AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ 2020: ಎಮ್​ ಎಸ್​ ಧೋನಿಯ ಕಾಮೆಂಟ್​ಗಳನ್ನು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಳ್ಳಲಾಗಿದೆ: ಜಗದೀಶನ್

ಸಿಎಸ್​ಕೆ ತಂಡದ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ಎನ್ ಜಗದೀಶನ್ ಅವರು, ಧೋನಿ ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ‘ಧೋನಿ ಹೇಳಿದ್ದನ್ನು ಮಾಧ್ಯಮದವರು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಿದ್ದ್ದಾರೆ,’ ಎಂದು ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಜಗದೀಶನ್ ಕ್ರೀಡಾ ವೆಬ್​ಸೈಟೊಂದರ ಜೊತೆ ಮಾತಾಡುವಾಗ ಹೇಳಿದ್ದಾರೆ.

ಐಪಿಎಲ್ 2020: ಎಮ್​ ಎಸ್​ ಧೋನಿಯ ಕಾಮೆಂಟ್​ಗಳನ್ನು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಳ್ಳಲಾಗಿದೆ: ಜಗದೀಶನ್
ಧೋನಿ ಐಪಿಎಲ್ ಮೂಲಕ ವರ್ಷಕ್ಕೆ 15 ಕೋಟಿ ರೂ. ಸಂಬಳ ಪಡೆಯುತ್ತಾರೆ. ಇದರ ಜೊತೆಗೆ ಅವರು ವಿವಿಧ ಕಂಪನಿಗಳ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿ ಸಾಕಷ್ಟು ಹಣ ಗಳಿಸುತ್ತಾರೆ.
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: May 25, 2021 | 12:00 AM

ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತ್ತು ಚೆನೈ ಸೂಪರ್ ಕಿಂಗ್ಸ್ ತಂಡಕ್ಕೆ ಬದಲಾಗದ ನಾಯಕ ಮಹೇಂದ್ರಸಿಂಗ್ ಧೋನಿ ನಾಯಕತ್ವ ನಿಸ್ಸಂದೇಹವಾಗಿ ಇತರ ನಾಯಕರಿಗಿಂತ ಭಿನ್ನವಾದದ್ದು. ಮೂರು ಸಲ ಐಸಿಸಿ ಟ್ರೋಫಿ, ಸಿಎಸ್​ಕೆಗೆ ಅಷ್ಟೇ ಸಲ ಐಪಿಎಲ್ ಪ್ರಶಸ್ತಿಯ ಜೊತೆ ಟೀಮ್ ಇಂಡಿಯಾಗೆ ಹಲವಾರು ಟೂರ್ನಿ ಮತ್ತು ಸರಣಿಗಳನ್ನು ಅವರು ಗೆದ್ದಿದ್ದಾರೆ. ಅವರ ನಾಯತ್ವದಲ್ಲಿ ಎದ್ದು ಕಾಣುವ ಅಂಶವೆಂದರೆ ಯುವ ಆಟಗಾರರನ್ನು ಅವರು ನಡೆಸಿಕೊಳ್ಳುವ ಮತ್ತು ಅವರಲ್ಲಿರುವ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ರೀತಿ. ಅವರನ್ನು ಸದಾ ಬೆಂಬಲಿಸುವ ಧೋನಿ ಸಮಯ ಬಂದಾಗ ಹಿರಿಯಣ್ಣನಂತೆ ಗದರುತ್ತಾರೆ, ಆದರೆ ಯಾವತ್ತೂ ಬಹಿರಂಗವಾಗಿ ಅಲ್ಲ. ಈ ಹಿನ್ನೆಲೆಯಲ್ಲಿ ಧೋನಿ ಕಳೆದ ವರ್ಷ ಯುಎಈ ಯಲ್ಲಿ ನಡೆದ 13 ನೇ ಐಪಿಎಲ್ ಆವೃತ್ತಿಯಲ್ಲಿ ಸಿಎಸ್​ಕೆ ತಂಡದ ಕಳಪೆ ಪ್ರದರ್ಶನಕ್ಕೆ ಯುವ ಆಟಗಾರರರನ್ನು ಮಾಧ್ಯಮದವರೊಂದಿಗೆ ಮಾತಾಡುವಾಗ ದೂರಿದ್ದು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿತ್ತು.

ಸಿಎಸ್​ಕೆ ತಂಡದ ಯುವ ಆಟಗಾರರರಲ್ಲಿ ಗೆಲ್ಲಬೇಕೆಂಬ ಛಲ ಇಲ್ಲದೇ ಹೋಗಿದ್ದು ಸಿಎಸ್​ಕೆಯ ಹೀನಾಯ ಪ್ರದರ್ಶನಕ್ಕೆ ಪ್ರಮುಖ ಕಾರಣವಾಯಿತೆಂದು ಧೋನಿ ಹೇಳಿದ್ದರು. ‘ಯುವ ಆಟಗಾರರಿಗೆ ನಾವು ಕೆಲ ಅವಕಾಶಗಳನ್ನು ಕಲ್ಪಿಸದೆವು. ಆದರೆ, ಅವರಲ್ಲಿ ಛಲದ ಕೊರತೆ ಎದ್ದು ಕಂಡಿತು. ಓಕೆ, ಯುವಕರು ತಮಗೆ ಗೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸೀನಿಯರ್​ಗಳಿಗೆ ತಮ್ಮ ಸ್ಥಾನಗಳ ಬಗ್ಗೆ ಅಭದ್ರತೆ ಹುಟ್ಟಿಸಲಿದ್ದಾರೆ ಆಂತ ನಾವಂದುಕೊಂಡಿದ್ದು ಸುಳ್ಳಾಯಿತು,’ ಎಂದು ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ 7 ವಿಕೆಟ್​ಗಳ ಪರಾಭವ ಅನುಭವಿಸಿದ ನಂತರ ದೋನಿ ಹೇಳಿದ್ದರು.

ಆದರೆ, ಸಿಎಸ್​ಕೆ ತಂಡದ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ಎನ್ ಜಗದೀಶನ್ ಅವರು, ಧೋನಿ ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ‘ಧೋನಿ ಹೇಳಿದ್ದನ್ನು ಮಾಧ್ಯಮದವರು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಿದ್ದ್ದಾರೆ,’ ಎಂದು ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಜಗದೀಶನ್ ಕ್ರೀಡಾ ವೆಬ್​ಸೈಟೊಂದರ ಜೊತೆ ಮಾತಾಡುವಾಗ ಹೇಳಿದ್ದಾರೆ.

ಆರಂಭ ಆಟಗಾರ ಋತುರಾಜ ಗಾಯಕ್ವಾಡ್​ ಅವರೊಂದಿಗೆ ಸಿಎಸ್​ಕೆ ಟೀಮಿನ ಭವಿಷ್ಯದ ಸ್ಟಾರ್​ಗಳೆನಿಸಿಕೊಂಡಿರುವ ಜಗದೀಶನ್ ಅವರು ಧೋನಿಯ ಅವರ ಕಾಮೆಂಟ್​ ಇಡೀ ತಂಡದ ಸ್ಥೈರ್ಯವನ್ನು ಹೆಚ್ಚಿಸಿತು ಎಂದಿದ್ದಾರೆ.

‘ಅವರು ಅಸಲಿಗೆ ಹೇಳಿದ್ದು ಯುವ ಆಟಗಾರರ ಬಗ್ಗೆ ಅಲ್ಲವೇ ಅಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಮತ್ತು ಋತು ಉತ್ತಮ ಪ್ರದರ್ಶನಗಳನ್ನು ನೀಡಿದ್ದೆವು. ಜನ ಅರ್ಥ ಮಾಡಿಕೊಳ್ಳದೆ ಹೋದ ಸಂಗತಿಯೇನೆಂದರೆ, ಸೀನಿಯರ್ಸ್ ಸೇರಿದಂತೆ ಅವರು ಇಡೀ ತಂಡದ ಸ್ಥೈರ್ಯವನ್ನು ಹೆಚ್ಚಿಸಲು ಪ್ರಯತ್ನಸಿದ್ದು. ಅವರಂಥ ಒಬ್ಬ ಲೆಜೆಂಡ್ ಪ್ರತಿಯೊಬ್ಬ ಆಟಗಾರನ ನ್ಯೂನತೆಗಳನ್ನು ಬೊಟ್ಟು ಮಾಡಿ ತೋರಿಸಲಾರ. ಸೀನಿಯರ್​ ಆಟಗಾರರನ್ನು ಹುರಿದುಂಬಿಸಲು ಒಂದು ವಿಧಾನ ಬೇಕಾಗುತ್ತದೆ. ಅವರ ಸ್ಥೈರ್ಯವನ್ನು ಹೆಚ್ಚಿಸಲು ಧೋನಿ ಏನನ್ನಾದರೂ ಮಾಡಲೇಬೇಕಿತ್ತು. ಅವರ ಕಾಮೆಂಟ್ ನಂತರ ಟೀಮ್ ಉತ್ತಮ ಪ್ರದರ್ಶನಗಳನ್ನು ನೀಡಿತು,’ ಎಂದು ಜಗದೀಶನ್ ಹೇಳಿದ್ದಾರೆ. ಇವರು ಕಳೆದ ಸೀಸನ್​ನಲ್ಲಿ ಸಿಎಸ್​ಕೆಗೆ ಐದು ಪಂದ್ಯಗಳನ್ನಾಡಿದರು.

2020ರಲ್ಲಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ ಆಫ್ ಹಂತ ತಲುಪಲು ಸಿಎಸ್​ಕೆ ವಿಫಲವಾಯಿತಾದರೂ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಮಾನ ಉಳಿಸಿಕೊಂಡಿತ್ತು. ಋತುರಾಜ್ ಸತತವಾಗಿ ಮೂರು ಅರ್ಧ ಶತಕಗಳನ್ನು ಬಾರಿಸಿ ತಮ್ಮ ಸಾಮರ್ಥ್ಯದ ಪದರ್ಶನ ನೀಡಿದ್ದರು.

2021 ರ ಸೀಸನ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಡುವ ಮೊದಲು ತಾನಾಡಿದ7 ಪಂದ್ಯಗಳಲ್ಲಿ 5 ಅನ್ನು ಗೆದ್ದ ಸಿಎಸ್​ಕೆ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕೊವಿಡ್​ ಪ್ರಕರಣಗಳ ಸಂಖ್ಯೆ ದಿಢೀರನೆ ಹೆಚ್ಚಾಗಲಾರಂಭಿಸದ ನಂತರ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಕೆಲ ಅಟಗಾರರು ಮತ್ತು ಸಪೋರ್ಟ್ ಸ್ಟಾಫ್ ಸಹ ಸೋಂಕಿಗೊಳಗಾಗಿದ್ದರು.

ಇದನ್ನೂ ಓದಿ: IPL 2021: ಉಳಿದ ಐಪಿಎಲ್ ಪಂದ್ಯಗಳನ್ನು ಇಂಗ್ಲೆಂಡ್​ನಲ್ಲಿ ಆಯೋಜಿಸುವುದು ಬೇಡ; ಇಂಗ್ಲೆಂಡ್ ಮಾಜಿ ಕ್ರಿಕೆಟಿಗನ ವಿರೋಧ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ