AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಲಿಂದ ಬಿಸಾಕಿ ಮೊಬೈಲ್ ಟೆಸ್ಟ್ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌: ವಿಡಿಯೋ ನೋಡಿ

ಸಧ್ಯ ಮೊಬೈಲ್ ಯುಗದಲ್ಲಿ 5-Gyಯಗದ ಬಗ್ಗೆ ಚರ್ಚೆಗಳು ಆಗುತ್ತಿವೆ. ಮತ್ತೊಂದೆಡೆ ಕೇಂದ್ರ ಸಚಿವರು ಮೊಬೈಲ್​ಅನ್ನು ಮೇಲಿಂದ ಬಿಸಾಕುವ ಮೂಲಕ ಅದರ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ.

ಮೇಲಿಂದ ಬಿಸಾಕಿ ಮೊಬೈಲ್ ಟೆಸ್ಟ್ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌: ವಿಡಿಯೋ ನೋಡಿ
Minister Ashwini Vaishnaw performs smartphone drop test
TV9 Web
| Updated By: ನಯನಾ ರಾಜೀವ್|

Updated on:Oct 04, 2022 | 6:12 PM

Share

ನವದೆಹಲಿ: ಭಾರತದಲ್ಲಿ ಇದೀಗ 5-G ಯುಗಾರಂಭವಾಗಿದೆ. ಮೊನ್ನೇ ಅಷ್ಟೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಇದೀಗ ಅದು ಹೇಗೆ ವರ್ಕ್ ಆಗುತ್ತೆ? ಯಾವ ಫೋನ್​ಗಳಿಗೆ ಸಪೋರ್ಟ್​ ಮಾಡಿತ್ತೆ? ಅಂತೆಲ್ಲಾ ಮೊಬೈಲ್ ಬಳಕೆದಾರರಲ್ಲಿ ಚರ್ಚೆ ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ‘ಅಶ್ವಿನಿ ವೈಷ್ಣವ್ ಅವರು ವಿಶಿಷ್ಟ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಸ್ಮಾರ್ಟ್​ ಫೋನ್​ವೊಂದನ್ನು ನೆಲಕ್ಕೆ ಬೀಳಿಸಿ ಅದರ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ.

ಹೌದು…..ಒಂದು ಸ್ಮಾರ್ಟ್​ಫೋನ್​ ಖರೀದಿಸುತ್ತಿದ್ರೆ, ಅದರ ಆಳ ಅಗಲದ ಬಗ್ಗೆ ಪರೀಕ್ಷಿಸುತ್ತಾರೆ. ಅದರಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನ ಆರನೇ ಆವೃತ್ತಿಯ ಕಾರ್ಯಕ್ರದಮಲ್ಲಿ ಭಾಗವಹಿಸಿ ಮೊಬೈಲ್​ವೊಂದನ್ನು ಮೇಲಿಂದ ಕೆಳಕ್ಕೆ ಬಿಸಾಡಿ ಪರೀಕ್ಷೆ ಮಾಡಿದ್ದಾರೆ.

ಭಾರತದಲ್ಲಿ ವಿನ್ಯಾಸಗೊಳಿಸಲಾದ ಈ ಹೊಸ ಹಾಗೂ ವಿಶಿಷ್ಟ ಹ್ಯಾಂಡ್‌ಸೆಟ್‌ನ್ನು ತಮ್ಮ ಎದೆ ಮಟ್ಟದ ಎತ್ತದದಿಂದ ಕೆಳಕ್ಕೆ ಬೀಳಿಸಿ ಅದರ ಸಾಮರ್ಥ್ಯ ಹಾಗೂ ಅದರ ಗುಣಮಟ್ಟವನ್ನು ಟೆಸ್ಟ್ ಮಾಡಿದರು. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: 5G ಸೇವೆಗಳ ನಂತರ ಇದೀಗ 6G ವಿಭಾಗದಲ್ಲಿ ಮುನ್ನಡೆ ಸಾಧಿಸಲಿರುವ ಭಾರತ

ವಿಡಿಯೋದಲ್ಲಿ ಸ್ಮಾರ್ಟ್​ಫೋನ್​ಅನ್ನು ಸಚಿವರು ಮೇಲಿಂದ ಕೆಳಕ್ಕೆ ಬಿಟ್ಟಿದ್ದಾರೆ. ಆದ್ರೆ, ಈ ಫೋನ್​ಗೆ ಯಾವುದೇ ಹಾನಿಯಾಗಿಲ್ಲ. ಹಾಗೇ ಅದರ ಡಿಸ್​ಪ್ಲೇ ಪರಿಪೂರ್ಣ ಸ್ಥಿತಿಯಲ್ಲಿಯಲ್ಲಿರುವುದು ಕಾಣಬಹುದು. ಸಾಮಾನ್ಯವಾಗಿ ಜನರ ಎದೆ ಮಟ್ಟದಿಂದ ಫೋನ್​ಗಳು ಕೆಳಕ್ಕೆ ಬೀಳುತ್ತವೆ. ಅದರಂತೆ ಈ ಹೊಸ ತಂತ್ರಜ್ಞಾನದ ಸ್ಮಾರ್ಟ್​ ಫೋನ್​ ಅನ್ನು ಸಹ ಎದೆಮಟ್ಟದ ಎತ್ತರಿಂದ ಕೆಳಕ್ಕೆ ಬೀಳಿಸಿ ಟೆಸ್ಟ್ ಮಾಡಿರುವುದು ವಿಶೇಷ.

ಕೆಲವೊಮ್ಮೆ ಸ್ಮಾರ್ಟ್​ಫೋನ್​ ಖರೀದಿಸುವ ಗೋಜಿನಲ್ಲಿ ಅದರ ವಿಶೇಷತೆ? ಬಗೆಗೆ ತಿಳಿದೇ ಇರುವುದಿಲ್ಲ. ನಂತರ ತಲೆಕೆಡಿಸಿಕೊಳ್ಳುವ ಪ್ರಸಂಗಗಳು ಎದರುರಾಗುತ್ತದೆ. ಹಾಗಾಗಿ, ಸ್ಮಾರ್ಟ್​ಫೋನ್​ ಖರೀದಿಗೂ ಮುನ್ನ ಅದರಲ್ಲಿ ಅಳವಡಿಸಿಕೊಂಡಿರುವ ಪ್ರೊಸೆಸರ್​, ಬ್ಯಾಟರಿ, ಕ್ಯಾಮೆರಾ, ಸ್ಟೊರೇಜ್​ ಮುಂತಾದವುಗಳ ಕುರಿತು ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಡೆಮೋ ಮೊಬೈಲ್​ ಕೈಯಲ್ಲಿ ಹಿಡಿದುಕೊಂಡು ಪರೀಕ್ಷೆ ಮಾಡುವುದು ಉಂಟು.

Published On - 5:49 pm, Tue, 4 October 22

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು