Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​

ವೆಂಕಟೇಶ್​ ಪ್ರಸಾದ್​ ಒಂದು ಹಳೇ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಪಾಕಿಸ್ತಾನಿ ಬ್ಯಾಟ್ಸ್​ಮನ್​ ಆಮೇರ್​ ಸೊಹೇಲ್ ಅವರಿಗೆ 1996ರ ವಿಶ್ವಕಪ್​ ಪಂದ್ಯದ ವೇಳೆ ವೆಂಕಟೇಶ್​ ಪ್ರಸಾದ್​ ನೀಡಿದ ಖಡಕ್​ ತಿರುಗೇಟಿನ ದೃಶ್ಯ ಈ ಪೋಸ್ಟ್​ನಲ್ಲಿದೆ.

Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​
ರಾಹುಲ್​ ದ್ರಾವಿಡ್​ - ವೆಂಕಟೇಶ್​ ಪ್ರಸಾದ್​
Follow us
|

Updated on: Apr 11, 2021 | 1:13 PM

‘ಇಂದಿರಾನಗರ್​ ಕಾ ಗೂಂಡಾ ಹೂ ಮೈ’ ಎಂಬ ಡೈಲಾಗ್​ ಈಗ ಎಲ್ಲೆಲ್ಲೂ ಫೇಮಸ್​ ಆಗಿದೆ. ಕ್ರೆಡಿಟ್​ ಕಾರ್ಡ್​ ಬಿಲ್​ ಪಾವತಿ ಮಾಡುವ ಖಾಸಗಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಹುಲ್​ ದ್ರಾವಿಡ್​ ಅವರು ಈ ಡೈಲಾಗ್​ ಹೇಳಿರುವುದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದೇ ರೀತಿಯ ಅನೇಕ ಸಂಗತಿಗಳಿಗೆ ಈ ಡೈಲಾಗ್​ ಬಳಕೆ ಆಗುತ್ತಿದೆ. ಇತ್ತೀಚೆಗಷ್ಟೇ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಬಾಲ್ಯದ ಫೋಟೋಗೆ ಇಂಥ ಕ್ಯಾಪ್ಷನ್​ ನೀಡಿದ್ದರು. ಈಗ ಮಾಜಿ ಕ್ರಿಕೆಟರ್​ ವೆಂಕಟೇಶ್​ ಪ್ರಸಾದ್​ ‘ನಾನು ಸಹ ಇಂದಿರಾ ನಗರದ ಗೂಂಡಾ’ ಎಂದು ಹೇಳುತ್ತಿದ್ದಾರೆ!

ವೆಂಕಟೇಶ್​ ಪ್ರಸಾದ್​ ಅವರು ಟ್ವಿಟರ್​ನಲ್ಲಿ ಒಂದು ಹಳೇ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಪಾಕಿಸ್ತಾನಿ ಬ್ಯಾಟ್ಸ್​ಮನ್​ ಆಮೇರ್​ ಸೊಹೇಲ್ ಅವರಿಗೆ 1996ರ ವಿಶ್ವಕಪ್​ ಪಂದ್ಯದ ವೇಳೆ ವೆಂಕಟೇಶ್​ ಪ್ರಸಾದ್​ ನೀಡಿದ ಖಡಕ್​ ತಿರುಗೇಟಿನ ದೃಶ್ಯ ಈ ಪೋಸ್ಟ್​ನಲ್ಲಿದೆ. ಅದನ್ನು ಕಂಡು ಕ್ರಿಕೆಟ್​ಪ್ರಿಯರು ಆ ಕಾಲದ ನೆನಪುಗಳಿಗೆ ಜಾರಿದ್ದಾರೆ.

ಇಂಡಿಯಾ ವರ್ಸಸ್​ ಪಾಕಿಸ್ತಾನದ ಆ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. 15ನೇ ಓವರ್​ನಲ್ಲಿ ವೆಂಕಟೇಶ್​ ಪ್ರಸಾದ್​ ಬೌಲಿಂಗ್​ ಮಾಡುತ್ತಿದ್ದರು. ಆ ಓವರ್​ನ 5ನೇ ಬಾಲ್​ಗೆ ಆಮೇರ್​ ಸೊಹೇಲ್​ ಬೌಂಡರಿ ಬಾರಿಸಿದರು. ಅಲ್ಲದೆ, ‘ನಿಮ್ಮನ್ನೂ ಅಲ್ಲಿಗೆ ಕಳಿಸಿಬಿಡುತ್ತೇನೆ’ ಎಂಬ ಅರ್ಥದಲ್ಲಿ ವೆಂಕಟೇಶ್​ ಪ್ರಸಾದ್​ಗೆ ದಾರಿ ತೋರಿಸಿದರು! ಇಬ್ಬರ ನಡುವಿನ ಕ್ಲ್ಯಾಶ್​ಗೆ ಇದು ಕಾರಣ ಆಯಿತು. ಆದರೇ ಅದೇ ಓವರ್​ನ ನೆಕ್ಸ್ಟ್​​ ಬಾಲ್​ಗೆ ಆಮೇರ್​ ಸೊಹೇಲ್​ರನ್ನು ವೆಂಕಟೇಶ್​ ಪ್ರಸಾದ್​ ಕ್ಲೀನ್​ ಬೌಲ್ಡ್​ ಮಾಡಿದರು! ಆ ಮೂಲಕ ಆಮೇರ್​ ಸೊಹೇಲ್​ನ ಪೊಗರಿಗೆ ವೆಂಕಟೇಶ್​ ಪ್ರಸಾದ್​ ಖಾರವಾದ ತಿರುಗೇಟು ನೀಡಿದ್ದರು!

ಆ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುವ ಮೂಲಕ ‘ನಾನು ಕೂಡ ಇಂದಿರಾನಗರದ ಗೂಂಡಾ’ ಎಂದು ವೆಂಕಟೇಶ್​ ಪ್ರಸಾದ್​ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ಬಗೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.

‘ಆ ಘಟನೆ ನಡೆದ ಬಳಿಕ ಆಮೇರ್​ ಸೊಹೇಲ್ ಅವರು ಯಾರಿಗೂ ಈ ರೀತಿ ದಾರಿ ತೋರಿಸುವ ಧೈರ್ಯ ಮಾಡಲಿಲ್ಲ. ಒಂದು ವೇಳೆ ಯಾರಿಗಾದರೂ ಅಡ್ರೆಸ್​ ಹೇಳುವುದಿದ್ದರೂ ಕೂಡ ಅವರು ಹಿಂದೇಟು ಹಾಕಲು ಶುರು ಮಾಡಿದರು. ಯಾಕೆಂದರೆ ಕಳೆದ ಬಾರಿ ತಾವು ವೆಂಕಟೇಶ್​ ಪ್ರಸಾದ್​ಗೆ ದಾರಿ ತೋರಿಸಿದ್ದಕ್ಕೆ ತಮಗೆ ಎಂಥ ಗತಿ ಬಂತು ಎಂಬುದು ಅವರಿಗೆ ಪದೇಪದೇ ನೆನಪಾಗುತ್ತಿತ್ತು’ ಎಂದು ಜನರು ಕಾಮೆಂಟ್​ ಮಾಡಿದ್ದಾರೆ.

ಇನ್ನು, ವೆಂಕಟೇಶ್​ ಪ್ರಸಾದ್​ ಅವರ ಈ ಟ್ವೀಟ್​ಗೆ ಕೆಲವರು ಕುಹಕ ಮಾಡಿದ್ದಾರೆ. ‘ವೆಂಕಟೇಶ್​ ಪ್ರಸಾದ್​ ಅವರು ತಮ್ಮ ಕರಿಯರ್​ನಲ್ಲಿ ಮಾಡಿದ ಸಾಧನೆ ಇದೊಂದೇ’ ಎಂದು ನಜೀಬ್​ ಎನ್ನುವವರು ಕಾಮೆಂಟ್​ ಮಾಡಿದ್ದರು. ಅದಕ್ಕೂ ಕೂಡ ವೆಂಕಟೇಶ್​ ಪ್ರಸಾದ್​ ಸೂಕ್ತ ತಿರುಗೇಟು ನೀಡಿದ್ದಾರೆ. ‘ಅಷ್ಟೇ ಅಲ್ಲ ನಜೀವ್​ ಭಾಯ್​… ಆ ಬಳಿಕ ಇನ್ನಷ್ಟು ಸಾಧನೆ ಮಾಡಿದ್ದೇನೆ. ಇಂಗ್ಲೆಂಡ್​ನಲ್ಲಿ ನಡೆದ 1999ರ ವರ್ಲ್ಡ್​ ಕಪ್​ನಲ್ಲಿ ಪಾಕಿಸ್ತಾನದ ವಿರುದ್ಧದ ಮ್ಯಾಚ್​ನಲ್ಲಿ 27 ರನ್​ಗೆ 5 ವಿಕೆಟ್​ ಪಡೆದಿದ್ದೆ. ಅವರಿಗೆ 228 ರನ್​ ಚೇಸ್​ ಮಾಡಲು ಸಾಧ್ಯವಾಗಿರಲಿಲ್ಲ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ವೆಂಕಟೇಶ್​ ಪ್ರಸಾದ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Rahul Dravid: ದ್ರಾವಿಡ್​ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್​ ಕೇಳಿ ನಗುತ್ತಿರುವ ನೆಟ್ಟಿಗರು

Indira Nagar Ka Gunda: ದ್ರಾವಿಡ್​​ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!

(After Rahul Dravid now Venkatesh Prasad says Indira Nagar Ka Gunda Hu Mai and one more video goes Viral)

ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ