AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಕಿರೀಟ ಯಾರ ಮುಡಿಗೆ? ಭವಿಷ್ಯ ನುಡಿದ ಯುವರಾಜ್; ಕೊಹ್ಲಿ ಪಡೆಗೆ ನಡುಕ!

WTC Final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್​ಗೂ ಮುನ್ನ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿರಲಿದೆ. ಟೀಮ್ ಇಂಡಿಯಾಕ್ಕಿಂತ ನ್ಯೂಜಿಲೆಂಡ್ಗೆ ಹೆಚ್ಚು ಅನುಕೂಲ.

WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಕಿರೀಟ ಯಾರ ಮುಡಿಗೆ? ಭವಿಷ್ಯ ನುಡಿದ ಯುವರಾಜ್; ಕೊಹ್ಲಿ ಪಡೆಗೆ ನಡುಕ!
ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕೆಲ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ ಪಂಜಾಬ್ ಬಿಜೆಪಿ. ಅದರಂತೆ ಈಗಾಗಲೇ ಸೆಲೆಬ್ರಿಟಿಗಳ ಪಟ್ಟಿ ಸಿದ್ದವಾಗುತ್ತಿದ್ದು, ಆ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಹೆಸರು ಮುಂಚೂಣಿಯಲ್ಲಿರುವುದು ವಿಶೇಷ.
Follow us
ಪೃಥ್ವಿಶಂಕರ
| Updated By: Skanda

Updated on: Jun 08, 2021 | 9:12 AM

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್​ಗೆ ಇನ್ನೆರೆಡೇ ವಾರ ಬಾಕಿಯಿದೆ. ಆಂಗ್ಲರ ನೆಲದಲ್ಲಿರುವ ಕೊಹ್ಲಿ ಪಡೆ, ಫೈನಲ್ ಪೈಟ್​ನಲ್ಲಿ ಕಿವೀಸ್ ಕಿವಿ ಹಿಂಡುವ ಆತ್ಮವಿಶ್ವಾಸದಲ್ಲಿದ್ದಾರೆ. ಆದ್ರೀಗ ಯುವರಾಜ್ ಸಿಂಗ್ ಆಡಿದ ಅದೊಂದು ಮಾತು, ಕ್ವಾರಂಟೈನ್ನಲ್ಲಿರುವ ಕೊಹ್ಲಿ ಪಡೆಗೆ ನಡುಕ ಹುಟ್ಟಿಸಿದೆ. ಜೂನ್ 18ರಂದು ಇಂಗ್ಲೆಂಡ್​ನ ಸೌಂತಾಂಪ್ಟನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗ್ತಿವೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕಿರೀಟವನ್ನ ಯಾರು ಮುಡಿಗೇರಿಸಿಕೊಳ್ತಾರೆ ಅನ್ನೋ ಕುತೂಹಲ, ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಈಗಾಗಲೇ ಟೀಮ್ ಇಂಡಿಯಾ ಇಂಗ್ಲೆಂಡ್​ಗೆ ತೆರಳಿದ್ದು ಕ್ವಾರಂಟೈನ್ ನಿಯಮವನ್ನ ಪಾಲಿಸುತ್ತಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ಆಂಗ್ಲರ ನೆಲದಲ್ಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡ್ತಿದೆ. ಈ ಮಧ್ಯೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಿಕ್ಸರ್ ಕಿಂಗ್ ಯುವರಾಜ್ ಅವರು ಕೊಹ್ಲಿ ಪಡೆ ಬೆಚ್ಚಿ ಬೀಳುವಂತ ಹೇಳಿಕೆಯೊಂದನ್ನ ನೀಡಿದ್ದಾರೆ..

3 ಪಂದ್ಯಗಳ ಸರಣಿ ಆಡಿಸಿದ್ರೆ ಕೊಹ್ಲಿ ಪಡೆಗೆ ಲಾಭವಾಗ್ತಿತ್ತು! ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವಿಜೇತರನ್ನ ಒಂದು ಪಂದ್ಯದಲ್ಲಿ ನಿರ್ಧರಿಸುವ ಬದಲು, ಮೂರು ಪಂದ್ಯಗಳ ಮೂಲಕ ನಿರ್ಧರಿಸಬಹುದಿತ್ತು ಎಂದಿದ್ರು. ಶಾಸ್ತ್ರಿ ಮಾತಿಗೆ ಬೆಂಬಲ ಸೂಚಿಸಿರುವ ಯುವರಾಜ್ ಸಿಂಗ್, ಕೊಹ್ಲಿ ಪಡೆಗಾಗುವ ಹಿನ್ನಡೆಯನ್ನ ಬಿಚ್ಚಿಟ್ಟಿದ್ದಾರೆ.

ನ್ಯೂಜಿಲೆಂಡ್ಗೆ ಅನುಕೂಲ ಹೆಚ್ಚು ನನ್ನ ಪ್ರಕಾರ 3 ಪಂದ್ಯಗಳಿರಬೇಕಿತ್ತು. ಯಾಕಂದ್ರೆ ಮೊದಲ ಪಂದ್ಯವನ್ನ ಸೋತ್ರೆ, ಉಳಿದೆರಡು ಪಂದ್ಯಗಳಲ್ಲಿ ಕಮ್​ ಬ್ಯಾಕ್ ಮಾಡಬಹುದು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್​ಗೂ ಮುನ್ನ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿರಲಿದೆ. ಟೀಮ್ ಇಂಡಿಯಾಕ್ಕಿಂತ ನ್ಯೂಜಿಲೆಂಡ್​ಗೆ ಹೆಚ್ಚು ಅನುಕೂಲ. ಹಾಗೇ ಇಂಗ್ಲೆಂಡ್ ಪಿಚ್ನ ಸ್ವರೂಪ ಕಿವೀಸ್ ಆಟಗಾರರಿಗೆ ತಿಳಿಯಲಿದೆ. ಆದ್ರೆ ಟೀಮ್ ಇಂಡಿಯಾ ನೇರವಾಗಿ ಆಡೋದ್ರಿಂದ, ಅನಾನೂಕೂಲ ಹೆಚ್ಚಾಗಿರಲಿದೆ. – ಯುವರಾಜ್ ಸಿಂಗ್, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ

ನಿಜ.. ಯುವರಾಜ್ ಸಿಂಗ್ ಹೇಳಿರೋ ಪ್ರಕಾರ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಿ ಆಂಗ್ಲರ ನೆಲದಲ್ಲಿ ಲಯ ಕಂಡುಕೊಂಡಿದೆ. ಇನ್ನು ಟೀಮ್ ಇಂಡಿಯಾ ಮೂರು ವರ್ಷಗಳ ಬಳಿಕ ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯವನ್ನಾಡ್ತಿದೆ. ಹೀಗಾಗಿ ಕೇನ್ ವಿಲಿಯಮ್ಸನ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ, ಕೊಹ್ಲಿ ಪಡೆಗಿಂತ ಹೆಚ್ಚಿನ ರಿದಮ್ ಹೊಂದಿರಲಿದೆ.

ಟೀಮ್ ಇಂಡಿಯಾ ಕ್ವಾರಂಟೈನ್ ಮುಗಿದ ಬಳಿಕ 8 ರಿಂದ 10 ಪ್ರಾಕ್ಟೀಸ್ ಸೆಷನ್ಗಳನ್ನ ಮಾತ್ರ ಮಾಡಲಿದೆ. ಆದ್ರಿದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ, ನ್ಯೂಜಿಲೆಂಡ್ಗೆ ಸಿಕ್ಕಿರುವ ಅನುಭವಕ್ಕಿಂತ ಕಡಿಮೆಯೇ. ಯುವಿ ಲೆಕ್ಕಾಚಾರ ಸರಿಯಾಗೇ ಇದ್ದು, ಕ್ವಾರಂಟೈನ್ನಲ್ಲಿರುವ ಕೊಹ್ಲಿ ಪಡೆಗೆ ಒಳಗೊಳಗೆ ನಡುಕ ಶುರುವಾಗಿದೆ.

ಇದನ್ನೂ ಓದಿ: ನಾಯಕತ್ವ ವಿಚಾರದಲ್ಲಿ ಕೊಹ್ಲಿ, ಸರ್ಫರಾಜ್ ನಡುವೆ ಸಾಮ್ಯತೆ ಇದೆ.. ಆದರೆ ಧೋನಿ ಹಾಗಲ್ಲ; ಫಾಫ್ ಡು ಪ್ಲೆಸಿಸ್ 

WTC Final: ವಿಶ್ವ ಟೆಸ್ಟ್ ಚಾಂಪಿಯನ್‌ ಆಗುವ ತಂಡವನ್ನು ಹೆಸರಿಸಿದ ಬ್ರೆಟ್ ಲೀ; ಗೆಲುವಿಗೆ ನೀಡಿದ ಕಾರಣವೇನು ಗೊತ್ತಾ?

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ