AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England | ಗಾವಸ್ಕರ್ ಫೋನ್ ಮಾಡಿದರೆ ಇಲ್ಲವೇ ಮೆಸೇಜ್ ಕಳಿಸಿದರೆ ನಾನು ಪ್ರತಿಕ್ರಿಯಿಸಲು ಸಿದ್ಧನಿದ್ದೇನೆ: ಬೇರ್​ಸ್ಟೋ

ಒಂದು ದಿನದ ಪಂದ್ಯಗಳ ಸರಣಿಯ ಇದುವರೆಗೆ ನಡೆದಿರುವ ಎರಡು ಪಂದ್ಯಗಳಲ್ಲಿ 94 ಮತ್ತು 124 ರನ್​ಗಳ ಇನ್ನಿಂಗ್ಸ್​ಗಳನ್ನು ಆಡಿರುವ ಬೇರ್​ಸ್ಟೋ ನಿಸ್ಸಂಶಯವಾಗಿ ಅದ್ಭುತವಾದ ಫಾರ್ಮ್​ನಲ್ಲಿದ್ದಾರೆ. ಆದರೆ ಇದಕ್ಕೆ ಮೊದಲು ನಡೆದ ಟೆಸ್ಟ್​ಗಳಲ್ಲಿ ಅವರು ಬ್ಯಾಟಿಂಗ್ ಗೊತ್ತಿಲ್ಲದವರ ರೀತಿಯಲ್ಲಿ ಆಡಿದರು.

India vs England | ಗಾವಸ್ಕರ್ ಫೋನ್ ಮಾಡಿದರೆ ಇಲ್ಲವೇ ಮೆಸೇಜ್ ಕಳಿಸಿದರೆ ನಾನು ಪ್ರತಿಕ್ರಿಯಿಸಲು ಸಿದ್ಧನಿದ್ದೇನೆ: ಬೇರ್​ಸ್ಟೋ
ಜಾನಿ ಬೇರ್​ಸ್ಟೋ
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 27, 2021 | 6:19 PM

Share

ಪುಣೆ:  ಭಾರತ ಮತ್ತು ಇಂಗ್ಲೆಂಡ್ ನಡುವೆ ಪುಣೆಯಲ್ಲಿ ನಡೆದ ಎರಡನೇ ಒಂದು ದಿನದ ಆಂತರರಾಷ್ಟ್ರೀಯ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಪ್ರವಾಸಿ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತ ಆರಂಭ ಆಟಗಾರ ಜಾನಿ ಬೇರ್​ಸ್ಟೋ ಅವರು, ಭಾರತದ ಲೆಜೆಂಡರಿ ಆರಂಭ ಆಟಗಾರ ಸುನಿಲ್ ಗಾವಸ್ಕರ್ ತನ್ನ ಬಗ್ಗೆ ಟೆಸ್ಟ್ ಕ್ರಿಕೆಟ್​ನಲ್ಲಿ ‘ಒಲ್ಲದ ಮನಸ್ಸಿನ ಬ್ಯಾಟ್ಸ್​ಮನ್’ ಅಂತ ಮಾಡಿರುವ ಕಾಮೆಂಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗಾವಸ್ಕರ್ ಅವರು ತನಗೆ ಕರೆ ಮಾಡಿದಲ್ಲಿ ಅಥವಾ ಮೆಸೇಜ್ ಕಳಿಸಿದಲ್ಲಿ ಅವರೊಂದಿಗೆ ಮಾತಾಡಲು ಅಥವಾ ಅವರ ಮಾಡಿರುವ ಕಾಮೆಂಟ್​ ಕುರಿತು ಚರ್ಚೆ ಮಾಡಲು ಸಿದ್ಧನಿರುವುದಾಗಿ ಆಂಗ್ಲ ಆಟಗಾರ ಹೇಳಿದ್ದಾರೆ. ಅವರು ತನ್ನ ಬಗ್ಗೆ ನಿಖರವಾಗಿ ಏನು ಹೇಳಿದ್ದಾರೆ ಅನ್ನುವುದನ್ನು ಕೇಳಿಸಿಕೊಂಡಿಲ್ಲ ಎಂದು ಬೇರ್​ಸ್ಟೋ ಹೇಳಿದ್ದಾರೆ.

‘ಮೊದಲನೆಯದಾಗಿ ನಾನು ಹೇಳುವುದಿಷ್ಟು, ಗಾವಸ್ಕರ್ ನನ್ನ ಬಗ್ಗೆ ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಎರಡನೇಯದಾಗಿ, ನಮ್ಮ ಮಧ್ಯೆ ಯಾವುದೇ ತೆರನಾದ ಸಂಪರ್ಕ, ಮಾತುಕತೆ ಇಲ್ಲದಿರುವಾಗ ಅವರು ನನ್ನ ಕುರಿತು ಕಾಮೆಂಟ್​ ಮಾಡುವುದು ಹೇಗೆ ಸಾಧ್ಯ ಎಂದು ತಿಳಿದುಕೊಳ್ಳಲು ಉತ್ಸುನಾಗಿದ್ದೇನೆ, ಎಂದು ಬೇರ್​ಸ್ಟೋ ಪುಣೆಯಲ್ಲಿ ಶುಕ್ರವಾರ ಹೇಳಿದರು.

‘ಈ ಹಿನ್ನೆಲೆಯಲ್ಲಿ ಅವರು ನನಗೆ ರಿಂಗ್ ಮಾಡಿದರೆ ಅದನ್ನು ನಾನು ಸ್ವಾಗತಿಸುತ್ತೇನೆ; ನನಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಅಡುವ ಆಸಕ್ತಿ ಸದಾ ಇದ್ದು ಆ ಫಾರ್ಮಟ್​ನಲ್ಲಿ ಅಡುವುದನ್ನು ನಾನು ಬಹಳ ಆನಂದಿಸುತ್ತೇನೆ ಅಂತ ಹೇಳಲು ಇಚ್ಛೆಯುಳ್ಳವನಾಗಿದ್ದೇನೆ. ನಾನು ಈಗಾಗಲೇ ಹೇಳಿರುವಂತೆ ನನ್ನ ಫೋನ್ ಆನ್ ಮೋಡ್​ನಲ್ಲಿರುತ್ತದೆ. ಅವರು ಬಯಸಿದಲ್ಲಿ ನನಗೆ ಕಾಲ್ ಇಲ್ಲವೇ ಮೆಸೇಜ್ ಮಾಡಬಹುದು,’ ಎಂದು ಬೇರ್​ಸ್ಟೋ ಹೇಳಿದರು.

ಒಂದು ದಿನದ ಪಂದ್ಯಗಳ ಸರಣಿಯ ಇದುವರೆಗೆ ನಡೆದಿರುವ ಎರಡು ಪಂದ್ಯಗಳಲ್ಲಿ 94 ಮತ್ತು 124 ರನ್​ಗಳ ಇನ್ನಿಂಗ್ಸ್​ಗಳನ್ನು ಆಡಿರುವ ಬೇರ್​ಸ್ಟೋ ನಿಸ್ಸಂಶಯವಾಗಿ ಅದ್ಭುತವಾದ ಫಾರ್ಮ್​ನಲ್ಲಿದ್ದಾರೆ. ಆದರೆ ಇದಕ್ಕೆ ಮೊದಲು ನಡೆದ ಟೆಸ್ಟ್​ಗಳಲ್ಲಿ ಅವರು ಬ್ಯಾಟಿಂಗ್ ಗೊತ್ತಿಲ್ಲದವರ ರೀತಿಯಲ್ಲಿ ಆಡಿದರು. ತಾವಾಡಿದ ನಾಲ್ಕು ಇನ್ನಿಂಗ್ಸ್​ಗಳಲ್ಲಿ ಅವರು ಮೂರು ಬಾರಿ ಸೊನ್ನೆಗೆ ಔಟಾದರು. ಭಾರತದ ಸ್ಪಿನ್ನರ್​ಗಳ ಎದುರು ಅವರು ಪರದಾಡಿದ್ದು ಸುಳ್ಳಲ್ಲ.

sunil gavaskar

ಸುನಿಲ್ ಗವಾಸ್ಕರ್

ಅಹಮದಾಬಾದನಲ್ಲ್ಲಿ ನಡೆದ ನಾಲ್ಕನೇ ಟೆಸ್ಟ್​ನಲ್ಲಿ ಬೇರ್​ಸ್ಟೋ ಔಟಾದ ನಂತರ ಕಾಮೆಂಟರಿ ಬಾಕ್ಸ್​ನಲ್ಲಿದ್ದ ಗಾವಸ್ಕರ್, ಬೇರ್​ಸ್ಟೋ ಅವರನ್ನು ಕುರಿತು ‘ಒಲ್ಲದ ಮನಸ್ಸಿನ ಟೆಸ್ಟ್​ ಬ್ಯಾಟ್ಸ್​ಮನ್,’ ಅಂತ ಕಾಮೆಂಟ್​ ಮಾಡಿದ್ದು ಇಂಗ್ಲೆಂಡ್​ ಮಾಧ್ಯಮಗಳಲ್ಲಿ ತೀವ್ರ ಸ್ವರೂಪದ ಚರ್ಚೆಗೊಳಗಾಯಿತು. ಟೆಸ್ಟ್​ ಕ್ರಿಕೆಟ್​ನಲ್ಲಿ ಬೇರ್​ಸ್ಟೋ ಅವರ ಭವಿಷ್ಯದ ಬಗ್ಗೆಯೂ ಅಪಸ್ವರಗಳು ಕೇಳಿಬಂದವು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ಶುಕ್ರವಾರದಂದು ನಡೆದ ಎರಡನೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬೇರ್​ಸ್ಟೋ ಭಾರತದ ಬೌಲರ್​ಗಳನ್ನು ಮನಸಾರೆ ದಂಡಿಸಿ ಕೇವಲ 112 ಎಸೆತಗಳಲ್ಲಿ 124 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ 7 ಸಿಕ್ಸ್ ಮತ್ತು 11 ಫೋರ್​ಗಳಿದ್ದವು. ಬೇರ್​ಸ್ಟೋ ಮತ್ತು ಕೇವಲ 1 ರನ್ನಿಂದ ಶತಕ ತಪ್ಪಿಸಿಕೊಂಡ ಬೆನ್ ಸ್ಟೋಕ್ಸ್ ಭಾರತದ 337 ರನ್​ಗಳು ಬೃಹತ್ ಮೊತ್ತವನ್ನು ನೀರು ಕುಡಿದಷ್ಟು ಸುಲಭವಾಗಿ ದಾಟಲು ತಮ್ಮ ತಂಡಕ್ಕೆ ನೆರವಾದರು.

ಎರಡನೇ ಪಂದ್ಯವನ್ನು ಗೆದ್ದೇ ತೀರಬೇಕೆಂಬ ಛಲದೊಂದಿಗೆ ಭಾರತದ ಮೊತ್ತ ಚೇಸ್ ಮಾಡಿದ ಬೇರ್​ಸ್ಟೋ ಮತ್ತು ಜೇಸನ್ ರಾಯ್ ಅವರ ಆರಂಬಿಕ ಜೋಡಿ ಮೊದಲ 19 ಓವರ್​ಗಳಲ್ಲಿ 110 ರನ್ ಸೇರಿಸಿತು. ಅದಾದ ಮೇಲೆ ಬೇರ್​ಸ್ಟೋ ಜೊತೆಗೂಡಿದ ಸ್ಟೋಕ್ಸ್ ಕೇವಲ 19 ಓವರ್​ಗಳಲ್ಲಿ175 ರನ್ ಸೇರಿಸಿದರು. ತಾನು ಪ್ರದರ್ಶಿಸಿದ ನಿರ್ಭೀತಿಯ ಸ್ಟ್ರೋಕ್​ಪ್ಲೇಗೆ ತಂಡದ ಬ್ಯಾಟಿಂಗ್ ಆಳ ಕಾರಣವೆಂದು ಬೇರ್​ಸ್ಟೋ ಪಂದ್ಯ ಮುಗಿದ ನಂತರ ನಡೆದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘10 ಇಲ್ಲವೇ 11 ನೇ ಕ್ರಮಾಂಕದಲ್ಲಿ ಆದಿಲ್ ರಾಶಿದ್ ಆಡುತ್ತಾರೆ. ರಾಶಿದ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 10 ಶತಕಗಳನ್ನು ಬಾರಿಸಿದ್ದಾರೆ. ಬ್ಯಾಟಿಂಗ್​ನಲ್ಲಿ ಈ ಮಟ್ಟಿನ ಆಳ ಬೇರೆ ಯಾವುದೇ ತಂಡದಲ್ಲಿ ಕಾಣಸಿಗದು. ನಾವು ನಿರ್ಭಯದಿಂದ ಹೊಡೆತಗಳನ್ನು ಬಾರಿಸುವುದಕ್ಕೆ ಇದೇ ಕಾರಣ,’ ಎಂದು ಬೇರ್​ಸ್ಟೋ ಹೇಳಿದರು.

‘ಮೊಯೀನ್ ಅಲಿ ಮತ್ತು ಕರನ್​ ಸಹೋದರರು ನಮ್ಮ ತಂಡದ ಪವರ್-ಹಿಟ್ಟರ್​ಗಳು. ಈ ಪಟ್ಟಿ ಹೀಗೆ ಮುಂದುವರಿಯುತ್ತಲೇ ಹೊಗುತ್ತದೆ. ಹೌದು, ಈ ಬಗೆಯ ಬ್ಯಾಟಿಂಗ್ ಲೈನಪ್ ನಿಮ್ಮ ಆತ್ಮವಿಶ್ವಾಸವನ್ನು ನೂರುಪಟ್ಟು ಹೆಚ್ಚಿಸುತ್ತದೆ,’ ಎಂದು ಬೇರ್​ಸ್ಟೋ ಹೇಳಿದರು.

ಇದನ್ನೂ ಓದಿ: India vs England | ಕ್ರಿಕೆಟನ್ನೇ ವೃತ್ತಿಬದುಕು ಮಾಡಿಕೊಳ್ಳುವಂತೆ ಯಾರೂ ನನಗೆ ಸಲಹೆ ನೀಡಲಿಲ್ಲ: ಪ್ರಸಿಧ್ ಕ್ರಿಷ್ಣ

Published On - 6:17 pm, Sat, 27 March 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ