AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ದೇಶಿ ಕ್ರಿಕೆಟ್‌: 17 ರನ್​ಗಳಿಗೆ ಸರ್ವಪತನಗೊಂಡ ನಾಗಾಲ್ಯಾಂಡ್.. ನಾಲ್ಕೆ ಎಸೆತದಲ್ಲಿ ಪಂದ್ಯ ಗೆದ್ದ ಮುಂಬೈ!

ಕೇವಲ 4 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ, ಒಂದು ಸಿಕ್ಸರ್ ಮತ್ತು ಒಂದು ನೋ-ಬಾಲ್ ಮೂಲಕ ಎದುರಿದ್ದ 17 ರನ್​ಗಳ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ್ದರು.

ಮಹಿಳಾ ದೇಶಿ ಕ್ರಿಕೆಟ್‌: 17 ರನ್​ಗಳಿಗೆ ಸರ್ವಪತನಗೊಂಡ ನಾಗಾಲ್ಯಾಂಡ್.. ನಾಲ್ಕೆ ಎಸೆತದಲ್ಲಿ ಪಂದ್ಯ ಗೆದ್ದ ಮುಂಬೈ!
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on: Mar 17, 2021 | 2:42 PM

Share

ಕ್ರಿಕೆಟ್ ಪ್ರಪಂಚದ ಜೆಂಟಲ್​ಮ್ಯಾನ್​ ಗೇಮ್​. ಈ ಆಟದಲ್ಲಿರುವ ವಿಶೇಷತೆಗಳಿಂದಲೇ ಈ ಆಟ ಪ್ರಪಂಚದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಪಡೆದಿದೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಕ್ರಿಕೆಟ್​ ಒಂದು ಧರ್ಮವಾಗಿಬಿಟ್ಟಿದೆ. ಇಂತಹ ಆಟದಲ್ಲಿ ಒಮೊಮ್ಮೆ ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ. ಕೆಲವೊಮ್ಮೆ ಆಟಗಾರರ ಅದ್ಭುತ ಆಟದಿಂದಾಗಿ ಈ ಹಿಂದೆ ಗಳಿಸಲಾಗದ ಅನೇಕ ದಾಖಲೆಗಳು ಕೇವಲ ಒಂದೇ ದಿನದಲ್ಲಿ ಸೃಷ್ಟಿಯಾಗಿಬಿಡುತ್ತವೆ. ಹಾಗೆಯೇ ಇನ್ನೂ ಕೆಲವೊಮ್ಮೆ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ತಂಡ ಹೀನಾಯವಾಗಿ ಸೋಲುವುದನ್ನು ಕಾಣಬಹುದಾಗಿದೆ. ಈಗ ಅಂತಹದೆ ಘಟನೆಯೊಂದು ಭಾರತದ ಮಹಿಳಾ ದೇಶಿ ಕ್ರಿಕೆಟ್​ ಪಂದ್ಯಾವಳಿಯಲ್ಲಿ ನಡೆದಿದೆ.

ಕ್ರಿಕೆಟ್​ನಲ್ಲಿ ಈ ಹಿಂದೆ ಕೆಲವು ವಿಲಕ್ಷಣ ಸ್ಕೋರ್‌ಲೈನ್‌ಗಳನ್ನು ನಾವು ಕಂಡಿದ್ದೇವೆ. 2019 ರ ಟಿ -20 ಪಂದ್ಯದಲ್ಲಿ ಮಾಲಿ ಮಹಿಳಾ ತಂಡವನ್ನು ರುವಾಂಡಾ ತಂಡ 6 ರನ್ ಗಳಿಗೆ ಆಲ್​ಔಟ್​ ಮಾಡಿತ್ತು, ಹೆಚ್ಚು ಪರಿಚಿತ ಉದಾಹರಣೆಯನ್ನು ತೆಗೆದುಕೊಳ್ಳಬೇಕಾದರೆ, 2020 ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಪುರುಷರ ತಂಡ ಕೇವಲ 36 ರನ್ ಗಳಿಗೆ ಆಲ್​ಔಟ್​ ಆಗಿತ್ತು. ಈ ರೀತಿಯಾ ಇಂತದೆ ಘಟನೆಯೊಂದು ಬುಧವಾರ, ಭಾರತದ ಮಹಿಳಾ ಹಿರಿಯ ಏಕದಿನ ಟ್ರೋಫಿಯಲ್ಲಿ ಮುಂಬೈ ಮತ್ತು ನಾಗಾಲ್ಯಾಂಡ್ ನಡುವಿನ ಪಂದ್ಯದಲ್ಲಿ ನಡೆದಿದೆ.

ಬರೊಬ್ಬರಿ 17.4 ಓವರ್​ಗಳನ್ನು ಎದುರಿಸಿದ ನಾಗಾಲ್ಯಾಂಡ್.. ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನಾಗಾಲ್ಯಾಂಡ್ ತಂಡ ಬರೊಬ್ಬರಿ 17.4 ಓವರ್​ಗಳನ್ನು ಎದುರಿಸಿ, ಕೇವಲ 17 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಆಲ್​ಔಟ್​ ಆಗಿದೆ. 9 ರನ್ ಗಳಿಸಿದ ಸರಿಬಾ ಅವರು ತಂಡದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಮುಂಬೈ ಪರ ಮಿಂಚಿದ ತಂಡದ ನಾಯಕಿ ಸಯಾಲಿ ಸತ್ಘರೆ 8.4 ಓವರ್ಗಳಲ್ಲಿ ಕೇವಲ 5 ರನ್​ ನೀಡಿ ಪ್ರಮುಖ 7 ವಿಕೆಟ್​ ಪಡೆದುಕೊಂಡರು

ನಾಲ್ಕು ಎಸೆತಗಲ್ಲಿ ಪಂದ್ಯವನ್ನು ಗೆದ್ದು ಬೀಗಿತು.. ನಾಗಾಲ್ಯಾಂಡ್ ತಂಡ ನೀಡಿದ 17 ರನ್​ಗಳ ಟಾರ್ಗೆಟನ್ನು ಬೆನ್ನತ್ತಿದ ಮುಂಬೈ ತಂಡ ಕೇವಲ ನಾಲ್ಕು ಎಸೆತಗಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ಮುಂಬೈ ತಂಡದ ಆರಂಭಿಕ ಆಟಗಾರ್ತಿಯರು ಕೇವಲ 4 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ, ಒಂದು ಸಿಕ್ಸರ್ ಮತ್ತು ಒಂದು ನೋ-ಬಾಲ್ ಮೂಲಕ ಎದುರಿದ್ದ 17 ರನ್​ಗಳ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ್ದರು. ಇದರೊಂದಿಗೆ ಇನ್ನಿಂಗ್ಸ್‌ನಲ್ಲಿ ಇನ್ನೂ 296 ಎಸೆತಗಳು ಬಾಕಿ ಇದ್ದಾಗಲೇ ಮುಂಬೈ ತಂಡ ಜಯದ ಮಾಲೆಯನ್ನು ಮೂಡಿಗೆರಿಸಿಕೊಂಡಿತು.

ಇದನ್ನೂ ಓದಿ:ರೂಪಾಂತರಿ ಕೊರೊನಾ ಭಯ: ಐಪಿಎಲ್ ಹೊರತುಪಡಿಸಿ, ಎಲ್ಲಾ ವಯೋಮಾನದವರ ದೇಶಿ ಪಂದ್ಯಾವಳಿಗಳಿಗೆ ಬ್ರೇಕ್​ ಹಾಕಿದ BCCI!

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ