AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ

ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ M12 ಮೊಬೈಲ್​​ಫೋನ್ ಭಾರತದಲ್ಲಿ ಬಿಡುಗಡೆ ಆಗುತ್ತಿದೆ. ದರ, ತಾಂತ್ರಿಕ ವೈಶಿಷ್ಟ್ಯ, ಮಾರಾಟದ ದಿನಾಂಕ ಮತ್ತಿತರ ಮಾಹಿತಿಗಳು ಇಲ್ಲಿವೆ. 6000 mAh ಬ್ಯಾಟರಿ ಸಾಮರ್ಥ್ಯದ ಫೋನ್ ಇದು.

Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ
ಸ್ಯಾಮ್​ಸಂಗ್ (ಸಂಗ್ರಹ ಚಿತ್ರ)
Srinivas Mata
| Updated By: guruganesh bhat|

Updated on: Mar 11, 2021 | 2:51 PM

Share

ಭಾರತದಲ್ಲಿ ಸ್ಯಾಮ್ಸಂಗ್​ ಗ್ಯಾಲಕ್ಸಿ M12 ಬಿಡುಗಡೆYaಗಿದೆ. ಕಂಪೆನಿಯಿಂದ ಈ ಸ್ಮಾರ್ಟ್ ಫೋನ್ ಅನ್ನು ಮಧ್ಯಮ ರೇಂಜ್ ಸೆಗ್ಮೆಂಟ್​ನಲ್ಲಿ ಪರಿಚಯಿಸಲಾಗಿದೆ. ವಾಟರ್​​ಡ್ರಾಪ್ ನಾಚ್ ಹೌಸಿಂಗ್ ಮುಂಭಾಗದ ಕ್ಯಾಮೆರಾ ಮತ್ತು ರೇರ್ ಪ್ಯಾನೆಲ್​ನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್ ಅಪ್ ಇರಲಿದೆ. ಈ ಸಲಕರಣೆಯಲ್ಲಿ 8Nm ಪ್ರೊಸೆಸರ್ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ M12 ಬೆಲೆ ರೂ. 9,999ರಿಂದ ಶುರುವಾಗುತ್ತದೆ. ಈ ಫೋನ್​​ನ ಮೊದಲ ಮಾರಾಟ ಮಾರ್ಚ್ 18ನೇ ತಾರೀಕಿನ ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಇಂಡಿಯಾ ವೆಬ್​ಸೈಟ್​ನಲ್ಲಿ ಶುರುವಾಗುತ್ತದೆ. ಇನ್ನು ಅಮೆಜಾನ್ ಪ್ರೈಮ್ ಸದಸ್ಯರು 24 ಗಂಟೆ ಮುಂಚಿತವಾಗಿಯೇ ಈ ಮಾರಾಟದ ವೇಳೆ ಖರೀದಿ ಮಾಡಬಹುದು. ಕಪ್ಪು, ನೀಲಿ ಹಾಗೂ ಬಿಳಿ ಹೀಗೆ ಮೂರು ಬಣ್ಣಗಳಲ್ಲಿ ಫೋನ್ ಲಭ್ಯ ಇದೆ.

ಈ ಫೋನ್ ಅನ್ನು ಅಮೆಜಾನ್ ಇಂಡಿಯಾ, ಸ್ಯಾಮ್ಸಂಗ್ ಅಧಿಕೃತ ವೆಬ್​ಸೈಟ್ ಮತ್ತು ಕಂಪೆನಿಯ ಅಧಿಕೃತ ಡೀಲರ್​ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಯಾಮ್ಸಂಗ್ ಎಂ12 ಖರೀದಿಸುವ ಅತಿ ಮುಖ್ಯವಾದ ಕಾರಣ ಏನೆಂದರೆ, ಇದರ ಬ್ಯಾಟರಿ ಸಾಮರ್ಥ್ಯ. 6000 mAh ಬ್ಯಾಟರಿ ಹೊಂದಿದೆ ಇದರ ಜತೆಗೆ 15ವ್ಯಾಟ್ ಚಾರ್ಜರ್ ಬರುತ್ತದೆ. ಇನ್ನು 6.5 ಇಂಚಿನ ಡಿಸ್​ಪ್ಲೇ ಬರಲಿದ್ದು, 90 hz ರಿಫ್ರೆಷ್ ದರ ಇದೆ.

ರೇರ್ ಪ್ಯಾನೆಲ್ ಹೌಸಸ್​​ನಲ್ಲಿ ಪ್ರಾಥಮಿಕ ಲೆನ್ಸ್ 48 MP ಮಾಡ್ಯುಲ್ ಆಗಿದೆ. ಈ ಫೋನ್​ನಲ್ಲಿ 8 ಎಂಪಿ ಅಲ್ಟ್ರಾವೈಡ್ ಲೆನ್ಸ್, 5MP ಡೆಪ್ತ್ ಸೆನ್ಸರ್ ಮತ್ತು 2 MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಗ್ಯಾಲಕ್ಸಿ M12 ಮೊಬೈಲ್ ಫೋನ್ 8MP ಫ್ರಂಟ್ ಫೇಸಿಂಗ್ ಸೆನ್ಸರ್ ಹೊಂದಿದೆ. ಈ ಮೊಬೈಲ್ ಫೋನ್ ಎಕ್ಸಿನೊಸ್ 850 ಪ್ರೊಸೆಸರ್ 8nm ಚಿಪ್​ಸೆಟ್ ಹೊಂದಿದೆ.

ಇದನ್ನೂ ಓದಿ: Redmi Note 10 ಸೀರಿಸ್​ ಮೊಬೈಲ್​ಗೆ 103 MP ಕ್ಯಾಮೆರಾ! ಕೈಗೆಟುಕುವ ದರ

ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ