AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli Century: ಕೊಹ್ಲಿ ಶತಕ ಗಳಿಸಲೆಂದು ವೈಡ್ ಕೊಡದೆ ಸಹಾಯ ಮಾಡಿಲ್ಲ ಅಂಪೈರ್: ಇಲ್ಲಿದೆ ನಿಜಾಂಶ

Umpire Kettleborough Controversy, India vs Bangladesh: ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ 2 ರನ್‌ಗಳ ಅಗತ್ಯವಿದ್ದಾಗ, 97 ರನ್‌ಗಳಲ್ಲಿದ್ದ ಕೊಹ್ಲಿ ಶತಕ ಸಿಡಿಸಲು ಬೌಂಡರಿ ಹುಡುಕುತ್ತಿದ್ದರು. ಆಗ ನಸುಮ್ ಅಹ್ಮದ್ ಲೆಗ್​ಸೈಡ್ ಬೌಲ್ ಮಾಡಿದರು. ಆದಾಗ್ಯೂ, ಅಂಪೈರ್ ರಿಚರ್ಡ್ ಕೆಟಲ್‌ಬರೋ ಇದನ್ನು ವೈಡ್ ಸಿಗ್ನಲ್ ಮಾಡಲಿಲ್ಲ. ಇದಕ್ಕೆ ಕಾರಣವಿದೆ.

Virat Kohli Century: ಕೊಹ್ಲಿ ಶತಕ ಗಳಿಸಲೆಂದು ವೈಡ್ ಕೊಡದೆ ಸಹಾಯ ಮಾಡಿಲ್ಲ ಅಂಪೈರ್: ಇಲ್ಲಿದೆ ನಿಜಾಂಶ
Virat Kohli - Umpire Wide
Vinay Bhat
|

Updated on: Oct 20, 2023 | 8:48 AM

Share

ಐಸಿಸಿ ಏಕದಿನ ವಿಶ್ವಕಪ್‌ನ 17 ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ ವಿವಾದ ಕೂಡ ಹುಟ್ಟುಕೊಂಡಿದೆ. ಭಾರತದ ಗೆಲುವಿಗೆ 2 ರನ್ ಬೇಕಿದ್ದಾಗ, ಕೊಹ್ಲಿ ಶತಕಕ್ಕೆ 3 ರನ್​ಗಳ ಅವಶ್ಯಕತೆಯಿತ್ತು. ಆಗ ಅಂಪೈರ್ ತೆಗೆದುಕೊಂಡ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತದ ಗೆಲುವಿಗೆ ಕೊನೆಯ 9 ಓವರ್‌ಗಳಲ್ಲಿ ಕೇವಲ 2 ರನ್‌ಗಳ ಅಗತ್ಯವಿತ್ತು. ನಸುಮ್ ಅಹ್ಮದ್ ಎಸೆದ 42ನೇ ಓವರ್‌ನಲ್ಲಿ ಕೊಹ್ಲಿ ಸ್ಟ್ರೈಕ್‌ನಲ್ಲಿದ್ದರು. ಈ ಸಂದರ್ಭ ಮೊದಲ ಬಾಲ್ ಲೆಗ್ ಸೈಡ್​ನಲ್ಲಿ ಹಾದು ಹೋದರೂ ಅಂಪೈರ್ ವೈಡ್ ಎಂಬ ತೀರ್ಮಾನ ಪ್ರಕಟಿಸಿಲ್ಲ.

ಗೆಲುವಿಗೆ 2 ರನ್‌ಗಳ ಅಗತ್ಯವಿದ್ದಾಗ, 97 ರನ್‌ಗಳಲ್ಲಿದ್ದ ಕೊಹ್ಲಿ ಶತಕ ಸಿಡಿಸಲು ಬೌಂಡರಿ ಹುಡುಕುತ್ತಿದ್ದರು. ಆದಾಗ್ಯೂ, ನಸುಮ್ ಅಹ್ಮದ್ ತಮ್ಮ ಮೊದಲ ಎಸೆತವನ್ನು ಲೆಗ್ ಸೈಡ್ ಕೆಳಗೆ ಬೌಲ್ ಮಾಡಿದ್ದು, ಇದು ಸ್ಪಷ್ಟವಾಗಿ ವೈಡ್ ಎಂದು ಕಾಣುತ್ತಿತ್ತು. ಹೀಗಿದ್ದರೂ, ಅಂಪೈರ್ ರಿಚರ್ಡ್ ಕೆಟಲ್‌ಬರೋ ಇದನ್ನು ವೈಡ್ ಸಿಗ್ನಲ್ ಮಾಡಲಿಲ್ಲ. ಇದು ಬಾಂಗ್ಲಾ ಆಟಗಾರರನ್ನು ಮಾತ್ರವಲ್ಲದೆ ಭಾರತೀಯ ಡ್ರೆಸ್ಸಿಂಗ್ ಕೋಣೆಯನ್ನು ಸಹ ಆಶ್ಚರ್ಯಗೊಳಿಸಿತು. ಕೊಹ್ಲಿ ನಂತರ ಡೀಪ್ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್‌ನೊಂದಿಗೆ ಆಟವನ್ನು ಮುಗಿಸಿ ಶತಕವನ್ನು ಕೂಡ ಪೂರ್ಣಗೊಳಿಸಿದರು.

ಇದನ್ನೂ ಓದಿ
Image
ಪೋಸ್ಟ್ ಮ್ಯಾಚ್​ನಲ್ಲಿ ಕೊಹ್ಲಿ ಶತಕದ ಬಗ್ಗೆ ಒಂದೂ ಮಾತನಾಡದ ರೋಹಿತ್
Image
ಭರ್ಜರಿ ಸೆಂಚುರಿ ಸಿಡಿಸಿ ಮತ್ತೊಂದು ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ
Image
ಏಕದಿನ ವಿಶ್ವಕಪ್​ನಲ್ಲಿ ಲಾರಾ-ಡಿವಿಲಿಯರ್ಸ್ ದಾಖಲೆ ಮುರಿದ ರೋಹಿತ್- ಕೊಹ್ಲಿ
Image
ಗಿಲ್ ಸಿಡಿಸಿದ ಸಿಕ್ಸರ್​ಗೆ ಸಾರಾ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ?

ವಿವಾದಕ್ಕೆ ಕಾರಣವಾಗಿರುವ ರಿಚರ್ಡ್ ಕೆಟಲ್‌ಬರೋ ನಿರ್ಧಾರದ ವಿಡಿಯೋ ನೋಡಿ:

ನಿಯಮದಲ್ಲಿ ಏನಿದೆ?:

ಅಂಪೈರ್‌ನಿಂದ ಈ ಬಗ್ಗೆ ಅಧಿಕೃತ ಸ್ಪಷ್ಟನೆ ಇಲ್ಲ. ಆದರೆ ಕೆಟಲ್‌ಬರೋ ಆ ಸಂದರ್ಭದಲ್ಲಿ ವೈಡ್ ನೀಡದಿರಲು ಕಾರಣವಿರಬಹುದು. ಕಳೆದ ವರ್ಷ ಕಾನೂನುಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. MCC ಲಾಸ್ ಆಫ್ ಕ್ರಿಕೆಟ್​ನಲ್ಲಿ ವೈಡ್ ಅನ್ನು ಹೇಗೆ ನಿರ್ಣಯಿಸಬೇಕು ಎಂದು ಹೇಳುವ ಕಾನೂನು 22.1.1 ಆಗಿದೆ. ಈ ಕಾನೂನಿನ ಪ್ರಕಾರ, “ಬೌಲರ್ ನೋ ಬಾಲ್ ಆಗದೆ ಚೆಂಡನ್ನು ಬೌಲ್ ಮಾಡಿದರೆ, ಅಂಪೈರ್ ಅದನ್ನು ವೈಡ್ ಎಂದು ನಿರ್ಣಯಿಸುತ್ತಾರೆ.”

IND vs BAN, ICC World Cup: ಪೋಸ್ಟ್ ಮ್ಯಾಚ್​ನಲ್ಲಿ ಕೊಹ್ಲಿ ಶತಕದ ಬಗ್ಗೆ ಒಂದೂ ಮಾತನಾಡದ ರೋಹಿತ್

ಷರತ್ತು 22.1.2 ಪ್ರಕಾರ “ಸಾಮಾನ್ಯ ಕ್ರಿಕೆಟ್ ಸ್ಟ್ರೋಕ್ ಮೂಲಕ ಬ್ಯಾಟ್‌ನಿಂದ ಹೊಡೆಯಲು ಸಾಧ್ಯವಾಗುವಷ್ಟು ದೂರದಿಂದ ಚೆಂಡು ಹಾದುಹೋದರೂ ಅದು ವೈಡ್ ಎಂದು ಪರಿಗಣಿಸಲಾಗುತ್ತದೆ.” ಹೀಗೆ ಕಳೆದ ವರ್ಷ ಮಾರ್ಚ್‌ನಲ್ಲಿ, MCC ಹೊಸ ಕಾನೂನು ಸಂಹಿತೆಯನ್ನು ಘೋಷಿಸಿದೆ.

ಕಾನೂನು 22.1 ಅನ್ನು ತಿದ್ದುಪಡಿ ಮಾಡಲಾಗಿದ್ದು, ಇದರಲ್ಲಿ ಬ್ಯಾಟರ್ ನಿಂತಿರುವ ಸ್ಥಳಕ್ಕೆ ಮಾತ್ರ ವೈಡ್ ಅನ್ವಯಿಸುತ್ತದೆ. ಈಗ, ನಸುಮ್-ಕೊಹ್ಲಿ ವಿಷಯಕ್ಕೆ ಬಂದರೆ, ಇಲ್ಲಿ ಕೊಹ್ಲಿ ಬೌಂಡರಿ ಬಾರಿಸಲು ಕಾದುಕುಳಿತಿದ್ದರಿಂದ ಲೆಗ್ ಸ್ಟಂಪ್‌ನ ಹೊರಗೆ ಬಲಗಾಲನ್ನು ಇರಿಸಿದ್ದರು. ನಸುಮ್ ಬೌಂಡರಿ ಮತ್ತು ಸಿಕ್ಸರ್ ಹೊಡೆಯುವುದನ್ನು ತಪ್ಪಿಸಲು ಕೊಹ್ಲಿಗೆ ಬೌಲಿಂಗ್ ಮಾಡಲು ಪ್ರಯತ್ನಿಸಿದರು. ಆಗ ಚೆಂಡನ್ನು ಲೆಗ್ ಸೈಡ್‌ನಿಂದ ಹಾಕಿದಾಗ ಕೊಹ್ಲಿ ನಾರ್ಮಲ್ ಪೊಸಿಷನ್​ಗೆ ಮರಳಿದ್ದಾರೆ. ಹೀಗಾಗಿ ಕಾನೂನಿನ ಬದಲಾವಣೆಯಿಂದ ಅಂಪೈರ್ ಕೆಟಲ್‌ಬರೋ ಅದನ್ನು ವೈಡ್ ಅಲ್ಲ ಎಂದು ನೀಡದಿರುವ ಸಾಧ್ಯತೆಯಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ