AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಲಿನ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಒಂದಷ್ಟು ಓವರ್​ಗಳನ್ನು ಎಸೆಯುವಂತಿರಬೇಕು: ಬದ್ರಿನಾಥ್

ಈಗಿನ ಭಾರತದ ಕ್ರಿಕೆಟ್ ಟೀಮು ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಅವರಂಥ ಬ್ಯಾಟಿಂಗ್ ಅಲ್​ರೌಂಡರ್​ಗಳ ಕೊರತೆ ಅನುಭವಿಸುತ್ತಿದೆ ಮತ್ತು ಅದು ಟೀಮಿನ ಸಮತೋಲನದ ಮೇಲೆ ಭಾರೀ ಪ್ರಭಾವವನ್ನುಂಟು ಮಾಡಿದೆಯೆಂದು ಭಾರತದ ಮಾಜಿ ಆಟಗಾರ ಎಸ್ ಬದ್ರಿನಾಥ್ ಹೇಳುತ್ತಾರೆ.

ಮೇಲಿನ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಒಂದಷ್ಟು ಓವರ್​ಗಳನ್ನು ಎಸೆಯುವಂತಿರಬೇಕು: ಬದ್ರಿನಾಥ್
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 01, 2020 | 4:05 PM

Share

ಎಸ್ ಬದ್ರಿನಾಥ್

ಅಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಭಾರತ ಕಂಡ ಎರಡು ದಯನೀಯ ಸೋಲುಗಳಿಗೆ ಕಾರಣ ಅಡುವ ಇಲೆವೆನ್​ನಲ್ಲಿ ಆರನೇ ಬೌಲರ್​ನ ಅಲಭ್ಯತೆ ಎಂದು ಹೇಳಲಾಗುತ್ತಿದೆ. ಎರಡನೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಯಾಂಕ್ ಅಗರ್​ವಾಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನ ಆರನೇ ಬೌಲರ್​ ಆಗಿ ಉಪಯೋಗಿಸಿದರಾದರೂ ಅದು ಅವರ ಯೋಜನೆಯ ಭಾಗಕ್ಕಿಂತ ಹತಾಷೆಯ ಪ್ರತೀಕವಾಗಿತ್ತು. ಹಲವಾರು ಮಾಜಿ ಆಟಗಾರರು ಸಹ ಟೀಮಿನಲ್ಲಿ ಆರನೇ ಬೌಲರ್​ ಯಾಕಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ಓದುಗರಿಗೆ ಎಸ್ ಬದ್ರಿನಾಥ್ ನೆನಪಿರಬಹುದು. ಭಾರಿ ಪ್ರತಿಭಾವಂತ ಬ್ಯಾಟ್ಸ್​ಮನ್ ಆಗಿದ್ದರೂ ಬದ್ರಿನಾಥ್ ಭಾರತದ ಪರ ಕೇವಲ 2 ಟೆಸ್ಟ್​ಗಳನ್ನು ಮಾತ್ರ ಆಡಿದರು. ಹಾಗೆಯೆ 7 ಒಂದು ದಿನದ ಅಂತರರಾಷ್ಟ್ರೀಯ ಮತ್ತು 1 ಟಿ20ಐ ಪಂದ್ಯದಲ್ಲೂ ತಮಿಳುನಾಡಿನ ಈ ಆಟಗಾರ ಭಾರತವನ್ನು ಪ್ರತಿನಿಧಿಸಿದರು. ಈಗ ತಮಿಳು ಕ್ರೀಡಾ ಚ್ಯಾನಲೊಂದಕ್ಕೆ ವೀಕ್ಷಕ ವಿವರಣೆಕಾರರಾಗಿರುವ ಬದ್ರಿ ಸಹ ಒಂದು ದಿನದ ಪಂದ್ಯಗಳಲ್ಲಿ ಆರನೇ ಬೌಲರ್ ಅವಶ್ಯಕತೆಯಿದೆ, ಭಾರತ ಈ ಕೊರತೆಯಿಂದಾಗೇ ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಶೋಚನೀಯವಾಗಿ ಸೋತಿದೆ ಎಂದು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ

‘‘ಭಾರತಕ್ಕೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಅವರಂಥ ಆಟಗಾರರು ಮೇಲಿನ ಕ್ರಮಾಂಕದಲ್ಲಿ ಬೇಕಾಗಿದ್ದಾರೆ. ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟಿಂಗ್ ದುರ್ಬಲವಾಗಿದೆ ಅಂತ ನಾನು ಹೇಳುತ್ತಿಲ್ಲ. ಸಚಿನ್, ಸೆಹ್ವಾಗ್ ಮತ್ತು ಸೌರವ್ ತಮ್ಮ ಉತ್ಕೃಷ್ಟ ಬ್ಯಾಟಿಂಗ್ ಜೊತೆಗೆ 3-4 ಓವರ್​ಗಳನ್ನು ಸಹ ಬೌಲ್ ಮಾಡುತ್ತಿದ್ದರು. ಹಾಗಾಗಿ, ಟೀಮಿಗೆ ಆರನೇ ಬೌಲರ್​ನ ಕೊರತೆ ಎದುರಾಗುತ್ತಿರಲಿಲ್ಲ. ಪ್ರಮುಖ ಬೌಲರ್​ನೊಬ್ಬ ಲಯ ಮತ್ತು ನಿಯಂತ್ರಣ ಕಳೆದುಕೊಂಡು ರನ್​ಗಳನ್ನು ಸೋರಿಸುತ್ತಿದ್ದರೆ, ಟೀಮಿನ ಕ್ಯಾಪ್ಟನ್ ಇಂಥ ಬೌಲರ್​ಗಳಿಂದ 10 ಓವರ್​ಗಳನ್ನು ಬೌಲ್ ಮಾಡಿಸಬಹುದು. ಪ್ರಮುಖ ಬೌಲರ್ ಆಗಿರುವ ಮಾತ್ರಕ್ಕೆ ಅವನು ತನ್ನ ಕೋಟಾದ 10 ಓವರ್​ಗಳನ್ನು ಬೌಲ್ ಮಾಡಲೇಬೇಕು ಅಂತೇನಿಲ್ಲ. ಈಗಿನ ಟೀಮಿನಲ್ಲಿ ಮೇಲಿನ ಕ್ರಮಾಂಕದ ಯಾವುದೇ ಬ್ಯಾಟ್ಸ್​ಮನ್ ಬೌಲಿಂಗ್ ಮಾಡುವುದಿಲ್ಲ. ಹಾಗಾಗಿ ಭಾರತ ಸಚಿನ್, ಸೆಹ್ವಾಗ್ ಮತ್ತು ಸೌರವ್ ಅವರಂಥ ಆಟಗಾರರ ಸೇವೆಯನ್ನು ಮಿಸ್ ಮಾಡಿಕೊಳ್ಳುತ್ತಿದೆ,’’ ಎಂದು ಬದ್ರಿ ಹೇಳಿದ್ದಾರೆ.

ಬದ್ರಿನಾಥ್ ಹೇಳುತ್ತಿರುವುದು ಅತ್ಯಂತ ಸಮಂಜಸವಾಗಿದೆ. ಯಾಕೆ ಅಂತ ನೀವೊಮ್ಮೆ ಗಮನಿಸಿ. ಸಚಿನ್ ತಾವಾಡಿದ 463 ಒಂದು ದಿನ ಪಂದ್ಯಗಳಲ್ಲಿ 154 ವಿಕೆಟ್ ಪಡೆದಿದ್ದಾರೆ. ಹಾಗೆಯೇ, ಸೆಹ್ವಾಗ್ 251 ಪಂದ್ಯಗಳಲ್ಲಿ 96 ಮತ್ತು ಸೌರವ್ 311 ಪಂದ್ಯಗಳಲ್ಲಿ 100 ವಿಕೆಟ್​ಗಳನ್ನು ಪಡೆದಿದ್ದಾರೆ. ಅಂದರೆ, ಟನ್​ಗಟ್ಟಲೆ ರನ್ ಗಳಿಸುವುದರೊಂದಿಗೆ ಈ ತ್ರಿವಳಿಗಳು ವಿಕೆಟ್​ಗಳನ್ನೂ ಕಬಳಿಸುತ್ತಿದ್ದರು. ಇವರಂಥ ಆಟಗಾರರ ಕೊರತೆ ಟೀಮ್ ಇಂಡಿಯಾ ಎದುರಿಸುತ್ತಿರುವುದರಿಂದ ಟೀಮಿನ ಸಮತೋಲನ ಏರುಪೇರಾಗಿದೆ ಎಂದು ಬದ್ರಿ ಹೇಳುತ್ತಾರೆ.

‘‘ಒಂದು ಪಕ್ಷ ರೋಹಿತ್ ಶರ್ಮ ಟೀಮಿಗೆ ವಾಪಸ್ಸಾದರೂ, ಆರನೇ ಬೌಲರ್​ನ ಕೊರತೆ ನೀಗಿಸಲಾರರು. ಯಾಕೆಂದರೆ ಇತ್ತೀಚಿಗೆ ಅವರು ಬೌಲಿಂಗ್ ಮಾಡುವುದನ್ನು ನಿಲ್ಲಿಸಿದ್ದಾರೆ. ಮೊದಲೆಲ್ಲ ವಿರಾಟ್​ ಕೊಹ್ಲಿ ಸಹ ಬೌಲ್ ಮಾಡುತ್ತಿದ್ದರು, ಈಗ ಮಾಡುತ್ತಿಲ್ಲ. ಆಸ್ಟ್ರೇಲಿಯ ತಂಡವನ್ನು ಗಮನಿಸಿ. ಮಾರ್ಕಸ್ ಸ್ಟಾಯ್ನಿಸ್ 5-6 ಓವರ್​ಗಳನ್ನು ಸಲೀಸಾಗೆ ಎಸೆಯುತ್ತಾರೆ. ಗ್ಲೆನ್ ಮ್ಯಾಕ್ಸ್​ವೆಲ್ ಸಹ 6-7 ಒವರ್​ಗಳನ್ನು ಬೌಲ್ ಮಾಡುತ್ತಾರೆ. ಭಾರತ ಈ ಆಯಾಮದಲ್ಲಿ ಸಮಸ್ಯೆ ಎದುರಿಸುತ್ತಿದೆ,’’ ಎಂದು ಬದ್ರಿ ಹೇಳಿದ್ದಾರೆ.

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್