AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಇತಿಹಾಸದಲ್ಲಿ ಸಿಎಸ್​ಕೆ ಯಾವತ್ತೂ ಇಂಥ ಸ್ಥಿತಿಯಲ್ಲಿರಲಿಲ್ಲ!

ಇಂಡಿಯನ್ ಪ್ರಿಮಿಯರ್ ಲೀಗ್ 13 ನೇ ಆವೃತಿಯ ಎರಡನೇ ಸುತ್ತಿನ ಪಂದ್ಯಗಳು ಶುರುವಾಗಿವೆ. ಈ ಸೀಸನ್​ನ 29ನೇ ಪಂದ್ಯ ಸನರೈಸರ್ಸ್ ಹೈದರಾಬಾದ್ ಮತ್ತು ಚೆನೈ ಸೂಪ್ ಕಿಂಗ್ಸ್ ನಡುವೆ ದುಬೈನ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಡಿರುವ 7 ಪಂದ್ಯಗಳಲ್ಲಿ 5 ಸೋತು ಕೇವಲ 2ರಲ್ಲಿ ಮಾತ್ರ ಗೆದ್ದಿರುವ ಚೆನೈ ಟೀಮಿಗೆ ಪ್ಲೇ ಆಫ್​ನಲ್ಲಾಡುವ ಅಸೆಯನ್ನು ಜೀವಂತವಾಗಿರಿಸಬೇಕಾದರೆ ಇಂದು ಗೆಲ್ಲಲೇ ಬೇಕು. ಒಂದು ಪಕ್ಷ ಸೋತರೆ ಈ ಬಾರಿಯ ಐಪಿಎಲ್ ಸೀಸನ್​ಗೆ ಹೆಚ್ಚು ಕಡಿಮೆ ವಿದಾಯ ಹೇಳಿದಂತೆಯೇ. ಮತ್ತೊಂದೆಡೆ, […]

ಐಪಿಎಲ್ ಇತಿಹಾಸದಲ್ಲಿ ಸಿಎಸ್​ಕೆ ಯಾವತ್ತೂ ಇಂಥ ಸ್ಥಿತಿಯಲ್ಲಿರಲಿಲ್ಲ!
ಅರುಣ್​ ಕುಮಾರ್​ ಬೆಳ್ಳಿ
| Updated By: ಸಾಧು ಶ್ರೀನಾಥ್​|

Updated on:Oct 13, 2020 | 5:35 PM

Share

ಇಂಡಿಯನ್ ಪ್ರಿಮಿಯರ್ ಲೀಗ್ 13 ನೇ ಆವೃತಿಯ ಎರಡನೇ ಸುತ್ತಿನ ಪಂದ್ಯಗಳು ಶುರುವಾಗಿವೆ. ಈ ಸೀಸನ್​ನ 29ನೇ ಪಂದ್ಯ ಸನರೈಸರ್ಸ್ ಹೈದರಾಬಾದ್ ಮತ್ತು ಚೆನೈ ಸೂಪ್ ಕಿಂಗ್ಸ್ ನಡುವೆ ದುಬೈನ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಡಿರುವ 7 ಪಂದ್ಯಗಳಲ್ಲಿ 5 ಸೋತು ಕೇವಲ 2ರಲ್ಲಿ ಮಾತ್ರ ಗೆದ್ದಿರುವ ಚೆನೈ ಟೀಮಿಗೆ ಪ್ಲೇ ಆಫ್​ನಲ್ಲಾಡುವ ಅಸೆಯನ್ನು ಜೀವಂತವಾಗಿರಿಸಬೇಕಾದರೆ ಇಂದು ಗೆಲ್ಲಲೇ ಬೇಕು. ಒಂದು ಪಕ್ಷ ಸೋತರೆ ಈ ಬಾರಿಯ ಐಪಿಎಲ್ ಸೀಸನ್​ಗೆ ಹೆಚ್ಚು ಕಡಿಮೆ ವಿದಾಯ ಹೇಳಿದಂತೆಯೇ. ಮತ್ತೊಂದೆಡೆ, 6 ಅಂಕಗಳನ್ನು ಹೈದರಾಬಾದ್ ಇವತ್ತು ಸೋಲನ್ನು ಅಫೋರ್ಡ್ ಮಾಡಬಲ್ಲದು. ಆದರೆ, ಗೆದ್ದಲ್ಲಿ ಅದು ಪಾಯಿಂಟ್ಸ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿಯುತ್ತದೆ. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ ಅದು 3 ಗೆದ್ದು 4 ರಲ್ಲಿ ಸೋತಿದೆ. [yop_poll id=”11″] ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೆನೈ ಕ್ಯಾಚ್-22 ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ನಿರ್ಭೀತಿಯ ಕ್ರಿಕೆಟ್ ಆಡುವುದಕ್ಕೆ ಖ್ಯಾತವಾಗಿದ್ದ ಮಹೇಂದ್ರಸಿಂಗ್ ಧೋನಿ ನೇತೃತ್ವದ ತಂಡ ಇನ್ನೂ ಟೂರ್ನಿಯ ಅರ್ಧಭಾಗದಲ್ಲೇ ಅಳಿವು ಉಳಿವು ಸ್ಥಿತಿ ಎದುರಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಫೀಯರ್​ಲೆಸ್ ಕ್ರಿಕೆಟ್ ಮಂತ್ರವನ್ನು ಟೀಮಿಗೆ ಬೋಧಿಸಿದ್ದೇ ಧೋನಿ. ಆದರೆ ಆವರೇ ಈಗ ನಂಬಲು ಸಾಧ್ಯವಾಗದಷ್ಟು ಡಿಫೆನ್ಸಿವ್ ಆಗಿಬಿಟ್ಟಿದ್ದಾರೆ. ಹೊಡೆತಗಳನ್ನು ಬಾರಿಸುವ ಪ್ರಯತ್ನ ಮಾಡುತ್ತಿರುವರಾದರೂ ಮೊದಲಿನಂತೆ ಅವು ಕನೆಕ್ಟ್ ಆಗುತ್ತಿಲ್ಲ. ಹಿಂದಿನ ಐಪಿಎಲ್​ಗಳಲ್ಲಿ ಅವರು ಬ್ಯಾಟ್ ಬೀಸಿದ ಮರುಕ್ಷಣವೇ ಬಾಲು ಪ್ರೇಕ್ಷಕರ ಗ್ಯಾಲರಿಯಲ್ಲಿ ಲ್ಯಾಂಡ್ ಆಗುತ್ತಿತ್ತು. ಧೋನಿಗೆ ವಯಸ್ಸಾಗಿಬಿಟ್ಟಿದೆಯೇ ಅಥವಾ ಅವರು ಫಾರ್ಮ್​ನಲ್ಲಿಲ್ಲವೇ? ಪ್ರಾಯಶಃ ಎರಡೂ ಸರಿ.

ಸುರೇಶ್ ರೈನಾ ಅವರ ಅನುಪಸ್ಥಿತಿ ಚೆನೈಯನ್ನು ವಿಪರೀತವಾಗಿ ಕಾಡುತ್ತಿದೆ. ಅವರಿಂದ ತೆರವಾಗಿರುವ ಮೂರನೇ ಕ್ರಮಾಂಕಕ್ಕೆ ಯಾರೆಂದರೆ ಯಾರೂ ಫಿಟ್ ಆಗುತ್ತಿಲ್ಲ. ರೈನಾ ಅಪ್ರತಿಮ ಎಡಗೈ ಆಟಗಾರನಲ್ಲದೆ ವಿಶ್ವದರ್ಜೆಯ ಫೀಲ್ಡರ್ ಮತ್ತು ಉಪಯುಕ್ತ ಬೌಲರ್ ಕೂಡ ಆಗಿದ್ದರು. ಅವರ ಸ್ಥಾನದಲ್ಲಿ ಆಡುತ್ತಿರುವ ಅಂಬಟಿ ರಾಯುಡು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಚೆನ್ನಾಗಿ ಆಡಿದ್ದಾರೆ. 

ರೈನಾ ಅವರಂತೆ ಅತ್ಯಂತ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಈ ಬಾರಿ ಆಡದಿರುವುದು ಚೆನೈ ಟೀಮಿನ ಮೇಲೆ ದೊಡ್ಡ ಪರಿಣಾಮ ಬೀರಿದೆ. ಅದು ಸಾಲದೆಂಬಂತೆ, ಟೀಮ್ ಮ್ಯಾನೇಜ್ಮೆಂಟ್ ಅದ್ಯಾವ ಕಾರಣಕ್ಕೆ ಭಜ್ಜಿಯಷ್ಟೇ ಅನುಭವಿಯಾಗಿರುವ ಇಮ್ರಾನ್ ತಾಹಿರ್ ಅವರನ್ನು ಆಡುವ ಇಲೆವೆನ್​ನಿಂದ ಹೊರಗಿಡುತ್ತಿದೆಯೆಂದು ಸಿಎಸ್​ಕೆಯ ಅಭಿಮಾನಿಗಳಿಗೆ ಅರ್ಥವಾಗುತ್ತಿಲ್ಲ. ನಿಮಗೆ ಗೊತ್ತಿರಲಿ, ಕಳೆದ ಐಪಿಎಲ್ ಸೀಸನ್​ನಲ್ಲಿ ನೇರಳೆ ಬಣ್ಣದ ಕ್ಯಾಪ್ ತಾಹಿರ್ ಪಾಲಾಗಿತ್ತು. ಅವರನ್ನು ಆಡಿಸಬೇಕಾದರೆ, ಸ್ಯಾಮ್ ಕರನ್ ಇಲ್ಲವೇ ಡ್ವೇನ್ ಬ್ರಾವೊ ಇಬ್ಬರಲ್ಲಿ ಒಬ್ಬರನ್ನು ಡ್ರಾಪ್ ಮಾಡಬೇಕು. ಹಾಗೆ ಮಾಡಿದರೆ ಟೀಮಿಗೆ ನಷ್ಟವೇನೂ ಇಲ್ಲ. ಡೆತ್ ಓವರ್​ಗಳಲ್ಲಿ ಬ್ರಾವೊ ಚೆನ್ನಾಗಿ ಬೌಲ್ ಮಾಡುವುದರಿಂದ ಅವರನ್ನು ಉಳಿಸಿಕೊಂಡು, ಕರನ್ ಸ್ಥಾನಕ್ಕೆ ತಾಹಿರ್​ರನ್ನು ಆಡಿಸುವುದೇ ಲೇಸು.

ಹಾಗೆಯೇ, ಜೊಷ್ ಹೇಜೆಲ್​ವುಡ್ ವಿಶ್ವದರ್ಜೆಯ ವೇಗದ ಬೌಲರ್. ಅವರಿಗೂ ಸಹ ನಿಯಮಿತವಾಗಿ ಆಡುವ ಅವಕಾಶ ಸಿಗುತ್ತಿಲ್ಲ. ಧೋನಿ ತಮ್ಮ ಡಿಫೆನ್ಸಿವ್ ಮೈಂಡ್​ಸೆಟ್ ​ನಿಂದ ಆಚೆ ಬಂದು ಮತ್ತೊಮ್ಮೆ ನಿರ್ಭೀತಿಯ ಕ್ರಿಕೆಟ್ ಬ್ರ್ಯಾಂಡ್ ಅವುಸರಿಸಿದರೆ ಮಾತ್ರ ಅವರ ಟೀಮು ಚಾಂಪಿಯನ್​ಶಿಪ್​ನಲ್ಲಿ ಉಳಿದುಕೊಳ್ಳುತ್ತದೆ.

ಪಾಯಿಂಟ್ಸ್ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿರುವ ಹೈದರಾಬಾದ್ ಸ್ಥಿತಿ ಸಹ ನಾಜೂಕಾಗಿದೆ. ಚೆನೈಗಿಂತ ಒಂದು ಪಂದ್ಯ ಜಾಸ್ತಿ ಗೆದ್ದಿರುವುದರಿಂದ 6 ಪಾಯಿಂಟ್​ಗಳೊಂದಿಗೆ ಧೋನಿ ಪಡೆಗಿಂತ ಉತ್ತಮ ಸ್ಥಾನದಲ್ಲಿದೆ. ರವಿವಾರದಂದು ಗೆಲ್ಲುವ ಸ್ಥಿತಿಯಲ್ಲಿದ್ದಾಗ್ಯೂ ರಾಜಸ್ತಾನ ರಾಯಲ್ಸ್​ಗೆ ಸೋತಿದ್ದು ಟೀಮಿನ ಆತ್ಮವಿಶ್ವಾಸವನ್ನು ಕದಡಿದೆಯಲ್ಲದೆ, ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗಾಯದಿಂದಾಗಿ ಆಡದಂತಾಗಿರುವುದು, ಟೀಮಿನ ಸಮತೋಲನವನ್ನ್ನು ಏರುಪೇರು ಮಾಡಿದೆ.

ಹೈದರಾಬಾದ್​ಗೆ ಬ್ಯಾಟಿಂಗ್ ವಿಭಾಗದಲ್ಲಿ ಉಲ್ಲೇಖಿಸುವಂಥ ಸಮಸ್ಯೆಗಳಿಲ್ಲ. ನಾಯಕ ಡೇವಿಡ್ ವಾರ್ನರ್, ಅವರ ಆರಂಭಿಕ ಜೊತೆಗಾರ ಜಾನಿ ಬೇರ್​ಸ್ಟೊ, ಮನೀಶ್ ಪಾಂಡೆ ಮತ್ತು ಕೇನ್ ವಿಲಿಯಮ್ಸನ್ ರನ್ ಗಳಿಸುತ್ತಿದ್ದಾರೆ. ಪ್ರಿಯಮ್ ಗರ್ಗ್ ಬ್ಯಾಟಿಂಗ್​ನಲ್ಲಿ ಸ್ಥಿರತೆ ಕಾಣಿಸುತ್ತಿಲ್ಲ. ಆಲ್​ರೌಂಡರ್ ವಿಜಯ ಶಂಕರ್​ಗೆ ಯಾರಾದರು ಗಾಯಗೊಂಡರೆ ಮಾತ್ರ ಆಡುವ ಇಲೆವೆನ್​ನಲ್ಲಿ ಅವಕಾಶ ಸಿಗುತ್ತದೆ. ಹಾಗಾಗಿ, ಆವರ ಆತ್ಮವಿಶ್ವಾಸದ ಲೆವಲ್ ಮೇಲೇಳುತ್ತಿಲ್ಲ.

ಬೌಲಿಂಗ್ ವಿಭಾಗವು ರಶೀದ್ ಖಾನ್ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿದ ವಾರ್ನರ್ ಟೀಮಿಗೆ ಇಲ್ಲಿ ಕೆಲ ನ್ಯೂನತೆಗಳಿವೆ. ವೇಗದ ಬೌಲರ್ ಸಂದೀಪ್ ಶರ್ಮಗೆ ವಿಕೆಟ್ ಪಡೆಯಲಾಗುತ್ತಿಲ್ಲ ಮತ್ತು ಬ್ಯಾಟ್ಸ್​ಮನ್​ಳನ್ನು ನಿಯಂತ್ರಿಸಲು ಸಹ ಆಗುತ್ತಿಲ್ಲ. ಇವತ್ತಿನ ಗೇಮ್​ಗೆ ಅವರನ್ನು ಡ್ರಾಪ್ ಮಾಡುವ ಸಾಧ್ಯತೆಯಿದೆ. ಖಲೀಲ್ ಅಹ್ಮದ್ ಮತ್ತು ಯಾರ್ಕರ್ ಪರಿಣಿತ ಟಿ ನಟರಾಜನ್ ಚೆನ್ನಾಗಿ ಬೌಲ್ ಮಾಡುತ್ತಿದ್ದಾರೆ ಆದರೆ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಅವರಿಬ್ಬರು, ರಾಹುಲ್ ತೆವಾಟಿಯಾ ಮತ್ತು ರಿಯಾನ್ ಪರಾಗ್ ಅವರಿಂದ ಚಚ್ಚಿಸಿಕೊಂಡರು. ಹೈದರಾಬಾದ್ ಟೀಮಿನ ಮತ್ತೊಬ್ಬ ಆಲ್​ರೌಂಡರ್ ಅಭಿಷೇಕ್ ಶರ್ಮ ತಮ್ಮ ಆಯ್ಕೆಗೆ ನ್ಯಾಯ ಒದಗಿಸುತ್ತಿಲ್ಲ.

ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಸಿಎಸ್​ಕೆ ತಂಡವನ್ನು ಧೋನಿ ಹೇಗೆ ಮುನ್ನಡೆಸುತ್ತಾರೆ ಎನ್ನುವುದು ಇವತ್ತಿನ ಕುತೂಹಲಕಾರಿ ಅಂಶ.

Published On - 4:59 pm, Tue, 13 October 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ