AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Advisory: ಡೀಪ್​ಫೇಕ್ ಹಾವಳಿ; ಫೇಸ್​ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಸರ್ಕಾರದಿಂದ ಅಡ್ವೈಸರಿ ಬಿಡುಗಡೆ

Deepfake concerns: ಐಟಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾಗಿರುವ ಹಾನಿಕಾರಕ ಕಂಟೆಂಟ್​ಗಳನ್ನು ನಿಯಂತ್ರಿಸಲು ಸೋಷಿಯಲ್ ಮೀಡಿಯಾ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಡೀಪ್​ಫೇಕ್ ಇತ್ಯಾದಿ ಹಾನಿಕಾರಕ ಕಂಟೆಂಟ್ ಬಗ್ಗೆ ಬಳಕೆದಾರರಿಗೆ ಆಗಾಗ್ಗೆ ಎಚ್ಚರಿಸುವ ಕೆಲಸವನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಮಾಡಬೇಕು. ಫೇಸ್​ಬುಕ್ ಸೇರಿದಂತೆ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸರ್ಕಾರ ಅಡ್ವೈಸರಿ ಬಿಡುಗಡೆ ಮಾಡಿದೆ.

Advisory: ಡೀಪ್​ಫೇಕ್ ಹಾವಳಿ; ಫೇಸ್​ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಸರ್ಕಾರದಿಂದ ಅಡ್ವೈಸರಿ ಬಿಡುಗಡೆ
ಡೀಪ್​ಫೇಕ್ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 27, 2023 | 1:05 PM

Share

ನವದೆಹಲಿ, ಡಿಸೆಂಬರ್ 27: ರಶ್ಮಿಕಾ ಮಂದಣ್ಣರ ಡೀಪ್​ಫೇಕ್ ವಿಡಿಯೋ ಬೆಳಕಿಗೆ ಬಂದ ಬಳಿಕ ಅದರ ಕಾವು ಸಾಕಷ್ಟೇರಿದೆ. ಡೀಪ್​ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಮಾರಕ ಎಂಬುದು ವೇದ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು ಡೀಪ್​ಫೇಕ್ ವಿಡಿಯೋ ಸೇರಿದಂತೆ ಹಾನಿಕಾರಕ ಕಂಟೆಂಟ್ ಕುರಿತು ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​​ಗಳಿಗೆ ಅಡ್ವೈಸರಿ (Govt Advisory) ಹೊರಡಿಸಿದೆ. ಅದರ ಪ್ರಕಾರ, ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ತಮ್ಮ ಬಳಕೆದಾರರಿಗೆ ಅಮಾನ್ಯ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು. ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರಬೇಕು ಎಂದಿದೆ.

‘ಐಟಿ ನಿಯಮಗಳಿಗೆ ಬದ್ಧವಾಗಿರಲು ಎಲ್ಲಾ ಇಂಟರ್ಮೀಡಿಯರಿಗಳಿಗೆ (ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್) ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಡ್ವೈಸರಿ ನೀಡಲಾಗಿದೆ ಎಂದು ಮಾಧ್ಯಮ ಪ್ರಕಟಣೆಯೊಂದರಲ್ಲಿ ಹೇಳಲಾಗಿದೆ.

ಇತ್ತೀಚೆಗೆ ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಇಂಟರ್​ಮೀಡಿಯರಿ ಕಂಪನಿಗಳ ಜೊತೆ ಚರ್ಚೆಗಳನ್ನು ನಡೆಸಿದ್ದರು. ಅವರೊಂದಿಗೆ ಸಮಾಲೋಚನೆ ನಡೆಸಿಯೇ ಈ ಅಡ್ವೈಸರಿ ನೀಡಲಾಗಿದೆ.

ಇದನ್ನೂ ಓದಿ: Wipro: ಮಾಜಿ ಸಿಎಫ್​ಒ ಜತಿನ್ ದಲಾಲ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ ವಿಪ್ರೋ; ಬೆಂಗಳೂರಿನ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ

‘ಐಟಿ ನಿಯಮಗಳ ಅಡಿಯಲ್ಲಿ, ಅದರಲ್ಲೂ 3(1)(ಬಿ) ನಿಯಮದ ಅಡಿಯಲ್ಲಿ ಅನುಮತಿಸಲಾಗದ ಕಂಟೆಂಟ್ ಬಗ್ಗೆ ಟರ್ಮ್ಸ್ ಆಫ್ ಸರ್ವಿಸ್ ಮತ್ತು ಯೂಸರ್ ಅಗ್ರೀಮೆಂಟ್ಸ್ ಇತ್ಯಾದಿ ಮೂಲಕ ಬಳಕೆದಾರರಿಗೆ ಬಹಳ ನೇರವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಮೊದಲ ನೊಂದಣಿ ಸಮಯದಲ್ಲಿ ಮಾತ್ರವಲ್ಲದೇ ನಿಯಮಿತವಾಗಿ ಇಂಥ ಕಂಟೆಂಟ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿರಬೇಕು. ಅದರಲ್ಲೂ, ಗ್ರಾಹಕರು ಪ್ರತೀ ಬಾರಿ ಲಾಗಿನ್ ಆಗುವಾಗ ಮತ್ತು ಪ್ಲಾಟ್​ಫಾರ್ಮ್​ನಲ್ಲಿ ಯಾವುದಾದರೂ ಮಾಹಿತಿ ಅಪ್​ಲೋಡ್ ಮಾಡುವಾಗ ಈ ರಿಮೈಂಡರ್​ಗಳನ್ನು ಸಂವಹನ ಮಾಡುತ್ತಿರಬೇಕು,’ ಎಂದು ಅಡ್ವೈಸರಿಯಲ್ಲಿ ತಿಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಾನಿ ಮಾಡುವಂತಹ 11 ಕಂಟೆಂಟ್​ಗಳನ್ನು ಲಿಸ್ಟ್ ಮಾಡಲಾಗಿದೆ. ಇಂಥ ಕಂಟೆಂಟ್ ಅನ್ನು ಬಳಕೆದಾರರು ಬಳಕೆ ಮಾಡುವುದನ್ನು ತಡೆಯಲು ಸೋಷಿಯಲ್ ಮೀಡಿಯಾ ಸಂಸ್ಥೆಗಳು ಪ್ರಾಮಾನಿಕ ಪ್ರಯತ್ನ ಮಾಡಬೇಕು ಎಂಬುದು ಸರ್ಕಾರದ ಒತ್ತಾಯವಾಗಿದೆ.

ಇದನ್ನೂ ಓದಿ: ತಮಿಳುನಾಡು: ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ, ಹಲವು ಮಂದಿ ಅಸ್ವಸ್ಥ

ಇಂಥ ಹಾನಿಕಾರಕ ಕಂಟೆಂಟ್​ಗಳಲ್ಲಿ ಡೀಪ್​ಫೇಕ್ ಕಂಟೆಂಟ್ ಕೂಡ ಒಂದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಉಪಯೋಗಿಸಿ, ಬಹಳ ನಿಖರವಾಗಿ ವ್ಯಕ್ತಿಯ ಚಹರೆ, ಧ್ವನಿ ಬದಲಾಯಿಸಲಾಗುವ ಕಂಟೆಂಟ್​ಗೆ ಡೀಪ್​ಫೇಕ್ ಎನ್ನಲಾಗುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ರೊಬ್ಬರ ಅರೆಬೆತ್ತಲೆ ವಿಡಿಯೋವೊಂದನ್ನು ಬಳಸಿ, ಆ ಮಹಿಳೆಯ ಮುಖಕ್ಕೆ ರಶ್ಮಿಕಾ ಮಂದಣ್ಣರ ಮೊಗವನ್ನು ಸೇರಿಸಲಾಗಿತ್ತು. ಮೇಲ್ನೋಟಕ್ಕೆ ಯಾರಿಗೂ ಕೂಡ ಇದು ನಕಲಿ ವಿಡಿಯೋ ಎಂದು ಅರಿವಿಗೆ ಬಾರದಷ್ಟು ನಿಖರವಾಗಿರುತ್ತದೆ ಈ ಡೀಪ್​ಫೇಕ್ ವಿಡಿಯೋ.

ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನೇ ಡೀಪ್​ಫೇಕ್ ಮಾಡಲಾಗಿತ್ತು. ಬಿಸಿನೆಸ್​ಮ್ಯಾನ್​ಗಳ ವಿಡಿಯೋ ತಿರುಚಲಾಗಿತ್ತು. ಇಂಥ ಹಲವು ಡೀಪ್​ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿವೆ. ಸರ್ಕಾರ ಕೂಡ ಇಂತಹ ಡೀಪ್​ಫೇಕ್ ಸೃಷ್ಟಿಕರ್ತರನ್ನು ಅಪರಾಧಿಯಾಗಿ ಪರಿಗಣಿಸಲಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಈಗ ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೂ ಅಡ್ವೈಸರಿ ಬಿಡುಗಡೆ ಮಾಡಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Wed, 27 December 23

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!