Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಕೊಹ್ಲಿ ಇರೋದೇ ಹಾಗೆ! ವಿರಾಟ್​- ಬಟ್ಲರ್​ ವಾಕ್ಸಮರಕ್ಕೆ ಪ್ರತಿಕ್ರಿಸಿದ ಮೋರ್ಗಾನ್​ ಹೇಳಿದ್ದೇನು ಗೊತ್ತಾ?

India vs England: ವಿರಾಟ್ ಮೈದಾನದಲ್ಲಿ ಆಡುವಾಗ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದು ಅವರ ನೈಜ ವರ್ತನೆಯಾಗಿದೆ.

India vs England: ಕೊಹ್ಲಿ ಇರೋದೇ ಹಾಗೆ! ವಿರಾಟ್​- ಬಟ್ಲರ್​ ವಾಕ್ಸಮರಕ್ಕೆ ಪ್ರತಿಕ್ರಿಸಿದ ಮೋರ್ಗಾನ್​ ಹೇಳಿದ್ದೇನು ಗೊತ್ತಾ?
ಇಯಾನ್​ ಮೋರ್ಗಾನ್- ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: Mar 22, 2021 | 1:42 PM

ಅಹಮದಾಬಾದ್​: ಇಂಡಿಯಾ- ಇಂಗ್ಲೆಂಡ್​ ನಡುವಿನ ಟಿ 20 ಸರಣಿಯ ನಿರ್ಣಾಯಕ ಸಮರ ಭಾರತಕ್ಕೆ ಸಂತಸ ನೀಡುವ ಮೂಲಕ ಕೊನೆಗೊಂಡಿದೆ. ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರ ವೀರೊಚಿತ ಹೋರಾಟದಿಂದ ಸರಣಿಯನ್ನು ಗೆದ್ದು ಬೀಗಿತು. ಈ ಮೂಲಕ ವಿಶ್ವದ ನಂ.1 ತಂಡವನ್ನು ಸದ್ದಿಲ್ಲದೆ ಸದೆಬಡಿದಿದೆ. ಆದರೆ ಈ ಅಂತಿಮ ಕದನದಲ್ಲಿ ಟೀಂ ಇಂಡಿಯಾ ನಾಯಕ ಹಾಗೂ ಇಂಗ್ಲೆಂಡ್​ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ನಡುವೆ ವಾಕ್ಸಮರವೂ ಸಹ ನಡೆಯಿತು. ಮೈದಾನದಲ್ಲಿ ಇಬ್ಬರೂ ಪರಸ್ಪರ ಜೋರು ಧ್ವನಿಯಲ್ಲಿ ಮಾತಿನ ಯುದ್ಧ ನಡೆಸಿದ್ದರು. ಈ ಇಬ್ಬರು ಆಟಗಾರರ ವಾಕ್ಸಮರ ಮೈದಾನದಲ್ಲಿನ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗಿತ್ತು. ಜೊತೆಗೆ ಪಂದ್ಯದ ನಂತರ ಈ ವಿಡಿಯೋ ಫುಲ್​ ವೈರಲ್​ ಸಹ ಆಗಿತ್ತು.

ಈಗ ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆ ಇದ್ದೆ ಇರುತ್ತದೆ ಎಂಬಂತೆ ಅಂದು ನಡೆದ ವಾಕ್ಸಮರದ ಬಗ್ಗೆ ಇಂಗ್ಲೆಂಡ್ ನಾಯಕ ಇಯಾನ್​ ಮೋರ್ಗಾನ್ ಮೊದಲ ಬಾರಿಗೆ ಇಡೀ ವಿಷಯದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವರ್ತನೆಯ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

ವಿರಾಟ್-ಬಟ್ಲರ್‌ ವಾಕ್ಸಮರಕ್ಕೆ ಮೋರ್ಗನ್‌ ಪ್ರತಿಕ್ರಿಯೆ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ನಾಯಕ ಇಯಾನ್ ಮೋರ್ಗಾನ್ ಆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆ ಘಟನೆ ಏಕೆ ಸಂಭವಿಸಿತು ಎಂಬುದು ನನಗೆ ತಿಳಿದಿಲ್ಲ. ಈ ಇಡೀ ಸಂಘರ್ಷದ ಮೂಲ ಯಾವುದು ಎಂಬುದು ಗೊತ್ತಿಲ್ಲ? ವಿರಾಟ್ ಮೈದಾನದಲ್ಲಿ ಆಡುವಾಗ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದು ಅವರ ನೈಜ ವರ್ತನೆಯಾಗಿದೆ. ಸ್ಪರ್ಧೆಯು ಕಠಿಣವಾದಾಗ, ಆ ಸಮಯದಲ್ಲಿ ಆಟಗಾರರ ನಡುವೆ ಚರ್ಚೆ ನಡೆಯುವುದು ಸಹಜ. ಹಾಗಾಗಿ ಅಂದಿನ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

13 ನೇ ಓವರ್‌ನಲ್ಲಿ ನಡೆದ ಪ್ರಸಂಗ ವಾಸ್ತವವಾಗಿ, ಈ ಇಡೀ ಪ್ರಸಂಗ ಇಂಗ್ಲೆಂಡ್ ಇನ್ನಿಂಗ್ಸ್ನ 13 ನೇ ಓವರ್​ನಲ್ಲಿ ನಡೆಯಿತು. 225 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಆಘಾತ ಎದುರಿಸಿತು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸಿಕ್ಸರ್​ ಬಾರಿಸಲು ಯತ್ನಿಸಿದ ಜೋಸ್ ಬಟ್ಲರ್ ಔಟಾಗಿದ್ದರು. ಆ ಸಮಯದಲ್ಲಿ ಇಂಗ್ಲೆಂಡ್‌ನ ಸ್ಕೋರ್ 130 ರನ್ ಆಗಿತ್ತು. ಬಟ್ಲರ್​ ವಿಕೆಟ್​ ಬಳಿಕ ಮೈದಾನದಲ್ಲಿ ಯತ ಪ್ರಕಾರವಾಗಿ ತಮ್ಮ ಅಗ್ರೇಶನ್​ ಹೊರಹಾಕಿದ ಕೊಹ್ಲಿ ಆಟಗಾರರೊಂದಿಗೆ ಸೆಲೆಬ್ರೆಷನ್​ ಮೂಡ್​ನಲ್ಲಿದ್ದರು.

ಔಟಾದ ಬಳಿಕ ಡಗ್‌ ಔಟ್‌ಗೆ ಹಿಂದಿರುಗುತ್ತಿದ್ದ ಬಟ್ಲರ್​, ವಿರಾಟ್‌ ಕಡೆ ತಿರುಗಿ ಏನನ್ನೋ ಹೇಳಿದರು, ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಸೆಲೆಬ್ರೇಷನ್​ ಮೂಡ್​ಗೆ ಬ್ರೇಕ್​ ಹಾಕಿ ಬಟ್ಲರ್​ ಕಡೆಗೆ ಅದೇನೊ ಹೇಳುತ್ತಾ ದಾವಿಸಿದರು. ಕೊಹ್ಲಿಯ ಬರುವಿಕೆಯನ್ನ ಗಮನಿಸಿದ ಬಟ್ಲರ್​ ಸಹ ಡಗ್​ಔಟ್​ನಿಂದ ವಾಪಸ್ಸ್​ ತಿರುಗಿ ಕೊಹ್ಲಿ ಮಾತಿಗೆ ಪ್ರತ್ಯುತ್ತರ ನೀಡಲು ಆರಂಭಿಸಿದರು. ಕೆಲ ಸಮಯದವರೆಗೆ ಈ ಇಬ್ಬರ ನಡುವಿನ ಮಾತಿನ ಚಕಮಕಿ ಮುಂದುವರೆದಿತ್ತು. ಕೊಹ್ಲಿಯ ಮಾತಿನ ಬರಕ್ಕೆ ಹೆದರಿದ ಬಟ್ಲರ್​, ಪೆವಿಲಿಯನ್​ ಅತ್ತ ಪೆಚ್ಚುಮೊರೆ ಹಾಕಿಕೊಂಡು ಸಾಗಿದರು. ಆದರೆ ಈ ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ:India vs England: ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ ಪ್ರಕಟ.. ರೂಟ್, ಆರ್ಚರ್ ಸರಣಿಯಿಂದ​ ಔಟ್!

ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?