Advisory: ಡೀಪ್​ಫೇಕ್ ಹಾವಳಿ; ಫೇಸ್​ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಸರ್ಕಾರದಿಂದ ಅಡ್ವೈಸರಿ ಬಿಡುಗಡೆ

Deepfake concerns: ಐಟಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾಗಿರುವ ಹಾನಿಕಾರಕ ಕಂಟೆಂಟ್​ಗಳನ್ನು ನಿಯಂತ್ರಿಸಲು ಸೋಷಿಯಲ್ ಮೀಡಿಯಾ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಡೀಪ್​ಫೇಕ್ ಇತ್ಯಾದಿ ಹಾನಿಕಾರಕ ಕಂಟೆಂಟ್ ಬಗ್ಗೆ ಬಳಕೆದಾರರಿಗೆ ಆಗಾಗ್ಗೆ ಎಚ್ಚರಿಸುವ ಕೆಲಸವನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಮಾಡಬೇಕು. ಫೇಸ್​ಬುಕ್ ಸೇರಿದಂತೆ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸರ್ಕಾರ ಅಡ್ವೈಸರಿ ಬಿಡುಗಡೆ ಮಾಡಿದೆ.

Advisory: ಡೀಪ್​ಫೇಕ್ ಹಾವಳಿ; ಫೇಸ್​ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಸರ್ಕಾರದಿಂದ ಅಡ್ವೈಸರಿ ಬಿಡುಗಡೆ
ಡೀಪ್​ಫೇಕ್ ಸಾಂದರ್ಭಿಕ ಚಿತ್ರ
Follow us
|

Updated on:Dec 27, 2023 | 1:05 PM

ನವದೆಹಲಿ, ಡಿಸೆಂಬರ್ 27: ರಶ್ಮಿಕಾ ಮಂದಣ್ಣರ ಡೀಪ್​ಫೇಕ್ ವಿಡಿಯೋ ಬೆಳಕಿಗೆ ಬಂದ ಬಳಿಕ ಅದರ ಕಾವು ಸಾಕಷ್ಟೇರಿದೆ. ಡೀಪ್​ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಮಾರಕ ಎಂಬುದು ವೇದ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು ಡೀಪ್​ಫೇಕ್ ವಿಡಿಯೋ ಸೇರಿದಂತೆ ಹಾನಿಕಾರಕ ಕಂಟೆಂಟ್ ಕುರಿತು ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​​ಗಳಿಗೆ ಅಡ್ವೈಸರಿ (Govt Advisory) ಹೊರಡಿಸಿದೆ. ಅದರ ಪ್ರಕಾರ, ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ತಮ್ಮ ಬಳಕೆದಾರರಿಗೆ ಅಮಾನ್ಯ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು. ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರಬೇಕು ಎಂದಿದೆ.

‘ಐಟಿ ನಿಯಮಗಳಿಗೆ ಬದ್ಧವಾಗಿರಲು ಎಲ್ಲಾ ಇಂಟರ್ಮೀಡಿಯರಿಗಳಿಗೆ (ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್) ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಡ್ವೈಸರಿ ನೀಡಲಾಗಿದೆ ಎಂದು ಮಾಧ್ಯಮ ಪ್ರಕಟಣೆಯೊಂದರಲ್ಲಿ ಹೇಳಲಾಗಿದೆ.

ಇತ್ತೀಚೆಗೆ ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಇಂಟರ್​ಮೀಡಿಯರಿ ಕಂಪನಿಗಳ ಜೊತೆ ಚರ್ಚೆಗಳನ್ನು ನಡೆಸಿದ್ದರು. ಅವರೊಂದಿಗೆ ಸಮಾಲೋಚನೆ ನಡೆಸಿಯೇ ಈ ಅಡ್ವೈಸರಿ ನೀಡಲಾಗಿದೆ.

ಇದನ್ನೂ ಓದಿ: Wipro: ಮಾಜಿ ಸಿಎಫ್​ಒ ಜತಿನ್ ದಲಾಲ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ ವಿಪ್ರೋ; ಬೆಂಗಳೂರಿನ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ

‘ಐಟಿ ನಿಯಮಗಳ ಅಡಿಯಲ್ಲಿ, ಅದರಲ್ಲೂ 3(1)(ಬಿ) ನಿಯಮದ ಅಡಿಯಲ್ಲಿ ಅನುಮತಿಸಲಾಗದ ಕಂಟೆಂಟ್ ಬಗ್ಗೆ ಟರ್ಮ್ಸ್ ಆಫ್ ಸರ್ವಿಸ್ ಮತ್ತು ಯೂಸರ್ ಅಗ್ರೀಮೆಂಟ್ಸ್ ಇತ್ಯಾದಿ ಮೂಲಕ ಬಳಕೆದಾರರಿಗೆ ಬಹಳ ನೇರವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಮೊದಲ ನೊಂದಣಿ ಸಮಯದಲ್ಲಿ ಮಾತ್ರವಲ್ಲದೇ ನಿಯಮಿತವಾಗಿ ಇಂಥ ಕಂಟೆಂಟ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿರಬೇಕು. ಅದರಲ್ಲೂ, ಗ್ರಾಹಕರು ಪ್ರತೀ ಬಾರಿ ಲಾಗಿನ್ ಆಗುವಾಗ ಮತ್ತು ಪ್ಲಾಟ್​ಫಾರ್ಮ್​ನಲ್ಲಿ ಯಾವುದಾದರೂ ಮಾಹಿತಿ ಅಪ್​ಲೋಡ್ ಮಾಡುವಾಗ ಈ ರಿಮೈಂಡರ್​ಗಳನ್ನು ಸಂವಹನ ಮಾಡುತ್ತಿರಬೇಕು,’ ಎಂದು ಅಡ್ವೈಸರಿಯಲ್ಲಿ ತಿಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಾನಿ ಮಾಡುವಂತಹ 11 ಕಂಟೆಂಟ್​ಗಳನ್ನು ಲಿಸ್ಟ್ ಮಾಡಲಾಗಿದೆ. ಇಂಥ ಕಂಟೆಂಟ್ ಅನ್ನು ಬಳಕೆದಾರರು ಬಳಕೆ ಮಾಡುವುದನ್ನು ತಡೆಯಲು ಸೋಷಿಯಲ್ ಮೀಡಿಯಾ ಸಂಸ್ಥೆಗಳು ಪ್ರಾಮಾನಿಕ ಪ್ರಯತ್ನ ಮಾಡಬೇಕು ಎಂಬುದು ಸರ್ಕಾರದ ಒತ್ತಾಯವಾಗಿದೆ.

ಇದನ್ನೂ ಓದಿ: ತಮಿಳುನಾಡು: ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ, ಹಲವು ಮಂದಿ ಅಸ್ವಸ್ಥ

ಇಂಥ ಹಾನಿಕಾರಕ ಕಂಟೆಂಟ್​ಗಳಲ್ಲಿ ಡೀಪ್​ಫೇಕ್ ಕಂಟೆಂಟ್ ಕೂಡ ಒಂದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಉಪಯೋಗಿಸಿ, ಬಹಳ ನಿಖರವಾಗಿ ವ್ಯಕ್ತಿಯ ಚಹರೆ, ಧ್ವನಿ ಬದಲಾಯಿಸಲಾಗುವ ಕಂಟೆಂಟ್​ಗೆ ಡೀಪ್​ಫೇಕ್ ಎನ್ನಲಾಗುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ರೊಬ್ಬರ ಅರೆಬೆತ್ತಲೆ ವಿಡಿಯೋವೊಂದನ್ನು ಬಳಸಿ, ಆ ಮಹಿಳೆಯ ಮುಖಕ್ಕೆ ರಶ್ಮಿಕಾ ಮಂದಣ್ಣರ ಮೊಗವನ್ನು ಸೇರಿಸಲಾಗಿತ್ತು. ಮೇಲ್ನೋಟಕ್ಕೆ ಯಾರಿಗೂ ಕೂಡ ಇದು ನಕಲಿ ವಿಡಿಯೋ ಎಂದು ಅರಿವಿಗೆ ಬಾರದಷ್ಟು ನಿಖರವಾಗಿರುತ್ತದೆ ಈ ಡೀಪ್​ಫೇಕ್ ವಿಡಿಯೋ.

ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನೇ ಡೀಪ್​ಫೇಕ್ ಮಾಡಲಾಗಿತ್ತು. ಬಿಸಿನೆಸ್​ಮ್ಯಾನ್​ಗಳ ವಿಡಿಯೋ ತಿರುಚಲಾಗಿತ್ತು. ಇಂಥ ಹಲವು ಡೀಪ್​ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿವೆ. ಸರ್ಕಾರ ಕೂಡ ಇಂತಹ ಡೀಪ್​ಫೇಕ್ ಸೃಷ್ಟಿಕರ್ತರನ್ನು ಅಪರಾಧಿಯಾಗಿ ಪರಿಗಣಿಸಲಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಈಗ ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೂ ಅಡ್ವೈಸರಿ ಬಿಡುಗಡೆ ಮಾಡಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Wed, 27 December 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ