AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus Nord CE 5G: ಒನ್​ಪ್ಲಸ್ Nord CE 5G ಭಾರತದಲ್ಲಿ ಬಿಡುಗಡೆ; ಬೆಲೆ, ಫೀಚರ್ ಮತ್ತಿತರ ವಿವರ ಇಲ್ಲಿದೆ

ಒನ್​ಪ್ಲಸ್​ನಿಂದ ನಾರ್ಡ್ ಸಿಇ 5G ಮೊಬೈಲ್​ ಅನ್ನು ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್​ನ ಬೆಲೆ, ವೈಶಿಷ್ಟ್ಯ, ಬಣ್ಣ ಮತ್ತಿತರ ಮಾಹಿತಿ ಇಲ್ಲಿದೆ.

OnePlus Nord CE 5G: ಒನ್​ಪ್ಲಸ್ Nord CE 5G ಭಾರತದಲ್ಲಿ ಬಿಡುಗಡೆ; ಬೆಲೆ, ಫೀಚರ್ ಮತ್ತಿತರ ವಿವರ ಇಲ್ಲಿದೆ
ಒನ್​ಪ್ಲಸ್ ನಾರ್ಡ್ ಸಿಇ 5G
TV9 Web
| Updated By: Srinivas Mata|

Updated on: Jun 11, 2021 | 11:41 AM

Share

ಒನ್​ಪ್ಲಸ್ ಕಂಪೆನಿಯಿಂದ ಗುರುವಾರ ಲೈವ್​ ಸ್ಟ್ರೀಮ್​ನಲ್ಲಿ Nord CE 5G ಮೊಬೈಲ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದು ನಾರ್ಡ್ ಸರಣಿಯ ಹೊಸ ಮಾಡೆಲ್. ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಿದ ಒರಿಜಿನಲ್ ಒನ್​ಪ್ಲಸ್ ನಾರ್ಡ್​ಗಿಂತ ಇದರಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಹೆಚ್ಚು ಜನರನ್ನು ತಲುಪಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಈ ವರೆಗೆ, ಅಂದರೆ 2018ರ ಅಕ್ಟೋಬರ್​ನಲ್ಲಿ ಒನ್​ಪ್ಲಸ್ 6T ಬಿಡುಗಡೆಯಾದ ದಿನದಿಂದ ಈಗಿನ ಫೋನ್ ಅತ್ಯಂತ ತೆಳುವಾದದ್ದು ಎನಿಸಿಕೊಂಡಿದೆ. ಈ ಹೊಸ ಫೋನ್​ ಬಗ್ಗೆ ಗ್ರಾಹಕರಲ್ಲಿ ಇರಬಹುದಾದ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಬೆಲೆ ಮತ್ತಿತರ ವಿವರ ಒನ್​ಪ್ಲಸ್ ನಾರ್ಡ್ ಸಿಇ 5G ಫೋನ್ ಭಾರತದಲ್ಲಿ ರೂ. 22,999ಕ್ಕೆ ಶುರುವಾಗುತ್ತಿದೆ. ಅದು 6GB+128GB ಸ್ಟೋರೇಜ್ (ಸಂಗ್ರಹ ಸಾಮರ್ಥ್ಯದ) ವೇರಿಯಂಟ್​ಗೆ. ನಂತರದ್ದು 8GB+128GB ಸ್ಟೋರೇಜ್ (ಸಂಗ್ರಹ ಸಾಮರ್ಥ್ಯ). ಅದಕ್ಕೆ ರೂ. 24,999. ಟಾಪ್​ ಎಂಡ್ ಫೋನ್ 12GB+256GB ಸ್ಟೋರೇಜ್ (ಸಂಗ್ರಹ ಸಾಮರ್ಥ್ಯ) ಬೆಲೆ ರೂ. 27,999.

ಯಾವ ಬಣ್ಣಗಳಲ್ಲಿ ದೊರೆಯುತ್ತದೆ? ಎಲ್ಲಿ ಖರೀದಿಸಬಹುದು? ಬ್ಲ್ಯೂ ವಾಯ್ಡ್ (ಮ್ಯಾಟ್), ಚಾರ್​ಕೋಲ್ ಇಂಕ್ (ಗ್ಲಾಸಿ) ಮತ್ತು ಸಿಲ್ವರ್ ರೇ ಈ ಬಣ್ಣಗಳಲ್ಲಿ ಲಭ್ಯ. ಅಮೆಜಾನ್ ಮತ್ತು ಒನ್​ಪ್ಲಸ್.ಇನ್​ನಲ್ಲಿ ಜೂನ್ 16ನೇ ತಾರೀಕಿನಿಂದ ದೊರೆಯುತ್ತದೆ. ಪ್ರೀ ಬುಕ್ಕಿಂಗ್ ಜೂನ್​ 11ರಿಂದ ಶುರುವಾಗುತ್ತದೆ.

ಬಿಡುಗಡೆ ಆಫರ್​, ರಿಯಾಯಿತಿಗಳು ಇವೆಯಾ? – ಎಚ್​ಡಿಎಫ್​ಸಿ ಕ್ರೆಡಿಟ್​ ಕಾರ್ಡ್​ ಅಥವಾ ಇಎಂಐ ಮೂಲಕ ಖರೀದಿಸುವವರಿಗೆ 1,000 ರಿಯಾಯಿತಿ. – 999 ರೂಪಾಯಿ ಪ್ಲಾನ್ ಜತೆ ರೀಚಾರ್ಜ್ ಮಾಡಿಸುವ ಜಿಯೋ ಚಂದಾದಾರರಿಗೆ ರೂ. 6000 ಮೌಲ್ಯದ ಬೆನಿಫಿಟ್ – ಒನ್​ಪ್ಲಸ್ Nord CE ಗ್ರಾಹಕರಾಗಿದ್ದು ಒನ್​ಪ್ಲಸ್ ಬಡ್ಸ್ Z ಅಥವಾ ಒನ್​ಪ್ಲಸ್ ಬ್ಯಾಂಡ್ ಅನ್ನು ಒನ್​ಪ್ಲಸ್.ಇನ್ ವೆಬ್​ಸೈಟ್​ನಲ್ಲಿ ಖರೀರಿಸಿದಲ್ಲಿ 500 ರೂಪಾಯಿ ರಿಯಾಯಿತಿ ಪಕ್ಕಾ. – ನೋ ಕಾಸ್ಟ್ ಇಎಂಐನಲ್ಲೂ ಫೋನ್ ಲಭ್ಯ. – ಒನ್​ಪ್ಲಸ್ ರೆಡ್ ಕೇಬಲ್ ಸದಸ್ಯರು ಅಮೆಜಾನ್​ ಮೂಲಕ ಪ್ರೀಆರ್ಡರ್ ಮಾಡಿದಲ್ಲಿ ರೂ. 500 ಕ್ಯಾಶ್​ ಬ್ಯಾಕ್

ಒನ್​ಪ್ಲಸ್ ನಾರ್ಡ್ ಸಿಇ 5G ಸ್ಪೆಸಿಫಿಕೇಷನ್ ಮತ್ತು ವೈಶಿಷ್ಟ್ಯಗಳು * ಡ್ಯುಯಲ್ ಸಿಮ್ (ನ್ಯಾನೋ) * ಆಂಡ್ರಾಯಿಡ್ 11 ಜತೆಗೆ ಆಕ್ಸಿಜನ್ಒಎಸ್ 11 ಆಪರೇಟಿಂಗ್ ಸಿಸ್ಟಮ್ * 6.43 ಇಂಚಿನ ಫುಲ್ ಎಚ್​ಡಿ+ (1080X2400 ಪಿಕ್ಸೆಲ್ಸ್) AMOLED ಡಿಸ್​ಪ್ಲೇ ಜತೆಗೆ 20:9 ಆಸ್ಪೆಕ್ಟ್​ ರೇಷಿಯೋ * 90Hz ರಿಫ್ರೆಷ್ ರೇಟ್ * ಆಕ್ಟಾಕೋರ್ ಕ್ವಾಲ್​ಕಾಮ್ ಸ್ನ್ಯಾಪ್​ಡ್ರ್ಯಾಗನ್ 750G SoC ಪ್ರೊಸೆಸರ್ * ಅಡ್ರೆನೊ 619 ಜಿಪಿಯು ಮತ್ತು 6GB RAM * ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ 64MP, f/1.79 ಲೆನ್ಸ್, ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಷನ್ (EIS), 8MP ಸೆಕೆಂಡರಿ ಸೆನ್ಸರ್ f/2.25 ಅಲ್ಟ್ರಾ ವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್​ ಮೊನೊಕ್ರೋಮ್ ಸೆನ್ಸರ್ ಜತೆಗೆ f/2.4 ಲೆನ್ಸ್ * ಕನೆಕ್ಟಿವಿಟಿ: 5G, 4G LTE, Wi-Fi 802.11ac, Bluetooth v5.1, GPS/A-GPS/NaVIC, NFC, USB Type- C, 3.5mm ಹೆಡ್​ಫೋನ್ ಜಾಕ್, ಪ್ರಾಕ್ಸಿಮಿಟಿ ಸೆನ್ಸರ್ * ಫಿಂಗರ್​ಪ್ರಿಂಟ್ ಸೆನ್ಸರ್ ಜತೆಗೆ ಸೂಪರ್ ಲೀನಿಯರ್ ಸ್ಪೀಕರ್ ಜತೆಗೆ ನಾಯ್ಸ್​ಕ್ಯಾನ್ಸಲೇಷನ್ ಸಪೋರ್ಟ್. * 4500 mAh ಬ್ಯಾಟರಿ ಬರುತ್ತದೆ. ವಾರ್ಪ್ ಚಾರ್ಜ್ 30T ಪ್ಲಸ್ ಟೆಕ್ನಾಲಜಿ.

ಇದನ್ನೂ ಓದಿ: OnePlus TV: ಒನ್​ಪ್ಲಸ್​ನಿಂದ ಸ್ಮಾರ್ಟ್ 4K ಟಿವಿ U1S ಬಿಡುಗಡೆ; ಬೆಲೆ, ವೈಶಿಷ್ಟ್ಯ ಮತ್ತಿತರ ಮಾಹಿತಿ ಇಲ್ಲಿದೆ

ಇದನ್ನೂ ಓದಿ: OnePlus 9, OnePlus 9R: ಭಾರತಕ್ಕೆ ಬಂತು ಒನ್​ಪ್ಲಸ್ 9, ಒನ್​ಪ್ಲಸ್ 9R; ಫೋನ್ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್

(OnePlus Nord CE 5G mobile phone launched in India on Thursday. Here is the phone features, price, colour, specification other details here)

ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ