AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಜೋರ್ಡನ್​ ಅದ್ಭುತವಾಗಿ ಕ್ಯಾಚ್​ ಹಿಡಿದ ರೀತಿಗೆ ಸೂರ್ಯಕುಮಾರ್​ ಯಾದವ್​ ಸ್ಟನ್​!

ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.

VIDEO: ಜೋರ್ಡನ್​ ಅದ್ಭುತವಾಗಿ ಕ್ಯಾಚ್​ ಹಿಡಿದ ರೀತಿಗೆ ಸೂರ್ಯಕುಮಾರ್​ ಯಾದವ್​ ಸ್ಟನ್​!
ಕ್ರಿಸ್ ಜೋರ್ಡನ್​ ಹಿಡಿದ ಅದ್ಭುತ ಕ್ಯಾಚ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 21, 2021 | 10:52 AM

Share

ಭಾರತ ಹಾಗೂ ಇಂಗ್ಲೆಂಡ್​ ನಡುವಣ ಐದನೇ ಹಾಗೂ ಕೊನೆಯ ಟಿ20 ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. 14ನೇ ಓವರ್​ನಲ್ಲಿ ಒಂದು ಅದ್ಭುತವೇ ನಡೆದು ಹೋಗಿದೆ. ಕ್ರಿಸ್​ ಜೋರ್ಡನ್​ ಸರ್ಕಸ್​ ಮಾಡಿ ಹಿಡಿದ ಕ್ಯಾಚ್​ಗೆ ಬ್ಯಾಟಿಂಗ್​ನಲ್ಲಿದ್ದ ಸೂರ್ಯಕುಮಾರ್​ ಯಾದವ್​ ಸ್ಟನ್​ ಆಗಿದ್ದಾರೆ. ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ರೋಹಿತ್​ ಶರ್ಮಾ ಜತೆಯಾಗಿ ವಿರಾಟ್​ ಕೊಹ್ಲಿ ಓಪನಿಂಗ್​ಗೆ ಇಳಿದು ಅಚ್ಚರಿ ಮೂಡಿಸಿದ್ದರು. ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.

ಟೀಂ ಇಂಡಿಯಾ ಅದ್ಭುತ ಓಪನಿಂಗ್​ ಕಂಡುಕೊಂಡಿತ್ತು. ರೋಹಿತ್​ ಶರ್ಮಾ 34 ಬಾಲ್​ಗಳಲ್ಲಿ 64 ರನ್​ ಸಿಡಿಸಿದ್ದರು. ಇದರಲ್ಲಿ ನಾಲ್ಕು ಫೋರ್​ ಹಾಗೂ 5 ಸಿಕ್ಸ್​​ರ​​ಗಳಿದ್ದವು. ರೋಹಿತ್​ ಬೌಲ್ಡ್​ ಆದ ನಂತರ ಬ್ಯಾಟಿಂಗ್​ಗೆ ಇಳಿದಿದ್ದು ಸೂರ್ಯಕುಮಾರ್ ಯಾದವ್​. ಸೂರ್ಯಕುಮಾರ್ ಯಾವ್​ ಕೂಡ ಹೊಡಿಬಡಿ ಆಟಕ್ಕೆ ಮುಂದಾದರು. 12ನೇ ಓವರ್​ನಲ್ಲಿ ಕ್ರಿಸ್ ಜೋರ್ಡನ್​ ಬೌಲಿಂಗ್​ನಲ್ಲಿ ಬರೋಬ್ಬರಿ ನಾಲ್ಕು ಫೌರ್​ಗಳು ಬಂದಿದ್ದವು. ನಂತರ 14ನೇ ಓವರ್​ನಲ್ಲಿ ಆದಿಲ್​ ರಶೀದ್​ ಬೌಲಿಂಗ್​ಗೆ ಇಳಿದಿದ್ದರು. ಎರಡನೇ ಬಾಲ್​ ಎಸೆದಾಗ ಸೂರ್ಯಕುಮಾರ್​ ಯಾದವ್​ ಸಿಕ್ಸ್​ ಬಾರಿಸೋಕೆ ಮುಂದಾದರು.

ಈ ಬಾಲ್​ ಇನ್ನೇನು ಸಿಕ್ಸ್​ ಗಡಿ ಸಮೀಪಿಸಬೇಕಿತ್ತು. ಆದರೆ, ಓಡಿ ಬಂದ ಜೋರ್ಡನ್​ ಬಾಲ್​ ಹಿಡಿದುಕೊಂಡರು. ಇನ್ನೇನು ಅವರು ಸಿಕ್ಸ್​ ಗಡಿ ದಾಟಬೇಕಿತ್ತು. ಆಗ, ಬಾಲ್​ ಜೇಸನ್​ ರಾಯ್​ ಕೈಗೆ ನೀಡಿದ್ದರು. ಈ ಮೂಲಕ ಸೂರ್ಯಕುಮಾರ್ ಯಾದವ್​ ಅವರನ್ನು ಔಟ್​ ಮಾಡಿದ್ದರು. ಜೋರ್ಡನ್​ ಅದ್ಭುತ ಕ್ಯಾಚ್​ಗೆ ಸೂರ್ಯಕುಮಾರ್​ ಯಾದವ್​ ಹಾಗೂ ಕೊಹ್ಲಿ ಸ್ಟನ್​ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: India vs England 5th T20I live Score: ಭಾರತದ ಭರ್ಜರಿ ಬ್ಯಾಟಿಂಗ್!

Published On - 8:34 pm, Sat, 20 March 21

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ