AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BAN vs ZIM: ಜಿಂಬಾಬ್ವೆ ವಿರುದ್ಧ ತನ್ನ ನೆಲದಲ್ಲೇ ಸೋತ ಬಾಂಗ್ಲಾದೇಶ

Zimbabwe Stuns Bangladesh in Test Series Opener: ಬಾಂಗ್ಲಾದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ 3 ವಿಕೆಟ್‌ಗಳ ಅಂತರದಿಂದ ಬಾಂಗ್ಲಾದೇಶವನ್ನು ಮಣಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಸಾಧಿಸಿದ ಜಿಂಬಾಬ್ವೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 255 ರನ್ ಗಳಿಸಿದರೂ, ಜಿಂಬಾಬ್ವೆ 174 ರನ್ ಗುರಿಯನ್ನು 7 ವಿಕೆಟ್‌ ಕಳೆದುಕೊಂಡು ಗೆದ್ದಿತು. ಈ ಮೂಲಕ ನಾಲ್ಕು ವರ್ಷಗಳ ನಂತರ ಬಾಂಗ್ಲಾದೇಶದಲ್ಲಿ ಜಿಂಬಾಬ್ವೆ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿತು.

BAN vs ZIM: ಜಿಂಬಾಬ್ವೆ ವಿರುದ್ಧ ತನ್ನ ನೆಲದಲ್ಲೇ ಸೋತ ಬಾಂಗ್ಲಾದೇಶ
Ban Vs Zim
Follow us
ಪೃಥ್ವಿಶಂಕರ
|

Updated on:Apr 23, 2025 | 8:07 PM

ಪ್ರಸ್ತುತ ಭಾರತದಲ್ಲಿ ಐಪಿಎಲ್ ಜ್ವರ ಜೋರಾಗಿದೆ. ಹೀಗಾಗಿ ಇತರೆ ಕ್ರಿಕೆಟ್ ಆಡುವ ದೇಶಗಳು ಆಡುತ್ತಿರುವ ಸರಣಿಯ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಆದರೀಗ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಅವರ ನೆಲದಲ್ಲೇ ಮಣಿಸಿರುವ ಜಿಂಬಾಬ್ವೆ ತಂಡ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. 3 ವಿಕೆಟ್‌ಗಳಿಂದ ಜಯಗಳಿಸಿದ ಜಿಂಬಾಬ್ವೆ, ನಾಲ್ಕು ವರ್ಷಗಳ ನಂತರ ಬಾಂಗ್ಲಾದೇಶ ನೆಲದಲ್ಲಿ ಟೆಸ್ಟ್ ಗೆಲುವು ಸಾಧಿಸಿದೆ. ಗೆಲುವಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳ ಗುರಿ ಪಡೆದಿದ್ದ ಜಿಂಬಾಬ್ವೆ, ಪಂದ್ಯದ ನಾಲ್ಕನೇ ದಿನದಂದು 7 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಜಿಂಬಾಬ್ವೆ ಅದ್ಭುತ ಬೌಲಿಂಗ್

ಏಪ್ರಿಲ್ 20 ರಂದು ಪ್ರಾರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 191 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಜಿಂಬಾಬ್ವೆ ಪರ ಮಾರಕ ದಾಳಿ ನಡೆಸಿದ ಬ್ಲೆಸಿಂಗ್ ಮುಜರಬಾನಿ ಮತ್ತು ವೆಲ್ಲಿಂಗ್ಟನ್ ಮಸಕಡ್ಜಾ ತಲಾ ತಲಾ 3 ವಿಕೆಟ್ ಪಡೆದರೆ, ವಿಕ್ಟರ್ ನ್ಯಾಚಿ ಮತ್ತು ವೆಸ್ಲಿ ಮಾಧೆವೆರೆ ತಲಾ 2 ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ಜಿಂಬಾಬ್ವೆ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 273 ರನ್‌ ಬಾರಿಸಿತು. ತಂಡದ ಪರ ಬ್ರಿಯಾನ್ ಬೆನೆಟ್ 64 ಎಸೆತಗಳಲ್ಲಿ 57 ರನ್ ಗಳಿಸಿದರೆ, ಸೀನ್ ವಿಲಿಯಮ್ಸ್ 108 ಎಸೆತಗಳಲ್ಲಿ 59 ರನ್ ಗಳಿಸಿ ಅದ್ಭುತ ಆಟವಾಡಿದರು. ಕೊನೆಯಲ್ಲಿ ಮಾಧೆವೆರೆ (24 ರನ್) ಮತ್ತು ನ್ಯಾಶಾ ಮಾಯಾವೊ (35 ರನ್) ಸಹ ಕೊಡುಗೆ ನೀಡಿದರು. ಈ ಮೂಲಕ ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಸಾಧಿಸಿತು.

2ನೇ ಇನ್ನಿಂಗ್ಸ್‌ನಲ್ಲೂ ಎಡವಿದ ಬಾಂಗ್ಲಾ

ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ರನ್​ಗಳಿಗೆ ಕುಸಿದಿದ್ದ ಬಾಂಗ್ಲಾದೇಶ, ಎರಡನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಆರಂಭದ ಹೊರತಾಗಿಯೂ, ಕೇವಲ 255 ರನ್‌ಗಳಿಗೆ ಆಲೌಟ್ ಆಯಿತು. ಕೊನೆಯ 61 ರನ್ ಗಳಿಸುವಷ್ಟರಲ್ಲಿ ತಂಡವು 6 ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಪರ ಮೊಮುನುಲ್ ಹಕ್ 47 ರನ್ ಮತ್ತು ನಾಯಕ ನಜ್ಮುಲ್ ಹಸನ್ ಶಾಂಟೋ 60 ರನ್ ಗಳಿಸಿದರೆ, ಜಾಕಿರ್ ಅಲಿ 58 ರನ್​ಗಳ ಕೊಡುಗೆ ನೀಡಿದರು.

ರೋಚಕ ಪಂದ್ಯದಲ್ಲಿ ಗೆದ್ದ ಜಿಂಬಾಬ್ವೆ

ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 174 ರನ್‌ಗಳ ಗುರಿ ಪಡೆದಿದ್ದ ಜಿಂಬಾಬ್ವೆ ಇದರ ಹೊರತಾಗಿಯೂ ಗೆಲುವಿಗಾಗಿ ಸಾಕಷ್ಟು ಹರಸಾಹಸ ಪಡಬೇಕಾಯಿತು. ಮೆಹದಿ ಹಸನ್ ಮಿರಾಜ್ ದಾಳಿಗೆ ಜಿಂಬಾಬ್ವೆ ತಂಡ ತತ್ತರಿಸಲಾರಂಭಿಸಿತು. ವಾಸ್ತವವಾಗಿ, ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. ಬ್ರಿಯಾನ್ ಬೆನೆಟ್ (57 ರನ್) ಮತ್ತು ಬೆನ್ ಕರನ್ (44 ರನ್) ಅವರ ನೆರವಿನಿಂದ 2ವಿಕೆಟ್​ಗೆ 127 ರನ್ ಗಳಿಸಿತು. ಆದರೆ ಆ ಬಳಿಕ ವಿಕೆಟ್‌ಗಳ ಪತನ ಶುರುವಾಯಿತು. ಹೀಗಾಗಿ ಮುಂದಿನ 34 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಸ್ಕೋರ್ 2 ವಿಕೆಟ್‌ಗೆ 127 ರಿಂದ 7 ವಿಕೆಟ್‌ಗೆ 161 ರನ್ ಆಯಿತು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಾಳ್ಮೆ ಆಟವನ್ನಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Wed, 23 April 25

ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು