AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Road Safety World Series 2021: ಇಂಡಿಯಾ ಲೆಜೆಂಡ್ಸ್-ಶ್ರೀಲಂಕಾ ಲೆಜೆಂಡ್ಸ್ ನಡುವಿನ ಫೈನಲ್​ ಹಣಾಹಣಿಯ ನೇರ ಪ್ರಸಾರ, ಸಮಯದ ಮಾಹಿತಿ ಇಲ್ಲಿದೆ

Road Safety World Series 2021: ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಫೈನಲ್ ಪಂದ್ಯವು ಸ್ಟಾರ್ ಆಟಗಾರರಿಂದ ತುಂಬಿದ್ದು, ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವೆ ಭಾನುವಾರ ನಡೆಯಲಿದೆ.

Road Safety World Series 2021: ಇಂಡಿಯಾ ಲೆಜೆಂಡ್ಸ್-ಶ್ರೀಲಂಕಾ ಲೆಜೆಂಡ್ಸ್ ನಡುವಿನ ಫೈನಲ್​ ಹಣಾಹಣಿಯ ನೇರ ಪ್ರಸಾರ, ಸಮಯದ ಮಾಹಿತಿ ಇಲ್ಲಿದೆ
ಇಂಡಿಯಾ ಲೆಜೆಂಡ್ಸ್
ಪೃಥ್ವಿಶಂಕರ
|

Updated on:Mar 21, 2021 | 12:36 PM

Share

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಫೈನಲ್ ಪಂದ್ಯವು ಸ್ಟಾರ್ ಆಟಗಾರರಿಂದ ತುಂಬಿದ್ದು, ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವೆ ಭಾನುವಾರ ನಡೆಯಲಿದೆ. ಈ ಪಂದ್ಯವು ಈ ಎರಡು ತಂಡಗಳ ನಡುವೆ ಆಡಿದ 2011 ರ ವಿಶ್ವಕಪ್‌ನ ಅಭಿಮಾನಿಗಳನ್ನು ನೆನಪಿಸುತ್ತದೆ. ಇಂಡಿಯಾ ಲೆಜೆಂಡ್ಸ್ ಪ್ರಸ್ತುತ ಆ ವಿಶ್ವಕಪ್ ತಂಡದಿಂದ ಐದು ಆಟಗಾರರನ್ನು ಹೊಂದಿದ್ದರೆ, ಶ್ರೀಲಂಕಾ ಪ್ರಸ್ತುತ 2011 ರ ವಿಶ್ವಕಪ್ ರನ್ನರ್ಸ್ ಅಪ್ ತಂಡದಿಂದ ಆರು ಆಟಗಾರರನ್ನು ಹೊಂದಿದೆ. ಸಚಿನ್ ತೆಂಡೂಲ್ಕರ್ ಅವರ ತಂಡವು ಬಲವಾದ ಮತ್ತು ಸ್ಫೋಟಕ ಬ್ಯಾಟಿಂಗ್ ತಂಡವನ್ನು ಹೊಂದಿದ್ದು, ಇದರಲ್ಲಿ ನಾಯಕ ಸೇರಿದಂತೆ ಸೆಹ್ವಾಗ್, ಯುವರಾಜ್, ಯೂಸುಫ್, ಕೈಫ್, ಇರ್ಫಾನ್ ಮತ್ತು ಮನ್‌ಪ್ರೀತ್ ಸಿಂಗ್ ಗೋನಿ ಆಟಗಾರರಿದ್ದಾರೆ.

ಬೌಲರ್‌ಗಳು ಉನ್ನತ ಫಾರ್ಮ್​ಲ್ಲಿದ್ದಾರೆ.. ಆದಾಗ್ಯೂ, ಶ್ರೀಲಂಕಾದ ಬೌಲಿಂಗ್ ಬಗ್ಗೆ ಭಾರತ ಜಾಗರೂಕರಾಗಿರಬೇಕು. ಅವರ ಬೌಲರ್‌ಗಳು ಉನ್ನತ ಫಾರ್ಮ್​ಲ್ಲಿದ್ದಾರೆ. ವಿಶೇಷವಾಗಿ ಆಫ್ ಸ್ಪಿನ್ನರ್ ದಿಲ್ಶನ್. ಅವರಲ್ಲದೆ, ಕಳೆದ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಕುಲಶೇಖರ ಮತ್ತು ಧಮಿಕಾ ಪ್ರಸಾದ್, ಎದುರಾಳಿಗಳಿಗೆ ತಮ್ಮ ವೇಗದ ಬೌಲಿಂಗ್‌ನಿಂದ ಅಪಾಯಕಾರಿಯಾಗಲಿದ್ದಾರೆ. ಹಿಂದಿನ ಪಂದ್ಯದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕುಲಶೇಖರ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಪಡೆದಿದ್ದರು. ಭಾರತ ತಮ್ಮ ಬೌಲಿಂಗ್ ವಿಭಾಗದಲ್ಲಿ ಕೊಂಚ ಶ್ರಮಿಸಬೇಕಿದೆ. ಕೊನೆಯ ಬಾರಿಗೆ ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಮುಖಾಮುಖಿಯಾಗಿದ್ದಾಗ ಭಾರತ ಐದು ವಿಕೆಟ್‌ಗಳಿಂದ ಜಯಗಳಿಸಿತು.

ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ? ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವಿನ ರೋಡ್ ಸೇಫ್ಟಿ ವರ್ಲ್ಡ್ ಸರಣಿಯ ಅಂತಿಮ ಪಂದ್ಯ ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಂತಿಮ ಪಂದ್ಯ ಯಾವಾಗ ನಡೆಯಲಿದೆ? ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವಿನ ಪಂದ್ಯ ಮಾರ್ಚ್ 21 ರಂದು (ಭಾನುವಾರ) ನಡೆಯಲಿದೆ.

ಪಂದ್ಯ ಆರಂಭವಾಗುವ ಸಮಯ? ಪಂದ್ಯವು ಭಾರತೀಯ ಸಮಯ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಸಂಜೆ 6: 30 ಕ್ಕೆ ಟಾಸ್ ಆರಂಭವಾಗಲಿದೆ.

ಪಂದ್ಯದ ನೇರ ಪ್ರಸಾರವನ್ನು ನೀವು ಎಲ್ಲಿ ವೀಕ್ಷಿಸಬಹುದು? ಪಂದ್ಯದ ಲೈವ್ ಸ್ಟ್ರೀಮಿಂಗ್ ವೂಟ್ ಮತ್ತು ಜಿಯೋ ಆಪ್‌ನಲ್ಲಿಯೂ ನಡೆಯಲಿದೆ.

ನೇರ ಪ್ರಸಾರವನ್ನು ನೀವು ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು? ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವಿನ ಪಂದ್ಯದ ನೇರ ಪ್ರಸಾರವು ಕಲರ್ಸ್ ಸಿನೆಪ್ಲೆಕ್ಸ್, ಕರ್ಲಸ್ ಕನ್ನಡ ಸಿನೆಮಾ, ರಿಶ್ಟೆ ಸಿನೆಪ್ಲೆಕ್ಸ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ:Road Safety World Series 2021: ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ರೋಚಕ ಜಯಗಳಿಸಿ ಫೈನಲ್​ಗೇರಿದ ಇಂಡಿಯಾ ಲೆಜೆಂಡ್ಸ್

Published On - 12:35 pm, Sun, 21 March 21

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ