WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!

ಬಹುತೇಕ ಎಲ್ಲ ಚೊಚ್ಚಲ ವಿಶ್ವ ಕಪ್​ಗಳನ್ನೂ ಗೆದ್ದು ಭಾರತ ದಾಖಲೆ ನಿರ್ಮಿಸಿದೆ. ಈ ಬಾರಿಯೂ ಅಷ್ಟೇ ಅದ್ಭುತ ಫಾರಂನೊಂದಿಗಿರುವ ಭಾರತ ತಂಡದ ಹಾಟ್​ ಫೇವರೀಟ್ ಎಂದು ಗುರುತಿಸಿಕೊಂಡಿದೆ. ಅಂತಹುದರಲ್ಲಿ ಮೈಕೆಲ್​ ವಾನರ (Former England captain Michael Vaughan) ವ್ಯಂಗ್ಯವಾಡಿದರೆ ನೆಟ್ಟಿಗರು ಸುಮ್ಮನೇ ಬಿಟ್ಟಾರಾ? ಒಂದೊಂದೇ ನೋಡಿ...

WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!
WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!
ಸಾಧು ಶ್ರೀನಾಥ್​

Updated on: Jun 19, 2021 | 12:23 PM

ಅಲ್ಲ ಮೊದಲು ಆಟ ಶುರುವಾಗಲಪ್ಪಾ ಅಂತಾ ಭಾರತ ತಂಡದ ಆಟಗಾರರು ಸೇರಿದಂತೆ ಎಲ್ಲ ಕ್ರಿಕೆಟ್ಟಿಗರು ತುದಿಗಾಲಲ್ಲಿ ನಿಂತಿರುವಾಗ ಇಂಗ್ಲಂಡ್ ತಂಡದಲ್ಲಿ ಮಾಜಿ ಆಗಿರುವ ಕ್ಯಾಪ್ಟನ್​ ಮೈಕೆಲ್​ ವಾನ್​​ದು ಏನದು ವರಾತ? ಮಳೆ ಬರುತ್ತಿರುವುದು ಭಾರತಕ್ಕೆ ವರದಾನವಾಗಿದೆಯಂತೆ. ನ್ಯೂಜಿಲ್ಯಾಂಡ್​ ತಂಡದ ಎದುರು ಪೇಲವವಾಗಿರುವ ಭಾರತ ತಂಡ ಮಳೆರಾಯನಿಂದ ಬಚಾವಾಗಿದೆ (India Saved By Weather) ಎಂದು ಟ್ವೀಟ್ ಮಾಡಿ, ಭಾರತೀಯರನ್ನು ಕೆರಳಿಸಿದ್ದಾನೆ. ​

ಇಂಗ್ಲಂಡ್ ತಂಡದಲ್ಲಿ ಮಾಜಿ ಆಗಿರುವ ಮೈಕೆಲ್​ ವಾನ್ ಮಹಾಶಯ ಈಗ ಆಟವಿಲ್ಲದೆ ವೃಥಾ ಕಾಲಹರಣ ಮಾಡುತ್ತಿದ್ದಾನೆ. ಆಗಾಗ ವಿವಾದಾತ್ಮಕ ಟ್ವೀಟ್​ಗಳನ್ನು ಮಾಡುತ್ತಾ ಎಲ್ಲರ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾನೆ. ತಾಜಾ ಆಗಿ ಸೌಥಾಂಪ್ಟನ್​​ನಲ್ಲಿ (Southampton) ಮಳೆ ಬಂದು ಚೊಚ್ಚಲ ವಿಶ್ವ ಟೆಸ್ಟ್​ ಪಂದ್ಯ ಸ್ಥಗಿತಗೊಂಡಿದ್ದೇ ಬಂತು ಇವಯ್ಯ ಮತ್ತದೇ ಕೆಟ್ಟ ಟ್ವೀಟ್​ ಮಾಡಿದ್ದಾನೆ. ಭಾರತ ತಂಡವನ್ನು ಆ ಮಳೆರಾಯನೇ ಬಚಾವು ಆಡಿದ್ದಾನೆ ಅಂದುಬಿಟ್ಟಿದ್ದಾನೆ.

ಬಹುತೇಕ ಎಲ್ಲ ಚೊಚ್ಚಲ ವಿಶ್ವ ಕಪ್​ಗಳನ್ನೂ ಗೆದ್ದು ಭಾರತ ದಾಖಲೆ ನಿರ್ಮಿಸಿದೆ. ಈ ಬಾರಿಯೂ ಅಷ್ಟೇ ಅದ್ಭುತ ಫಾರಂನೊಂದಿಗಿರುವ ಭಾರತ ತಂಡದ ಹಾಟ್​ ಫೇವರೀಟ್ ಎಂದು ಗುರುತಿಸಿಕೊಂಡಿದೆ. ಅಂತಹುದರಲ್ಲಿ ಮೈಕೆಲ್​ ವಾನರ (Former England captain Michael Vaughan) ವ್ಯಂಗ್ಯವಾಡಿದರೆ ನೆಟ್ಟಿಗರು ಸುಮ್ಮನೇ ಬಿಟ್ಟಾರಾ? ಒಂದೊಂದೇ ನೋಡಿ…

(WTC Final southampton weather Former England captain Michael Vaughan posted another tweet poking Indian fans)

ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನ ಸೋಲಿಸಲು ನ್ಯೂಜಿಲ್ಯಾಂಡ್​​ಗೆ ಈ ಒಂದು ಕಾರಣ ಸಾಕು!

WTC Final 2021: ಮಳೆಯ ಅವಕೃಪೆ, ಇಂದು ಆಟ ಆರಂಭ ಆಗುತ್ತದಾ? ಭಾರತದ ಪ್ಲೇಯಿಂಗ್​ 11 ಮಾರ್ಪಾಡು ಆಗುತ್ತದಾ?

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us