AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC 21 Final: ಕನ್ನಡಿಗ ಕೆಎಲ್​ ರಾಹುಲ್​ ಸೇರಿದಂತೆ ಈ ಐದು ಆಟಗಾರರು ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ?

World Test Championship final ಪಂದ್ಯಕ್ಕೆ (Ageas Bowl, Southampton) ಇನ್ನು ಮೂರು ದಿನಗಳಿರುವಾಗ ಬಿಸಿಸಿಐ 15 ಆಟಗಾರರ ಭಾರತ ತಂಡವನ್ನು ನಿನ್ನೆ ಪ್ರಕಟಿಸಿದೆ. ವಿರಾಟ್​ ಕೊಹ್ಲಿ ನಾಯಕನಾಗಿ ಅಜಿಂಕ್ಯ ರಹಾನೆ ಉಪ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಕಟಿತ ತಂಡದಲ್ಲಿ ಆಟಗಾರರ ಆಯ್ಕೆ ಬಗ್ಗೆ ಆಶ್ಚರ್ಯಗಳೇನೂ ಇಲ್ಲವಾದರೂ ಈ ಐದು ಆಟಗಾರರ ಹಿಂದಿನ ಪರ್ಫಾರ್ಮೆನ್ಸ್​ ಅನ್ನು ತೂಕ ಹಾಕುವುದಾದರೆ...

WTC 21 Final: ಕನ್ನಡಿಗ ಕೆಎಲ್​ ರಾಹುಲ್​ ಸೇರಿದಂತೆ ಈ ಐದು ಆಟಗಾರರು ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ?
WTC 21 Final: ಕನ್ನಡಿಗ ಕೆಎಲ್​ ರಾಹುಲ್​ ಸೇರಿದಂತೆ ಈ 5 ಆಟಗಾರರು ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 16, 2021 | 11:00 AM

Share

ಎಜ್​ಬಾಸ್ಟನ್ (ಇಂಗ್ಲೆಂಡ್)​: ಹಾಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಚಾಂಪಿಯನ್​ ತಂಡ ಯಾವುದು ಎಂಬುದು ಜೂನ್​ 18 ರಿಂದ ನಡೆಯುವ ಟೆಸ್ಟ್​ ಪಂದ್ಯದಲ್ಲಿ ಫೈನಲ್​ ಆಗಲಿದೆ. ಆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ (World Test Championship final) ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಸೆಣಸಲಿವೆ. ಉಭಯ ತಂಡಗಳೂ ಅದಾಗಲೇ ತಂಡಗಳನ್ನು ಪ್ರಕಟಿಸಿದೆ. ಭಾರತ ತಂಡವೂ ಪ್ರಕಟವಾಗಿದೆ. ಆದರೆ… ಕನ್ನಡಿಗ ಕೆಎಲ್​ ರಾಹುಲ್​ ಆಯ್ಕೆಯಾಗಿಲ್ಲ ಎಂಬ ಕೊರಗೂ ಸೇರಿದಂತೆ ಐದು ಆಟಗಾರರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ? ಎಂಬ ಪ್ರಶ್ನೆ ಕಾಡತೊಡಗಿದೆ.

World Test Championship final ಪಂದ್ಯಕ್ಕೆ (Ageas Bowl, Southampton) ಇನ್ನು ಮೂರು ದಿನಗಳಿರುವಾಗ ಬಿಸಿಸಿಐ 15 ಆಟಗಾರರ ಭಾರತ ತಂಡವನ್ನು ನಿನ್ನೆ ಪ್ರಕಟಿಸಿದೆ. ವಿರಾಟ್​ ಕೊಹ್ಲಿ ನಾಯಕನಾಗಿ ಅಜಿಂಕ್ಯ ರಹಾನೆ ಉಪ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಕಟಿತ ತಂಡದಲ್ಲಿ ಆಟಗಾರರ ಆಯ್ಕೆ ಬಗ್ಗೆ ಆಶ್ಚರ್ಯಗಳೇನೂ ಇಲ್ಲವಾದರೂ ಈ ಐದು ಆಟಗಾರರ ಹಿಂದಿನ ಪರ್ಫಾರ್ಮೆನ್ಸ್​ ಅನ್ನು ತೂಕ ಹಾಕುವುದಾದರೆ…

ಈಗಿನ ಪ್ರಕಟಿತ ತಂಡದಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಶುಭ್​​ಮನ್​ ಗಿಲ್​, ಚೇತೇಶ್ವರ ಪೂಜಾರ ಮತ್ತಿತರರು ಬಲಿಷ್ಠ ಬ್ಯಾಟಿಂಗ್​ ಅನ್ನು ಕಾಯ್ದುಕೊಳ್ಳಬಲ್ಲರು. ಆರ್​ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್​ ಬೌಲಿಂಗ್​ ಆಲ್​ರೌಂಡರ್​​ ರೂಪದಲ್ಲಿ ವಿರಾಜಮಾನರಾಗಿದ್ದಾರೆ. ಇನ್ನು ಇಶಾಂತ್​ ಶರ್ಮಾ, ಜಸ್ಪ್ರೀತ್​​ ಬುಮ್ರಾ, ಮೊಹಮದ್​ ಶಮಿ, ಉಮೇಶ್​ ಯಾದವ್​ ಹಾಗೂ ಮೊಹಮದ್​ ಸಿರಾಜ್​ ಕೈಯಲ್ಲಿ ಬಾಲ್​ ಹಿಡಿದು ಸನ್ನದ್ಧರಾಗಿದ್ದಾರೆ. ರಿಶಬ್​ ಪಂತ್​ ಮತ್ತು ವೃದ್ಧಿಮಾನ್​ ಸಹ ಇಬ್ಬರು ವಿಕೆಟ್​​ ಹಿಂದೆ ನಿಲ್ಲಲು ನಾಮುಂದು ತಾಮುಂದು ಎಂದು ನಿಂತಿದ್ದಾರೆ. ಗಮನಾರ್ಹವೆಂದರೆ ಐತಿಹಾಸಿಕ ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಈ 15 ಮಂದಿ ಆಟಗಾರರೇ ಅಂತಿಮ ಅಂತಲ್ಲ. ಆದರೂ ಈ ಸಂದರ್ಭದಲ್ಲಿ ಬೆಂಚ್​ ಕಾಯಿಸುತ್ತಿರುವ ಆ ಪಂಚ ಪಾಂಡವರನ್ನು ಒಬ್ಬೊಬ್ಬರಾಗಿ ನೋಡಿದಾಗ…

ಕನ್ನಡಿಗ ಕೆಎಲ್​ ರಾಹುಲ್​ (KL Rahul)

15 ಆಟಗಾರರ ಭಾರತ ಟೆಸ್ಟ್ ತಂಡದಲ್ಲಿ ಕನ್ನಡಿಗ ಕೆಎಲ್​ ರಾಹುಲ್ ಸ್ಥಾನ ಪಡೆದಿಲ್ಲ ಎಂಬುದು ಕೊಂಚ ಬೇಸರವೇ ಆದರೂ… ಈ ಬಲಗೈ ಬ್ಯಾಟ್ಸ್​ಮನ್​ಗೆ ಅನೇಕ ಛಾನ್ಸ್​​ಗಳನ್ನು ನೀಡಲಾಗಿತ್ತಾದರೂ ರಾಹುಲ್​ ಅದನ್ನು ಸದುಪಯೋಗಪಡಿಸಿಕೊಂಡಿಲ್ಲ ಎಂಬುದು ಖೇದಕರ. 2019 ರಿಂದೀಚೆಗೆ ಕೆಂಪು ಬಾಲ್ ಮ್ಯಾಚ್​​ಗಳನ್ನು ಆಡಿಲ್ಲ. ಇದನ್ನು ಮತ್ತೊಂದು ಆಯಾಮದಿಂದ ನೋಡಿದಾಗ​ ಈಗ ಭಾರತ ತಂಡದಲ್ಲಿ ಬ್ಯಾಟ್ಸ್​ಮನ್​ಗಳಾಗಿ ಸ್ಥಾನ ಪಡೆದಿರುವ ಆಟಗಾರರು ಬಲಿಷ್ಠರಾಗಿದ್ದಾರೆ. ಅವರ ಎದುರು ಇತ್ತೀಚೆಗೆ ಟೆಸ್ಟ್​ ಪಂದ್ಯಗಳನ್ನು ಆಡದೇ ಇರುವ ರಾಹುಲ್​ ಪೇಲವವಾಗುತ್ತಾರೆ. ಗೊತ್ತಿಲ್ಲ.. ಕೊನೆಯ ಘಳಿಗೆಯಲ್ಲಿ ಛಾನ್ಸ್​ ಸಿಕ್ಕಿದರೆ ಮಯಾಂಕ್​ ಅಗರ್ವಾಲ್​ ಆದ ಮೇಲೆ ಕೆಎಲ್​ ರಾಹುಲ್ ಅವರನ್ನೇ ಪರಿಗಣಿಸಬಹುದು.

ಶಾರ್ದೂಲ್​ ಠಾಕೂರ್ (Shardul Thakur)

ವೇಗಿ ಆಲ್​​ರೌಂಡರ್​ ಶಾರ್ದೂಲ್​ ಠಾಕೂರ್ ಐತಿಹಾಸಿಕ ಟೆಸ್ಟ್​ ಫೈನಲ್​​ ಪಂದ್ಯಕ್ಕೆ ಆಯ್ಕೆಯಾಗಲಿಲ್ಲ ಎಂಬುದು ಶೋಚನೀಯ. ಇದರರ್ಥ ಭಾರತ ತಂಡವು ಕೇವಲ ವೇಗಿ ಬೌಲರ್​​ಗಳನ್ನೇ ಅಪ್ಪಿಕೊಂಡಿದೆ. ವೇಗಿ ಆಲ್​​ರೌಂಡರ್​ಗೆ ಮಣೆ ಹಾಕಿಲ್ಲ ಅಷ್ಟೇ. ಉಮೇಶ್​ ಯಾದವ್ ಒಂದಷ್ಟು ಬ್ಯಾಟ್​​ ಬೀಸುವುದೂ ಆತನ ಆಯ್ಕೆಗೆ ಪೂರಕವಾಗಿದೆ ಅನ್ನಬಹುದು. ಆಲ್​​ರೌಂಡರ್​ ಶಾರ್ದೂಲ್​ ಠಾಕೂರ್ ಈ ಹಿಂದೆ 2018ರ ಇಂಗ್ಲೆಂಡ್​ ಸರಣಿಯಲ್ಲಿ ಭಾರತ ತಂಡದಲ್ಲಿದ್ದರು ಎಂಬ ಕಾರಣಕ್ಕೆ ಫೈನಲ್​ ಆದ ಮೇಲಿನ ಐದು ಟೆಸ್ಟ್​ ಮ್ಯಾಚ್​​ಗಳ ಸರಣಿಗೆ ಸ್ಥಾನ ಪಡೆಯಬಹುದು ಎಂಬ ಆಶಾಭಾವ ಇದೆ.

ವಾಷಿಂಗ್ಟನ್​ ಸುಂದರ್ (Washington Sundar)

ವಾಷಿಂಗ್ಟನ್​ ಸುಂದರ್ ಆಯ್ಕೆ ಆಗದಿರುವುದಕ್ಕೆ ಸಕಾರಣವಿದೆ. ಆತ ಆರ್​ ಅಶ್ವಿನ್​ಗೆ ಅಸಿಸ್ಟಂಟ್​ ಆಗಿ, ತದನಂತರ ಕಾಣಿಸಿಕೊಳ್ಳುವವರು. ಅಶ್ವಿನ್​ಗೆ ರೆಸ್ಟ್​ ಬೇಕು ಅಂದ್ರೆ ಅಥವಾ ಮೈದಾನದಿಂದ ಹೊರಗುಳಿಯುವಂತಾದರೆ ಮಾತ್ರ ವಾಷಿಂಗ್ಟನ್​ ಸುಂದರ್ ಮೈದಾನಕ್ಕೆ ಇಳಿಯುವರು! ಇದು ಇಬ್ಬರಿಗೂ ಹೊಸದೇನೂ ಅಲ್ಲ. ಅಶ್ವಿನ್ ಅವರ ಕೆಚ್ಚೆದೆಯ ಆಟವನ್ನು ನೋಡಿದರೆ ರವೀಂದ್ರ ಜಡೇಜಾರನ್ನೂ ಪಕ್ಕಕ್ಕಿಟ್ಟು ಅಶ್ವಿನ್​ಗೆ ವಿರಾಟ್​ ಕೊಹ್ಲಿ ಮಣೆ ಹಾಕಬಹುದು. ಹಾಗಿದೆ ಅಶ್ವಿನ್​ ಎದಯಲ್ಲಿನ ಕಿಚ್ಚು.

ಅಕ್ಸರ್​ ಪಟೇಲ್ (Axar Patel)

ಭಾರತ-ಇಂಗ್ಲೆಂಡ್​ ಪ್ರವಾಸದಲ್ಲಿ ಅಕ್ಸರ್​ ಪಟೇಲ್ ಸ್ಮರಣೀಯ ಪಾದಾರ್ಪಣೆ ಮಾಡಿದರಾದರೂ ಅಕ್ಸರ್​ ರವೀಂದ್ರ ಜಡೇಜಾ ನಂತರವೇ ಎಂಬುದು ಮನನೀಯ. ಟೆಸ್ಟ್​ ಪಂದ್ಯಗಳಲ್ಲಿ ಆಡಬೇಕು ಅಂದ್ರೆ ಅಕ್ಸರ್​ ಪಟೇಲ್ ಇನ್ನೂ ಕಾಯಬೇಕಾದೀತು! ಆರ್​ ಅಶ್ವಿನ್​ ಮಾದರಿಯಲ್ಲಿ ರವೀಂದ್ರ ಜಡೇಜಾ ನುರಿತ ಮೌಲ್ಯಯುತ ಆಟಗಾರ. ಹಾಗಾಗಿ ಅಕ್ಸರ್​, ರವೀಂದ್ರ ಜಡೇಜಾ ನಂತರವೇ ಎಂಬುದು ದಾಖಲಾರ್ಹ. ಅಕ್ಸರ್​ ಪಟೇಲ್​ಗೆ ಒಂದೇ ಆಶಾಭಾವ ಅಂದ್ರೆ ಅಕ್ಸರ್​ ಕೌಂಟಿ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ತಂಡಕ್ಕೆ ಆಯ್ಕೆಯಾಗುವ ವೇಳೆ ವಾಷಿಂಗ್ಟನ್​ ಸುಂದರ್​ಗಿಂತ ತುಸು ಮುಂದಿರಲು ಇದು ಅನುಕೂಲವಾಗಲಿದೆ. ಜೊತೆಗೆ, ತಂಡದಲ್ಲಿ ಎಕ್ಸ್​ಟ್ರಾ ಆಲ್​​ರೌಂಡರ್ ಒಬ್ಬರಿರಲಿ ಅಂತ ಬಿಸಿಸಿಐ ಚಿಂತಕರ ಚಾವಡಿ ಚಿಂತನೆ ನಡೆಸಿದರೆ ಅಕ್ಸರ್​ ಪಟೇಲ್​ಗೆ ಮಣೆ ಹಾಕಬಹುದು.

ಮಯಾಂಕ್​ ಅಗರ್ವಾಲ್ (Mayank Agarwal)

ರೋಹಿತ್​ ಶರ್ಮಾ ಮತ್ತು ಶುಭ್​​ಮನ್​ ಗಿಲ್​ ಅದಾಗಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಅಂದರೆ ನನಗೆ ಎಲ್ಲಿಯ ಸ್ಥಾನ ಅಲ್ವಾ? ಎಂಬಂತಾಗಿದೆ ಮಯಾಂಕ್​ ಅಗರ್ವಾಲ್​ ಸ್ಥಿತಿ. ಮಯಾಂಕ್​ ಅಗರ್ವಾಲ್ ಸಹ ತಮಗೆ ದಕ್ಕಿದ್ದ ಛಾನ್ಸ್​ಗಳನ್ನು ಅಷ್ಟಾಗಿ ಸದುಪಯೋಗಪಡಿಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಇತ್ತೀಚಿನ ಭಾರತ-ಇಂಗ್ಲೆಂಡ್​ ಸರಣಿಯಲ್ಲಿ ಇತರೆ ಬ್ಯಾಟ್ಸ್​​ಮನ್​ಗಳು ತಂಡದಿಂದ ಹೊರಗುಳಿದಾಗಲಷ್ಟೇ ಮಯಾಂಕ್​ ಅಗರ್ವಾಲ್ ನಾಲ್ಕನೆಯ ಟೆಸ್ಟ್​ಗೆ ಆಯ್ಕೆಗೊಂಡಿದ್ದು. ಈ ಬಾರಿಯೂ ಅಷ್ಟೇ ಶುಭ್​​ಮನ್​ ಗಿಲ್​ ಬ್ಯಾಟ್​ ಮಾಡತನಾಡುತ್ತಾ ಹೋದರೆ ಮಯಾಂಕ್​ ಅಗರ್ವಾಲ್ ಮೌನವಾಗಿ ಉಳಿಯಬೇಕಾಗುತ್ತದೆ. ಅಗತ್ಯಬಿದ್ದರಷ್ಟೇ ಮಧ್ಯಮ ಕ್ರಮಾಂಕದಲ್ಲಿ ಆಡಲು ಮಯಾಂಕ್​ ಅಗರ್ವಾಲ್ ಆಯ್ಕೆಗೊಳ್ಳಬಹುದು.

(five players who failed to make the cut for World Test Championship final against New Zealand)

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ