AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕನ್ನಡಿಗ ರಾಹುಲ್​ನನ್ನು ಭಾರತದ ಮಿಸ್ಟರ್ 360 ಎಂದ ಮಂಜ್ರೇಕರ್!

ಕ್ರಿಕೆಟ್ ಜಗತ್ತಿನ ಮಿಸ್ಟರ್ 360 ಅಂದ್ರೆ ನೆನಪಾಗೋದೇ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎ ಬಿ ಡಿವಿಲಿಯರ್ಸ್. ಎಬಿಡಿ ಬ್ಯಾಟಿಂಗ್ ಸ್ಟೈಲೇ ಒಂದು ವಿಶೇಷ. ಅಷ್ಟದಿಕ್ಕೂಗಳಿಗೂ ಬೌಲ್​​ಗಳನ್ನ ಪರಿಚಯಿಸುವ ಏಕೈಕ ಪರಾಕ್ರಮಿ ಡಿವಿಲಿಯರ್ಸ್. ಮಿಸ್ಟರ್ 360 ಡಿವಿಲಿಯರ್ಸ್​ರಂತೆ ಮೈದಾನದಲ್ಲಿ ಅಬ್ಬರಿಸುವ ಹುಲಿಯೊಂದು ಟೀಮ್ ಇಂಡಿಯಾದಲ್ಲಿದೆ. ಅದು ನಮ್ಮ ಕನ್ನಡಿಗ ಅನ್ನೋದೇ ನಾವೆಲ್ಲರು ಹೆಮ್ಮೆಪಡುವಂತಹ ವಿಚಾರ. ಅಂದ್ಹಾಗೆ, ಈ ಕನ್ನಡ ಕಂಠೀರವ ಬೇರ್ಯಾರು ಅಲ್ಲ. ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್.ರಾಹುಲ್. ಭಾರತದ ಮಿಸ್ಟರ್ 360 ಕನ್ನಡಿಗ ಕೆ.ಎಲ್.ರಾಹುಲ್: ನಮ್ಮ […]

ನಮ್ಮ ಕನ್ನಡಿಗ ರಾಹುಲ್​ನನ್ನು ಭಾರತದ ಮಿಸ್ಟರ್ 360 ಎಂದ ಮಂಜ್ರೇಕರ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 07, 2020 | 4:05 PM

Share

ಕ್ರಿಕೆಟ್ ಜಗತ್ತಿನ ಮಿಸ್ಟರ್ 360 ಅಂದ್ರೆ ನೆನಪಾಗೋದೇ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎ ಬಿ ಡಿವಿಲಿಯರ್ಸ್. ಎಬಿಡಿ ಬ್ಯಾಟಿಂಗ್ ಸ್ಟೈಲೇ ಒಂದು ವಿಶೇಷ. ಅಷ್ಟದಿಕ್ಕೂಗಳಿಗೂ ಬೌಲ್​​ಗಳನ್ನ ಪರಿಚಯಿಸುವ ಏಕೈಕ ಪರಾಕ್ರಮಿ ಡಿವಿಲಿಯರ್ಸ್.

ಮಿಸ್ಟರ್ 360 ಡಿವಿಲಿಯರ್ಸ್​ರಂತೆ ಮೈದಾನದಲ್ಲಿ ಅಬ್ಬರಿಸುವ ಹುಲಿಯೊಂದು ಟೀಮ್ ಇಂಡಿಯಾದಲ್ಲಿದೆ. ಅದು ನಮ್ಮ ಕನ್ನಡಿಗ ಅನ್ನೋದೇ ನಾವೆಲ್ಲರು ಹೆಮ್ಮೆಪಡುವಂತಹ ವಿಚಾರ. ಅಂದ್ಹಾಗೆ, ಈ ಕನ್ನಡ ಕಂಠೀರವ ಬೇರ್ಯಾರು ಅಲ್ಲ. ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್.ರಾಹುಲ್.

ಭಾರತದ ಮಿಸ್ಟರ್ 360 ಕನ್ನಡಿಗ ಕೆ.ಎಲ್.ರಾಹುಲ್: ನಮ್ಮ ರಾಹುಲ್ ನ್ಯೂಜಿಲೆಂಡ್ ಸರಣಿಯಲ್ಲಿ ಪ್ರತಿಯೊಂದು ಪಂದ್ಯದಲ್ಲೂ ಅದ್ಭುತ ಬ್ಯಾಟಿಂಗ್ ಮಾಡ್ತಿದ್ದಾರೆ. ಟಿಟ್ವೆಂಟಿ ಸರಣಿಯಲ್ಲಿ ವೀರ ಕನ್ನಡಿಗ ರಾಹುಲ್, ರನ್​ಸುಂಟರಗಾಳಿ ಎಬ್ಬಿಸಿದ್ರು. 5 ಪಂದ್ಯದಲ್ಲೂ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದ ರಾಹುಲ್, ಒಟ್ಟು 224ರನ್​ಗಳನ್ನ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು, ಚರಿತ್ರೆ ಸೃಷ್ಟಿಸಿದ್ದ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪಂದ್ಯವನ್ನ ಸೋತಿರಬಹುದು. ಆದ್ರೆ ನಮ್ಮ ರಾಹುಲ್ ತಮ್ಮ ಪ್ರದರ್ಶನದಲ್ಲಿ ಸೋತಿಲ್ಲ. ರನ್​ಗಳಿಸುವ ವಿಚಾರದಲ್ಲಿ ಕಿಂಚಿತ್ತೂ ರಾಜೀಯಾಗಿಲ್ಲ. 5ನೇ ಸ್ಲಾಟ್​ನಲ್ಲಿ ಕಣಕ್ಕಿಳಿದ್ರೂ ತಾವೊಬ್ಬ ಅತ್ಯದ್ಭುತ ಬ್ಯಾಟ್ಸ್​ಮನ್ ಅನ್ನೋದನ್ನ ರಾಹುಲ್ ಮತ್ತೊಮ್ಮೆ ಸಾಬೀತು ಮಾಡಿದ್ರು.

ಕನ್ನಡ ಕಂಠೀರವ ರಾಹುಲ್​ಗೆ ಈಗ ಮಿಸ್ಟರ್ 360 ಅನ್ನೋ ಪಟ್ಟ ತಂದುಕೊಟ್ಟಿದ್ದೇ ನ್ಯೂಜಿಲೆಂಡ್ ಸರಣಿ. ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು. ಅದ್ರಲ್ಲೂ ಇನ್ನಿಂಗ್ಸ್ ಮುಗಿತಿರೋ ವೇಳೆ ಬ್ಯಾಟಿಂಗ್​ನಲ್ಲಿ ಅಬ್ಬರಿಸೋಕೆ ನಿಂತ ಕನ್ನಡದ ಕಲಿ ರಾಹುಲ್ ಸಿಡಿಸಿದ ಸೂಪರ್ ಸಿಕ್ಸ್ ಎಬಿಡಿಯನ್ನ ನೆನಪಿಸೋ ಹಾಗೇ ಮಾಡ್ತು.

ಜೇಮ್ಸ್ ನಿಶಾಮ್ ಎಸೆದ 48ನೇ ಓವರ್​ನ 5ನೇ ಬಾಲ್ ಅನ್ನ ರಾಹುಲ್ ಥರ್ಡ್ ಮ್ಯಾನ್​ನತ್ತ ಭರ್ಜರಿ ಸಿಕ್ಸರ್​ಗಟ್ಟಿದ್ರು. ಕೇವಲ ಇದೊಂದು ಸಿಕ್ಸರ್ ಸಿಡಿಸಿದ ಮಾತ್ರಕ್ಕೆ ರಾಹುಲ್​ಗೆ ಮಿಸ್ಟರ್ 360 ಪಟ್ಟ ಬಂದಿದ್ದಲ್ಲ. ರಾಹುಲ್ ನಿನ್ನೆ ಪಂದ್ಯದಲ್ಲಿ ಸಿಡಿಸಿದ ಒಂದೊಂದು ಬೌಂಡ್ರಿ ಜೊತೆಗೆ ಒಂದೊಂದು ಸಿಕ್ಸರ್​ಗಳು ಸಹ ಮತ್ತೆ ಮೈದಾನದಲ್ಲಿ ಡಿವಿಲಿಯರ್ಸ್ ಅನ್ನ ನೆನಪಿಸಿತ್ತು.

ರಾಹುಲ್ ಮಿ.360 ಅವತಾರ: ಹ್ಯಾಮಿಲ್ಟನ್ ಮೈದಾನದಲ್ಲಿ ನಮ್ಮ ರಾಹುಲ್ 5ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದು ಬ್ಯಾಟಿಂಗ್ ಮಾಡಿದ್ರು. ಎದುರಿಸದ 64 ಬಾಲ್​ನಲ್ಲಿ 3 ಬೌಂಡ್ರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 88ರನ್ ಗಳಿಸಿದ್ರು.

ರಾಹುಲ್​ಗೆ ಮಿಸ್ಟರ್ 360 ಪಟ್ಟ ನೀಡಿದ ಮಾಂಜ್ರೇಕರ್! ಕನ್ನಡಿಗ ರಾಹುಲ್​ಗೆ ಮಿಸ್ಟರ್ 360 ಪಟ್ಟ ನೀಡಿದ್ದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್. ಹ್ಯಾಮಿಲ್ಟನ್ ಪಂದ್ಯದಲ್ಲಿ ಕನ್ನಡಿಗ ರಾಹುಲ್ ಬ್ಯಾಟಿಂಗ್​ಗೆ ಫಿದಾ ಆದ ಸಂಜಯ್ ಮಾಂಜ್ರೇಕರ್, ಟ್ವೀಟ್ ಮಾಡೋ ಮೂಲಕ ರಾಹುಲ್​ನನ್ನ ಹುರಿದುಂಬಿಸಿದ್ರು.

ರಾಹುಲ್ ಮಿಸ್ಟರ್ 360: ‘‘ 360 ಡಿಗ್ರಿ ಌಂಗಲ್​ನಲ್ಲಿ ಕ್ಲಾಸಿಕ್ ಆಗಿ ಬ್ಯಾಟಿಂಗ್ ಮಾಡೋದು ಕೆ.ಎಲ್.ರಾಹುಲ್​ರಿಂದ ಮಾತ್ರ ಸಾಧ್ಯ.” – ಸಂಜಯ್ ಮಂಜ್ರೇಕರ್, ಮಾಜಿ ಕ್ರಿಕೆಟಿಗ

ದ್ವಿಪಾತ್ರದಲ್ಲಿ ಮಿಂಚುವ ಕನ್ನಡಿಗನೇ ತಂಡದ ಹೈಲೆಟ್! ಈಗ ಟೀಮ್ ಇಂಡಿಯಾದಲ್ಲಿ ಕೊಹ್ಲಿ ಮತ್ತು ರೋಹಿತ್​ಗಿಂತ ರಾಹುಲ್​​ನದ್ದೇ ಸದ್ದು ಜಾಸ್ತಿಯಾಗಿದೆ. ಕನ್ನಡಿಗ ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಮಿಂಚುತ್ತಿರುವ ರಾಹುಲ್ ಈಗ ತಂಡದ ಮೈನ್ ಅಟ್ರಾಕ್ಷನ್ ಪ್ಲೇಯರ್ ಅಂದ್ರೆ ತಪ್ಪಾಗೋದಿಲ್ಲ. ಬ್ಯಾಟ್ ಹಿಡಿದು ಹೊಡಿಬಡಿ ಆಟವಾಡುವ ರಾಹುಲ್, ವಿಕೆಟ್ ಕೀಪಿಂಗ್​ನಲ್ಲಿ ಸೂಪರ್ ಮ್ಯಾನ್ ಅವತಾರದಲ್ಲಿ ಮಿಂಚುತ್ತಾರೆ.

ಚಾಣಾಕ್ಷ ವಿಕೆಟ್ ಕೀಪಿಂಗ್ ಮಾಡೋ ರಾಹುಲ್, ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ರನೌಟ್ ಮಾಡಿಸೋದ್ರಲ್ಲಿ ಪಂಟರ್. ಟಫ್ ಕ್ಯಾಚ್​ಗಳನ್ನೇ ಡೈವ್ ಹೊಡೆದು ಹಿಡಿಯುವ ರಾಹುಲ್, ದಿಗ್ಗಜರೇ ನಾಚುವಂತಹ ಪ್ರದರ್ಶನ ನೀಡ್ತಿದ್ದಾರೆ. ಸದ್ಯ ರಾಹುಲ್ ವಿಕೆಟ್ ಕೀಪಿಂಗ್​ಗೆ ಅಭಿಮಾನಿಗಳ ಜೊತೆಗೆ ಘಟಾನುಘಟಿಗಳೇ ಮನಸೋತಿದ್ದು, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಪಂತ್​ಗಿಂದ ರಾಹುಲ್ ಬೆಟರ್ ವಿಕೆಟ್ ಕೀಪರ್ ಅನ್ನೋದನ್ನ ಹೇಳಿದ್ದಾರೆ.

ಒಟ್ನಲ್ಲಿ. ಮಿಸ್ಟರ್ 360 ಕನ್ನಡಿಗ ರಾಹುಲ್, ಅಷ್ಟದಿಕ್ಕುಗಳಿಗೂ ಬೌಲ್​ಗಳನ್ನ ಪರಿಚಯಿಸುವ ಭಾರತದ ಎಬಿಡಿಯಾಗಿ ಮಿಂಚುತ್ತಿದ್ದಾರೆ. ವಿಕೆಟ್ ಕೀಪಿಂಗ್​ನಲ್ಲಿ ಚಮತ್ಕಾರ ತೋರುತ್ತಿರುವ ರಾಹುಲ್ ಸೂಪರ್ ಮ್ಯಾನ್ ಆಟಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡ್ತಿದ್ದಾರೆ.

Published On - 10:39 am, Fri, 7 February 20

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!