AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಜೋರ್ಡನ್​ ಅದ್ಭುತವಾಗಿ ಕ್ಯಾಚ್​ ಹಿಡಿದ ರೀತಿಗೆ ಸೂರ್ಯಕುಮಾರ್​ ಯಾದವ್​ ಸ್ಟನ್​!

ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.

VIDEO: ಜೋರ್ಡನ್​ ಅದ್ಭುತವಾಗಿ ಕ್ಯಾಚ್​ ಹಿಡಿದ ರೀತಿಗೆ ಸೂರ್ಯಕುಮಾರ್​ ಯಾದವ್​ ಸ್ಟನ್​!
ಕ್ರಿಸ್ ಜೋರ್ಡನ್​ ಹಿಡಿದ ಅದ್ಭುತ ಕ್ಯಾಚ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 21, 2021 | 10:52 AM

Share

ಭಾರತ ಹಾಗೂ ಇಂಗ್ಲೆಂಡ್​ ನಡುವಣ ಐದನೇ ಹಾಗೂ ಕೊನೆಯ ಟಿ20 ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. 14ನೇ ಓವರ್​ನಲ್ಲಿ ಒಂದು ಅದ್ಭುತವೇ ನಡೆದು ಹೋಗಿದೆ. ಕ್ರಿಸ್​ ಜೋರ್ಡನ್​ ಸರ್ಕಸ್​ ಮಾಡಿ ಹಿಡಿದ ಕ್ಯಾಚ್​ಗೆ ಬ್ಯಾಟಿಂಗ್​ನಲ್ಲಿದ್ದ ಸೂರ್ಯಕುಮಾರ್​ ಯಾದವ್​ ಸ್ಟನ್​ ಆಗಿದ್ದಾರೆ. ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ರೋಹಿತ್​ ಶರ್ಮಾ ಜತೆಯಾಗಿ ವಿರಾಟ್​ ಕೊಹ್ಲಿ ಓಪನಿಂಗ್​ಗೆ ಇಳಿದು ಅಚ್ಚರಿ ಮೂಡಿಸಿದ್ದರು. ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.

ಟೀಂ ಇಂಡಿಯಾ ಅದ್ಭುತ ಓಪನಿಂಗ್​ ಕಂಡುಕೊಂಡಿತ್ತು. ರೋಹಿತ್​ ಶರ್ಮಾ 34 ಬಾಲ್​ಗಳಲ್ಲಿ 64 ರನ್​ ಸಿಡಿಸಿದ್ದರು. ಇದರಲ್ಲಿ ನಾಲ್ಕು ಫೋರ್​ ಹಾಗೂ 5 ಸಿಕ್ಸ್​​ರ​​ಗಳಿದ್ದವು. ರೋಹಿತ್​ ಬೌಲ್ಡ್​ ಆದ ನಂತರ ಬ್ಯಾಟಿಂಗ್​ಗೆ ಇಳಿದಿದ್ದು ಸೂರ್ಯಕುಮಾರ್ ಯಾದವ್​. ಸೂರ್ಯಕುಮಾರ್ ಯಾವ್​ ಕೂಡ ಹೊಡಿಬಡಿ ಆಟಕ್ಕೆ ಮುಂದಾದರು. 12ನೇ ಓವರ್​ನಲ್ಲಿ ಕ್ರಿಸ್ ಜೋರ್ಡನ್​ ಬೌಲಿಂಗ್​ನಲ್ಲಿ ಬರೋಬ್ಬರಿ ನಾಲ್ಕು ಫೌರ್​ಗಳು ಬಂದಿದ್ದವು. ನಂತರ 14ನೇ ಓವರ್​ನಲ್ಲಿ ಆದಿಲ್​ ರಶೀದ್​ ಬೌಲಿಂಗ್​ಗೆ ಇಳಿದಿದ್ದರು. ಎರಡನೇ ಬಾಲ್​ ಎಸೆದಾಗ ಸೂರ್ಯಕುಮಾರ್​ ಯಾದವ್​ ಸಿಕ್ಸ್​ ಬಾರಿಸೋಕೆ ಮುಂದಾದರು.

ಈ ಬಾಲ್​ ಇನ್ನೇನು ಸಿಕ್ಸ್​ ಗಡಿ ಸಮೀಪಿಸಬೇಕಿತ್ತು. ಆದರೆ, ಓಡಿ ಬಂದ ಜೋರ್ಡನ್​ ಬಾಲ್​ ಹಿಡಿದುಕೊಂಡರು. ಇನ್ನೇನು ಅವರು ಸಿಕ್ಸ್​ ಗಡಿ ದಾಟಬೇಕಿತ್ತು. ಆಗ, ಬಾಲ್​ ಜೇಸನ್​ ರಾಯ್​ ಕೈಗೆ ನೀಡಿದ್ದರು. ಈ ಮೂಲಕ ಸೂರ್ಯಕುಮಾರ್ ಯಾದವ್​ ಅವರನ್ನು ಔಟ್​ ಮಾಡಿದ್ದರು. ಜೋರ್ಡನ್​ ಅದ್ಭುತ ಕ್ಯಾಚ್​ಗೆ ಸೂರ್ಯಕುಮಾರ್​ ಯಾದವ್​ ಹಾಗೂ ಕೊಹ್ಲಿ ಸ್ಟನ್​ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: India vs England 5th T20I live Score: ಭಾರತದ ಭರ್ಜರಿ ಬ್ಯಾಟಿಂಗ್!

Published On - 8:34 pm, Sat, 20 March 21

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್