AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ತೂತ್ ಕೈ​ ಕೊಹ್ಲಿ! ಒಂದು ವರ್ಷದಲ್ಲಿ ಕೈಚೆಲ್ಲಿದ್ದು ಬರೊಬ್ಬರಿ 8 ಕ್ಯಾಚ್​​.. ಈ ದಾಖಲೆಯೂ ವಿರಾಟ್​ ಖಾತೆಗೆ

India vs England: ಕೊಹ್ಲಿ 2019 ರಿಂದ ಇಲ್ಲಿಯವರೆಗೆ ಟಿ20 ಪಂದ್ಯಗಳಲ್ಲಿ ಎಂಟನೇ ಕ್ಯಾಚ್ ಕೈಚೆಲ್ಲಿದರು. ಈ ರೀತಿಯಾಗಿ, ಈ ಅವಧಿಯಲ್ಲಿ ಟಿ 20 ಯಲ್ಲಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

India vs England: ತೂತ್ ಕೈ​ ಕೊಹ್ಲಿ! ಒಂದು ವರ್ಷದಲ್ಲಿ ಕೈಚೆಲ್ಲಿದ್ದು ಬರೊಬ್ಬರಿ 8 ಕ್ಯಾಚ್​​.. ಈ ದಾಖಲೆಯೂ ವಿರಾಟ್​ ಖಾತೆಗೆ
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: Mar 17, 2021 | 1:10 PM

ಅಹಮದಾಬಾದ್​: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಗೆಲುವಿನ ಲಯಕಂಡುಕೊಂಡಿದ್ದ ಕೊಹ್ಲಿ ಹುಡುಗರು, 3ನೇ ಟಿ20 ಪಂದ್ಯದಲ್ಲಿ ಮತ್ತೆ ಆಂಗ್ಲರ ಮುಂದೆ ಶರಣಾಗಿದ್ದಾರೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ, ಟೀಮ್ ಇಂಡಿಯಾ 8 ವಿಕೆಟ್​ಗಳ ಅಂತರದಲ್ಲಿ ಮುಗ್ಗರಿಸಿದೆ. ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿರುವ ಆಂಗ್ಲರು, 2-1ರ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಭಾರತಕ್ಕೆ ಇರುವ ಏಕೈಕ ಸಕಾರಾತ್ಮಕ ಅಂಶವೆಂದರೆ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್, ಅವರು ಸಂಪೂರ್ಣವಾಗಿ ಫಾರ್ಮ್ಗೆ ಮರಳಿದ್ದಾರೆ. ಆದಾಗ್ಯೂ, ಅಂತಹ ಉತ್ತಮ ಇನ್ನಿಂಗ್ಸ್ ಆಡಿದರೂ, ಕೊಹ್ಲಿಗೆ 3ನೇ ಟಿ20 ಪಂದ್ಯ ಸಂಪೂರ್ಣವಾಗಿ ಉತ್ತಮವಾಗಿಲ್ಲ. ತಂಡದ ಸೋಲು ಮಾತ್ರವಲ್ಲ, ಸ್ವತಃ ಫೀಲ್ಡಿಂಗ್ ಮಾಡುವಲ್ಲಿ ಕೊಹ್ಲಿ ತಪ್ಪು ಮಾಡಿದ್ದಾರೆ. ಇದು ಅವರನ್ನು ತುಂಬಾ ನಿರಾಶೆಗೊಳಿಸಿದಲ್ಲದೆ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಚೆಲ್ಲಿದ ಆಟಗಾರನೆಂಬ ಕುಖ್ಯಾತಿಗೆ ಕೊಹ್ಲಿ ಭಾಜನರಾಗಿದ್ದಾರೆ.

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಹಿಂದಿರುಗಿದಾಗಿನಿಂದ, ಕೊಹ್ಲಿ ಸೇರಿದಂತೆ ಭಾರತೀಯ ತಂಡ ಹಲವಾರು ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ, ತಂಡವು ಏಕದಿನ, ಟಿ20 ಮತ್ತು ಟೆಸ್ಟ್ ಪಂದ್ಯಗಳಲ್ಲಿ ಅನೇಕ ಕ್ಯಾಚ್‌ಗಳನ್ನು ಕೈಬಿಟ್ಟಿತು. ಇದರಲ್ಲಿ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರಂತಹ ಅತ್ಯುತ್ತಮ ಫೀಲ್ಡರ್‌ಗಳು ಸೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತು ಯಜ್ವೇಂದ್ರ ಚಾಹಲ್ ತಲಾ ಒಂದು ಕ್ಯಾಚ್ ಕೈಬಿಟ್ಟರು.

ಕೊಹ್ಲಿ ಟಿ20 ಪಂದ್ಯಗಳಲ್ಲಿ ಎಂಟನೇ ಕ್ಯಾಚ್ ಕೈಚೆಲ್ಲಿದರು. 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್‌ಗಳನ್ನು ಹುಡುಕುತ್ತಿತ್ತು. ಇಂಗ್ಲೆಂಡ್​ ತಂಡದ ಜೇಸನ್ ರಾಯ್ ಅವರ ವಿಕೆಟ್ ಬೇಗನೆ ಪಡೆಯುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಆದರೆ ಬಟ್ಲರ್ ಆಟಕ್ಕೆ ರಾಯ್​ ವಿಕೆಟ್​ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ಆದರೆ, ಇಂಗ್ಲೆಂಡ್ ಗೆಲುವಿನ ಸಮೀಪದಲ್ಲಿದ್ದಾಗ, ಬಟ್ಲರ್ ಭಾರತಕ್ಕೆ ವಿಕೆಟ್ ಅವಕಾಶವನ್ನು ನೀಡಿದರು. 15 ನೇ ಓವರ್‌ನ ಕೊನೆಯ ಎಸೆತದಲ್ಲಿ, ಬಟ್ಲರ್ ರಿವರ್ಸ್ ಸ್ವೀಪ್ ಆಡಿದರು. ಶಾಟ್ ವೇಗವಾಗಿತ್ತು ಮತ್ತು ಕೊಹ್ಲಿ ತನ್ನ ಬಲಕ್ಕೆ ಧುಮುಕುವ ಮೂಲಕ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರು. ಆದರೆ ಚೆಂಡು ಕೈಯಿಂದ ಜಾರಿತು. ಇದರಿಂದ ಇಂಗ್ಲೆಂಡ್ 2 ರನ್ ಗಳಿಸಿತು. ಇದರೊಂದಿಗೆ ಕೊಹ್ಲಿ 2019 ರಿಂದ ಇಲ್ಲಿಯವರೆಗೆ ಟಿ20 ಪಂದ್ಯಗಳಲ್ಲಿ ಎಂಟನೇ ಕ್ಯಾಚ್ ಕೈಚೆಲ್ಲಿದರು. ಈ ರೀತಿಯಾಗಿ, ಈ ಅವಧಿಯಲ್ಲಿ ಟಿ 20 ಯಲ್ಲಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಉಳಿದಂತೆ ಪಂದ್ಯದ ವಿವರ ಹೀಗಿದೆ.. ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾವನ್ನ ಬ್ಯಾಟಿಂಗ್​ಗೆ ಆಹ್ವಾನಿಸಿತು. ಆದ್ರೆ ಆರಂಭಿಕ ಕನ್ನಡಿಗ ಕೆ.ಎಲ್.ರಾಹುಲ್ ಮತ್ತೊಮ್ಮೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರೆ, ರೋಹಿತ್ ಶರ್ಮಾ 15, ಇಶಾನ್ ಕಿಶನ್ ಕೇವಲ 4 ರನ್ಗಳಿಸಿ ನಿರಾಸೆ ಮೂಡಿಸಿದ್ರು. 24 ರನ್​ಗಳಾಗುವಷ್ಟರಲ್ಲೇ ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆದ್ರೆ ಮೋದಿ ಮೈದಾನದಲ್ಲಿ ನಾಯಕನ ಆಟವಾಡಿದ ವಿರಾಟ್ ಕೊಹ್ಲಿ, ಆಂಗ್ಲ ಬೌಲರ್​ಗಳ ಲೆಕ್ಕಾಚಾರವನ್ನ ಉಲ್ಟಾ ಮಾಡಿದ್ರು. ಕೊಹ್ಲಿಗೆ ಸಾಥ್ ನೀಡಿದ ರಿಷಭ್ ಪಂತ್ 25 ರನ್ಗಳಿಸಿದ್ರೆ, ಶ್ರೇಯಸ್ ಅಯ್ಯರ್ 9 ರನ್ಗಳಸಿದ್ರು. ಏಕಾಂಗಿಯಾಗಿ ಮಾರ್ಗನ್ ಪಡೆ ಬೌಲರ್ಗಳ ಮೇಲೆ ಸವಾರಿ ಮಾಡಿದ ಕ್ಯಾಪ್ಟನ್ ಕೊಹ್ಲಿ, ಬೌಂಡರಿ ಸಿಕ್ಸರ್​ಗಳ ಸುರಿಮಳೆಗೈದು ಆಕರ್ಷಕ ಅರ್ಧಶತಕ ಸಿಡಿಸಿದ್ರು. ಕೇವಲ 46 ಬಾಲ್​ಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ ವಿರಾಟ್ ಅಜೇಯ 77 ರನ್ಗಳಿಸಿದ್ರು.

ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ಗಳಿಸಿತು. ಇಂಗ್ಲೆಂಡ್ ಪರ ಮಾರ್ಕ್​ವುಡ್ 3 ವಿಕೆಟ್ ಮತ್ತು ಕ್ರಿಸ್ ಜೋರ್ಡಾನ್ 2 ವಿಕೆಟ್ ಪಡೆದು ಮಿಂಚಿದ್ರು. ಟೀಂ ಇಂಡಿಯಾ ನೀಡಿದ 157 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್​ಗೆ ಚಹಲ್ ಆಘಾತ ನೀಡಿದ್ರು. 9 ರನ್ಗಳಿಸಿದ್ದ ಜೇಸನ್ ರಾಯ್ರನ್ನ ಪೆವಿಲಿಯನ್ಗಟ್ಟಿದ್ರು.

ಆದ್ರೆ 2ನೇ ವಿಕೆಟ್​ಗೆ ಜೊತೆಯಾದ ಜೋಸ್ ಬಟ್ಲರ್ ಮತ್ತು ಡೇವಿಡ್ ಮಲನ್ 53 ರನ್​ಗಳ ಜೊತೆಯಾಟವಾಡಿದ್ರು. ಬಟ್ಲರ್ ಆಕರ್ಷಕ ಅರ್ಧಶತಕ ಸಿಡಿಸಿದ್ರೆ, 18 ರನ್ಗಳಿಸಿದ್ದ ಮಲನ್​ಗೆ ವಾಷಿಂಗ್ಟನ್ ಸುಂದರ್ ಗೇಟ್ ಪಾಸ್ ನೀಡಿದ್ರು. ನಂತರ ಬಂದ ಜಾರಿ ಬೈರ್ಸ್ಟೊ ಜೊತೆಗೆ ಸ್ಪೋಟಕ ಬ್ಯಾಟಿಂಗ್ ಮಾಡಿದ ಬಟ್ಲರ್, ಇಂಗ್ಲೆಂಡ್​ಗೆ ಅದ್ದೂರಿ ಗೆಲುವು ತಂದುಕೊಟ್ರು. ಅಂತಿಮವಾಗಿ ಇಂಗ್ಲೆಂಡ್ ಕೇವಲ 2 ವಿಕೆಟ್ ನಷ್ಟಕ್ಕೆ 18.2 ಓವರ್ಗಳಲ್ಲೇ ಗೇಲುವಿನ ಕೇಕೆ ಹಾಕಿತು. ಇಂಗ್ಲೆಂಡ್ ಪರ 52 ಬಾಲ್ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ ಜೋಸ್ ಬಟ್ಲರ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದ್ರು.

ಇದನ್ನೂ ಓದಿ: India vs England: ಕಿಂಗ್​ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ.. T20 ಯಲ್ಲಿ 3000 ರನ್​ ಬಾರಿಸಿದ ಮೊದಲ ಆಟಗಾರ ನಮ್ಮ ವಿರಾಟ್​!

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್