AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Krunal Pandya: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕೃನಾಲ್​ಗೆ ಇಂದು 30ನೇ ಜನ್ಮದಿನ.. ತಮ್ಮನಿಂದ ಭಾವನಾತ್ಮಕ ವಿಡಿಯೋ

Happy Birthday Krunal Pandya: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಫೀಲ್ಡಿಂಗ್ ಮಾಡುವಾಗ ಭುಜದ ಗಾಯಕ್ಕೆ ಒಳಗಾದರು. ಈ ಕಾರಣದಿಂದಾಗಿ ಅವರು ಕ್ರಿಕೆಟ್‌ನಿಂದ ಬಹಳ ಕಾಲ ದೂರವಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

Happy Birthday Krunal Pandya: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕೃನಾಲ್​ಗೆ ಇಂದು 30ನೇ ಜನ್ಮದಿನ.. ತಮ್ಮನಿಂದ ಭಾವನಾತ್ಮಕ ವಿಡಿಯೋ
ಹಾರ್ದಿಕ್​ ಮತ್ತು ಕೃನಾಲ್ ಪಾಂಡ್ಯ
ಪೃಥ್ವಿಶಂಕರ
|

Updated on:Mar 24, 2021 | 12:37 PM

Share

ಕೃನಾಲ್ ಪಾಂಡ್ಯ. ಮೊದಲ ಏಕದಿನ ಪಂದ್ಯದ ರಿಯಲ್​ ಹೀರೊ. ತಂಡ ಸಂಕಷ್ಟದಲ್ಲಿದ್ದಾಗ ರಾಹುಲ್​ ಜೊತೆ ಉತ್ತಮ ಜೊತೆಯಾಟ ಆಡಿದ ಕೃನಾಲ್​ ತಂಡಕ್ಕೆ ನೆರವಾದರು. ಜೊತೆಗೆ ಬೌಲಿಂಗ್​ನಲ್ಲೂ ಶೈನ್ ಆದ ಕೃನಾಲ್​ ತಂಡದ ಗೆಲುವಿಗೆ ನೆರವಾದರು. ದೇಶಿ ಕ್ರಿಕೆಟ್​ನಲ್ಲಿ ಬರೋಡಾ ತಂಡದ ನಾಯಕ ಮತ್ತು ಮುಂಬೈ ಇಂಡಿಯನ್ಸ್‌ನ ಪ್ರಚಂಡ ಆಲ್ರೌಂಡರ್ ಆಗಿರುವ ಕೃನಾಲ್​ಗೆ ಇಂದು 30ನೇ ವರ್ಷದ ಹುಟ್ಟು ಹಬ್ಬ. ಕೃನಾಲ್​ ಪಾಂಡ್ಯ ಅವರ ಜನುಮದಿನದ ವಿಶೇಷವನ್ನು ಬಿಸಿಸಿಐ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ಸಹೋದರ ಹಾರ್ಧಿಕ್​ ಪಾಂಡ್ಯ, ಅಣ್ಣನ ಜನುಮ ದಿನದ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಟಿ20 ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಕೃನಾಲ್ ತಮ್ಮ ಮೊದಲ ಅಂತರರಾಷ್ಟ್ರೀಯ ಟಿ 20 ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಕೃನಾಲ್, ಚೆಂಡು ಮತ್ತು ಬ್ಯಾಟ್ ಎರಡರಲ್ಲೂ ಕೊಡುಗೆ ನೀಡಿ ಭಾರತಕ್ಕೆ ಜಯತಂದಿತ್ತರು. ಅದೇ ರೀತಿ, ಕೃನಾಲ್​ ಮಾರ್ಚ್ 23, 2020 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಚೊಚ್ಚಲ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ. ಎರಡೂ ಪಂದ್ಯಗಳಲ್ಲಿ ಅವರ ಸಾಧನೆ ಟೀಮ್ ಇಂಡಿಯಾಕ್ಕೆ ಜಯ ತಂದುಕೊಟ್ಟಿತು. ಅವರ ಸಹೋದರ ಹಾರ್ದಿಕ್ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ. ಈಗ ಕ್ರುನಾಲ್ ಅವರಿಗೆ ಅದೇ ಅವಕಾಶವಿದೆ.

ವಡೋದರಾದ ಕಿರಣ್ ಮೋರ್ ಅಕಾಡೆಮಿಗೆ ಸೇರಿಸಿದರು ಕ್ರುನಾಲ್ ಪಾಂಡ್ಯ ಅವರು ಮಾರ್ಚ್ 24, 1991 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದರು. ಆದರೆ ಅವರ ಕುಟುಂಬ ಸೂರತ್‌ನಲ್ಲಿ ವಾಸಿಸುತ್ತಿತ್ತು. ತಂದೆ ಹಿಮಾಂಶು ಪಾಂಡ್ಯ ಇಲ್ಲಿ ಕಾರ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕ್ರುನಾಲ್ ಆರು ವರ್ಷದವನಿದ್ದಾಗ, ಅವರ ತಂದೆಗೆ ಸ್ಥಳೀಯ ತರಬೇತುದಾರ ಕೃನಾಲ್​ ಭವಿಷ್ಯದ ಬಗ್ಗೆ ತಿಳಿಸಿದರು. ಹೀಗಾಗಿ ಹಿಮಾಂಶು ಕ್ರುನಾಲ್ ಅವರನ್ನು ವಡೋದರಾದ ಕಿರಣ್ ಮೋರ್ ಅಕಾಡೆಮಿಗೆ ಸೇರಿಸಿದರು. ಕೆಲ ದಿನಗಳ ನಂತರ ಅವರ ತಂದೆ ಹಿಮಾಂಶು ಕೂಡ ಸೂರತ್‌ನಿಂದ ತಮ್ಮ ಕೆಲಸವನ್ನು ವಡೋದರಾಕ್ಕೆ ಸ್ಥಳಾಂತರಗೊಂಡರು. ನಂತರ ಹಿಮಾಂಶು ಕ್ರುನಾಲ್ ಅವರನ್ನು ಮೂರೂವರೆ ವರ್ಷಗಳ ಕಾಲ ತನ್ನ ಬೈಕ್‌ನಲ್ಲಿ ಅಕಾಡೆಮಿಗೆ ಕರೆದೊಯ್ಯುತ್ತಿದ್ದರು.

ಫೀಲ್ಡಿಂಗ್ ಮಾಡುವಾಗ ಭುಜದ ಗಾಯಕ್ಕೆ ಒಳಗಾದರು ಮುಂಬೈನಲ್ಲಿ ನಡೆದ ಡಿವೈ ಪಂದ್ಯಾವಳಿಯೊಂದಿಗೆ, ಅವರು ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಡೇರ್ ಡೆವಿಲ್ಸ್ನ ಸ್ಕೌಟ್ಸ್ ಗಮನ ಸೆಳೆದರು. ನಂತರ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಫೀಲ್ಡಿಂಗ್ ಮಾಡುವಾಗ ಭುಜದ ಗಾಯಕ್ಕೆ ಒಳಗಾದರು. ಈ ಕಾರಣದಿಂದಾಗಿ ಅವರು ಕ್ರಿಕೆಟ್‌ನಿಂದ ಬಹಳ ಕಾಲ ದೂರವಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಐಪಿಎಲ್ 2016 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಕ್ರುನಾಲ್ ಅವರನ್ನು ಎರಡು ಕೋಟಿ ರೂಪಾಯಿಗಳಿಗೆ ಕೊಂಡುಕೊಂಡಿತು. ಹಾರ್ದಿಕ್ ಆಗಲೇ ಈ ತಂಡಕ್ಕೆ ಸೇರಿದ್ದರು. ನಂತರ 2018 ರ ಐಪಿಎಲ್ ಹರಾಜಿನಲ್ಲಿ ಮುಂಬೈ 8.8 ಕೋಟಿ ಮೊತ್ತವನ್ನು ನೀಡಿ ಕೃನಾಲ್​ ಅವರನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ.

ಮುಂಬೈ 2017ರ ಚಾಂಪಿಯನ್​ ಆಗಲು ಕೃನಾಲ್​ ಕಾರಣ 2017 ರ ಐಪಿಎಲ್​ನಲ್ಲಿ ಕ್ರುನಾಲ್ ತನ್ನ ಆಟದಿಂದಾಗಿ ಮುಂಬೈ ಚಾಂಪಿಯನ್ ಆಗಲು ಸಹಾಯ ಮಾಡಿದ. ಐಪಿಎಲ್ 2017 ರ ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜಿಯಂಟ್ ವಿರುದ್ಧ ಕೃನಾಲ್​ 38 ಎಸೆತಗಳಲ್ಲಿ 47 ರನ್ ಗಳಿಸಿದರು. ಈ ಆಟದಿಂದಾಗಿ ಮುಂಬೈ ಪಂದ್ಯವನ್ನು ಒಂದು ರನ್‌ನಿಂದ ಗೆದ್ದು ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ಕ್ರುನಾಲ್‌ಗೆ ಟೀಮ್ ಇಂಡಿಯಾದಿಂದಲೂ ಕರೆ ಬಂತು. ನವೆಂಬರ್ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯ ಆಡಿದ ಕೃನಾಲ್​, ಮೊದಲ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 15 ರನ್‌ಗಳಿಗೆ ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಬ್ಯಾಟಿಂಗ್​ನಲ್ಲಿ ಮೂರು ಬೌಂಡರಿಗಳೊಂದಿಗೆ ಒಂಬತ್ತು ಎಸೆತಗಳಲ್ಲಿ ಅಜೇಯ 21 ರನ್ ಗಳಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.

ದೇಶೀಯ ಟಿ 20 ಪಂದ್ಯಗಳಲ್ಲಿ 89 ವಿಕೆಟ್, 1524 ರನ್ ಗಳಿಸಿದ್ದಾರೆ ಅಂದಿನಿಂದ, ಅವರು 18 ಅಂತರರಾಷ್ಟ್ರೀಯ ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 121 ರನ್ ಗಳಿಸಿದ್ದಾರೆ ಮತ್ತು 14 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಮತ್ತು ಇತರ ದೇಶೀಯ ಟಿ 20 ಪಂದ್ಯಗಳಲ್ಲಿ 89 ವಿಕೆಟ್, 1524 ರನ್ ಗಳಿಸಿದ್ದಾರೆ. ಅವರು ಈಗ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇತ್ತೀಚೆಗೆ ನಡೆದ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ಅವರು ಬರೋಡಾ ಪರ ಸಾಕಷ್ಟು ರನ್ ಗಳಿಸಿದ್ದರು. ಈ ಆಟದ ಆಧಾರದ ಮೇಲೆ, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಅವರನ್ನು ಆಯ್ಕೆ ಮಾಡಲಾಯಿತು. ಇಲ್ಲಿಯೂ ಅವರು ಮೊದಲ ಪಂದ್ಯದಲ್ಲಿ ಅಜೇಯ ಅರ್ಧಶತಕವನ್ನು ಬಾರಿಸಿದರು ಮತ್ತು ನಂತರ ವಿಕೆಟ್ ತೆಗೆದುಕೊಳ್ಳುವ ಮೂಲಕ ಟೀಮ್ ಇಂಡಿಯಾದ ಗೆಲುವಿಗೆ ಸಹಕರಿಸಿದರು.

ಇದನ್ನೂ ಓದಿ:Krunal Pandya: ಪ್ರಾಮಾಣಿಕವಾಗಿ ಹೇಳಿ, ಕೃನಾಲ್​ ಭಾರತದ ಪರ ಆಡ್ತಾನಾ? ಕೃನಾಲ್​ ತಂದೆಯ ಬಗ್ಗೆ ಕೋಚ್​ ಹೇಳಿದ್ದೇನು?

Published On - 12:32 pm, Wed, 24 March 21

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!