AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್ ಟೀಮಿನ ಬ್ಯಾಟಿಂಗ್ ಅಸ್ಥಿರ ಮತ್ತು ಶಿಥಿಲವಾಗಿದೆ, ಇಂಡಿಯಾದ ಕ್ವಾಲಿಟಿ ದಾಳಿಯೆದುರು ರನ್​ ಗಳಿಸಲಾರದು: ಮೈಕೆಲ್ ವಾನ್

ಡಬ್ಲ್ಯೂಟಿಸಿ ಫೈನಲ್​ನಲ್ಲಿ ಭಾರತ ಕಿವೀಸ್ ತಂಡಕ್ಕೆ ಸೋತಿರುವುದು ನಿಜ; ಆದರೆ ಅದೇ ತಂಡ ಡಬ್ಲ್ಯೂಟಿಸಿ ಫೈನಲ್​ ಗೆ ಮೊದಲು ಇಂಗ್ಲೆಂಡ್​ ವಿರುದ್ಧ ಆಡಿದ 2-ಪಂದ್ಯಗಳ ಟೆಸ್ಟ್​ ಸರಣಿಯನ್ನು 1-0 ಅಂತರದಿಂದ ಗೆದ್ದಿತ್ತು, ಅಂದರೆ, ಇಂಗ್ಲೆಂಡ್​ ಟೀಮಿನ ನೈತಿಕ ಸ್ಥೈರ್ಯವೂ ಚೇತೋಹಾರಿಯಾಗಿಲ್ಲ.

ಇಂಗ್ಲೆಂಡ್ ಟೀಮಿನ ಬ್ಯಾಟಿಂಗ್ ಅಸ್ಥಿರ ಮತ್ತು ಶಿಥಿಲವಾಗಿದೆ, ಇಂಡಿಯಾದ ಕ್ವಾಲಿಟಿ ದಾಳಿಯೆದುರು ರನ್​ ಗಳಿಸಲಾರದು: ಮೈಕೆಲ್ ವಾನ್
ಜೋ ರೂಟ್ ಮತ್ತು ವಿರಾಟ್​ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jun 26, 2021 | 6:28 PM

Share

ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆರಂಭವಾಗಲು ಇನ್ನೂ ಒಂದು ತಿಂಗಳಿಗಿಂತ ಹೆಚ್ಚು ಸಮಯ ಬಾಕಿಯಿದೆ. ಎರಡೂ ತಂಡಗಳಿಗೆ ಇದು ಮಹತ್ವದ ಸರಣಿ. ಅತಿಥೇಯರು ಮೊನ್ನೆಯಷ್ಟೇ ಭಾರತದಲ್ಲಿ ನಡೆದ ಸರಣಿಯಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದರೆ, ನ್ಯೂಜಿಲೆಂಡ್​ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ (ಡಬ್ಲ್ಯೂಟಿಸಿ) ಫೈನಲ್​ನಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಮೈದಾನಕ್ಕಿಳಿದು ಪಂದ್ಯದ ಆಟ ಸಾಧ್ಯವಾದ ಕೇವಲ ಮೂರು ದಿನಗಳಲ್ಲಿ ಅವಮಾನಕರ ರೀತಿಯಲ್ಲಿ ಸೋತ ಭಾರತಕ್ಕೆ ಕಳೆದುಕೊಂಡಿರುವ ಪ್ರತಿಷ್ಠೆಯನ್ನು ವಾಪಸ್ಸು ಪಡೆಯವ ತವಕ. ಸದರಿ ಪಂದ್ಯವವನ್ನು ಟೀಮ್ ಇಂಡಿಯಾ ಸೋತಿದೆ ಅಂತ ಅದನ್ನು ಹಗುರವಾಗಿ ಪರಿಗಣಿಸುವ ತಪ್ಪು ಇಂಗ್ಲೆಂಡ್ ಸರ್ವಥಾ ಮಾಡಲಾರದು. ಯಾಕೆಂದರೆ, ಇಂಗ್ಲಿಷರಿಗೆ ಮಾತ್ರವಲ್ಲ, ವಿಶ್ವದ ಎಲ್ಲ ಕ್ರಿಕೆಟಿಂಗ್ ರಾಷ್ಟ್ರಗಳಿಗೆ ಭಾರತ ಬಲಾಢ್ಯ ತಂಡ ಅಂತ ಚೆನ್ನಾಗಿ ಗೊತ್ತು. ಇಂಗ್ಲೆಂಡ್ ಮಾಜಿ ಸ್ಕಿಪ್ಪರ್ ಮೈಕೆಲ್ ವಾನ್, ಇಂಗ್ಲಿಷ್ ತಂಡಕ್ಕೆ ಭಾರತವನ್ನು ಸೋಲಿಸುವುದ ಸಾಧ್ಯವಾಗಲಿಕ್ಕಿಲ್ಲ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಹಲವು ಕೊರತೆ ಮತ್ತು ದೌರ್ಬಲ್ಯಗಳಿವೆ, ಅವುಗಳನ್ನು ಸರಣಿ ಆರಂಭಕ್ಕೆ ಮೊದಲು ಸರಿಪಡಿಸಿಕೊಳ್ಳದಿದ್ದರೆ ತೊಂದರೆ ಎದುರಾಗೋದು ನಿಶ್ಚಿತ ಎಂದು ವಾನ್ ಹೇಳಿದ್ದಾರೆ.

ಡಬ್ಲ್ಯೂಟಿಸಿ ಫೈನಲ್​ನಲ್ಲಿ ಭಾರತ ಕಿವೀಸ್ ತಂಡಕ್ಕೆ ಸೋತಿರುವುದು ನಿಜ; ಆದರೆ ಅದೇ ತಂಡ ಡಬ್ಲ್ಯೂಟಿಸಿ ಫೈನಲ್​ ಗೆ ಮೊದಲು ಇಂಗ್ಲೆಂಡ್​ ವಿರುದ್ಧ ಆಡಿದ 2-ಪಂದ್ಯಗಳ ಟೆಸ್ಟ್​ ಸರಣಿಯನ್ನು 1-0 ಅಂತರದಿಂದ ಗೆದ್ದಿತ್ತು, ಅಂದರೆ, ಇಂಗ್ಲೆಂಡ್​ ಟೀಮಿನ ನೈತಿಕ ಸ್ಥೈರ್ಯವೂ ಚೇತೋಹಾರಿಯಾಗಿಲ್ಲ. ಇಂಗ್ಲೆಂಡ್ ಟೀಮಿನ ಶಿಥಿಲ ಬ್ಯಾಟಿಂಗ್ ಲೈನಪ್ ಮತ್ತು ಇನ್ನೂ ಕೆಲ ಅಂಶಗಳು ಬಗೆಹರಿಯದ ಹೊರತು, ಬಲಿಷ್ಠ ಟೀಮ್ ಇಂಡಿಯಾವನ್ನು ಸೋಲಿಸುವುದು ಸಾಧ್ಯವಾಗಲಾರದು ಎಂದು ವಾನ್ ಹೇಳಿದ್ದಾರೆ.

Michael vaughn

ಮೈಕೆಲ್ ವಾನ್

‘ಲಾರ್ಡ್ಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯ ಮೊದಲ ಟೆಸ್ಟ್​ನಲ್ಲಿ ಉತ್ತಮವಾದ ಹವಾಮಾನವಿತ್ತು. ಮಳೆ ಕಾಟ ಇರಲಿಲ್ಲ. ಆದರೆ ಆ ಟೆಸ್ಟ್​ನಲ್ಲಿ ಇಂಗ್ಲೆಂಡ್ ಸ್ಪಿನ್ನರ್​ನನ್ನು ಆಡಿಸಲಿಲ್ಲ. ನಂತರ ಎಜ್​ಬ್ಯಾಸ್ಟನ್​ನಲ್ಲಿ ಆಡಿದ ಎರಡನೇ ಟೆಸ್ಟ್​ನಲ್ಲೂ ಕೇವಲ ವೇಗದ ಬೌಲರ್​ಗಳಿದ್ದರು. ಮತ್ತೊಂದು ಉಲ್ಲೇಖನೀಯ ಸಂಗತಿಯೆಂದರೆ, ಟೀಮಿನ ಬ್ಯಾಟಿಂಗ್ ಅಸ್ಥಿರ ಮತ್ತು ಶಿಥಿಲವಾಗಿದೆ,’ ಎಂದು, ‘ರೋಡ್​ ಟು ದಿ ಆಶಸ್’ ಪಾಡ್​ಕಾಸ್ಟ್​ನಲ್ಲಿ ವಾನ್ ಹೇಳಿದರು.

2007 ರ ಇಂಗ್ಲೆಂಡ್​ ಪ್ರವಾಸದಲ್ಲಿ ಸರಣಿ ಗೆದ್ದ ಭಾರತ ಟೀಮಿನ ನಾಯಕರಾಗಿದ್ದ ರಾಹುಲ್ ದ್ರಾವಿಡ್​ ಅವರು ವಿರಾಟ್​ ನಾಯಕತ್ವದ ಈ ತಂಡಕ್ಕೆ ಆ ಸಾಧನೆಯನ್ನು ಪುನರಾವರ್ತಿಸುವ ಉತ್ತಮ ಅವಕಾಶವಿದೆ ಎಂದು ಹೇಳಿದ್ದಾರೆ. 2011 , 2014 ಮತ್ತು 2018 ರಲ್ಲಿ ನಡೆದ ಸರಣಿಗಳನ್ನು ಭಾರತ ಸುಲಭವಾಗಿ ಸೋತಿತ್ತು. ಇಂಗ್ಲೆಂಡ್​ ಮಾಜಿ ಸ್ಪಿನ್ನರ್ ಮಾಂಟಿ ಪನೇಸಾರ್ ಅವರು, ಅತಿಥೇಯರ ಬ್ಯಾಟಿಂಗ್ ಮೊದಲಿನ ಹಾಗೆ ಸಶಕ್ತವಾಗಿಲ್ಲ, ಹಾಗಾಗಿ ಭಾರತ 5-0 ಅಂತರದಿಂದ ಸರಣಿ ಗೆದ್ದರೂ ಅಶ್ಚರ್ಯಪಡಬೇಕಿಲ್ಲ ಎಂದು ಹೇಳಿದ್ದಾರೆ.

ವಾನ್ ಸಹ ಇದೇ ಮಾತನ್ನು ಪುನರುಚ್ಛರಿಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಮತ್ತು ಜಾಸ್​ ಬಟ್ಲರ್ ಮೊದಲಾದ ಆಟಗಾರರು ತಂಡಕ್ಕೆ ವಾಪಸ್ಸಾದರೂ, ಅತ್ಯುತ್ತಮ ಬೌಲಿಂಗ್ ಆಕ್ರಮಣ ಹೊಂದಿರುವ ಭಾರತದ ವಿರುಧ್ಧ ಬೇಕಿರುವ ಬ್ಯಾಟಿಂಗ್ ಆಳ ತಂಡದಲ್ಲಿಲ್ಲ ಎಂದು ವಾನ್ ಹೇಳಿದ್ದಾರೆ. ಇಂಗ್ಲೆಂಡ್​ಗೆ ಎದುರಾಗಲಿರುವ ಮತ್ತೊಂದು ಸಮಸ್ಯೆಯೆಂದರೆ ಸ್ಟಾರ್​ ಬೌಲರ್ ಜೊಫ್ರಾ ಆರ್ಚರ್ ಅವರ ಅಲಭ್ಯತೆ. ಮೊಣಕೈ ಶಸ್ತ್ರಚಿಕಿತ್ಸೆಗೊಳಗಾಗಿರುವ ಆರ್ಚರ್ ಇನ್ನೂ ಚೇತರಿತೆಯ ಹಾದಿಯಲ್ಲಿದ್ದಾರೆ.

‘ಬಟ್ಲರ್, ಸ್ಟೋಕ್ಸ್ ಮತ್ತು ವೋಕ್ಸ್ ಮೊದಲಾದವರು ತಂಡಕ್ಕೆ ಮರಳಿದ್ದಾರೆ ನಿಜ, ಅವರ ಆಗಮನ ಖಂಡಿತವಾಗಿಯೂ ಟೀಮಿನ ಶಕ್ತಿಯನ್ನು ಹೆಚ್ಚಿಸಲಿದೆ. ಆದರೆ ಟೀಮಿನ ಲೈನಪ್ ಬದಲಾಗಬೇಕು ಮತ್ತು ಈ ಬ್ಯಾಟ್ಸ್​ಮನ್​ಗಳು ಕ್ವಾಲಿಟಿ ಬೌಲಿಂಗ್ ಆಕ್ರಮಣದ ಎದುರು ಬಿಗ್ ಇನ್ನಿಂಗ್ಸ್​ಗಳನ್ನು ಆಡುವುದು ಹೇಗೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಕಲಿಯಬೇಕು. ಯಾಕೆಂದರೆ ಇಂಡಿಯಾದ ಬೌಲಿಂಗ್ ಆಕ್ರಮಣ ಎರಡನೇ ದರ್ಜೆ ಟೆಸ್ಟ್​ ಬೌಲಿಂಗ್ ಅಲ್ಲವೇ ಅಲ್ಲ. ಇಂಥ ಕ್ವಾಲಿಟಿ ಆಕ್ರಮಣದ ವಿರುದ್ಧ ಅವರು ರನ್ ಗಳಿಸಬಲ್ಲರು ಎಂಬ ನಂಬಿಕೆ ನನಗಿಲ್ಲ. ಇಂಡಿಯಾವನ್ನು ಸೋಲಿಸುವುದು ಇಂಗ್ಲೆಂಡ್​ಗೆ ಬಹಳ ಕಷ್ಟವಾಗಲಿದೆ. ಹಾಗೆಯೇ, ಆಶಸ್ ಸರಣಿಯಲ್ಲಿ ಅವರು 450-500 ರನ್ ಗಳಿಸದಿದ್ದರೆ ಅಲ್ಲೂ ಗೆಲುವು ಸಾಧ್ಯವಾಗುವುದಿಲ್ಲ,’ ಎಂದು ವಾನ್​ ಹೇಳಿದ್ದಾರೆ.

ಇದನ್ನೂ ಓದಿ: WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ