AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಯ ನಾಯಕತ್ವ ನನಗಂತೂ ಅರ್ಥವಾಗುತ್ತಿಲ್ಲ: ಗೌತಮ್ ಗಂಭೀರ್

ಭಾರತದ ಮಾಜಿ ಆರಂಭ ಆಟಗಾರ ಗೌತಮ್ ಗಂಭೀರ್ ಮತ್ತೊಮ್ಮೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಹರಿ ಹಾಯ್ದಿದ್ದಾರೆ. ಕೊಹ್ಲಿ, ಬೌಲರ್​ಗಳನ್ನು ನಿಭಾಯಿಸುವಲ್ಲಿ ಎಡವಿರುವುದೇ ಭಾರತ ಒಂದು ದಿನದ ಪಂದ್ಯಗಳ ಸರಣಿ ಸೋಲಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಕೊಹ್ಲಿಯ ನಾಯಕತ್ವ ನನಗಂತೂ ಅರ್ಥವಾಗುತ್ತಿಲ್ಲ: ಗೌತಮ್ ಗಂಭೀರ್
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 30, 2020 | 4:17 PM

Share

ಆಸ್ಟ್ರೇಲಿಯಾ ವಿರುದ್ಧ50-ಓವರ್​ಗಳ ಸರಣಿಯಲ್ಲಿ ಭಾರತದ ಸವಾಲು ಯಾವುದೇ ಸವಾಲೊಡ್ಡದೆ ಅಂತ್ಯಗೊಂಡಿದೆ. ಸಿಡ್ನಿಯಲ್ಲಿ ನಡೆದ ಎರಡನೇ ಪಂದ್ಯವನ್ನೂ ಸುಲಭವಾಗಿ ಸೋತ ಭಾರತ ಬುಧವಾರದಂದು ನಡೆಯುವ ಮೂರನೆ ಹಾಗೂ ಕೊನೆಯ ಪಂದ್ಯವನ್ನು ಔಪಚಾರಿಕತೆಗಾಗಿ ಆಡಲಿದೆ. ಭಾರತೀಯ ಬೌಲರ್​ಗಳು ಸತತ ಎರಡನೆ ಬಾರಿಯೂ ಅತಿಥೇಯ ಬ್ಯಾಟ್ಸ್​ಮನ್​ಗಳನ್ನು 370ಕ್ಕಿಂತ ಹೆಚ್ಚು ರನ್ ಗಳಿಸಲು ಬಿಟ್ಟಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ದೊಡ್ಡ ಮೊತ್ತಗಳನ್ನು ಬೆನ್ನಟ್ಟುವಾಗ ಜೊತೆಯಾಟಗಳು ಮುಖ್ಯವಾಗುತ್ತವೆ ಮತ್ತು ಮೇಲಿನ ಕ್ರಮಾಂಕದ ಆಟಗಾರರಲ್ಲಿ ಇಬ್ಬರು ಬಿರುಸಿನ ಆಟವಾಡಲೇಬೇಕಾಗುತ್ತದೆ. ಎರಡನೆ ಪಂದ್ಯದಲ್ಲಿ ಅಂಥ ಪ್ರಯತ್ನಗಳು ಕಂಡುಬಂದವಾದರೂ ಅವು ಸಾಕೆನಿಸಲಿಲ್ಲ.

ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಕೆಗಳು ಶುರವಾಗುತ್ತಿದ್ದಂತೆಯೇ, ಭಾರತದ ಮಾಜಿ ಆರಂಭ ಆಟಗಾರ ಗೌತಮ್ ಗಂಭೀರ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ನಡುವಿನ

ಜಸ್ಪ್ರೀತ್ ಬುಮ್ರಾ

ಕೋಳಿ ಜಗಳಕ್ಕೆ ನಾಂದಿ ಹಾಡಿದೆ. ಹಲವಾರು ವರ್ಷಗಳಿಂದ ಇವರಿಬ್ಬರ ನಡುವೆ ವಾದ-ವಿವಾದಗಳು ನಡೆಯುತ್ತಲೇ ಬಂದಿವೆ. ಕೊಹ್ಲಿಯನ್ನು ಟೀಕಿಸಲು ಯಾವುದೇ ಅವಕಾಶವನ್ನು ಬಿಡದ ಗಂಭೀರ್, ಈ ಬಾರಿ ಅವರ ನಾಯಕತ್ವ ಮತ್ತು ಬೌಲರ್​ಗಳನ್ನು ನಿಭಾಯಿಸುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಟೀಮಿನ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಮೊದಲ ಸ್ಪೆಲ್​ನಲ್ಲಿ ಕೇವಲ 2 ಓವರ್​ಗಳನ್ನು ಬೌಲ್ ಮಾಡಿಸಿ ಆಕ್ರಮಣದಿಂದ ಸರಿಸಿದ್ದು ಯಾಕೆ ಅಂತ ಅರ್ಥವಾಗಲಿಲ್ಲ, ಅದು ಕಳಪೆ ನಾಯಕತ್ವ ಎಂದು ಗಂಭೀರ್ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಗೌತಮ್ ಗಂಭೀರ್

‘‘ಬುಮ್ರಾ ಅವರಿಂದ ಕೇವಲ 2 ಓವರ್​ಗಳನ್ನು ಯಾಕೆ ಬೌಲ್ ಮಾಡಿಸಲಾಯಿತೆಂದು ನನಗೆ ಅರ್ಥವಾಗಲಿಲ್ಲ. ನನ್ನ ಪ್ರಾಮಾಣಿಕ ಆನಿಸಿಕೆ ಪ್ರಕಾರ ಅದು ಕಳಪೆ ನಾಯಕತ್ವ. 50 ಓವರ್​ಗಳ ಪಂದ್ಯಗಳಲ್ಲಿ ಸಾಮಾನ್ಯವಾಗಿ, ಟೀಮಿನ ಪ್ರಮುಖ ಬೌಲರ್​ನಿಂದ 4-3-3 ಓವರ್​ಗಳ ಸ್ಪೆಲ್​ನಲ್ಲಿ ಉಪಯೋಗಿಸಲಾಗುತ್ತದೆ. ಮೊದಲ ಸ್ಪೆಲ್​ನಲ್ಲಿ ಪ್ರಿಮೀಯರ್ ಬೌಲರ್​ನಿಂದ ಕನಿಷ್ಠ 4 ಓವರ್​ಗಳನ್ನು ಬೌಲ್ ಮಾಡಿಸಲೇಬೇಕು. ಎದುರಾಳಿ ಬ್ಯಾಟ್ಸ್​ಮನ್​ಗಳು ಬೌಲರ್​ಗಳ ಮಾರಣಹೋಮ ನಡೆಸುವ ಮನಸ್ಥಿತಿಯಲ್ಲಿದ್ದರೆ ಅವರನ್ನು ತಡೆಯಲು ಆರಂಭಿಕ ಓವರರಗಳಲ್ಲೇ ವಿಕೆಟ್​ಗಳನ್ನು ಪಡೆಯಬೇಕಾಗುತ್ತದೆ, ಆದರೆ ಕೊಹ್ಲಿ ತಮ್ಮ ನಂಬರ್​ ವನ್ ಬೌಲರ್​ನಿಂದ ಕೇವಲ 2 ಓವರ್ ಬೌಲ್ ಮಾಡಿಸಿ ದಾಳಿಯಿಂದ ಹಿಂದೆ ಸರಿಸುತ್ತಾರೆ. ನನಗಂತೂ ಅವರ ಯೋಜನೆ ಅರ್ಥವಾಗಲಿಲ್ಲ ಮತ್ತು ವಿವರಿಸಲೂ ಸಾಧ್ಯವಾಗುತ್ತಿಲ್ಲ. ರವಿವಾರದಂದು ಭಾರತ ಆಡಿದ್ದು ಟಿ20 ಪಂದ್ಯವಲ್ಲ. ನನ್ನ ಪ್ರಕಾರ ಇದು ಕಳಪೆ ನಾಯಕತ್ವವಲ್ಲದೆ ಮತ್ತೇನೂ ಅಲ್ಲ,’’ ಎಂದು ಪಂದ್ಯದ ನಂತರ ಕ್ರೀಡಾ ವೆಬ್​ಸೈಟೊಂದರ ಜೊತೆ ಮಾತಾಡುವಾಗ ಗಂಭೀರ್ ಹೇಳಿದರು.

ಒಂದು ದಿನದ ಪಂದ್ಯಗಳಿಗೆ ಅರನೇ ಬೌಲರ್​ ರೂಪದಲ್ಲಿ ಮತ್ತೊಬ್ಬ ಆಲ್​ರೌಂಡರ್​ನ್ನು ಆರಿಸದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಸಹ ಪ್ರಮಾದವೆಸಗಿದೆ ಎಂದು ಗಂಭೀರ್ ಹೇಳಿದರು.

‘‘ಹಾರ್ದಿಕ್ ಪಾಂಡ್ಯ ಬೌಲ್ ಮಾಡಲಾರರು ಅಂತ ಗೊತ್ತಿದ್ದರೂ ಟೀಮಿನಲ್ಲಿ ಆರನೇ ಬೌಲರ್​ ಅಗಿ ಮತ್ತೊಬ್ಬ ಆಲ್​ರೌಂಡರ್​ನನ್ನು ಆರಿಸದಿರುವುದು ಆಯ್ಕೆ ಮಂಡಳಿ ಎಸಗಿರುವ ದೊಡ್ಡ ತಪ್ಪು. ಶಿವಮ್ ದುಬೆ, ವಾಷಿಂಗ್ಟನ್ ಸುಂದರ್ ಅವರು ಟೀಮಿನಲ್ಲಿಲ್ಲದಿರುವುದರಿಂದ ಯಾರು ಲಭ್ಯರಿದ್ದಾರೋ ಅವರನ್ನು ಆರನೇ ಬೌಲರ್​ ಆಗಿ ರವಿವಾರ ಆಡಿಸಬೇಕಿತ್ತು. ಒಬ್ಬ ಆಟಗಾರನ ಸಾಮರ್ಥ್ಯವನ್ನು ನೀವು ಗುರುತಿಸದೆ ಹೋದರೆ ಅವನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಏಗಬಲ್ಲ ಅಂತ ತಿಳಿಯುವುದು ಹೇಗೆ? ಅರನೇ ಬೌಲರ್, ಆಲ್​ರೌಂಡರ್​ರಗಳ ವಿಷಯವನ್ನು ಆಯ್ಕೆ ಮಂಡಳಿ ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದಕರ. ಈ ವಿಷಯ ಮಂಡಳಿಯ ಸದಸ್ಯರು ಮತ್ತು ಟೀಮ್ ಇಂಡಿಯಾದ ಅಟಗಾರರಿಗೂ ಬಹಳ ದಿನಗಳ ಕಾಲ ನೋಯಿಸಲಿದೆ,’’ ಎಂದು ಗಂಭೀರ್ ಹೇಳಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ