AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile users: ಪ್ರೀಪೇಯ್ಡ್​ನಿಂದ ಪೋಸ್ಟ್​ಪೋಯ್ಡ್ ಹಾಗೂ ಪೋಸ್ಟ್​ಪೋಯ್ಡ್​ನಿಂದ ಪ್ರೀಪೇಯ್ಡ್​ಗೆ ಒಟಿಪಿಯೇ ಸಾಕು

ಮೊಬೈಲ್ ಬಳಕೆದಾರರು ಪೋಸ್ಟ್​ಪೇಯ್ಡ್​ನಿಂದ ಪ್ರೀಪೇಯ್ಡ್​ಗೆ ಹಾಗೂ ಪ್ರೀಪೇಯ್ಡ್​ನಿಂದ ಪೋಸ್ಟ್​ಪೇಯ್ಡ್​ಗೆ ಒಟಿಪಿ ಬಳಸಿಯೇ ಬದಲಾಯಿಸಿಕೊಳ್ಳುವಂಥ ಕಾಲ ಸದ್ಯದಲ್ಲೇ ಬರಲಿದೆ.

Mobile users: ಪ್ರೀಪೇಯ್ಡ್​ನಿಂದ ಪೋಸ್ಟ್​ಪೋಯ್ಡ್ ಹಾಗೂ ಪೋಸ್ಟ್​ಪೋಯ್ಡ್​ನಿಂದ ಪ್ರೀಪೇಯ್ಡ್​ಗೆ ಒಟಿಪಿಯೇ ಸಾಕು
ಸಾಂದರ್ಭಿಕ ಚಿತ್ರ
Srinivas Mata
|

Updated on: May 24, 2021 | 10:40 PM

Share

ನವದೆಹಲಿ: ದೂರಸಂಪರ್ಕ ಇಲಾಖೆ (DoT) ಅಧಿಕೃತ ಮಾಹಿತಿ ಪ್ರಕಾರ, SIM ಕಾರ್ಡ್ ಬದಲಾಯಿಸದೆ OTP (ಒನ್ ಟೈಮ್ ಪಾಸ್​ವರ್ಡ್) ಆಧಾರದಲ್ಲಿ ಪೋಸ್ಟ್​ಪೇಯ್ಡ್ ಸಂಪರ್ಕದಿಂದ ಪ್ರೀಪೇಯ್ಡ್​ಗೆ ಹಾಗೂ ಪ್ರೀಪೇಯ್ಡ್​ನಿಂದ ಪೋಸ್ಟ್​ಪೇಯ್ಡ್​ಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಸದ್ಯದಲ್ಲೇ ಅವಕಾಶ ದೊರೆಯಬಹುದಾಗಿದೆ. ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಹೇಗೆ ಇದನ್ನು ಮಾಡಬಹುದು ಎಂಬ ಬಗ್ಗೆ ದೂರಸಂಪರ್ಕ ಇಲಾಖೆಗೆ ಪ್ರಸ್ತಾವ ಮಾಡಿದೆ. ಇಲಾಖೆಯು ಟೆಲಿಕಾಂ ಆಪರೇಟರ್​ಗಳಿಗೆ ಈ ಬಗ್ಗೆ ಪ್ರೂಫ್ ಆಫ್ ಕಾನ್ಸೆಪ್ಟ್ (PoC) ಮುಂದುವರಿಸಲು ಕೇಳಲಾಗಿದೆ. PoC ಏನು ಬರುತ್ತದೆ ಎಂಬುದರ ಆಧಾರದಲ್ಲಿ ಖಾತೆ ಬದಲಾವಣೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

COAI ಸದಸ್ಯರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾದಿಂದ ಏಪ್ರಿಲ್ 9ರಂದು ದೂರಸಂಪರ್ಕ ಇಲಾಖೆಗೆ ಮನವಿ ಸಲ್ಲಿಸಿದೆ. ಮೊದಲೇ ಹೇಳಿದ ಹಾಗೆ ಗ್ರಾಹಕರು ಪೋಸ್ಟ್​ಪೇಯ್ಡ್​ನಿಂದ ಪ್ರೀಪೇಯ್ಡ್​ಗೆ ಹಾಗೂ ಪ್ರೀಪೇಯ್ಡ್​ನಿಂದ ಪೋಸ್ಟ್​ಪೇಯ್ಡ್​ಗೆ ಬದಲಾವಣೆಯನ್ನು ಒಟಿಪಿಯಿಂದಲೇ ಮಾಡಿಕೊಳ್ಳುವಂತಾಗಬೇಕು. ಹೊಸದಾಗಿ ಕೆವೈಸಿ (ನೋ ಯುವರ್ ಕಸ್ಟಮರ್) ಪಡೆಯುವ ಅಗತ್ಯ ಇರಬಾರದು ಎಂದು ಮನವಿ ಸಲ್ಲಿಸಿವೆ.

ಈ ಹೊಸ ಪ್ರಸ್ತಾವಿತ ಪ್ರಕ್ರಿಯೆಯಲ್ಲಿ ಚಂದಾದಾರರು ತಮ್ಮ ಮೊಬೈಲ್​ ಸಂಪರ್ಕದ ಬಗೆಯನ್ನು ಎಸ್ಸೆಮ್ಮೆಸ್, ಐವಿಆರ್​ಎಸ್​, ವೆಬ್​ಸೈಟ್ ಅಥವಾ ಅಧಿಕೃತ ಆ್ಯಪ್ ಮೂಲಕ ಮಾಡಬಹುದು. ಮನವಿ ಬಂದ ಮೇಲೆ, ಚಂದಾದಾರಿಗೆ ಮೊಬೈಲ್ ಖಾತೆ ಬದಲಾವಣೆ ಬಗ್ಗೆ ಖಾತ್ರಿ ಬರುತ್ತದೆ. ವಿಶಿಷ್ಟ ವಹಿವಾಟಿನ ಐಡಿ (ಯೂನಿಕ್ ಟ್ರಾನ್ಸಾಕ್ಷನ್ ಐಡಿ) ಮತ್ತು ಒಟಿಪಿ 10 ನಿಮಿಷಗಳ ಸಿಂಧುತ್ವದೊಂದಿಗೆ ಬರುತ್ತದೆ.

ಇದನ್ನೂ ಓದಿ: Mobile data plan: 100 ರೂಪಾಯಿಯೊಳಗೆ ಅನ್​ಲಿಮಿಟೆಡ್ ಮೊಬೈಲ್ ಇಂಟರ್​ನೆಟ್ ಸಿಗುವ ಪ್ಲಾನ್​ಗಳಿವು

(Mobile users may soon change their postpaid to prepaid and viceversa with OTP. Here is the details)

Follow Us
Srinivas Mata
Srinivas Mata
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!