ಪಾಕಿಸ್ತಾನದ ಶಾದಾಬ್ ಖಾನ್ ಭಾರತದ ಹಾರ್ದಿಕ್ ಪಾಂಡ್ಯರಂಥ ಪ್ರೊಫೈಲ್ ಹೊಂದಿರಬೇಕು: ರಮೀಜ್ ರಾಜಾ

ಪಾಕಿಸ್ತಾನದ ಟೀಮಿನಲ್ಲಿ ಆಲ್-ರೌಂಡರ್ ಶಾದಾಬ್ ಖಾನ್ ಅವರ ಪಾತ್ರವನ್ನು ರಾಜಾ ಪ್ರಶ್ನಿಸಿದ್ದಾರೆ. ಕಾರ್ಡಿಫ್​ನ ಸೋಫಿಯಾ ಗಾರ್ಡನ್​ನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಶಾದಾಬ್ ಅವರು 43 ಎಸೆತಗಳಲ್ಲಿ 30 ರನ್ ಗಳಿಸಿದರು.

ಪಾಕಿಸ್ತಾನದ ಶಾದಾಬ್ ಖಾನ್ ಭಾರತದ ಹಾರ್ದಿಕ್ ಪಾಂಡ್ಯರಂಥ ಪ್ರೊಫೈಲ್ ಹೊಂದಿರಬೇಕು: ರಮೀಜ್ ರಾಜಾ
ಶಾದಾಬ್ ಖಾನ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 10, 2021 | 1:27 AM

ಗುರುವಾರದಂದು ಕಾರ್ಡಿಫ್​ನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಇಂಗ್ಲೆಂಡ್, ಬಾಬರ್ ಆಜಂ ನೇತೃತ್ವದ ಪಾಕಿಸ್ತಾನವನ್ನು ತಂಡವನ್ನು ಬಗ್ಗು ಬಡಿದ ನಂತರ ಏಷ್ಯನ್ ತಂಡ ತನ್ನ ದೇಶದ ಮಾಜಿ ಆಟಗಾರರಿಂದ ತೀವ್ರ ಟೀಕೆಗೊಳಗಾಗಿದೆ. ಪಾಕಿಸ್ತಾನವನ್ನು 35.2 ಓವರ್​ಗಳಲ್ಲಿ ಕೇವಲ 141 ರನ್​ಮೊತ್ತಕ್ಕೆ ಔಟ್​ ಮಾಡಿದ ಆಂಗ್ಲರ ತಂಡ ಗೆಲುವಿಗೆ ಬೇಕಿದ್ದ ರನ್​ಗಳನ್ನು 1 ವಿಕೆಟ್​​ ಕಳೆದುಕೊಂಡು 22ನೇ ಓವರ್​ನಲ್ಲೇ ಗಳಿಸಿತು. ಪಾಕಿಸ್ತಾನದ ಬ್ಯಾಟಿಂಗ್ ಪ್ರದರ್ಶನವನ್ನು ಪಾಕಿಸ್ತಾನದ ಮಾಜಿ ಆರಂಭ ಆಟಗಾರ ರಮೀಜ್ ರಾಜಾ ಅವರು ಕಳಪೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಟೀಮಿನಲ್ಲಿ ಆಲ್-ರೌಂಡರ್ ಶಾದಾಬ್ ಖಾನ್ ಅವರ ಪಾತ್ರವನ್ನು ರಾಜಾ ಪ್ರಶ್ನಿಸಿದ್ದಾರೆ. ಕಾರ್ಡಿಫ್​ನ ಸೋಫಿಯಾ ಗಾರ್ಡನ್​ನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಶಾದಾಬ್ ಅವರು 43 ಎಸೆತಗಳಲ್ಲಿ 30 ರನ್ ಗಳಿಸಿದರು. ಅವರ ಆಟದ ಧೋರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜಾ ಅವರು ಶಾದಾಬ್ ಭಾರತದ ಹಾರ್ದಿಕ್ ಪಾಂಡ್ಯ ಅವರಂಥ ಪ್ರೊಫೈಲ್ ಹೊಂದಿರಬೇಕು ಎಂದು ಹೇಳಿದ್ದಾರೆ.

‘ಶಾದಾಬ್ ಅವರ ಬ್ಯಾಟಿಂಗ್ ವೈಖರಿ ನನಗೆ ಅರ್ಥವಾಗುತ್ತಿಲ್ಲ. ಬ್ಯಾಟ್​ ಮಾಡಲ ಕ್ರೀಸ್​ಗೆ ಬಂದಾಗ ಅವರ ಪಾತ್ರ ಏನಾಗಿರುತ್ತದೆ? ಅವರು ಇನ್ನಿಂಗ್ಸ್ ಕಟ್ಟುವ ರೀತಿಯಲ್ಲಿ ಆಡಬೇಕೋ ಅಥವಾ ಪವರ್ ಹಿಟ್ಟಿಂಗ್ ಮಾಡಬೇಕೋ? ಮೊದಲ ಒಡಿಐನಲ್ಲಿ ಅವರು ಆರಾಮವಾಗಿ ಅಡಬಹುದಿತ್ತು. ಪಾಕಿಸ್ತಾನದ ಬಳಿ ಸಾಕಷ್ಟು ಓವರ್​ಗಳಿದ್ದವು. ಶಾದಾಬ್ ಅವರು ಹಾರ್ದಿಕ್ ಪಾಂಡ್ಯ ಅವರಂಥ ಪ್ರೊಫೈಲ್ ಹೊಂದಿರಬೇಕು. ಭಾರತದ ಆಟಗಾರ ಪವರ್ ಹಿಟ್ಟರ್ ಆಗಿದ್ದಾರೆ ಮತ್ತು ಅತಿ ವೇಗವಾಗಿ ಅರ್ಧ ಶತಕಗಳನ್ನು ಬಾರಿಸುತ್ತಾರೆ. ಇದು ಶಾದಾಬ್ ತಮ್ಮ ವೃತ್ತಿಬದುಕಿನ ಉಚ್ಚ್ರಾಯ ಸ್ಥಿತಿಯಾಗಿದೆ. ಆದರೆ ಅವರಿಂದ ಹಾರ್ದಿಕ್​ನಂಥ ಬ್ಯಾಟಿಂಗ್ ಪ್ರದರ್ಶನಗಳು ಬರುತ್ತಿಲ್ಲ. ಅವರ ಬ್ಯಾಟಿಂಗ್​ ಬಹಳಷ್ಟು ಸುಧಾರಿಬೇಕಿದೆ. ಪಾಕಿಸ್ತಾನದ ಬ್ಯಾಟಿಂಗ್ ಲೈನಪ್​ನಲ್ಲಿ ಅವರಿಗೆ ಒಬ್ಬ ಪವರ ಹಿಟ್ಟರ್​ ಆಗಿ ಜಾಸ್ತಿ ಮಹತ್ವವಿದೆ,’ ಎಂದು ತಮ್ಮ ಯೂಟ್ಯೂಬ್ ಚ್ಯಾನೆಲ್​ನಲ್ಲಿ ರಾಜಾ ಹೇಳಿದ್ದಾರೆ.

ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನೀಡಿದ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನಗಳೆರಡನ್ನೂ ರಾಜಾ ತೀವ್ರವಾಗಿ ಟೀಕಿಸಿದರು.

‘ಪಂದ್ಯದ ಯಾವುದೇ ಹಂತದಲ್ಲಿ ಪಾಕಿಸ್ತಾನ ಒಂದು ಹೋರಾಡಲು ಯೋಗ್ಯವೆನಿಸುವ ಮೊತ್ತ ಗಳಿಸೀತು ಅಂತ ಅನಿಸಲೇ ಇಲ್ಲ. ಯಾರೊಬ್ಬರಲ್ಲೂ ಹೋರಾಟದ ಮನೋಭಾವ ಕಾಣಲೇ ಇಲ್ಲ. ಪಾಕಿಸ್ತಾನದ ಶಕ್ತಿಯೆಂದರೆ ಅದರ ಬೌಲಿಂಗ್. ಇಡೀ ವಿಶ್ವಕ್ಕೆ ಅದರ ಬೌಲಿಂಗ್ ಪರಾಕ್ರಮದ ಬಗ್ಗೆ ಗೊತ್ತಿದೆ. ಆದರೆ ಈ ಪಂದ್ಯವನ್ನು ಅವರು 9 ವಿಕೆಟ್​ಳಿಂದ ಸೋತರು. ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಮೇಲೆ ಅವರು ಒತ್ತಡ ಹೇರಲೇ ಇಲ್ಲ. ದುರ್ಬಲ ಎಸೆತಗಳನ್ನು ಎಸೆಯುತ್ತಾ ಆಂಗ್ಲರ ಕೆಲಸವನ್ನು ಹಗುರ ಮಾಡಿದರು. ಫಾರ್ಮ್ ಕಳೆದುಕೊಂಡ ಆಟಗಾರರಿಗೆ ಅದನ್ನು ಮರಳಿ ಪಡುಯವಂತೆ ಮಾಡವುದು ಪಾಕಿಸ್ತಾನ ತಂಡದ ಸ್ಪೆಶಾಲಿಟಿ ಆಗಿರುವಂತಿದೆ,’ ಎಂದು ರಮೀಜ್ ರಾಜಾ ಖಾರವಾಗಿ ಹೇಳಿದರು.

ಇದನ್ನೂ ಓದಿ: Indian cricketers house: ಇದು ಯಾರ ಮನೆ ಹೇಳ್ತೀರಾ? ಸುಳಿವು, ಕ್ರಿಕೆಟಿಗರ ಐಷಾರಾಮಿ ಮನೆ ಚಿತ್ರಗಳು ಇಲ್ಲಿವೆ ನೋಡಿ ಹೇಳಿ..

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು