AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ

ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ M12 ಮೊಬೈಲ್​​ಫೋನ್ ಭಾರತದಲ್ಲಿ ಬಿಡುಗಡೆ ಆಗುತ್ತಿದೆ. ದರ, ತಾಂತ್ರಿಕ ವೈಶಿಷ್ಟ್ಯ, ಮಾರಾಟದ ದಿನಾಂಕ ಮತ್ತಿತರ ಮಾಹಿತಿಗಳು ಇಲ್ಲಿವೆ. 6000 mAh ಬ್ಯಾಟರಿ ಸಾಮರ್ಥ್ಯದ ಫೋನ್ ಇದು.

Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ
ಸ್ಯಾಮ್​ಸಂಗ್ (ಸಂಗ್ರಹ ಚಿತ್ರ)
Srinivas Mata
| Edited By: |

Updated on: Mar 11, 2021 | 2:51 PM

Share

ಭಾರತದಲ್ಲಿ ಸ್ಯಾಮ್ಸಂಗ್​ ಗ್ಯಾಲಕ್ಸಿ M12 ಬಿಡುಗಡೆYaಗಿದೆ. ಕಂಪೆನಿಯಿಂದ ಈ ಸ್ಮಾರ್ಟ್ ಫೋನ್ ಅನ್ನು ಮಧ್ಯಮ ರೇಂಜ್ ಸೆಗ್ಮೆಂಟ್​ನಲ್ಲಿ ಪರಿಚಯಿಸಲಾಗಿದೆ. ವಾಟರ್​​ಡ್ರಾಪ್ ನಾಚ್ ಹೌಸಿಂಗ್ ಮುಂಭಾಗದ ಕ್ಯಾಮೆರಾ ಮತ್ತು ರೇರ್ ಪ್ಯಾನೆಲ್​ನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್ ಅಪ್ ಇರಲಿದೆ. ಈ ಸಲಕರಣೆಯಲ್ಲಿ 8Nm ಪ್ರೊಸೆಸರ್ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ M12 ಬೆಲೆ ರೂ. 9,999ರಿಂದ ಶುರುವಾಗುತ್ತದೆ. ಈ ಫೋನ್​​ನ ಮೊದಲ ಮಾರಾಟ ಮಾರ್ಚ್ 18ನೇ ತಾರೀಕಿನ ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಇಂಡಿಯಾ ವೆಬ್​ಸೈಟ್​ನಲ್ಲಿ ಶುರುವಾಗುತ್ತದೆ. ಇನ್ನು ಅಮೆಜಾನ್ ಪ್ರೈಮ್ ಸದಸ್ಯರು 24 ಗಂಟೆ ಮುಂಚಿತವಾಗಿಯೇ ಈ ಮಾರಾಟದ ವೇಳೆ ಖರೀದಿ ಮಾಡಬಹುದು. ಕಪ್ಪು, ನೀಲಿ ಹಾಗೂ ಬಿಳಿ ಹೀಗೆ ಮೂರು ಬಣ್ಣಗಳಲ್ಲಿ ಫೋನ್ ಲಭ್ಯ ಇದೆ.

ಈ ಫೋನ್ ಅನ್ನು ಅಮೆಜಾನ್ ಇಂಡಿಯಾ, ಸ್ಯಾಮ್ಸಂಗ್ ಅಧಿಕೃತ ವೆಬ್​ಸೈಟ್ ಮತ್ತು ಕಂಪೆನಿಯ ಅಧಿಕೃತ ಡೀಲರ್​ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಯಾಮ್ಸಂಗ್ ಎಂ12 ಖರೀದಿಸುವ ಅತಿ ಮುಖ್ಯವಾದ ಕಾರಣ ಏನೆಂದರೆ, ಇದರ ಬ್ಯಾಟರಿ ಸಾಮರ್ಥ್ಯ. 6000 mAh ಬ್ಯಾಟರಿ ಹೊಂದಿದೆ ಇದರ ಜತೆಗೆ 15ವ್ಯಾಟ್ ಚಾರ್ಜರ್ ಬರುತ್ತದೆ. ಇನ್ನು 6.5 ಇಂಚಿನ ಡಿಸ್​ಪ್ಲೇ ಬರಲಿದ್ದು, 90 hz ರಿಫ್ರೆಷ್ ದರ ಇದೆ.

ರೇರ್ ಪ್ಯಾನೆಲ್ ಹೌಸಸ್​​ನಲ್ಲಿ ಪ್ರಾಥಮಿಕ ಲೆನ್ಸ್ 48 MP ಮಾಡ್ಯುಲ್ ಆಗಿದೆ. ಈ ಫೋನ್​ನಲ್ಲಿ 8 ಎಂಪಿ ಅಲ್ಟ್ರಾವೈಡ್ ಲೆನ್ಸ್, 5MP ಡೆಪ್ತ್ ಸೆನ್ಸರ್ ಮತ್ತು 2 MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಗ್ಯಾಲಕ್ಸಿ M12 ಮೊಬೈಲ್ ಫೋನ್ 8MP ಫ್ರಂಟ್ ಫೇಸಿಂಗ್ ಸೆನ್ಸರ್ ಹೊಂದಿದೆ. ಈ ಮೊಬೈಲ್ ಫೋನ್ ಎಕ್ಸಿನೊಸ್ 850 ಪ್ರೊಸೆಸರ್ 8nm ಚಿಪ್​ಸೆಟ್ ಹೊಂದಿದೆ.

ಇದನ್ನೂ ಓದಿ: Redmi Note 10 ಸೀರಿಸ್​ ಮೊಬೈಲ್​ಗೆ 103 MP ಕ್ಯಾಮೆರಾ! ಕೈಗೆಟುಕುವ ದರ

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ