AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ ಕ್ರಿಕೆಟ್ ಟೀಮಿನ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್​ಗೆ ಕೊವಿಡ್-19 ಸೋಂಕು

ಶ್ರೀಲಂಕಾ ಮತ್ತು ಭಾರತ ನಡುವೆ ಮೂರು ಒಡಿಐ ಮತ್ತು ಮೂರು ಟಿ20ಐ ಪಂದ್ಯಗಳ ಸರಣಿಗಳು ಜುಲೈ 13ರಿಂದ ಆರಂಭವಾಗಲಿವೆ. ಸ್ವದೇಶಕ್ಕೆ ಮರಳಿರುವ ಶ್ರೀಲಂಕಾ ತಂಡದ ಆಟಗಾರರನ್ನೆಲ್ಲ ಕ್ವಾರಂಟೀನ್ ಮಾಡಲಾಗಿದ್ದರೆ, ಫ್ಲಾವರ್ ಅವರನ್ನು ತಂಡದ ಇತರ ಸದಸ್ಯರಿಂದ ಪ್ರತ್ಯೇಕಿಸಲಾಗಿದೆ.

ಶ್ರೀಲಂಕಾ ಕ್ರಿಕೆಟ್ ಟೀಮಿನ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್​ಗೆ ಕೊವಿಡ್-19 ಸೋಂಕು
ಗ್ರ್ಯಾಂಟ್ ಫ್ಲಾವರ್
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 09, 2021 | 1:12 AM

Share

ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಿದ ನಂತರ ಇಂಗ್ಲೆಂಡ್​ನ ಕೆಲ ಆಟಗಾರರು ಕೋವಿಡ್-19 ಸೋಂಕಿಗೊಳಗಾದರು. ಆ ಕಾರಣದಿಂದಾಗೇ ಪಾಕಿಸ್ತಾನದ ವಿರುದ್ದ ಗುರುವಾರ ಆರಂಭವಾಗಿರುವ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಅನೇಕ ಹೊಸಮುಖಗಳೊಂದಿಗೆ ಮೈದಾನಕ್ಕೆ ಇಳಿಯಬೇಕಾಯಿತು. ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮುಂದಿನ ವಾರದಿಂದ ಭಾರತದ ವಿರುದ್ಧ ಎರಡು ಸೀಮಿತ ಓವರಗಳ ಸರಣಿ ಆಡಬೇಕಿರುವ ಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್ ಕೊವಿಡ್-19 ಸೋಂಕು ತಾಕಿಸಿಕೊಂಡಿದ್ದಾರೆ. ಶ್ರೀಲಂಕಾ ತಂಡ ಇಂಗ್ಲೆಂಡ್ ಪ್ರವಾಸದಿಂದ ವಾಪಸ್ಸಾದ ಕೇವಲ 48 ಗಂಟೆಗಳ ಅವಧಿಯಲ್ಲಿ ಫ್ಲಾವರ್​ಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಶ್ರೀಲಂಕಾ ಮತ್ತು ಭಾರತ ನಡುವೆ ಮೂರು ಒಡಿಐ ಮತ್ತು ಮೂರು ಟಿ20ಐ ಪಂದ್ಯಗಳ ಸರಣಿಗಳು ಜುಲೈ 13ರಿಂದ ಆರಂಭವಾಗಲಿವೆ. ಸ್ವದೇಶಕ್ಕೆ ಮರಳಿರುವ ಶ್ರೀಲಂಕಾ ತಂಡದ ಆಟಗಾರರನ್ನೆಲ್ಲ ಕ್ವಾರಂಟೀನ್ ಮಾಡಲಾಗಿದ್ದರೆ, ಫ್ಲಾವರ್ ಅವರನ್ನು ತಂಡದ ಇತರ ಸದಸ್ಯರಿಂದ ಪ್ರತ್ಯೇಕಿಸಲಾಗಿದೆ.

‘ಶ್ರೀಲಂಕಾ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್ ಕೋವಿಡ್-19 ಸೋಂಕಿಗೊಳಗಾಗಿದ್ದಾರೆ,’ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್​ಸಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ಫ್ಲಾವರ್ ಅವರು ಸಾಧಾರಣ ಸ್ವರೂಪದ ರೋಗಲಕ್ಷಣಗಳನ್ನು ತೋರಿದ ನಂತರ ಅವರ ಪಿಸಿಆರ್ ಟೆಸ್ಟ್ ಮಾಡಿಸಲಾಗಿ ಅದು ಪಾಸಿಟಿವ್ ಬಂದಿದೆ, ಅವರಿಗೆ ಸೋಂಕು ತಾಕಿರುವುದು ಪತ್ತೆಯಾದ ಕೂಡಲೇ ಕ್ವಾರಂಟೀನ್ನಲ್ಲಿರುವ ಟೀಮಿನ ಸದಸ್ಯರು ಮತ್ತು ಸಪೋರ್ಟ್ ಸ್ಟಾಫ್​ನಿಂದ ಅವರನ್ನು ಪ್ರತ್ಯೇಕಿಸಲಾಯಿತು,’ ಎಂದು ಎಸ್ಎಲ್​ಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಫ್ಲಾವರ್ ಅವರು ವೈದ್ಯಕೀಯ ನಿಯಾಮಾವಳಿಗಳ ಪ್ರಕಾರ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರೆಲ್ಲರ ಟೆಸ್ಟ್ಗಳನ್ನೂ ಮಾಡಲಾಗಿದೆ,’ ಎಂದು ಹೇಳಿಕೆ ತಿಳಿಸಿದೆ.

ಜಿಂಬಾಬ್ವೆ ತಂಡದ ಮಾಜಿ ಆಟಗಾರರಾಗಿರುವ ಫ್ಲಾವರ್ ಇಂಗ್ಲೆಂಡ್​ನಲ್ಲಿ ಒಡಿಐ ಮತ್ತು ಟಿ20ಐ ಸರಣಿಗಳೆರಡನ್ನೂ ಸೋತ ಶ್ರೀಲಂಕಾ ತಂಡದೊಂದಿಗಿದ್ದರು.

ಫ್ಲಾವರ್ಗೆ ಹೇಗೆ ಸೋಂಕು ತಗುಲಿತು ಎನ್ನುವುದು ಎಸ್ಎಲ್​ಸಿ ಯಕ್ಷಪ್ರಶ್ನೆಯಾಗಿದೆ. ಯಾಕೆಂದರೆ ಅವರು ಆಟಗಾರರೊಂದಿಗೆ ಬಯೋ-ಬಬಲ್​ನಲ್ಲೇ ಇದ್ದರು ಮತ್ತು ಟೀಮಿನೊಂದಿಗೆ ಅದೇ ಚಾರ್ಟರ್ಡ್ ವಿಮಾನದಲ್ಲಿ ಲಂಕಾಗೆ ಮರಳಿದರು.

ಇಂಗ್ಲೆಂಡ್​ನಲ್ಲಿ ಕೊವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿದ ನಿರೋಶನ್ ಡಿಕ್ವೆಲ್ಲಾ, ಕುಸಾಲ ಮೆಂಡಿಸ್ ಮತ್ತು ಧನುಷ್ಕಾ ಗುಣತಿಲಕೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಈ ಮೂವರು ಡರ್ಹಮ್ನಲ್ಲಿ ಬಯೋ-ಬಬಲ್ನಿಂದ ಆಚೆ ಹೋಗಿ ಬೀದಿಗಳಲ್ಲಿ ತಿರುಗಾಡಿದ್ದರಿಂದ ಅವರನ್ನು ಕೂಡಲೇ ಲಂಕಾಗೆ ವಾಪಸ್ಸು ಕಳಿಸಲಾಗಿತ್ತು. ವಿಚಾರಣೆ ಮುಗಿಯುವವರಗೆ ಅವರನ್ನು ಎಲ್ಲ ಬಗೆಯ ಕ್ರಿಕೆಟ್​ನಿಂದ ಸಸ್ಪೆಂಡ್ ಮಾಡಲಾಗಿದೆ.

ಇಂಗ್ಲೆಂಡ್​ನಿಂದ  ವಾಪಸ್ಸು ಬಂದ ನಂತರ ಲಂಕಾ ಆಟಗಾರರಿಗೆ ತಮ್ಮ ಮನೆಗಳಿಗೆ ಹೋಗುವ ಅವಕಾಶ ನೀಡಲಾಗಿಲ್ಲ. ಬಬಲ್ ನಿಂದ ಬಬಲ್ಗೆ ಟ್ರಾನ್ಸ್​ಫರ್ ಅಗಿರುವುದು ಅವರ ವಿಷಯದಲ್ಲಿ ಜರುಗಿದೆ.

ಭಾರತದ ವಿರುದ್ಧ ಹೈ ಪ್ರೊಫೈಲ್ ಸರಣಯಲ್ಲಿ ಆಡಬೇಕಿರುವುದರಿಂದ ಲಂಕಾ ಆಟಗಾರರನ್ನು ಪಂಚತಾರಾ ಸೌಲಭ್ಯದ ಸ್ಥಳವೊಂದರಲ್ಲಿ ಕ್ವಾರಂಟೀನ್ ಮಾಡಲಾಗಿದೆ. ಸದರಿ ಸರಣಿಯು ಹಣಕಾಸಿನ ತೀವ್ರ ಅಭಾವ ಎದುರಿಸುತ್ತಿರುವ ಶ್ರೀಲಂಕಾಗೆ ಉತ್ತಮ ಆದಾಯ ತಂದುಕೊಡುವ ನಿರೀಕ್ಷೆಯಿದೆ.

ಆಟಗಾರರು ಮತ್ತು ಲಂಕಾ ಕ್ರಿಕೆಟ್ ಮಂಡಳಿ ನಡುವೆ ಸಂಭಾವನೆಗೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದ್ದಾಗ್ಯೂ, 30 ಟಾಪ್ ಆಟಗಾರರ ಪೈಕಿ 29 ಆಟಗಾರರಿಗೆ ರಿಟೇನರ್ಶಿಪ್ ಕಂಟ್ರ್ಯಾಕ್ಟ್ ಒಂದಕ್ಕೆ ಸಹಿ ಮಾಡಿಸಿಕೊಳ್ಳುವಲ್ಲಿ ಮಂಡಳಿ ಸಫಲವಾಗಿದೆ. ಸಹಿ ಹಾಕದ ಒಬ್ಬನೇ ಆಟಗಾರನೆಂದೆ ನಿವೃತ್ತಿ ಘೋಷಿಸುವ ಬಗ್ಗೆ ಯೋಚಿಸುತ್ತಿರುವ ಏಂಜೆಲೊ ಮ್ಯಾಥ್ಯೂಸ್.

ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ನಡೆಯುವ ಎಲ್ಲ 6 ಪಂದ್ಯಗಳಲ್ಲಿ ಆಡುವ ಅವಕಾಶ ಸೂರ್ಯಕುಮಾರ್ ಯಾದವ್​ಗೆ ನೀಡಬೇಕು: ವಿವಿಎಸ್ ಲಕ್ಷ್ಮಣ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ