IPL 2020: ಕೊಲ್ಕತ್ತಾ ಮೇಲೆ ಕೊಹ್ಲಿ ಹುಡುಗರು ದರ್ಬಾರ್​ ನಡೆಸಿದ ಫೋಟೋಗಳಿವು..

ಅಬು ಧಾಬಿಯಲ್ಲಿ ನಡೆದ ಕೊಲ್ಕತ್ತಾ ಹಾಗೂ ಬೆಂಗಳೂರು ನಡುವಿನ ಸೇಡಿನ ಸಮರದಲ್ಲಿ ಬೆಂಗಳೂರು 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ. ಕೆ.ಕೆ.ಆರ್. ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. 10 ಪಂದ್ಯಗಳಲ್ಲಿ 7 ಪಂದ್ಯಗಳನ್ನ ಗೆದ್ದಿರೋ ಆರ್.​ಸಿ.ಬಿ. 14 ಅಂಕಗಳನ್ನ ಕಲೆಹಾಕಿ, ಎರಡನೇ ಸ್ಥಾನವನ್ನ ಅಲಂಕರಿಸಿದೆ. ಆರ್​.ಸಿ.ಬಿ. ವಿರುದ್ಧ ಕೆ.ಕೆ.ಆರ್. ಪವರ್ ಪ್ಲೇನಲ್ಲಿ 17 ರನ್​ಗೆ 4 ವಿಕೆಟ್ ಕಳೆದುಕೊಳ್ತು. ಇದು ಐಪಿಎಲ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ದಾಖಲಿಸಿದ […]

IPL 2020: ಕೊಲ್ಕತ್ತಾ ಮೇಲೆ ಕೊಹ್ಲಿ ಹುಡುಗರು ದರ್ಬಾರ್​ ನಡೆಸಿದ ಫೋಟೋಗಳಿವು..
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Nov 23, 2020 | 12:42 PM

ಅಬು ಧಾಬಿಯಲ್ಲಿ ನಡೆದ ಕೊಲ್ಕತ್ತಾ ಹಾಗೂ ಬೆಂಗಳೂರು ನಡುವಿನ ಸೇಡಿನ ಸಮರದಲ್ಲಿ ಬೆಂಗಳೂರು 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ.


ಕೆ.ಕೆ.ಆರ್. ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. 10 ಪಂದ್ಯಗಳಲ್ಲಿ 7 ಪಂದ್ಯಗಳನ್ನ ಗೆದ್ದಿರೋ ಆರ್.​ಸಿ.ಬಿ. 14 ಅಂಕಗಳನ್ನ ಕಲೆಹಾಕಿ, ಎರಡನೇ ಸ್ಥಾನವನ್ನ ಅಲಂಕರಿಸಿದೆ.


ಆರ್​.ಸಿ.ಬಿ. ವಿರುದ್ಧ ಕೆ.ಕೆ.ಆರ್. ಪವರ್ ಪ್ಲೇನಲ್ಲಿ 17 ರನ್​ಗೆ 4 ವಿಕೆಟ್ ಕಳೆದುಕೊಳ್ತು. ಇದು ಐಪಿಎಲ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ದಾಖಲಿಸಿದ ಅತಿ ಕಡಿಮೆ ಸ್ಕೋರ್ ಆಗಿದೆ.


ಕೊಲ್ಕತ್ತಾ ವಿರುದ್ಧ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪಡೆದುಕೊಂಡ್ರು. 4 ಓವರ್​ಗಳಲ್ಲಿ ಎರಡು ಓವರ್ ಮೇಡನ್ ಮಾಡಿದ ಸಿರಾಜ್, 8 ರನ್ ನೀಡಿ ಮೂರು ವಿಕೆಟ್ ಪಡೆದ ಸಾಧನೆ ಮಾಡಿದ್ರು.


ಕೊಲ್ಕತ್ತಾ ವಿರುದ್ಧ ಎರಡು ಬೌಂಡರಿಗಳನ್ನ ಬಾರಿಸಿದ ವಿರಾಟ್ ಕೊಹ್ಲಿ, ಐಪಿಎಲ್ ಕರಿಯರ್​ನಲ್ಲಿ ಒಟ್ಟು 500ನೇ ಬೌಂಡರಿ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ರು. 187 ಪಂದ್ಯಗಳಲ್ಲಿ ಕೊಹ್ಲಿ 500 ಬೌಂಡರಿ ಬಾರಿಸಿದ್ರೆ, 199 ಸಿಕ್ಸರ್​ಗಳನ್ನ ಸಿಡಿಸಿದ್ದಾರೆ.


ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್​ಗೆ ಲೆಗ್ ಸ್ಪಿನ್ನರ್​ಗಳೇ ಕಂಕಟವಾಗಿದ್ದಾರೆ. ಸೀಸನ್ 13 ರಲ್ಲಿ 18 ಲೆಗ್ ಸ್ಪಿನ್ ಬಾಲ್​ಗಳನ್ನ ಎದುರಿಸಿದ ದಿನೇಶ್ ಕಾರ್ತಿಕ್ 14 ರನ್ ಗಳಿಸಿದ್ರೆ, 5 ಬಾರಿ ವಿಕೆಟ್ ಒಪ್ಪಿಸಿದ್ದಾರೆ.


8 ವರ್ಷಗಳ ಬಳಿಕ ಕೊಲ್ಕತ್ತಾ ತಂಡ ಌಂಡ್ರೋ ರಸ್ಸೆಲ್ ಹಾಗೂ ಸುನಿಲ್ ನರೈನ್​ರನ್ನ ಪ್ಲೇಯಿಂಗ್ ಇಲೆವೆನ್​ನಿಂದ ಹೊರಗಿಟ್ಟಿದೆ. 2012 ರಲ್ಲಿಯೂ ಕೆಕೆಆರ್, ಆರ್​ಸಿಬಿ ವಿರುದ್ಧ ಇಬ್ಬರು ವೆಸ್ಟ್ ಇಂಡೀಸ್ ಕ್ರಿಕೆಟಿಗರನ್ನ ತಂಡದಿಂದ ಹೊರಗಿಟ್ಟಿತ್ತು.


ಆರ್.​ಸಿ.ಬಿ. ತಂಡದ ವಿಕೆಟ್ ಕೀಪರ್ ಎಬಿ ಡಿವಿಲಿಯರ್ಸ್ ಐಪಿಎಲ್​ನಲ್ಲಿ 100ನೇ ಕ್ಯಾಚ್ ಹಿಡಿದಿದ್ದಾರೆ. ಕೆಕೆಆರ್ ಪಂದ್ಯಕ್ಕೂ ಮುನ್ನ ಎಬಿಡಿಗೆ ಎರಡು ಕ್ಯಾಚ್ ಅವಶ್ಯಕತೆಯಿತ್ತು. ಟಾಮ್ ಬೆಂಟನ್, ರಾಹುಲ್ ತ್ರಿಪಾಟಿ ಕ್ಯಾಚ್ ಹಿಡಿದ ಎಬಿಡಿ ನೂರರ ಕ್ಲಬ್ ಸೇರದ್ರು.

Published On - 9:28 am, Thu, 22 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us