AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka Crisis: ಅಭ್ಯಾಸಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ: ಪೆಟ್ರೋಲ್​ಗಾಗಿ ಎರಡು ದಿನ ಕಾದು ಕುಳಿತ ಲಂಕಾ ಕ್ರಿಕೆಟಿಗ

Sri Lanka Crisis: ಲಂಕಾ ಕ್ರಿಕೆಟಿಗ ಚಮಿಕಾ ಕರುಣರತ್ನೆ (Chamika Karunaratne) ಈ ಬಗ್ಗೆ ಮಾತನಾಡಿದ್ದು ಅಭ್ಯಾಸ ನಡೆಸಲು ಕೂಡ ಸಾಧ್ಯವಾಗುತ್ತಿಲ್ಲ, ಪೆಟ್ರೋಲ್​ಗಾಗಿ (Petrol) ಎರಡು ದಿನಗಳಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

Sri Lanka Crisis: ಅಭ್ಯಾಸಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ: ಪೆಟ್ರೋಲ್​ಗಾಗಿ ಎರಡು ದಿನ ಕಾದು ಕುಳಿತ ಲಂಕಾ ಕ್ರಿಕೆಟಿಗ
Chamika Karunaratne
TV9 Web
| Edited By: |

Updated on:Jul 16, 2022 | 12:43 PM

Share

ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ (Sri Lanka) ಕ್ರಿಕೆಟ್ ಆಟಗಾರರು ಕೂಡ ಪರದಾಡುವ ಸ್ಥಿತಿ ಉಂಟಾಗಿದೆ. ಲಂಕಾ ಕ್ರಿಕೆಟಿಗ ಚಮಿಕಾ ಕರುಣರತ್ನೆ (Chamika Karunaratne) ಈ ಬಗ್ಗೆ ಮಾತನಾಡಿದ್ದು ಅಭ್ಯಾಸ ನಡೆಸಲು ಕೂಡ ಸಾಧ್ಯವಾಗುತ್ತಿಲ್ಲ, ಪೆಟ್ರೋಲ್​ಗಾಗಿ (Petrol) ಎರಡು ದಿನಗಳಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಇವರು, “ಅದೃಷ್ಟದಿಂದ ಎರಡು ದಿನ ಕಾದು ಈಗ ನನಗೆ ಪೆಟ್ರೋಲ್ ಸಿಕ್ಕಿದೆ. ಕ್ರಿಕೆಟ್ ಪಂದ್ಯದ ಅಭ್ಯಾಸಕ್ಕೆ ತೆರಳು ಕೂಡ ನನಗೆ ಸಾಧ್ಯವಾಗುತ್ತಿಲ್ಲ,” ಎಂದು ಹೇಳಿದ್ದಾರೆ. ಚಮಿಕಾ 2019 ರಲ್ಲಿ ಶ್ರೀಲಂಕಾ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಮುಂದಿನ ತಿಂಗಳು ಆಗಸ್ಟ್​​ನಲ್ಲಿ ಶ್ರೀಲಂಕಾದಲ್ಲಿ ಏಷ್ಯಾಕಪ್ 2022 ಆಯೋಜಿಸಲಾಗಿದೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಪಂದ್ಯವಳಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಚಮಿಕಾ, “ಏಷ್ಯಾಕಪ್ ಬರುತ್ತಿದೆ ಹಾಗೂ ಲಂಕಾ ಪ್ರೀಮಿಯರ್ ಲೀಗ್ ಕೂಡ ಇದೇ ವರ್ಷ ನಡೆಯಲಿದೆ. ನನಗೆ ಏನು ಆಗಲಿದೆ ಎಂದು ಹೇಳಲು ಆಗುತ್ತಿಲ್ಲ. ನಾನು ಕೊಲಂಬೊಕ್ಕೆ ತೆರಳಿ ಅಲ್ಲಿ ಅಭ್ಯಾಸ ನಡೆಸಿ ಕ್ಲಬ್ ಸೀಸನ್​ಗಳಲ್ಲಿ ಆಡಬೇಕಷ್ಟೆ. ಪೆಟ್ರೋಲ್​ಗಾಗಿ ಎರಡು ದಿನ ಸಾಲಿನಲ್ಲಿ ನಿಂತಿದ್ದೇನೆ. ಅದೃಷ್ಟದಿಂದ ಇಂದು ಸಿಕ್ಕಿತು. ಆದರೆ, ಇದು ಎರಡು ಮೂರು ದಿನಕ್ಕಷ್ಟೆ ಬರಬಹುದು,” ಎಂದಿದ್ದಾರೆ.

“ನಾವು ಏಷ್ಯಾಕಪ್​ಗೆ ತಯಾರಾಗಿದ್ದೇವೆ. ನನಗನಿಸುವ ಪ್ರಕಾರ ಅದೊಂದು ದೊಡ್ಡ ಈವೆಂಟ್. ನಾವು ಆಸ್ಟ್ರೇಲಿಯಾ ಜೊತೆಗೆ ಇಲ್ಲಿ ಪಂದ್ಯವನ್ನು ಆಡಿದ್ದು ಉತ್ತಮವಾಗಿತ್ತು. ಏಷ್ಯಾಕಪ್​ಗೆ ತಯಾರಿ ಕೂಡ ನಡೆಯುತ್ತಿದೆ. ಶ್ರೀಲಂಕಾದಲ್ಲಿ ಎಲ್ಲವೂ ಸರಿಯಾಗಿ ಸಾಗುತ್ತಿಲ್ಲ. ಒಳ್ಳೆಯ ಜನರು ಬಂದರೆ ಒಳ್ಳೆಯದು ನಡೆಯುತ್ತದೆ ಎಂಬ ನಂಬಿಕೆಯಿದೆ,” ಎಂಬುದು ಚಮಿಕಾ ಮಾತು.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Image
Team India: ನಿವೃತ್ತಿಗೆ ಮುಂದಾದ ಟೀಮ್ ಇಂಡಿಯಾದ ಈ ಮೂರು ಸ್ಟಾರ್ ಆಟಗಾರರು: ಯಾರು ನೋಡಿ
Image
Virat Kohli: ಕೊಹ್ಲಿಯನ್ನು ಭಾರತ ತಂಡದಿಂದ ಕೈಬಿಡುವವರು ಇನ್ನೂ ಹುಟ್ಟಿಲ್ಲ ಎಂದ ಪಾಕ್ ಕ್ರಿಕೆಟಿಗ
Image
IRE vs NZ: ರಣ ರೋಚಕ ಪಂದ್ಯ: 361 ರನ್​​ಗಳ ಟಾರ್ಗೆಟ್ ಬೆನ್ನಟ್ಟಿ 1 ರನ್​ನಿಂದ ಸೋತ ಐರ್ಲೆಂಡ್

ಶ್ರೀಲಂಕಾ vs ಪಾಕಿಸ್ತಾನ:

ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾ ಕ್ರಿಕೆಟ್ ತಂಡ ಗಲ್ಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಇಂದು ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ದಿಮುತ್ ಕರುಣರತ್ನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಕೇವಲ 1 ರನ್ ಗಳಿಸಿ ಶಾಹಿನ್ ಅಫ್ರಿದಿ ಬೌಲಿಂಗ್​ನಲ್ಲಿ ಔಟಾಗಿದ್ದಾರೆ. ಸದ್ಯ ಕ್ರೀಸ್​ನಲ್ಲಿ ಓಶಾಡ ಫೆರ್ನಾಂಡೊ ಹಾಗೂ ಕುಸಲ್ ಮೆಂಡಿಸ್ ಇದ್ದು ಎಚ್ಚರಿಕೆಯ ಆಟ ಪ್ರದರ್ಶಿಸುತ್ತಿದ್ದಾರೆ.

Published On - 11:12 am, Sat, 16 July 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ