Rohit Sharma: ಕ್ಯಾಪ್ಟನ್ ಪಟ್ಟಕ್ಕೆ ರೋಹಿತ್ ಶರ್ಮಾ ಸೂಕ್ತವೇ ಪ್ರಶ್ನೆಗೆ ಸೌರವ್ ಗಂಗೂಲಿ ಕೊಟ್ಟ ಸಮರ್ಥನೆ ಕೇಳಿ

| Updated By: Vinay Bhat

Updated on: Dec 17, 2021 | 8:22 AM

Sourav Ganguly on Rohit's captaincy:: ಸಿಸಿಐ ಅಧ್ಯಕ್ಷ  ಸೌರವ್ ಗಂಗೂಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೇಮಕ ಮಾಡಿರುವದನ್ನು ಸಮರ್ಥಿಸಿಕೊಂಡಿದ್ದಾರೆ. ಅವರನ್ನು ನಾಯಕನಾಗಿ ಮಾಡಿದ್ದಕ್ಕಾಗಿ ಆ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

Rohit Sharma: ಕ್ಯಾಪ್ಟನ್ ಪಟ್ಟಕ್ಕೆ ರೋಹಿತ್ ಶರ್ಮಾ ಸೂಕ್ತವೇ ಪ್ರಶ್ನೆಗೆ ಸೌರವ್ ಗಂಗೂಲಿ ಕೊಟ್ಟ ಸಮರ್ಥನೆ ಕೇಳಿ
Sourav Ganguly and Rohit Sharma
Follow us on

ಭಾರತೀಯ ಕ್ರಿಕೆಟ್ (Indian Cricket Team) ರಂಗದಲ್ಲಿ ನಾಯಕತ್ವದ ಕಿಚ್ಚು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿರಾಟ್ ಕೊಹ್ಲಿ (Virat Kohli) ಹಾಗೂ ಬಿಸಿಸಿಐ (BCCI) ನಡುವಣ ಮನಸ್ತಾಪ ವಿಶ್ವಕ್ಕೇ ಬಹಿರಂಗವಾಗಿದೆ. ಕೊಹ್ಲಿ ವಿವಾದಾತ್ಮಕ ಸುದ್ದಿಗೋಷ್ಠಿ ಒಂದುಕಡೆಯಾದರೆ ಇತ್ತ ರೋಹಿತ್ ಶರ್ಮಾ (Rohit Sharma) ಅವರನ್ನು ಏಕದಿನ ನಾಯಕತ್ವಕ್ಕೆ ಆಯ್ಕೆ ಮಾಡಿದ ಬಗ್ಗೆ ಕೂಡ ಪರ- ವಿರೋಧಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ  ಸೌರವ್ ಗಂಗೂಲಿ (Sourav Ganguly) ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೇಮಕ ಮಾಡಿರುವದನ್ನು ಸಮರ್ಥಿಸಿಕೊಂಡಿದ್ದಾರೆ. ಅವರನ್ನು ನಾಯಕನಾಗಿ ಮಾಡಿದ್ದಕ್ಕಾಗಿ ಆ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

“ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಐದು ಪ್ರಶಸ್ತಿಗಳನ್ನು ರೋಹಿತ್ ಗೆದ್ದಿದ್ದಾರೆ. ಡೆಕ್ಕನ್ ಚಾರ್ಜರ್ಸ್‌ನೊಂದಿಗೆ ಮತ್ತೊಂದು ಪ್ರಶಸ್ತಿ. ಒತ್ತಡದಲ್ಲಿ ಅವರು ತಂಡವನ್ನು ಉತ್ತಮವಾಗಿ ನಿಭಾಹಿಸುತ್ತಾರೆ. ವಿರಾಟ್ ಅವರು ಟಿ20 ನಾಯಕತ್ವದ ಭಾಗವಾಗಲು ಬಯಸುವುದಿಲ್ಲ ಎಂದು ನಿರ್ಧರಿಸಿದಾಗ ಆ ಜಾಗಕ್ಕೆ ರೋಹಿತ್ ಅತ್ಯುತ್ತಮ ಆಯ್ಕೆಯಾಗಿದ್ದರು. ಈಗಾಗಲೇ ನಾವು ನೋಡಿರುವಂತೆ ರೋಹಿತ್ ನಾಯಕತ್ವದಲ್ಲಿ ಭಾರತ ನ್ಯೂಜಿಲೆಂಡ್ ಅನ್ನು 3-0 ಅಂತರದಲ್ಲಿ ಸೋಲಿಸಿ ಉತ್ತಮವಾಗಿ ಪ್ರಾರಂಭ ಕಂಡಿದ್ದೇವೆ” ಎಂದು ಗಂಗೂಲಿ ಹೇಳಿದ್ದಾರೆ.

“ನಿಜ ಹೇಳಬೇಕೆಂದರೆ, 2017 ರ ಚಾಂಪಿಯನ್ಸ್ ಟ್ರೋಫಿ ಮತ್ತು 2019 ರ ವಿಶ್ವಕಪ್‌ನಲ್ಲಿ, ಭಾರತ ಉತ್ತಮವಾಗಿತ್ತು. 2019 ರ ವಿಶ್ವಕಪ್‌ನಲ್ಲಿ ನಾವು ಅಸಾಧಾರಣವಾಗಿದ್ದೇವೆ, ಒಂದು ಕೆಟ್ಟ ದಿನ, ಮತ್ತು ಎರಡು ತಿಂಗಳ ನಮ್ಮ ಸಂಪೂರ್ಣ ಶ್ರಮವನ್ನು ಅಳಿಸಿಹಾಕಿತು. ನಾವು ಈ ವಿಶ್ವಕಪ್  ಆಡಿದ ರೀತಿಯಲ್ಲಿ ನಾನು ನಿರಾಶೆಗೊಂಡಿದ್ದೇನೆ. ಕಳೆದ 4-5 ವರ್ಷಗಳಲ್ಲಿ ನಾವು ಆಡಿದ ಅತ್ಯಂತ ಕಳಪೆ ಆಟವಾಗಿದೆ” ಎಂದು ಸೌರವ್ ಗಂಗೂಲಿ ಹೇಳಿದರು.

ಗಂಗೂಲಿ ವಿರುದ್ಧ ಗರಂ ಆದ ಅಭಿಮಾನಿಗಳು:

ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಿತ್ತು ಆದರೂ ಸಹ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದರು ಎಂಬ ಹೇಳಿಕೆಯನ್ನು ಗಂಗೂಲಿ ಈ ಹಿಂದೆ ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತಾಗಿ ಮಾತನಾಡಿ, ತಾನು ಭಾರತ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಬದಲಾಗಿ ಬಿಸಿಸಿಐ ತನ್ನ ಮನವಿಯನ್ನು ಸ್ವೀಕರಿಸಿತು ಎಂದು ಸ್ಪಷ್ಟನೆಯನ್ನು ನೀಡಿದರು. ಈ ರೀತಿ ಕೊಹ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಗಂಗೂಲಿ ನೀಡಿದ್ದ ಹೇಳಿಕೆ ಸುಳ್ಳು ಎಂದು ಸಾಮಾಜಿಕ ಜಾಲತಾಣದ ತುಂಬಾ ಗಂಗೂಲಿ ವಿರುದ್ಧ ಸಾಲು ಸಾಲು ಟೀಕೆಗಳು ವ್ಯಕ್ತವಾಗತೊಡಗಿದವು.

ವಿರಾಟ್‌ ಕೊಹ್ಲಿ ನಡೆಸಿದ ವಿವಾದಾತ್ಮಕ ಪತ್ರಿಕಾಗೋಷ್ಠಿಯ ಒಂದು ದಿನದ ಬಳಿಕ ಕೊನೆಗೂ ಮೌನ ಮುರಿದಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ, ಈ ವಿಚಾರವಾಗಿ ಕ್ರಿಕೆಟ್‌ ಮಂಡಳಿ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದಿದ್ದಾರೆ. “ಸದ್ಯಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಾಗಲಿ ಅಥವಾ ಪತ್ರಿಕಾಗೋಷ್ಠಿ ನಡೆಸುವುದಾಗಲಿ ಇಲ್ಲ. ಈ ವಿಚಾರವಾಗಿ ಬಿಸಿಸಿಐ ಎಲ್ಲವನ್ನೂ ನೋಡಿಕೊಳ್ಳುತ್ತದೆ,” ಎಂದು ಗಂಗೂಲಿ ಹೇಳಿದ್ದಾರೆ.

Virat Kohli: ವಿವಾದದ ಸುಳಿಗೆ ಸಿಲುಕಿಕೊಂಡ ವಿರಾಟ್ ಕೊಹ್ಲಿ: ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದ ಕಪಿಲ್ ದೇವ್

(Sourav Ganguly has explained why Rohit Sharma deserves to be Team India captain in the limited-overs format)