AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Hazare Trophy 2021: ತಮಿಳುನಾಡು ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಹಿಮಾಚಲ ಪ್ರದೇಶ

Vijay Hazare Trophy 2021: ವಿಜಯ್ ಹಜಾರೆ ಟ್ರೋಫಿ 2021-22ರ ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಸೋಲಿಸುವ ಮೂಲಕ ಹಿಮಾಚಲ ಪ್ರದೇಶ ಇತಿಹಾಸ ನಿರ್ಮಿಸಿದೆ.

Vijay Hazare Trophy 2021: ತಮಿಳುನಾಡು ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಹಿಮಾಚಲ ಪ್ರದೇಶ
ಚಾಂಪಿಯನ್ ಪಟ್ಟಕ್ಕೇರಿದ ಹಿಮಾಚಲ ಪ್ರದೇಶ
TV9 Web
| Edited By: |

Updated on:Dec 26, 2021 | 6:12 PM

Share

ವಿಜಯ್ ಹಜಾರೆ ಟ್ರೋಫಿ 2021-22ರ ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಸೋಲಿಸುವ ಮೂಲಕ ಹಿಮಾಚಲ ಪ್ರದೇಶ ಇತಿಹಾಸ ನಿರ್ಮಿಸಿದೆ. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಿಮಾಚಲ ತಂಡ 6 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 49.4 ಓವರ್‌ಗಳಲ್ಲಿ 314 ರನ್ ಗಳಿಸಿತು. ಉತ್ತರವಾಗಿ ಹಿಮಾಚಲ 47.3 ಓವರ್‌ಗಳಲ್ಲಿ 299 ರನ್ ಗಳಿಸಿತು ಆದರೆ ಪಂದ್ಯದ ಅಂತಿಮ ಕ್ಷಣಗಳಲ್ಲಿ ಮಂದಬೆಳಕು ಎದುರಾಯಿತು. ಇದಾದ ನಂತರ ವಿಜೆಡಿ ವಿಧಾನದಡಿಯಲ್ಲಿ ಹಿಮಾಚಲವನ್ನು ವಿಜೇತ ತಂಡ ಎಂದು ಘೋಷಿಸಲಾಯಿತು. ಹಿಮಾಚಲ ಮೊದಲ ಬಾರಿಗೆ ದೇಶೀಯ ಪಂದ್ಯಾವಳಿಯನ್ನು ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಹಿಮಾಚಲ ಪ್ರದೇಶ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿದೆ.

ಯುವ ಆರಂಭಿಕ ಆಟಗಾರ ಶುಭಂ ಅರೋರಾ ಹಿಮಾಚಲ ಪ್ರದೇಶದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 8ನೇ ಲಿಸ್ಟ್ ಎ ಪಂದ್ಯವನ್ನು ಆಡಿದ ಶುಭಂ ಅರೋರಾ 131 ಎಸೆತಗಳಲ್ಲಿ ಅಜೇಯ 136 ರನ್ ಗಳಿಸಿದರು. ಶುಭಂ ಅರೋರಾ ಅವರ ಶತಕದಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿದ್ದವು. ಅಮಿತ್ ಕುಮಾರ್ ಕೂಡ 74 ರನ್​ಗಳ ಅಮೋಘ ಇನಿಂಗ್ಸ್ ಆಡಿದರು. ಅಂತಿಮವಾಗಿ ನಾಯಕ ರಿಷಿ ಧವನ್ 23 ಎಸೆತಗಳಲ್ಲಿ 42 ರನ್ ಗಳಿಸಿ ತಂಡವನ್ನು ಚಾಂಪಿಯನ್ ಮಾಡಿದರು. ತಮಿಳುನಾಡು ಪರ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 116 ಮತ್ತು ಬಾಬಾ ಇಂದ್ರಜಿತ್ 80 ರನ್ ಗಳಿಸಿದರು. ಶಾರುಖ್ ಖಾನ್ ಕೂಡ 21 ಎಸೆತಗಳಲ್ಲಿ 42 ರನ್ ಗಳಿಸಿದರು ಆದರೆ ಈ ಮೂವರ ಇನ್ನಿಂಗ್ಸ್‌ಗಳು ತಮಿಳುನಾಡು ಗೆಲ್ಲಲು ಸಾಕಾಗಲಿಲ್ಲ.

ಶುಭಂ ಅರೋರಾ ಅಬ್ಬರ 315 ರನ್‌ಗಳ ಗುರಿ ಬೆನ್ನತ್ತಿದ ಹಿಮಾಚಲ ಪ್ರದೇಶ ಉತ್ತಮ ಆರಂಭ ಪಡೆಯಿತು. ಶುಭಂ ಅರೋರಾ ಅವರೊಂದಿಗೆ ಪ್ರಶಾಂತ್ ಚೋಪ್ರಾ ಅರ್ಧಶತಕದ ಜೊತೆಯಾಟ ನಡೆಸಿದರು. ಆದರೆ, 9ನೇ ಓವರ್‌ನಲ್ಲಿ ಸ್ಪಿನ್ನರ್ ಸಾಯಿ ಕಿಶೋರ್ ಅವರು ಪ್ರಶಾಂತ್ ಚೋಪ್ರಾ ಅವರನ್ನು 21 ರನ್‌ಗೆ ಔಟ್ ಮಾಡುವ ಮೂಲಕ ಹಿಮಾಚಲಕ್ಕೆ ಮೊದಲ ಹೊಡೆತ ನೀಡಿದರು. ನಿಖಿಲ್ ಗಂಗ್ಟಾ ಕೂಡ 18 ರನ್ ಗಳಿಸಿ ಔಟಾದರು. ಇದಾದ ನಂತರ ಶುಭಂ ಅರೋರಾ ಮತ್ತು ಅಮಿತ್ ಕುಮಾರ್ ಹಿಮಾಚಲದ ಇನ್ನಿಂಗ್ಸ್ ಅನ್ನು ಅಂದಗೊಳಿಸಿದರು. ಇವರಿಬ್ಬರೂ ನಾಲ್ಕನೇ ವಿಕೆಟ್‌ಗೆ 148 ರನ್‌ಗಳ ಜತೆಯಾಟವಾಡುವ ಮೂಲಕ ತಮಿಳುನಾಡು ತಂಡದ ಗೆಲುವಿನ ಉದ್ದೇಶವನ್ನು ಭಗ್ನಗೊಳಿಸಿದರು. ಆದಾಗ್ಯೂ, ಅಪರಾಜಿತ್ 74 ರನ್ ಗಳಿಸಿದ್ದ ಅಮಿತ್ ಕುಮಾರ್ ಅವರನ್ನು ಔಟ್ ಮಾಡುವ ಮೂಲಕ ತಮಿಳುನಾಡು ತಂಡವನ್ನು ಮರಳಿ ತರಲು ಪ್ರಯತ್ನಿಸಿದರು. ಇದು ಸಂಭವಿಸದಿದ್ದರೂ, ಹಿಮಾಚಲ ತಂಡದ ನಾಯಕ ರಿಷಿ ಧವನ್ 23 ಎಸೆತಗಳಲ್ಲಿ 42 ರನ್ ಗಳಿಸಿದರು ಮತ್ತು ಈ ಸಮಯದಲ್ಲಿ ಶುಭಂ ಅರೋರಾ ಕೂಡ ತಮ್ಮ ಲಿಸ್ಟ್ ಎ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದರು. ಪಂದ್ಯವು ರೋಚಕ ಹಂತದಲ್ಲಿದ್ದಾಗ ಮತ್ತು ಹಿಮಾಚಲ ಪ್ರದೇಶಕ್ಕೆ 15 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಕೆಟ್ಟ ಬೆಳಕಿನಿಂದ ಆಟವನ್ನು ನಿಲ್ಲಿಸಲಾಯಿತು. ಅಂತಿಮವಾಗಿ ವಿಜೆಡಿ ನಿಯಮದ ಪ್ರಕಾರ ಹಿಮಾಚಲ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

Published On - 5:49 pm, Sun, 26 December 21

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ