Sign In

By signing in or creating an account, you agree with Associated Broadcasting Company's Terms & Conditions and Privacy Policy.

Advisory: ಡೀಪ್​ಫೇಕ್ ಹಾವಳಿ; ಫೇಸ್​ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಸರ್ಕಾರದಿಂದ ಅಡ್ವೈಸರಿ ಬಿಡುಗಡೆ

Deepfake concerns: ಐಟಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾಗಿರುವ ಹಾನಿಕಾರಕ ಕಂಟೆಂಟ್​ಗಳನ್ನು ನಿಯಂತ್ರಿಸಲು ಸೋಷಿಯಲ್ ಮೀಡಿಯಾ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಡೀಪ್​ಫೇಕ್ ಇತ್ಯಾದಿ ಹಾನಿಕಾರಕ ಕಂಟೆಂಟ್ ಬಗ್ಗೆ ಬಳಕೆದಾರರಿಗೆ ಆಗಾಗ್ಗೆ ಎಚ್ಚರಿಸುವ ಕೆಲಸವನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಮಾಡಬೇಕು. ಫೇಸ್​ಬುಕ್ ಸೇರಿದಂತೆ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸರ್ಕಾರ ಅಡ್ವೈಸರಿ ಬಿಡುಗಡೆ ಮಾಡಿದೆ.

Advisory: ಡೀಪ್​ಫೇಕ್ ಹಾವಳಿ; ಫೇಸ್​ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಸರ್ಕಾರದಿಂದ ಅಡ್ವೈಸರಿ ಬಿಡುಗಡೆ
ಡೀಪ್​ಫೇಕ್ ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 27, 2023 | 1:05 PM

ನವದೆಹಲಿ, ಡಿಸೆಂಬರ್ 27: ರಶ್ಮಿಕಾ ಮಂದಣ್ಣರ ಡೀಪ್​ಫೇಕ್ ವಿಡಿಯೋ ಬೆಳಕಿಗೆ ಬಂದ ಬಳಿಕ ಅದರ ಕಾವು ಸಾಕಷ್ಟೇರಿದೆ. ಡೀಪ್​ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಮಾರಕ ಎಂಬುದು ವೇದ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು ಡೀಪ್​ಫೇಕ್ ವಿಡಿಯೋ ಸೇರಿದಂತೆ ಹಾನಿಕಾರಕ ಕಂಟೆಂಟ್ ಕುರಿತು ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​​ಗಳಿಗೆ ಅಡ್ವೈಸರಿ (Govt Advisory) ಹೊರಡಿಸಿದೆ. ಅದರ ಪ್ರಕಾರ, ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ತಮ್ಮ ಬಳಕೆದಾರರಿಗೆ ಅಮಾನ್ಯ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು. ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರಬೇಕು ಎಂದಿದೆ.

‘ಐಟಿ ನಿಯಮಗಳಿಗೆ ಬದ್ಧವಾಗಿರಲು ಎಲ್ಲಾ ಇಂಟರ್ಮೀಡಿಯರಿಗಳಿಗೆ (ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್) ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಡ್ವೈಸರಿ ನೀಡಲಾಗಿದೆ ಎಂದು ಮಾಧ್ಯಮ ಪ್ರಕಟಣೆಯೊಂದರಲ್ಲಿ ಹೇಳಲಾಗಿದೆ.

ಇತ್ತೀಚೆಗೆ ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಇಂಟರ್​ಮೀಡಿಯರಿ ಕಂಪನಿಗಳ ಜೊತೆ ಚರ್ಚೆಗಳನ್ನು ನಡೆಸಿದ್ದರು. ಅವರೊಂದಿಗೆ ಸಮಾಲೋಚನೆ ನಡೆಸಿಯೇ ಈ ಅಡ್ವೈಸರಿ ನೀಡಲಾಗಿದೆ.

ಇದನ್ನೂ ಓದಿ: Wipro: ಮಾಜಿ ಸಿಎಫ್​ಒ ಜತಿನ್ ದಲಾಲ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ ವಿಪ್ರೋ; ಬೆಂಗಳೂರಿನ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ

‘ಐಟಿ ನಿಯಮಗಳ ಅಡಿಯಲ್ಲಿ, ಅದರಲ್ಲೂ 3(1)(ಬಿ) ನಿಯಮದ ಅಡಿಯಲ್ಲಿ ಅನುಮತಿಸಲಾಗದ ಕಂಟೆಂಟ್ ಬಗ್ಗೆ ಟರ್ಮ್ಸ್ ಆಫ್ ಸರ್ವಿಸ್ ಮತ್ತು ಯೂಸರ್ ಅಗ್ರೀಮೆಂಟ್ಸ್ ಇತ್ಯಾದಿ ಮೂಲಕ ಬಳಕೆದಾರರಿಗೆ ಬಹಳ ನೇರವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಮೊದಲ ನೊಂದಣಿ ಸಮಯದಲ್ಲಿ ಮಾತ್ರವಲ್ಲದೇ ನಿಯಮಿತವಾಗಿ ಇಂಥ ಕಂಟೆಂಟ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿರಬೇಕು. ಅದರಲ್ಲೂ, ಗ್ರಾಹಕರು ಪ್ರತೀ ಬಾರಿ ಲಾಗಿನ್ ಆಗುವಾಗ ಮತ್ತು ಪ್ಲಾಟ್​ಫಾರ್ಮ್​ನಲ್ಲಿ ಯಾವುದಾದರೂ ಮಾಹಿತಿ ಅಪ್​ಲೋಡ್ ಮಾಡುವಾಗ ಈ ರಿಮೈಂಡರ್​ಗಳನ್ನು ಸಂವಹನ ಮಾಡುತ್ತಿರಬೇಕು,’ ಎಂದು ಅಡ್ವೈಸರಿಯಲ್ಲಿ ತಿಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಾನಿ ಮಾಡುವಂತಹ 11 ಕಂಟೆಂಟ್​ಗಳನ್ನು ಲಿಸ್ಟ್ ಮಾಡಲಾಗಿದೆ. ಇಂಥ ಕಂಟೆಂಟ್ ಅನ್ನು ಬಳಕೆದಾರರು ಬಳಕೆ ಮಾಡುವುದನ್ನು ತಡೆಯಲು ಸೋಷಿಯಲ್ ಮೀಡಿಯಾ ಸಂಸ್ಥೆಗಳು ಪ್ರಾಮಾನಿಕ ಪ್ರಯತ್ನ ಮಾಡಬೇಕು ಎಂಬುದು ಸರ್ಕಾರದ ಒತ್ತಾಯವಾಗಿದೆ.

ಇದನ್ನೂ ಓದಿ: ತಮಿಳುನಾಡು: ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ, ಹಲವು ಮಂದಿ ಅಸ್ವಸ್ಥ

ಇಂಥ ಹಾನಿಕಾರಕ ಕಂಟೆಂಟ್​ಗಳಲ್ಲಿ ಡೀಪ್​ಫೇಕ್ ಕಂಟೆಂಟ್ ಕೂಡ ಒಂದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಉಪಯೋಗಿಸಿ, ಬಹಳ ನಿಖರವಾಗಿ ವ್ಯಕ್ತಿಯ ಚಹರೆ, ಧ್ವನಿ ಬದಲಾಯಿಸಲಾಗುವ ಕಂಟೆಂಟ್​ಗೆ ಡೀಪ್​ಫೇಕ್ ಎನ್ನಲಾಗುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ರೊಬ್ಬರ ಅರೆಬೆತ್ತಲೆ ವಿಡಿಯೋವೊಂದನ್ನು ಬಳಸಿ, ಆ ಮಹಿಳೆಯ ಮುಖಕ್ಕೆ ರಶ್ಮಿಕಾ ಮಂದಣ್ಣರ ಮೊಗವನ್ನು ಸೇರಿಸಲಾಗಿತ್ತು. ಮೇಲ್ನೋಟಕ್ಕೆ ಯಾರಿಗೂ ಕೂಡ ಇದು ನಕಲಿ ವಿಡಿಯೋ ಎಂದು ಅರಿವಿಗೆ ಬಾರದಷ್ಟು ನಿಖರವಾಗಿರುತ್ತದೆ ಈ ಡೀಪ್​ಫೇಕ್ ವಿಡಿಯೋ.

ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನೇ ಡೀಪ್​ಫೇಕ್ ಮಾಡಲಾಗಿತ್ತು. ಬಿಸಿನೆಸ್​ಮ್ಯಾನ್​ಗಳ ವಿಡಿಯೋ ತಿರುಚಲಾಗಿತ್ತು. ಇಂಥ ಹಲವು ಡೀಪ್​ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿವೆ. ಸರ್ಕಾರ ಕೂಡ ಇಂತಹ ಡೀಪ್​ಫೇಕ್ ಸೃಷ್ಟಿಕರ್ತರನ್ನು ಅಪರಾಧಿಯಾಗಿ ಪರಿಗಣಿಸಲಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಈಗ ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೂ ಅಡ್ವೈಸರಿ ಬಿಡುಗಡೆ ಮಾಡಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Wed, 27 December 23

ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ