AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Microsoft: ಮೈಕ್ರೋಸಾಫ್ಟ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ತುರ್ತು ಎಚ್ಚರಿಕೆ: ತಕ್ಷಣ ಅಪ್ಡೇಟ್ ಮಾಡಿ

ಸಿಇಆರ್‌ಟಿ-ಇನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪ್ರಕಾರ, ಮೈಕ್ರೋಸಾಫ್ಟ್ ಎಡ್ಜ್ (ಕ್ರೋಮಿಯಂ-ಆಧಾರಿತ) ನಲ್ಲಿ ಅನೇಕ ದುರ್ಬಲತೆಗಳು ಕಂಡುಬಂದಿದೆ. ಇದನ್ನು ರಿಮೋಟ್ ದಾಳಿಕೋರರು ಆ್ಯಕ್ಸೆಸ್ ಪಡೆದುಕೊಂಡು ಕನ್ನ ಹಾಕುವ ಸಾಧ್ಯತೆ ಇದೆ ಎಂದು ಹೇಳಿದೆ.

Microsoft: ಮೈಕ್ರೋಸಾಫ್ಟ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ತುರ್ತು ಎಚ್ಚರಿಕೆ: ತಕ್ಷಣ ಅಪ್ಡೇಟ್ ಮಾಡಿ
Microsoft
TV9 Web
| Updated By: Vinay Bhat|

Updated on:Jan 27, 2023 | 1:19 PM

Share

ಮೈಕ್ರೋಸಾಫ್ಟ್ (Microsoft) ಎಡ್ಜ್ ವೆಬ್ ಬ್ರೌಸರ್‌ನಲ್ಲಿ ಕೆಲ ದೋಷಗಳು ಕಂಡುಬಂದಿದ್ದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ (CERT-IN) ಈ ಬಗ್ಗೆ ಎಚ್ಚರಿಕೆ ನೀಡಿದೆ. ಆಪರೇಟಿಂಗ್ ಸಿಸ್ಟಂಗಳಲ್ಲಿನ ದೋಷಗಳು ಮತ್ತು ದುರ್ಬಲತೆಗಳ ಮೇಲೆ ಮೇಲ್ವಿಚಾರಣೆ ಮಾಡುವ ಮತ್ತು ಎಚ್ಚರಿಕೆ ನೀಡುವ ಸರ್ಕಾರಿ ಸಂಸ್ಥೆ ಸೆರ್ಟ್ ಇನ್, ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್‌ ಮೇಲೆ ಸೈಬರ್ ದಾಳಿ (Cyber Attack) ನಡೆಯುವ ಸಾಧ್ಯತೆ ಇದೆ ಎಂದು ಬಳಕೆದಾರರನ್ನು ಎಚ್ಚರಿಸಿದೆ.

ಸಿಇಆರ್‌ಟಿ-ಇನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪ್ರಕಾರ, ಮೈಕ್ರೋಸಾಫ್ಟ್ ಎಡ್ಜ್ (ಕ್ರೋಮಿಯಂ-ಆಧಾರಿತ) ನಲ್ಲಿ ಅನೇಕ ದುರ್ಬಲತೆಗಳು ಕಂಡುಬಂದಿದೆ. ಇದನ್ನು ರಿಮೋಟ್ ದಾಳಿಕೋರರು ಆ್ಯಕ್ಸೆಸ್ ಪಡೆದುಕೊಂಡು ಕನ್ನ ಹಾಕುವ ಸಾಧ್ಯತೆ ಇದೆ ಎಂದು ಹೇಳಿದೆ. 109.0.1518.61 ಆವೃತ್ತಿಯ ಹಿಂದಿನ ಮೈಕ್ರೋಸಾಫ್ಟ್ ಎಡ್ಜ್ ಆವೃತ್ತಿಗಳಲ್ಲಿ ಈ ದುರ್ಬಲತೆಗಳು ಪತ್ತೆ ಆಗಿದೆ. ಈ ದೋಷಗಳಿಂದ ಸಿಸ್ಟಂಗಳನ್ನು ರಕ್ಷಿಸಲು, ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್‌ ಅನ್ನು ಇತ್ತೀಚಿನ ಆವೃತ್ತಿಗೆ ಅಪ್​ಡೇಟ್ ಮಾಡಲು CERT-IN ಸಲಹೆ ನೀಡಿದೆ.

Tech Tips: ಎರಡು ಮೊಬೈಲ್​ಗಳಲ್ಲಿ ಒಂದೇ ನಂಬರ್​ನ ವಾಟ್ಸ್​ಆ್ಯಪ್ ಖಾತೆ ಬಳಸಲು ಸಾಧ್ಯವೇ?

ಇದನ್ನೂ ಓದಿ
Image
Android Phones: ಭಾರತದಲ್ಲಿ ಭಿನ್ನವಾಗಿರಲಿವೆ ಆ್ಯಂಡ್ರಾಯ್ಡ್ ಫೋನ್​ಗಳು; ಕಾರಣ ಇಲ್ಲಿದೆ
Image
Facebook WhatsApp Down: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಡೌನ್, ಯುಎಸ್​ಯಲ್ಲಿ ಮೆಟಾ ಪ್ಲಾಟ್‌ಫಾರ್ಮ್ಸ್ ಸ್ಥಗಿತ
Image
Microsoft Teams Down: ಮೈಕ್ರೋಸಾಫ್ಟ್ ಸರ್ವರ್ ಡೌನ್; ಭಾರತದ ಬಳಕೆದಾರರಿಗೆ ತೊಂದರೆ
Image
Reliance Jio 5G Cities: ಭಾರತದ 50 ನಗರಗಳಲ್ಲಿ 5ಜಿ ಸೇವೆ ಘೋಷಿಸಿದ ರಿಲಯನ್ಸ್ ಜಿಯೋ

ಮೈಕ್ರೋಸಾಫ್ಟ್ ಈಗಾಗಲೇ ಹೊಸ ಆವೃತ್ತಿ 109.0.1518.61 ಅನ್ನು ಬಿಡುಗಡೆ ಮಾಡಿದೆ. ಇದು ಈ ದೋಷಗಳನ್ನು ಪರಿಹರಿಸುತ್ತದೆ ಮತ್ತು ಬಳಕೆದಾರರು ದಾಳಿಕೋರರಿಂದ ತಮ್ಮ ಸಿಸ್ಟಮ್‌ಗಳನ್ನು ರಕ್ಷಿಸಲು ತಕ್ಷಣವೇ ಡೌನ್‌ಲೋಡ್ ಮಾಡುವಂತೆ ಸೂಚಿಸಿದೆ. ನಿಮ್ಮ ಸಿಸ್ಟಂನಲ್ಲಿ ಅಪ್‌ಡೇಟ್ ಲಭ್ಯವಿದ್ದರೆ, ಪ್ರಾಂಪ್ಟ್‌ನಲ್ಲಿ ಪರಿಶೀಲಿಸಿ. ಇಲ್ಲಿ ಅಪ್​ಡೇಟ್ ಆಯ್ಕೆ ಕಾಣಿಸಿಲ್ಲ ಎಂದಾದರೆ ಹೀಗೆ ಮಾಡಿ.

  • ನಿಮ್ಮ ಬ್ರೌಸರ್‌ನ ಮೇಲಿನ ಬಲ ಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
  • ಸೆಟ್ಟಿಂಗ್ಸ್​ಗೆ ಹೋಗಿ.
  • ಸೆಟ್ಟಿಂಗ್ಸ್​ ಅಡಿಯಲ್ಲಿ, ಮೈಕ್ರೋಸಾಫ್ಟ್ ಎಡ್ಜ್ ಕ್ಲಿಕ್ ಮಾಡಿ.
  • ಇತ್ತೀಚಿನ ಅಪ್ಡೇಟ್ ಬಗ್ಗೆ ಅಲ್ಲಿ ಮಾಹಿತಿ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಿ ಅಪ್ಡೇಟ್ ಕೊಡಿ.

ಮೈಕ್ರೋಸಾಫ್ಟ್ ಸರ್ವರ್ ಡೌನ್

ಮೊನ್ನೆಯಷ್ಟೆ ಬುಧವಾರ ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್​​ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್​ ಡೌನ್ ಆಗಿತ್ತು. ಮೈಕ್ರೋಸಾಫ್ಟ್ ಅಜೂರ್​ ಪಬ್ಲಿಕ್ ಕ್ಲೌಡ್ ಪ್ಲಾಟ್​ಫಾರ್ಮ್​ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ಕೇವಲ ಭಾರತ ಮಾತ್ರವಲ್ಲದೆ ಇತರ ಕೆಲವು ದೇಶಗಳಲ್ಲಿಯೂ ಮೈಕ್ರೋಸಾಫ್ಟ್ ಸರ್ವರ್ ಡೌನ್ ಆದ ಬಗ್ಗೆ ವರದಿಯಾಗಿತ್ತು. ಜಪಾನ್​ನಲ್ಲಿ ಸುಮಾರು 900 ಮಂದಿ ಸರ್ವರ್ ಡೌನ್ ಆಗಿರುವ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ, ಬ್ರಿಟನ್, ಯುಎಇಯಲ್ಲಿ ಕೂಡ ಮೈಕ್ರೋಸಾಫ್ಟ್ ಸರ್ವರ್ ಡೌನ್ ಆಗಿದೆ ಎಂದು ವರದಿಯಾಗಿದೆ. ಮೈಕ್ರೋಸಾಫ್ಟ್​ನ ಅನೇಕ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ನಿಗದಿಯಾಗಿರುವ ಕರೆಗಳನ್ನು ಸ್ವೀಕರಿಸಲೂ ಸಾಧ್ಯವಾಗುತ್ತಿರಲಿಲ್ಲವಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:18 pm, Fri, 27 January 23

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ