AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Android 12: ಇನ್ಮುಂದೆ ಮುಖಭಾವದಲ್ಲೇ ನಿಮ್ಮ ಮೊಬೈಲ್ ಅನ್ನು ನಿಯಂತ್ರಿಸಬಹುದು..!

Android 12 facial expressions: ಮೊಬೈಲ್ ನೋಡಿ ನೀವು ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

TV9 Web
| Edited By: |

Updated on: Aug 19, 2021 | 6:56 PM

Share
ಗೂಗಲ್ ತನ್ನ ಮುಂಬರುವ ಹೊಸ ಆಪರೇಟಿಂಗ್ ಸಿಸ್ಟಂ (ಓಎಸ್) ಅಂಡ್ರಾಯ್ಡ್ 12 ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ.  ಟೆಕ್ ವೆಬ್‌ಸೈಟ್ ಎಕ್ಸ್‌ಡಿಎ ಡೆವಲಪರ್‌ಗಳ ಪ್ರಕಾರ, ಈ ಹೊಸ ಫೀಚರ್ ಸಹಾಯದಿಂದ ಅಂಡ್ರಾಯ್ಡ್​-12 ಸ್ಮಾರ್ಟ್​ಫೋನ್ ಬಳಕೆದಾರರು ಮುಖಭಾವದಲ್ಲೇ ತಮ್ಮ ಮೊಬೈಲ್​ ಅನ್ನು ನಿಯಂತ್ರಿಸಬಹುದು.

ಗೂಗಲ್ ತನ್ನ ಮುಂಬರುವ ಹೊಸ ಆಪರೇಟಿಂಗ್ ಸಿಸ್ಟಂ (ಓಎಸ್) ಅಂಡ್ರಾಯ್ಡ್ 12 ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಟೆಕ್ ವೆಬ್‌ಸೈಟ್ ಎಕ್ಸ್‌ಡಿಎ ಡೆವಲಪರ್‌ಗಳ ಪ್ರಕಾರ, ಈ ಹೊಸ ಫೀಚರ್ ಸಹಾಯದಿಂದ ಅಂಡ್ರಾಯ್ಡ್​-12 ಸ್ಮಾರ್ಟ್​ಫೋನ್ ಬಳಕೆದಾರರು ಮುಖಭಾವದಲ್ಲೇ ತಮ್ಮ ಮೊಬೈಲ್​ ಅನ್ನು ನಿಯಂತ್ರಿಸಬಹುದು.

1 / 6
ಅಂದರೆ ಹೊಸ ಅಂಡ್ರಾಯ್ಡ್​ ಆಪರೇಟಿಂಗ್ ಸಿಸ್ಟಂ ಹೊಸ ಅಪ್​ಗ್ರೇಡ್​ನಲ್ಲಿ ಮನುಷ್ಯನ ಹಾವಭಾವಗಳನ್ನು ಗುರುತಿಸುವ ಫೀಚರ್​ ನೀಡಲಾಗುತ್ತದೆ. ಇದರ ಸಹಾಯದಿಂದ ನೀವು ಮೊಬೈಲ್​ನ ಸ್ಕ್ರೀನ್ ಮುಟ್ಟದೇ ನಿಮಗೆ ಬೇಕಾದ ಆಯ್ಕೆಗಳನ್ನು ಪಡೆಯಬಹುದು.

ಅಂದರೆ ಹೊಸ ಅಂಡ್ರಾಯ್ಡ್​ ಆಪರೇಟಿಂಗ್ ಸಿಸ್ಟಂ ಹೊಸ ಅಪ್​ಗ್ರೇಡ್​ನಲ್ಲಿ ಮನುಷ್ಯನ ಹಾವಭಾವಗಳನ್ನು ಗುರುತಿಸುವ ಫೀಚರ್​ ನೀಡಲಾಗುತ್ತದೆ. ಇದರ ಸಹಾಯದಿಂದ ನೀವು ಮೊಬೈಲ್​ನ ಸ್ಕ್ರೀನ್ ಮುಟ್ಟದೇ ನಿಮಗೆ ಬೇಕಾದ ಆಯ್ಕೆಗಳನ್ನು ಪಡೆಯಬಹುದು.

2 / 6
ಉದಾಹರಣೆಗೆ: ಬಳಕೆದಾರರು ಬಾಯಿ ತೆರೆಯುವ ಫೋನ್ ಅನ್​ಲಾಕ್ ಮಾಡಬಹುದು ಅಥವಾ ಕ್ಯಾಮೆರಾ ಆನ್ ಮಾಡಿಕೊಳ್ಳಬಹುದು. ಇನ್ನು ಕಣ್ಣಿನ ಹುಬ್ಬೇರಿಸುವ ಮೂಲಕ ಸ್ಕ್ರೀನ್ ಸ್ಕ್ರಾಲ್ ಮಾಡಬಹುದು. ಹಾಗೆಯೇ ಮುಖವನ್ನು ಎಡ, ಬಲ, ಮೇಲೆ, ಕೆಳಗೆ ಮಾಡುವ ಮೂಲಕ ಫೋನ್​ನಲ್ಲಿರುವ ಆಯ್ಕೆಗಳನ್ನು ಓಪನ್ ಮಾಡಿಕೊಳ್ಳಬಹುದು.

ಉದಾಹರಣೆಗೆ: ಬಳಕೆದಾರರು ಬಾಯಿ ತೆರೆಯುವ ಫೋನ್ ಅನ್​ಲಾಕ್ ಮಾಡಬಹುದು ಅಥವಾ ಕ್ಯಾಮೆರಾ ಆನ್ ಮಾಡಿಕೊಳ್ಳಬಹುದು. ಇನ್ನು ಕಣ್ಣಿನ ಹುಬ್ಬೇರಿಸುವ ಮೂಲಕ ಸ್ಕ್ರೀನ್ ಸ್ಕ್ರಾಲ್ ಮಾಡಬಹುದು. ಹಾಗೆಯೇ ಮುಖವನ್ನು ಎಡ, ಬಲ, ಮೇಲೆ, ಕೆಳಗೆ ಮಾಡುವ ಮೂಲಕ ಫೋನ್​ನಲ್ಲಿರುವ ಆಯ್ಕೆಗಳನ್ನು ಓಪನ್ ಮಾಡಿಕೊಳ್ಳಬಹುದು.

3 / 6
ಇದಕ್ಕಾಗಿ ಅಂಡ್ರಾಯ್ಡ್​-12 ಓಎಸ್​ನಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುತ್ತಿದ್ದು, ಅದರಲ್ಲಿ ನಿಮಗೆ ಬೇಕಾದ ಆಯ್ಕೆಗೆ ಸರಿಯಾಗಿ ಕ್ಯಾಮೆರಾದಲ್ಲಿ ಮುಖಭಾವವನ್ನು ಸೆರೆಯಿಡಿಯಬೇಕಾಗುತ್ತದೆ. ಉದಾಹರಣೆಗೆ: ನೀವು ನಿಮ್ಮ ನಗುವಿನ ಮೂಲಕ ಕ್ಯಾಮೆರಾ ಓಪನ್ ಮಾಡಬೇಕೆಂದು ಬಯಸಿದರೆ, ಹೊಸ ಫೀಚರ್​ನಲ್ಲಿ ನೀಡಲಾದ ಆಯ್ಕೆಯಲ್ಲಿ ನಿಮ್ಮ ನಗುವನ್ನು ಸೆರೆಯಿಡಿಯಬೇಕು. ಆ ಬಳಿಕ ಮೊಬೈಲ್ ನೋಡಿ ನೀವು  ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

ಇದಕ್ಕಾಗಿ ಅಂಡ್ರಾಯ್ಡ್​-12 ಓಎಸ್​ನಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುತ್ತಿದ್ದು, ಅದರಲ್ಲಿ ನಿಮಗೆ ಬೇಕಾದ ಆಯ್ಕೆಗೆ ಸರಿಯಾಗಿ ಕ್ಯಾಮೆರಾದಲ್ಲಿ ಮುಖಭಾವವನ್ನು ಸೆರೆಯಿಡಿಯಬೇಕಾಗುತ್ತದೆ. ಉದಾಹರಣೆಗೆ: ನೀವು ನಿಮ್ಮ ನಗುವಿನ ಮೂಲಕ ಕ್ಯಾಮೆರಾ ಓಪನ್ ಮಾಡಬೇಕೆಂದು ಬಯಸಿದರೆ, ಹೊಸ ಫೀಚರ್​ನಲ್ಲಿ ನೀಡಲಾದ ಆಯ್ಕೆಯಲ್ಲಿ ನಿಮ್ಮ ನಗುವನ್ನು ಸೆರೆಯಿಡಿಯಬೇಕು. ಆ ಬಳಿಕ ಮೊಬೈಲ್ ನೋಡಿ ನೀವು ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

4 / 6
ಇದಾಗ್ಯೂ ಈ ಹೊಸ ಫೀಚರ್ ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಅಂದರೆ ಅಂಡ್ರಾಯ್ಡ್-12 ಹಾವಭಾವ ಆಯ್ಕೆಗಳನ್ನು ಬಳಸಿಕೊಂಡರೆ ಬ್ಯಾಟರಿ ಕೂಡ ಬೇಗನೆ ಮುಗಿಯಲಿದೆ.

ಇದಾಗ್ಯೂ ಈ ಹೊಸ ಫೀಚರ್ ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಅಂದರೆ ಅಂಡ್ರಾಯ್ಡ್-12 ಹಾವಭಾವ ಆಯ್ಕೆಗಳನ್ನು ಬಳಸಿಕೊಂಡರೆ ಬ್ಯಾಟರಿ ಕೂಡ ಬೇಗನೆ ಮುಗಿಯಲಿದೆ.

5 / 6
ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಅಂಡ್ರಾಯ್ಡ್​-12 ಓಎಸ್​ನ ಸ್ಮಾರ್ಟ್​ಫೋನ್​ಗಳಲ್ಲಿ ಹೊಸ ಆಯ್ಕೆ ಬರಲಿರುವುದಂತು ಪಕ್ಕಾ. ಇದರಿಂದ ಪದೇ ಪದೇ ಟಚ್​ಸ್ಕ್ರೀನ್ ಮುಟ್ಟುವುದು ಕೂಡ ತಪ್ಪಲಿದೆ.

ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಅಂಡ್ರಾಯ್ಡ್​-12 ಓಎಸ್​ನ ಸ್ಮಾರ್ಟ್​ಫೋನ್​ಗಳಲ್ಲಿ ಹೊಸ ಆಯ್ಕೆ ಬರಲಿರುವುದಂತು ಪಕ್ಕಾ. ಇದರಿಂದ ಪದೇ ಪದೇ ಟಚ್​ಸ್ಕ್ರೀನ್ ಮುಟ್ಟುವುದು ಕೂಡ ತಪ್ಪಲಿದೆ.

6 / 6
Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ