AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ ಎಂದ ದ್ರಾವಿಡ್; ಇಷ್ಟೊಂದು​ ಕೋಪಗೊಂಡಿದ್ದಕ್ಕೆ ಕಾರಣ ಏನು?

ರಾಹುಲ್​ ಡ್ರಾವಿಡ್​ ಅವರ ಮತ್ತೊಂದು ವಿಡಿಯೋ ವೈರಲ್​ ಆಗುತ್ತಿದೆ. ಅದರಲ್ಲಿ ಕೆಲವು ಡೈಲಾಗ್​ಗಳು ಗಮನ ಸೆಳೆಯುತ್ತಿವೆ. ‘ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ’ ಎಂದು ಡ್ರಾವಿಡ್​ ಕಿರುಚಾಡಿದ್ದಾರೆ.

ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ ಎಂದ ದ್ರಾವಿಡ್; ಇಷ್ಟೊಂದು​ ಕೋಪಗೊಂಡಿದ್ದಕ್ಕೆ ಕಾರಣ ಏನು?
ರಾಹುಲ್​ ದ್ರಾವಿಡ್​
ಮದನ್​ ಕುಮಾರ್​
|

Updated on: Apr 25, 2021 | 10:29 AM

Share

ಮಾಜಿ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ಅವರು ಯಾವ ರೀತಿಯ ವ್ಯಕ್ತಿ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಶಾಂತ ಸ್ವಭಾವದಿಂದಲೇ ಅವರು ಫೇಮಸ್​. ಮೈದಾನದಲ್ಲಿ ಕೆಣಕಿದವರಿಗೆ ಅವರು ಬ್ಯಾಟ್​ನಿಂದ ಉತ್ತರ ಕೊಟ್ಟಿದ್ದರೇ ಹೊರತು ಜೋರಾಗಿ ಬಾಯಿ ಮಾಡಿದವರಲ್ಲ. ಆದರೆ ಇತ್ತೀಚೆಗೆ ದ್ರಾವಿಡ್​ ಅವರ ಕೋಪವೇ ಎಲ್ಲ ಕಡೆ ಹೈಲೈಟ್​ ಆಗಿತ್ತು. ಅದಕ್ಕೆ ಕಾರಣ ಅವರು ನಟಿಸಿದ ಒಂದು ಜಾಹೀರಾತು. ಅದರಲ್ಲಿ ಅವರು ಇಂದಿರಾ ನಗರದ ಗೂಂಡಾ ಆಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಈಗ ಅವರ ಇನ್ನೊಂದು ಡೈಲಾಗ್​ ವೈರಲ್​ ಆಗುತ್ತಿದೆ.

ಕ್ರೆಡ್​ ಕಂಪನಿಯ ಈ ಜಾಹೀರಾತಿನಲ್ಲಿ ಡ್ರಾವಿಡ್​ ಅವರು ಸಿಕ್ಕಾಪಟ್ಟೆ ಕೋಪಿಷ್ಠನ ಪಾತ್ರದಲ್ಲಿ ನಟಿಸಿದ್ದರು. ನಿಜಕ್ಕೂ ಡ್ರಾವಿಡ್​ಗೆ ಅಷ್ಟು ಕೋಪ ಬರುತ್ತಾ ಎಂದು ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಷ್ಟರ ಮಟ್ಟಿಗೆ ಅವರ ನಟನೆ ಸೂಪರ್​ ಆಗಿತ್ತು. ಆ ದೃಶ್ಯಗಳಲ್ಲಿ ನಟಿಸಲು ಅವರು ಎಷ್ಟೆಲ್ಲ ಕಷ್ಟಪಟ್ಟಿದ್ದಾ​ರೆ ಎಂಬುದನ್ನು ತೋರಿಸುವಂತಹ ಮೇಕಿಂಗ್ ವಿಡಿಯೋ ಈಗ ರಿಲೀಸ್​ ಆಗಿದೆ.

ಈ ಮೊದಲು ರಿಲೀಸ್​ ಆಗಿದ್ದ ಜಾಹೀರಾತಿನಲ್ಲಿ ‘ಇಂದಿರಾ ನಗರ್​ ಕಾ ಗೂಂಡಾ ಹೂ ಮೈ’, ‘ಹೊಡೆದುಹಾಕಿ ಬಿಡ್ತೀನಿ..’ ಎಂಬಿತ್ಯಾದಿ ಡೈಲಾಗ್​ಗಳು ವೈರಲ್​ ಆಗಿದ್ದವು. ಅಷ್ಟೇ ಅಲ್ಲ, ಈ ಜಾಹೀರಾತಿನ ಶೂಟಿಂಗ್​ ಸಂದರ್ಭದಲ್ಲಿ ಇನ್ನೂ ಕೆಲವು ಡೈಲಾಗ್​ಗಳನ್ನು ದ್ರಾವಿಡ್​ ಹೇಳಿದ್ದರು. ಈಗ ಮೇಕಿಂಗ್​ ವಿಡಿಯೋ ವೈರಲ್​ ಆಗುತ್ತಿದ್ದು ಅದರಲ್ಲಿ ಕೆಲವು ಡೈಲಾಗ್​ಗಳು ಗಮನ ಸೆಳೆಯುತ್ತಿವೆ.

‘ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ.. ಹೊರಗೆ ಬಾ ನಿನಗೆ ತೋರಿಸುತ್ತೇನೆ.. ಕಣ್ಣು ಕಾಣಿಸಲ್ವಾ.. ರೋಡ್​ ನಿಮ್ಮ ಅಪ್ಪಂದಾ? ಕೈ ಕೆಳಗೆ ಇಳಿಸು.. ವಿವಿಎಸ್​.. ಹುಡುಗರನ್ನು ಕರ್ಕೊಂಡು ಬಾರೋ..’ ಎಂದು ಡ್ರಾವಿಡ್​ ಕಿರುಚಾಡಿದ್ದಾರೆ. ಇದನ್ನೆಲ್ಲ ಕಂಡು ಅವರ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಈ ವಿಡಿಯೋ ಕೂಡ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಒಟ್ಟಿನಲ್ಲಿ ಕ್ರೆಡ್​ ಕಂಪನಿಯ ಈ ಜಾಹೀರಾತಿ ವೈರಲ್​ ಆದ ಬಳಿಕ ಡ್ರಾವಿಡ್​ ಓರ್ವ ಅದ್ಭುತ ನಟ ಎಂಬ ಮೆಚ್ಚುಗೆ ಕೇಳಿಬರುತ್ತಿದೆ. ಸಿನಿಮಾಗಳಲ್ಲಿ ಅವರು ನಟಿಸಬೇಕು ಎಂಬ ಬೇಡಿಕೆ ಅವರ ಅಭಿಮಾನಿಗಳದ್ದು.

ಇದನ್ನೂ ಓದಿ: Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​

Rahul Dravid: ದ್ರಾವಿಡ್​ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್​ ಕೇಳಿ ನಗುತ್ತಿರುವ ನೆಟ್ಟಿಗರು

(Rahul Dravid angry advertisement making video goes viral)

Follow Us
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ