AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಂದ್ರ ಸಿಂಗ್ ಧೋನಿಗೆ ICC ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಣೆ

ಧೋನಿಯ ಕ್ರೀಡಾಸ್ಫೂರ್ತಿಯ ಈ ಕಾರ್ಯಕ್ಕೆ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಿಸಿದೆ. ಕ್ರಿಕೆಟ್ ಅಭಿಮಾನಿಗಳು ವೋಟ್ ಮಾಡುವ ಮೂಲಕ ಧೋನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿಗೆ ICC ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಣೆ
ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Apr 06, 2022 | 11:13 PM

Share

ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್, ಬ್ಯಾಟ್ಸ್​ಮನ್ ಮಹೇಂದ್ರ ಸಿಂಗ್ ಧೋನಿಗೆ ಐಸಿಸಿ ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ಘೋಷಿಸಿದೆ. ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಂಡಿರುವ ಭಾರತದ ಮಾಜಿ ಕಪ್ತಾನ, 2011ರ ನಾಟಿಂಗ್​ ಹ್ಯಾಮ್ ಟೆಸ್ಟ್​ನಲ್ಲಿ ರನ್ ಔಟ್ ಆಗಿದ್ದ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್​ನನ್ನು ವಾಪಸ್ ಕರೆದಿದ್ದರು. ಧೋನಿ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಇದೀಗ ಧೋನಿಯ ಕ್ರೀಡಾಸ್ಫೂರ್ತಿಯ ಈ ಕಾರ್ಯಕ್ಕೆ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಿಸಿದೆ. ಐಸಿಸಿ ಕಳೆದ ಹತ್ತು ವರ್ಷಗಳಿಂದ ಈ ರೀತಿ ವಿವಿಧ ಪ್ರಶಸ್ತಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ನೀಡುತ್ತಿದೆ. ಕ್ರಿಕೆಟ್ ಅಭಿಮಾನಿಗಳು ವೋಟ್ ಮಾಡುವ ಮೂಲಕ ಧೋನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

2011ರ ಆ ಪಂದ್ಯದಲ್ಲಿ ಏನು ನಡೆದಿತ್ತು? ಭಾರತ ಮತ್ತು ಇಂಗ್ಲೆಂಡ್, ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಆಡುತ್ತಿತ್ತು. ಪಂದ್ಯದ ಮೂರನೇ ದಿನದಂದು ಟೀ ಬ್ರೇಕ್​ಗೂ ಮೊದಲಿನ ಓವರ್​ನ ಕೊನೆಯ ಎಸೆತದಲ್ಲಿ ಮಾರ್ಗನ್ ಬ್ಯಾಟಿಂಗ್ ಮಾಡುತ್ತಿದ್ದರು. ಮಾರ್ಗನ್ ಹೊಡೆತ ಬೌಂಡರಿಯತ್ತ ಸಾಗಿತು. ಅದು ಫೋರ್ ಎಂದು ನಿರ್ಧರಿಸಿದ ಮಾರ್ಗನ್ ಹಾಗೂ ಇಯಾನ್ ಬೆಲ್ ಟೀ ಬ್ರೇಕ್​ಗಾಗಿ ಪೆವಿಲಿಯನ್​ನತ್ತ ಹೊರಡಲು ತಯಾರಾಗಿ ಕ್ರೀಸ್ ಬಿಟ್ಟು ನಿಂತರು. ಆದರೆ ಬೌಂಡರಿಯಲ್ಲಿ ಬಾಲ್ ತಡೆದ ಭಾರತೀಯ ಆಟಗಾರರು, ಚೆಂಡನ್ನು ಧೊನಿ ಕೈಗೆಸೆದರು. ಅದಾಗಲೇ ಕ್ರೀಸ್ ಬಿಟ್ಟಿದ್ದ ಇಯಾನ್ ಬೆಲ್​ರನ್ನು ರನೌಟ್ ಮಾಡಲಾಯಿತು. ಥರ್ಡ್ ಅಂಪೈರ್ ತೀರ್ಮಾನದ ಮೂಲಕ ಬೆಲ್ ಔಟಾಗಿರುವುದನ್ನು ಖಚಿತಪಡಿಸಿಕೊಳ್ಳಲಾಯಿತು.

ಈ ನಿರ್ಧಾರದಿಂದ ಬೆಲ್ ಅಸಮಾಧಾನ ಹೊಂದಿರುವುದು ತಿಳಿದುಬಂತು. ಟೀ ಬ್ರೇಕ್​ನಲ್ಲಿ ಬೆಲ್ ವಿಕೆಟ್ ಬಗ್ಗೆ ಚರ್ಚೆ ನಡೆಸಿದ ಧೋನಿ, ಇಂಗ್ಲೆಂಡ್ ನಾಯಕ ಆಂಡ್ರ್ಯೂ ಸ್ಟ್ರಾಸ್ ಹಾಗೂ ಉಭಯ ತಂಡದ ಕೋಚ್​ಗಳು ಇಯಾನ್ ಬೆಲ್ ಔಟ್ ಅಪೀಲ್​ನ್ನು ಹಿಂಪಡೆದರು. ಮಹೇಂದ್ರ ಸಿಂಗ್ ಧೋನಿಯ ಈ ನಡೆಯು ವ್ಯಾಪಕ ಪ್ರಶಂಸೆ ಪಡೆದುಕೊಂಡಿತ್ತು. ಕ್ರೀಡಾಸ್ಫೂರ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

2011ರ ನಾಟಿಂಗ್​ಹ್ಯಾಮ್ ಟೆಸ್ಟ್

ICC Awards | ವಿರಾಟ್ ಕೊಹ್ಲಿಗೆ ದಶಕದ ಕ್ರಿಕೆಟಿಗ ಮತ್ತು ಏಕದಿನ ತಂಡದ ಅತ್ಯುತ್ತಮ ಕ್ರಿಕೆಟಿಗನ ಗೌರವ

Published On - 6:05 pm, Mon, 28 December 20

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ