೆ ಗಿಲ್ ಮತ್ತು ಕೋಲ್ಕತ್ತಾ ನಡುವಿನ ನಾಲ್ಕು ವರ್ಷಗಳ ಒಡನಾಟಕ್ಕೆ ಅಂತ್ಯ ಬಿದ್ದಿದೆ. ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಅವರನ್ನು ಉಳಿಸಿಕೊಳ್ಳಲು ಕೋಲ್ಕತ್ತಾ ನಿರ್ಧರಿಸಿತ್ತು. ಇದೀಗ ಗಿಲ್ ಹೊಸ ತಂಡದ ಜೆರ್ಸಿ ತೊಡಲು ಸಿದ್ಧವಾಗಿದ್ದು, ತಮ್ಮ ಹಳೆಯ ತಂಡದ ಬಗ್ಗೆ ಭಾವುಕರಾಗಿದ್ದಾರೆ.

ಗಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ಕೆಕೆಆರ್‌ನೊಂದಿಗೆ ತಮ್ಮ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವರು ಫ್ರಾಂಚೈಸಿಯೊಂದಿಗೆ ಕಳೆದ ಹಲವು ಕ್ಷಣಗಳನ್ನು ಕವರ್ ಮಾಡಿದ್ದಾರೆ. ಗಿಲ್ ಮೊದಲ ಸೀಸನ್‌ನಿಂದ ಕೊನೆಯ ಸೀಸನ್‌ವರೆಗಿನ ಕ್ಷಣಗಳನ್ನು ಈ ವಿಡಿಯೋದಲ್ಲಿ ಕವರ್ ಮಾಡಿದ್ದಾರೆ.

ಕೆಕೆಆರ್ ಜೊತೆಗಿನ ಪಯಣ ಹೀಗಿದೆ ಪೃಥ್ವಿ ಶಾ ನಾಯಕತ್ವದಲ್ಲಿ ಭಾರತ 2018 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದುಕೊಂಡಿತು. ಗಿಲ್ ಈ ತಂಡದ ಭಾಗವಾಗಿದ್ದರು. ಈ ವಿಶ್ವಕಪ್ ಬಳಿಕ ಗಿಲ್ ಅವರನ್ನು ಕೆಕೆಆರ್ 1.8 ಕೋಟಿ ರೂ.ಗೆ ಖರೀದಿಸಿತ್ತು. ಈ ವರ್ಷ ಅವರ ಮೂಲ ಬೆಲೆ 20 ಲಕ್ಷ. ಗಿಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 58 ಪಂದ್ಯಗಳನ್ನು ಆಡಿದ್ದಾರೆ ಮತ್ತು 1417 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ರನ್ ರೇಟ್ 31.48 ಆಗಿತ್ತು ಮತ್ತು ಸ್ಟ್ರೈಕ್ ರೇಟ್ 123 ಆಗಿದೆ. 2019 ರಲ್ಲಿ, ಅವರು ಲೀಗ್‌ನ ವರ್ಷದ ಉದಯೋನ್ಮುಖ ಆಟಗಾರರಾಗಿದ್ದರು. ಗಿಲ್ ಭಾರತ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು 558 ರನ್ ಗಳಿಸಿದ್ದಾರೆ. ಅವರು ಮೂರು ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ 49 ರನ್‌ಗಳು ಬಂದಿವೆ.

ಈ ಆಟಗಾರರೊಂದಿಗೆ ಜೋಡಿಯಾಗಲಿದ್ದಾರೆ ಕೆಲವು ದಿನಗಳ ಹಿಂದೆ ಅಹಮದಾಬಾದ್ ತನ್ನ ಮೂವರು ಉಳಿಸಿಕೊಂಡಿರುವ ಆಟಗಾರರನ್ನು ಘೋಷಿಸಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್‌ನ ಪ್ರಮುಖ ಸದಸ್ಯ ಹಾರ್ದಿಕ್ ಪಾಂಡ್ಯ ಹೆಸರನ್ನು ಈ ಹೊಸ ಫ್ರಾಂಚೈಸಿ ಸೇರಿಸಿದೆ. ಪಾಂಡ್ಯ ತಂಡದ ನಾಯಕತ್ವ ವಹಿಸಲಿದ್ದಾರೆ. ಇವರಲ್ಲದೇ ಇಲ್ಲಿಯವರೆಗೆ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನೂ ಅಹಮದಾಬಾದ್ ತಂಡ ಸೇರ್ಪಡೆಗೊಳಿಸಿದೆ. ಮೂರನೇ ಆಟಗಾರ ಗಿಲ್. ತಂಡವು ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ಆಶಿಶ್ ನೆಹ್ರಾ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಟಗಾರ ಗ್ಯಾರಿ ಕಿಸ್ಟರ್ನ್ ಅವರನ್ನು ಸೇರಿಸಿಕೊಂಡಿದೆ.

ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ