AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanchar Saathi Portal: ಕಳೆದುಹೋದ ಮೊಬೈಲ್ ಹುಡುಕುವುದು ಇನ್ಮುಂದೆ ಸುಲಭ, ವಿಧಾನ ಇಲ್ಲಿದೆ

ಇನ್ನುಮುಂದೆ ಕಳೆದುಹೋದ ಮೊಬೈಲ್​ ಫೋನ್ ಹುಡುಕುವುದು ಸುಲಭ, ಭಾರತದಲ್ಲಿ ಸಂಚಾರ ಸಾಥಿ ಪೋರ್ಟಲ್ (sancharsaathi.gov.in) ಪ್ರಾರಂಭಿಸಲಾಗಿದ್ದು, ಕಳೆದು ಹೋದ ಮೊಬೈಲ್​ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.

Sanchar Saathi Portal: ಕಳೆದುಹೋದ ಮೊಬೈಲ್ ಹುಡುಕುವುದು ಇನ್ಮುಂದೆ ಸುಲಭ, ವಿಧಾನ ಇಲ್ಲಿದೆ
ಮೊಬೈಲ್
ನಯನಾ ರಾಜೀವ್
| Edited By: |

Updated on:May 17, 2023 | 11:27 AM

Share

ಇನ್ನುಮುಂದೆ ಕಳೆದುಹೋದ ಮೊಬೈಲ್​ ಫೋನ್ ಹುಡುಕುವುದು ಸುಲಭ, ಭಾರತದಲ್ಲಿ ಸಂಚಾರ ಸಾಥಿ (Sanchar Saathi) ಪೋರ್ಟಲ್ ಪ್ರಾರಂಭಿಸಲಾಗಿದ್ದು, ಕಳೆದು ಹೋದ ಮೊಬೈಲ್​ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದೇಶದ ಯಾವುದೇ ಮೂಲೆಯಲ್ಲಿ ನಿಮ್ಮ ಮೊಬೈಲ್ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾಗಿದ್ದರೆ, ಅದನ್ನು ಕಂಡುಹಿಡಿಯಲು ಸರ್ಕಾರದ ಸಂಚಾರ ಸಾಥಿ ಪೋರ್ಟಲ್ ನಿಮಗೆ ಸಹಾಯ ಮಾಡುತ್ತದೆ. ಈ ಪೋರ್ಟಲ್​ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ. ಈ ಪೋರ್ಟಲ್‌ನ ವಿಶೇಷತೆಯೆಂದರೆ ಇದನ್ನು ಹಿಂದಿ, ಇಂಗ್ಲಿಷ್ ಮತ್ತು ದೇಶದ ಎಲ್ಲಾ ಭಾಷೆಗಳಲ್ಲಿ ಬಳಸಬಹುದು.

ಸಂಚಾರ ಸಾಥಿ ಪೋರ್ಟಲ್ ಸಿಇಐಆರ್​ ನೋ ಯುವರ್ ಮೊಬೈಲ್ ಮತ್ತು ಎಎಸ್​ಟಿಆರ್​ಗಳನ್ನು ಒಳಗೊಂಡಿದೆ. ಸಿಇಐಆರ್​ ಆರಂಭಿಕ ಪ್ರಾಜೆಕ್ಟ್​ ಆಗಿದ್ದು, ಟೆಲಿಕಾಂ ಸಚಿವಾಲಯವು ದೇಶದ ಕೆಲವು ಟೆಲಿಕಾಂ ಸರ್ಕಲ್​ಗಳಲ್ಲಿ ಆರಂಭಿಸಿದೆ. ಈ ಪೋರ್ಟಲ್ , ಟೆಲಿಕಾಂ ಅನಾಲಿಟಿಕ್ಸ್​ ಫಾರ್ ಫ್ರಾಡ್​ ಮ್ಯಾನೇಜ್​ಮೆಂಟ್ ಆ್ಯಂಡ್ ಕನ್ಸೂಮರ್ ಪ್ರೊಟೆಕ್ಷನ್ ಮತ್ತೊಂದು ಮಾದರಿಯನ್ನು ಒಳಗೊಂಡಿದೆ.

ಮತ್ತಷ್ಟು ಓದಿ: Tech Tips: ಇನ್ನುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ

ಕಳೆದು ಹೋದ ಅಥವಾ ಕಳ್ಳತನವಾದ ಮೊಬೈಲ್​ ಫೋನ್​ಗಳನ್ನು ಮರಳಿ ಪಡೆಯಲು ಸಿಇಐಆರ್ ನೆರವು ಒದಗಿಸಲಿದೆ. ಕಳೆದುಹೋದ ಅಥವಾ ಕಳ್ಳತನ ಮಾಡಲಾದ ಮೊಬೈಲ್ ಫೋನ್​ಗಳ ಬಳಕೆಯನ್ನು ಎಲ್ಲೆಡೆ ನಿರ್ಬಂಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ.

ಕಳೆದುಹೋದ ಮೊಬೈಲ್​ಅನ್ನು ಪತ್ತೆಹಚ್ಚುವುದು ಹೇಗೆ?

  1. ಮೊದಲನೆಯದಾಗಿ, sancharsaathi.gov.in ಅನ್ನು ಕ್ಲಿಕ್ ಮಾಡಬೇಕು.
  2. ಇದಾದ ನಂತರ ಸಿಟಿಜನ್ ಸೆಂಟ್ರಿಕ್ ಸರ್ವಿಸಸ್ ಗೆ ಹೋಗಬೇಕು.
  3. ಇಲ್ಲಿ ನೀವು ಬ್ಲಾಕ್ ಯುವರ್ ಲಾಸ್ಟ್/ಸ್ಟೋಲನ್ ಮೊಬೈಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  4. ಇದಾದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನೀವು ಮೊಬೈಲ್‌ಗೆ ಸಂಬಂಧಿಸಿದ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
  5. ನಿಮ್ಮ ಫೋನ್ ಡ್ಯುಯಲ್ ಸಿಮ್ ಆಗಿದ್ದರೆ, ಎರಡೂ ಮೊಬೈಲ್‌ ನಂಬರ್​ಗಳನ್ನು ನಮೂದಿಸಬೇಕು. ಇದರೊಂದಿಗೆ 15 ಅಂಕಿಗಳಿರುವ ಎರಡೂ IMEI ಸಂಖ್ಯೆಗಳನ್ನು ನಮೂದಿಸಬೇಕು.
  6. ಸಾಧನದ ಬ್ರಾಂಡ್ ಯಾವುದು ಮತ್ತು ಅದರ ಮಾದರಿ ಸಂಖ್ಯೆ ಏನು? ಅಲ್ಲದೆ, ಸಾಧನದ ಖರೀದಿಗೆ ಸರಕುಪಟ್ಟಿ ಅಪ್ಲೋಡ್ ಮಾಡಬೇಕು.
  7. ಇದರ ನಂತರ, ಫೋನ್ ಕರೆ ದಿನಾಂಕ, ಸಮಯ ಮತ್ತು ಸ್ಥಳ, ಜಿಲ್ಲೆ, ರಾಜ್ಯವನ್ನು ನೀಡಬೇಕಾಗುತ್ತದೆ.
  8. ಇದಲ್ಲದೇ ಪೊಲೀಸ್ ದೂರು ಸಂಖ್ಯೆ, ಠಾಣೆ ಇರುವ ಸ್ಥಳ ಹಾಗೂ ಅದರ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.
  9. ಬಳಿಕ, ಮೊಬೈಲ್ ಮಾಲೀಕರ ಹೆಸರು, ವಿಳಾಸ, ಮಾಲೀಕರ ಗುರುತು ಮುಂತಾದ ವೈಯಕ್ತಿಕ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.
  10. ಒಟಿಪಿಗಾಗಿ ಮೊಬೈಲ್ ಸಂಖ್ಯೆ, ಇಮೇಲ್ ನಮೂದಿಸಬೇಕು.
  11. ನಂತರ ಹಕ್ಕು ನಿರಾಕರಣೆ ಒಪ್ಪಿಕೊಳ್ಳಬೇಕು.
  12. ಇದರ ನಂತರ ನೀವು ಫಾರ್ಮ್ ಅನ್ನು ಸಲ್ಲಿಸಲು ಸಾಧ್ಯವಾಗುತ್ತದೆ

ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:59 am, Wed, 17 May 23

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ