Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟಕ್ಕಿಂತ ನಮ್ಮ ಸ್ನೇಹ ದೊಡ್ಡದು! ಗೆಲುವಿನ ಬಳಿಕ ಕೊಹ್ಲಿಯನ್ನು ಅಪ್ಪಿಕೊಂಡಿದಕ್ಕೆ ಕಾರಣ ತಿಳಿಸಿದ ವಿಲಿಯಮ್ಸನ್

ವಿರಾಟ್ ಅವರೊಂದಿಗಿನ ಸ್ನೇಹ ಇತ್ತೀಚಿನದಲ್ಲ, ಅದು ತುಂಬಾ ಹಳೆಯದು. 19 ವರ್ಷದೊಳಗಿನವರ ವಿಶ್ವಕಪ್‌ನಿಂದ ನಾವು ಪರಸ್ಪರರ ವಿರುದ್ಧ ಆಡುತ್ತಿರುವುದರಿಂದ, ಮೈದಾನದಲ್ಲಿ ಕ್ರಿಕೆಟ್ ಪಂದ್ಯಕ್ಕಿಂತ ನಮ್ಮ ಸ್ನೇಹ ದೊಡ್ಡದಾಗಿದೆ ಎಂದರು.

ಆಟಕ್ಕಿಂತ ನಮ್ಮ ಸ್ನೇಹ ದೊಡ್ಡದು! ಗೆಲುವಿನ ಬಳಿಕ ಕೊಹ್ಲಿಯನ್ನು ಅಪ್ಪಿಕೊಂಡಿದಕ್ಕೆ ಕಾರಣ ತಿಳಿಸಿದ ವಿಲಿಯಮ್ಸನ್
ಗೆಲುವಿನ ಬಳಿಕ ಕೊಹ್ಲಿಯನ್ನು ಅಪ್ಪಿಕೊಂಡ ವಿಲಿಯಮ್ಸನ್
Follow us
ಪೃಥ್ವಿಶಂಕರ
|

Updated on: Jul 01, 2021 | 6:13 PM

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಸೋಲನುಭವಿಸಬೇಕಾಯಿತು. ಲಕ್ಷಾಂತರ ಭಾರತೀಯರು ಈ ಸೋಲಿನ ನಂತರ ಕೊಂಚ ಬೇಸರಗೊಂಡರು. ಆದರೆ ಅದರ ಜೊತೆಗೆ ಎದುರಾಳಿ ತಂಡದ ಗೆಲುವಿಗೂ ಸಂಭ್ರಮಿಸಿದರು. ಏಕೆಂದರೆ ವಿಶ್ವ ಕ್ರಿಕೆಟ್​ನಲ್ಲಿ ಸಭ್ಯಸ್ಥರೆನಿಸಿಕೊಂಡಿರುವ ಕಿವೀಸ್​ ಕ್ರಿಕೆಟಿಗರನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ಅವರ ಘನತೆಗೆ ತಕ್ಕಂತೆ ಗೆದ್ದ ಬಳಿಕ ಕಿವೀಸ್ ತಂಡದ ನಾಯಕ ಕೇನ್ ನಡೆದುಕೊಂಡರು. ಪಂದ್ಯದ ನಂತರ ಕೇನ್ ಮತ್ತು ವಿರಾಟ್ ತೋರಿಸಿದ ವರ್ತನೆ ಎಲ್ಲರ ಹೃದಯವನ್ನು ಗೆದ್ದಿತ್ತು. ಗೆಲುವಿನ ನಂತರ ಕೇನ್ ವಿರಾಟ್ ಅವರನ್ನು ತಬ್ಬಿಕೊಳ್ಳುವ ಫೋಟೋ ಸಖತ್ ವೈರಲ್ ಆಗಿತ್ತು. ಡಬ್ಲ್ಯುಟಿಸಿ ಫೈನಲ್ ನಂತರ ವಿರಾಟ್ ಕೊಹ್ಲಿಯನ್ನು ಏಕೆ ತಬ್ಬಿಕೊಂಡರು ಎಂದು ಕೇನ್ ವಿಲಿಯಮ್ಸನ್ ಈಗ ಬಹಿರಂಗಪಡಿಸಿದ್ದಾರೆ.

ಆಟಕ್ಕಿಂತ ನಮ್ಮ ಸ್ನೇಹ ದೊಡ್ಡದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯ ಮುಗಿದ ಒಂದು ವಾರದ ನಂತರ, ಗೆಲುವಿನ ನಂತರ ವಿರಾಟ್ ಅವರನ್ನು ತಬ್ಬಿಕೊಳ್ಳಲು ಕೆನ್ ವಿಲಿಯಮ್ಸನ್ ಒಂದು ಕಾರಣವನ್ನು ನೀಡಿದ್ದಾರೆ. ಕ್ರಿಕೆಟ್‌ಬಜ್​ನೊಂದಿಗೆ ಮಾತನಾಡಿದ ಕೇನ್, ನಾವು ಗೆಲ್ಲುವುದು ಬಹಳ ವಿಶೇಷ ದಿನವಾಗಿತ್ತು. ಏಕೆಂದರೆ ಭಾರತದ ಎದುರು ಯಾವುದೇ ಪಂದ್ಯವನ್ನು ಗೆಲ್ಲುವುದು ಕಠಿಣ ಸವಾಲಾಗಿದೆ. ಭಾರತ ಕ್ರಿಕೆಟ್​ನ ಎಲ್ಲಾ ಮಾದರಿಯಲ್ಲೂ ಸಾಟಿಯಿಲ್ಲದ ತಂಡವನ್ನು ಹೊಂದಿದೆ. ಹೀಗಾಗಿ ಭಾರತದ ವಿರುದ್ಧದ ಗೆಲುವು ನಮಗೆ ನಿರ್ಣಾಯಕವಾಗಿದೆ. ವಿರಾಟ್ ಅವರೊಂದಿಗಿನ ಸ್ನೇಹ ಇತ್ತೀಚಿನದಲ್ಲ, ಅದು ತುಂಬಾ ಹಳೆಯದು. 19 ವರ್ಷದೊಳಗಿನವರ ವಿಶ್ವಕಪ್‌ನಿಂದ ನಾವು ಪರಸ್ಪರರ ವಿರುದ್ಧ ಆಡುತ್ತಿರುವುದರಿಂದ, ಮೈದಾನದಲ್ಲಿ ಕ್ರಿಕೆಟ್ ಪಂದ್ಯಕ್ಕಿಂತ ನಮ್ಮ ಸ್ನೇಹ ದೊಡ್ಡದಾಗಿದೆ ಎಂದರು.

ಕೇನ್ ಏಕಾಂಗಿ ಹೋರಾಟ, ನ್ಯೂಜಿಲೆಂಡ್​ಗೆ ವಿಜಯ ಪಂದ್ಯದುದ್ದಕ್ಕೂ ಭಾರತ ಮತ್ತು ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ನಗಳ ಸ್ಥಿರ ಪ್ರದರ್ಶನದ ಬಗ್ಗೆ ಮಾತನಾಡಿದರೆ, ಅದರ ಕೀರ್ತಿ ನ್ಯೂಜಿಲೆಂಡ್ ನಾಯಕ ಕೆನ್ ವಿಲಿಯಮ್ಸನ್​ಗೆ ಸಲ್ಲುತ್ತದೆ. ಆರಂಭಿಕ ಜೋಡಿ ಡಾನನ್ ಕಾನ್ವೇ ಮತ್ತು ಟಾಮ್ ಲೆಥಮ್ ಔಟಾದ ನಂತರ ಕೇನ್ ಭಾರತ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 49 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿ ಎರಡೂ ಆರಂಭಿಕ ಆಟಗಾರರನ್ನು ಔಟ್ ಮಾಡಿದ ನಂತರ, ಕೇನ್ ರಾಸ್ ಟೇಲರ್ ಜೊತೆ ಕೈಜೋಡಿಸಿ ನ್ಯೂಜಿಲೆಂಡ್‌ನ ಗೆಲುವನ್ನು ಅರ್ಧ ಶತಕದೊಂದಿಗೆ ಖಾತ್ರಿ ಪಡಿಸಿದರು.

ದಿನ ಭವಿಷ್ಯ: ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಕಿವಿಯ ಲಕ್ಷಣ ಯಾವ ರೀತಿ ಇದ್ರೆ ಅದೃಷ್ಟ ನೋಡಿ
ಕಿವಿಯ ಲಕ್ಷಣ ಯಾವ ರೀತಿ ಇದ್ರೆ ಅದೃಷ್ಟ ನೋಡಿ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?