AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು RCBಗೆ ಸಪೋರ್ಟ್ ಮಾಡೋಹಾಗಿದ್ರೆ.. ಅರ್ಧ ರೇಟ್​ಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಿ!

ಮೈಸೂರು:ಎಲ್ಲೆಡೆ ಐಪಿಎಲ್ ಫಿವರ್ ಹೆಚ್ಚಾಗಿದ್ದು ಅದಕ್ಕಾಗಿ ಮೈಸೂರಿನ ಆರ್.ಸಿ.ಬಿ ಫ್ಯಾನ್ ಒಬ್ರು ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೊಟ್ಟೆ ತುಂಬ ಬಿರಿಯಾನಿ ತಿನ್ನಿ ಅರ್ಧ ಹಣ ಕೊಡಿ ಅಂತಾ ಹೋಟೆಲ್ ಮಾಲೀಕರೊಬ್ಬರು ಆಫರ್ ನೀಡಿದ್ದಾರೆ. ಆರ್.ಸಿ.ಬಿ ಬಿರಿಯಾನಿ ಮೈಸೂರಿನ ಗೋಕುಲಂನಲ್ಲಿರುವ ನಾಟಿ ಹಟ್ ಹೋಟೆಲ್ ನಲ್ಲಿ ಈ ಆಫರ್ ನೀಡಿದ್ದು, ಆರ್.ಸಿ.ಬಿ‌ ಮ್ಯಾಚ್ ಇರುವ ದಿನ ಈ ಆಫರ್ ನೀಡಿದ್ದಾರೆ. ಇದೀಗಾ ಇಡೀ ಹೋಟಲನ್ನು ಆರ್.ಸಿ.ಬಿ ಮಯ ಮಾಡಿಕೊಂಡಿದ್ದಾರೆ.ಅದರಲ್ಲೂ ಬಿರಿಯಾನಿಗೆ ಆರ್.ಸಿ.ಬಿ ಬಿರಿಯಾನಿ ಅಂತ ಕೂಡ ಹೆಸರಿಟ್ಟಿದ್ದಾರೆ. […]

ನೀವು RCBಗೆ ಸಪೋರ್ಟ್ ಮಾಡೋಹಾಗಿದ್ರೆ.. ಅರ್ಧ ರೇಟ್​ಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಿ!
ಸಾಧು ಶ್ರೀನಾಥ್​
|

Updated on:Oct 12, 2020 | 4:32 PM

Share

ಮೈಸೂರು:ಎಲ್ಲೆಡೆ ಐಪಿಎಲ್ ಫಿವರ್ ಹೆಚ್ಚಾಗಿದ್ದು ಅದಕ್ಕಾಗಿ ಮೈಸೂರಿನ ಆರ್.ಸಿ.ಬಿ ಫ್ಯಾನ್ ಒಬ್ರು ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೊಟ್ಟೆ ತುಂಬ ಬಿರಿಯಾನಿ ತಿನ್ನಿ ಅರ್ಧ ಹಣ ಕೊಡಿ ಅಂತಾ ಹೋಟೆಲ್ ಮಾಲೀಕರೊಬ್ಬರು ಆಫರ್ ನೀಡಿದ್ದಾರೆ.

ಆರ್.ಸಿ.ಬಿ ಬಿರಿಯಾನಿ ಮೈಸೂರಿನ ಗೋಕುಲಂನಲ್ಲಿರುವ ನಾಟಿ ಹಟ್ ಹೋಟೆಲ್ ನಲ್ಲಿ ಈ ಆಫರ್ ನೀಡಿದ್ದು, ಆರ್.ಸಿ.ಬಿ‌ ಮ್ಯಾಚ್ ಇರುವ ದಿನ ಈ ಆಫರ್ ನೀಡಿದ್ದಾರೆ. ಇದೀಗಾ ಇಡೀ ಹೋಟಲನ್ನು ಆರ್.ಸಿ.ಬಿ ಮಯ ಮಾಡಿಕೊಂಡಿದ್ದಾರೆ.ಅದರಲ್ಲೂ ಬಿರಿಯಾನಿಗೆ ಆರ್.ಸಿ.ಬಿ ಬಿರಿಯಾನಿ ಅಂತ ಕೂಡ ಹೆಸರಿಟ್ಟಿದ್ದಾರೆ.

ಹೌದು, ಮೂಲತಃ ಮೈಸೂರಿನ ನಿವಾಸಿಯಾಗಿರುವ ಹೋಟೆಲ್ ಮಾಲೀಕ ಸ್ವರೂಪ್ ಈಗಷ್ಟೇ ಹೊಸದಾಗಿ ನಾಟಿ ಹಟ್ ಎಂಬ ನಾನ್ ವೆಜ್ ಹೋಟೆಲ್ ಮಾಡಿದ್ದಾರೆ. RCB ಪಕ್ಕಾ ಫ್ಯಾನ್ ಆದ ಸ್ವರೂಪ್, RCB ಗೆದ್ದಾಗಲೂ ಸೋತಾಗಲು RCBಯನ್ನೆ ಸಪೋರ್ಟ್ ಮಾಡುತ್ತಿದ್ದಾರೆ. ಇದೀಗ‌ ಹೋಟೆಲ್‌‌ ತೆರೆದಿರುವ ಸ್ವರೂಪ್ ಈ ಬಾರಿ ಕಪ್ ನಮ್ದೇ ಎಂದು ತಮ್ಮ ಹೋಟೆಲ್ ‌ನಲ್ಲಿ RCB ಅಭಿಮಾನಿಗಳಿಗೆ ಭರ್ಜರಿ ಡಿಸ್ಕೌಂಟ್ ಕೊಡ್ತಿದಾರೆ‌. [yop_poll id=”10″] ಅದು ನೂರು ರೂ ಇರೋ ಚಿಕನ್ ಬಿರಿಯಾನಿ RCB ಮ್ಯಾಚ್ ವೇಳೆ 49ರೂ ‘ಇನ್ನು ಚಿಕನ್ ಚಾಪ್ಸ್’ 49 ರೂ, ಎರಡು ತೆಗೆದುಕೊಂಡರೆ 90 ರೂ ಗೆ ಕಾಂಬೋ ಆಫರ್ ಆಗಿ ನೀಡಲಾಗ್ತಿದೆ. ಇದೆಲ್ಲವು RCB ಪರ ಸಪೋರ್ಟ‌ಗಾಗಿ ಅಂತಾರೆ ಹೋಟೆಲ್ ಮಾಲೀಕ ಸ್ವರೂಪ್. RCB ಎಷ್ಟೇ ಬಾರಿ ಸೋತ್ರು ಕೂಡ RCB ಮೇಲಿನ ಪ್ರೀತಿ‌ ಮಾತ್ರ ಕಡಿಮೆಯಾಗುತ್ತಿಲ್ಲ ಅಭಿಮಾನಿಗಳಿಗೆ. -ದಿಲೀಪ್ ಚೌಡಹಳ್ಳಿ

Published On - 4:08 pm, Mon, 12 October 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ