AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pro Kabaddi League (PKL) 2021: ಬುಲ್ಸ್​ ಗುದ್ದಿಗೆ ಪಲ್ಟಿ ಹೊಡೆದ ಪ್ಯಾಂಥರ್ಸ್​

Pro Kabaddi League (PKL) 2021: ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ ತಂಡವು 20 ಅಂಕಗಳನ್ನು ಪಡೆದರೆ, ಜೈಪುರ ಪಿಂಕ್ ಪ್ಯಾಂಥರ್ಸ್​ 14 ಅಂಕಗಳಿಸಿತು.

Pro Kabaddi League (PKL) 2021: ಬುಲ್ಸ್​ ಗುದ್ದಿಗೆ ಪಲ್ಟಿ ಹೊಡೆದ ಪ್ಯಾಂಥರ್ಸ್​
Pro Kabaddi League (PKL) 2021
TV9 Web
| Edited By: |

Updated on:Jan 06, 2022 | 10:29 PM

Share

ಪ್ರೋ ಕಬಡ್ಡಿ ಲೀಗ್​ನ 37ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್​ ವಿರುದ್ದ ಬೆಂಗಳೂರು ಬುಲ್ಸ್ ಭರ್ಜರಿ ಜಯ ಸಾಧಿಸಿದೆ. ಆರಂಭದಿಂದಲೇ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಮೊದಲ ಐದು ನಿಮಿಷದವರೆಗೆ ಪಿಂಕ್ ಪ್ಯಾಂಥರ್ಸ್​ ಮೇಲುಗೈ ಸಾಧಿಸಿತ್ತು. ಆದರೆ ಆ ಬಳಿಕ ಸತತ ರೈಡಿಂಗ್ ಮೂಲಕ ಪವನ್ ಶೆಹ್ರಾವತ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳನ್ನು ತಂದುಕೊಟ್ಟರು. ಅದರಲ್ಲೂ ಸತತ 13 ರೈಡಿಂಗ್ ಮೂಲಕ 13 ಪಾಯಿಂಟ್​ ಗಳಿಸಿದ ಶೆಹ್ರಾವತ್ ಆರಂಭದಲ್ಲೇ ಬೆಂಗಳೂರು ಬುಲ್ಸ್ ತಂಡಕ್ಕೆ ಉತ್ತಮ ಲೀಡ್ ತಂದುಕೊಟ್ಟರು.

ಅದರಂತೆ ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ ತಂಡವು 20 ಅಂಕಗಳನ್ನು ಪಡೆದರೆ, ಜೈಪುರ ಪಿಂಕ್ ಪ್ಯಾಂಥರ್ಸ್​ 14 ಅಂಕಗಳಿಸಿತು. ಇತ್ತ 6 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬೆಂಗಳೂರಿಗೆ ಮತ್ತೆ ಪವನ್ ಶೆಹ್ರಾವತ್ ಸೂಪರ್ ಟ್ಯಕಲ್ ಮೂಲಕ ಲೀಡ್ ತಂದುಕೊಟ್ಟರು.

ಒಂದು ಹಂತದಲ್ಲಿ 28-16 ಅಂಕ ಅಂತರ ಹೊಂದಿದ್ದ ಪಿಂಕ್ ಪ್ಯಾಂಥರ್ಸ್ ಅಂತಿಮ ಹಂತದಲ್ಲಿ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರು. ಬೆಂಗಳೂರು ಬುಲ್ಸ್ ರಕ್ಷಣಾ ಪಡೆಯನ್ನು ಬೇಧಿಸಿದ ಪಿಂಕ್ ಪ್ಯಾಂಥರ್ಸ್ ರೈಡರ್​ಗಳು ತಂಡದ ಪಾಯಿಂಟ್​ ಅನ್ನು 38-30 ಅಂತರಕ್ಕೆ ತಂದು ನಿಲ್ಲಿಸಿದರು. ಆದರೆ ಅದಾಗಲೇ ಪಂದ್ಯವು ಅಂತಿಮ ಹಂತಕ್ಕೆ ತಲುಪಿದ್ದರಿಂದ ಬೆಂಗಳೂರು ಬುಲ್ಸ್ ಕೂಡ ಯಾವುದೇ ಆತಂಕಕ್ಕೆ ಒಳಗಾಗಲಿಲ್ಲ. ಅಂತಿಮವಾಗಿ ಬೆಂಗಳೂರು ಬುಲ್ಸ್ ತಂಡವು 38-31 ಅಂತರದಿಂದ ಪಂದ್ಯ ಗೆದ್ದುಕೊಂಡಿತು. 18 ಅಂಕಗಳಿಸುವ ಮೂಲಕ ನಾಯಕ ಪವನ್ ಕುಮಾರ್ ಶೆಹ್ರಾವತ್ ಗೆಲುವಿನ ರೂವಾರಿ ಎನಿಸಿಕೊಂಡರು.  ಈ ಜಯದೊಂದಿಗೆ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Pro Kabaddi League (PKL) 2021: Bengaluru Bulls Beat Jaipur Pink Panthers)

Published On - 10:20 pm, Thu, 6 January 22

Follow Us
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಕುರುಬ ಸಮುದಾಯದ ಆಕ್ರೋಶ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಬಿಜೆಪಿ ಶಾಸಕ
ಕುರುಬ ಸಮುದಾಯದ ಆಕ್ರೋಶ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಬಿಜೆಪಿ ಶಾಸಕ
ಸಿದ್ದರಾಮಯ್ಯ ಟಗರು ಇದ್ದಂತೆ; ಯಾವಾಗ ಗುದ್ದಬೇಕೋ ಗುದ್ದುತ್ತದೆ: ಮಹದೇವಪ್ಪ
ಸಿದ್ದರಾಮಯ್ಯ ಟಗರು ಇದ್ದಂತೆ; ಯಾವಾಗ ಗುದ್ದಬೇಕೋ ಗುದ್ದುತ್ತದೆ: ಮಹದೇವಪ್ಪ