AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ‘ಗೆಲುವು ನಮ್ಮ ಸಂಸ್ಕೃತಿ; ದಾಖಲೆಗಳು ಉತ್ತಮ ಪಂದ್ಯವಾಡಿದ್ದರ ಫಲಿತಾಂಶಗಳು’- ನಾಯಕ ವಿರಾಟ್ ಕೊಹ್ಲಿ

Dinesh Karthik: ಇಂಗ್ಲೆಂಡ್​ನಂತಹ ದೇಶದ ವಿರುದ್ಧ ಅವರದೇ ನೆಲದಲ್ಲಿ ಗೆಲ್ಲುವುದು ವಿಶ್ವದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡಿ ಗೆಲ್ಲುವುದಕ್ಕೆ ಸಮಾನವಾದದ್ದು ಎನ್ನುವುದು ಭಾರತ ಕ್ರಿಕೆಟ್ ತಂಡದ ಕಪ್ತಾನ ಕೊಹ್ಲಿ ಅನಿಸಿಕೆ.

Virat Kohli: ‘ಗೆಲುವು ನಮ್ಮ ಸಂಸ್ಕೃತಿ; ದಾಖಲೆಗಳು ಉತ್ತಮ ಪಂದ್ಯವಾಡಿದ್ದರ ಫಲಿತಾಂಶಗಳು’- ನಾಯಕ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್
TV9 Web
| Updated By: shivaprasad.hs|

Updated on: Aug 03, 2021 | 3:53 PM

Share

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ ಅತ್ಯುತ್ತಮ ಗೆಲುವಿನ ಸರಾಸರಿಯನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್​ ಅನ್ನು ರಕ್ಷಣಾತ್ಮಕ ಆಟವಾಗಿ ನೋಡುತ್ತಿದ್ದ ಕಾಲದಲ್ಲಿ, ಅದನ್ನು ಆಕ್ರಮಣಕಾರಿ ಮಾದರಿಯಲ್ಲಿ ಆಡಿ ಸೈ ಎನಿಸಿಕೊಂಡವರು ವಿರಾಟ್ ಕೊಹ್ಲಿ. ಮೈದಾನದಲ್ಲಿ ಕೊಹ್ಲಿಯವರ ಆಕ್ರಮಣಕಾರಿ ಮನೋವೃತ್ತಿಯನ್ನು ಹಲವರು ಟೀಕಿಸುತ್ತಾರೆ. ಆದರೆ ಅವರೂ ಸಹ ವಿರಾಟ್ ಅವರ ಆಟದ ಕಿಚ್ಚನ್ನು, ಪ್ರತೀ ಕ್ಷಣವೂ ಛಲದಿಂದ ಹೋರಾಡುವ ಮನೋವೃತ್ತಿಯನ್ನು ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ಕೂಡಾ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದು, ವಿಶ್ವದ ಬಲಾಡ್ಯ ಎರಡು ತಂಡಗಳು ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮೊದಲ ಸೀರೀಸ್ ಅನ್ನು ಆಡಲಿರುವುದು ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಮತ್ತೋರ್ವ ಆಟಗಾರ ಮತ್ತು ವೀಕ್ಷಕ ವಿವರಣೆಕಾರ ದಿನೇಶ್ ಕಾರ್ತಿಕ್ ಸ್ಕೈ ಸ್ಪೋರ್ಟ್ಸ್​ಗಾಗಿ ವಿರಾಟ್ ಕೊಹ್ಲಿಯವರ ಸಂದರ್ಶನ ಮಾಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಕುರಿತ ಅವರ ನಿಲುವುಗಳನ್ನು ತೆರೆದಿಟ್ಟಿದ್ದಾರೆ.

ಪ್ರತೀ ಟೆಸ್ಟ್ ಪಂದ್ಯವನ್ನೂ ಗೆಲ್ಲಬೇಕು, ದಾಖಲೆಗಳು ಮುಖ್ಯವಲ್ಲ ಎನ್ನುವ ಕೊಹ್ಲಿ ಅದಕ್ಕೆ ತಮ್ಮದೇ ಆದ ಕಾರಣ ನೀಡುತ್ತಾರೆ. ‘ನನಗೆ ವೈಯಕ್ತಿಕವಾಗಿ ಗೆಲುವಷ್ಟೇ ಮುಖ್ಯ. ನಾವು ಮೈದಾನಕ್ಕಿಳಿಯುವುದೇ ಪ್ರತೀ ಪಂದ್ಯವನ್ನೂ ಗೆಲ್ಲಬೇಕು ಎಂಬ ಉದ್ದೇಶದಿಂದ. ಗೆಲುವು ನಮಗೆ ಸಂಸ್ಕೃತಿಯಿದ್ದ(Culture) ಹಾಗೆ. ದಾಖಲೆಗಳೇನಿದ್ದರೂ ಉತ್ತಮ ಪಂದ್ಯವಾಡಿದ್ದರ ಫಲಿತಾಂಶಗಳಷ್ಟೇ(result)..’ ಎನ್ನುತ್ತಾರೆ ವಿರಾಟ್ ಕೊಹ್ಲಿ.

ಇಂಗ್ಲೆಂಡ್​ನಲ್ಲಿ ಟೆಸ್ಟ್ ಕ್ರಿಕೆಟ್ ಗೆಲ್ಲಲು ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ ಭಾರತದ ಆಟಗಾರರು ಎಂತಹ ಮನೋಸ್ಥಿತಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕೊಹ್ಲಿ ವಿವರಿಸಿದ್ದಾರೆ.‘ಪ್ರತೀ ಪಂದ್ಯದ ಪ್ರತೀ ದಿನವೂ ಮುಖ್ಯವಾದದ್ದು. ಅದನ್ನು ಸಮರ್ಥವಾಗಿ ಎದುರಿಸುವುದಕ್ಕೆ ಕಠಿಣ ಸಂದರ್ಭದಲ್ಲೂ ಧೈರ್ಯ ತೋರಿಸಬೇಕು. ಜೊತೆಗೆ ದಿನದಿಂದ ದಿನಕ್ಕೆ ನಮ್ಮ ಪ್ರದರ್ಶನ ಅತ್ಯುತ್ತಮವಾಗಿರುವಂತೆ ಪ್ರಯತ್ನಿಸಬೇಕು. ಇಂತಹ ದೀರ್ಘ ಸರಣಿಗಳಲ್ಲಿ ಟೂರ್ನಿಯುದ್ದಕ್ಕೂ ವರ್ಕ್​ಲೋಡ್​ ಅನ್ನು ನಿರ್ವಹಿಸುತ್ತಾ, ಮಾನಸಿಕ ಮತ್ತು ದೈಹಿಕವಾಗಿ ಸದೃಡವಾಗಿರುವುದು ಯಶಸ್ಸಿಗೆ ಕೀಲಿಕೈ’ ಎಂದಿದ್ದಾರೆ ಕೊಹ್ಲಿ.

ಇಂಗ್ಲೆಂಡ್​ನಂತಹ ದೇಶದ ವಿರುದ್ಧ ಅವರದೇ ನೆಲದಲ್ಲಿ ಗೆಲ್ಲುವುದು ವಿಶ್ವದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡಿ ಗೆಲ್ಲುವುದಕ್ಕೆ ಸಮಾನವಾದದ್ದು ಎನ್ನುವುದು ಕೊಹ್ಲಿಯವರ ಅಭಿಪ್ರಾಯ. ಕಾರಣ, ಇಂಗ್ಲೆಂಡ್ ತಂಡವನ್ನು ಅವರದೇ ನೆಲದಲ್ಲಿ ಬಗ್ಗುಬಡಿಯುವುದು ಬಹಳ ಕಷ್ಟ. ಅಲ್ಲಿ ವಿಶ್ವದರ್ಜೆಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವಿದೆ. ಜೊತೆಗೆ ಭಾರತದಲ್ಲಿರುವುದಕ್ಕಿಂತ ತೀರಾ ಭಿನ್ನ ಬಗೆಯ, ಸ್ವಿಂಗ್ ಹಾಗೂ ವೇಗಕ್ಕೆ ನೆರವಾಗುವ ಪಿಚ್​ಗಳಿವೆ. ಆದ್ದರಿಂದಲೇ ಇಂಗ್ಲೆಂಡ್​ನಲ್ಲಿ ಟೆಸ್ಟ್ ಗೆಲುವು ಬಹಳ ಶ್ರೇಷ್ಠ ಎನ್ನುವುದು ಕೊಹ್ಲಿಯ ಅನಿಸಿಕೆ. ಈ ಮನಸ್ಥಿತಿಯಲ್ಲಿಯೇ ಇಂಗ್ಲೆಂಡ್ ವಿರುದ್ಧವೂ ಕಣಕ್ಕಿಳಿಯುತ್ತಿರುವ ಕೊಹ್ಲಿ ಪಡೆ, ಯಾವ ರೀತಿ ತನ್ನ ಸಾಮರ್ಥ್ಯವನ್ನು ಮೈದಾನದಲ್ಲಿ ತೋರ್ಪಡಿಸಲಿದೆ ಎಂಬುದನ್ನು ಕಾದು ನೋಡಬೇಕು.

ದಿನೇಶ್ ಕಾರ್ತಿಕ್ ಹಂಚಿಕೊಂಡಿರುವ ವಿರಾಟ್ ಕೊಹ್ಲಿಯವರನ್ನು ಸಂದರ್ಶಿಸುತ್ತಿರುವ ಚಿತ್ರ ಮತ್ತು ವಿಡಿಯೊ:

View this post on Instagram

A post shared by Dinesh Karthik (@dk00019)

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ನಾಳೆ (ಆಗಸ್ಟ್ 4)ರಿಂದ ಆರಂಭವಾಗಲಿದ್ದು, ಸೋನಿ ಲಿವ್ ಅಥವಾ ಜಿಯೊ ಟಿವಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಇದನ್ನೂ ಓದಿ:

India vs England 1st Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ನ ನೇರ ಪ್ರಸಾರ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ

IND vs ENG: ಕೆ.ಎಲ್ ರಾಹುಲ್ ಓಪನರ್.. ಆರ್​ಸಿಬಿ ವೇಗಿ ಇನ್, ಜಡೇಜಾ ಔಟ್? ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

(Virat Kohli opens up about his views on test matches in an interview made by Dinesh Karthik)

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್