AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi 17 Series: ಐಫೋನ್ 17 ಮರೆತುಬಿಡಿ, ಸೆ. 30ಕ್ಕೆ ಬಿಡುಗಡೆಯಾಗಲಿದೆ ಮತ್ತೊಂದು 17 ಸರಣಿಯ ಶಕ್ತಿಶಾಲಿ ಫೋನ್

Xiaomi 17 series Launch Date: ಶಿಯೋಮಿ 17 ಸರಣಿಯ ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ. ಚೀನಾದ ಆಪಲ್ ಎಂದು ಕರೆಯಲ್ಪಡುವ ಕಂಪನಿಯ ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಸರಣಿಯು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಇದು ಶಕ್ತಿಶಾಲಿ ಬ್ಯಾಟರಿ, ಕ್ಯಾಮೆರಾ ಮತ್ತು ಇತ್ತೀಚಿನ ಕ್ವಾಲ್ಕಾಮ್ ಪ್ರೊಸೆಸರ್ ಅನ್ನು ಒಳಗೊಂಡಿರುತ್ತದೆ.

Xiaomi 17 Series: ಐಫೋನ್ 17 ಮರೆತುಬಿಡಿ, ಸೆ. 30ಕ್ಕೆ ಬಿಡುಗಡೆಯಾಗಲಿದೆ ಮತ್ತೊಂದು 17 ಸರಣಿಯ ಶಕ್ತಿಶಾಲಿ ಫೋನ್
Xiaomi 17 Series
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 21, 2025 | 12:07 PM

Share

ಬೆಂಗಳೂರು (ಸೆ. 21): ಭಾರತ ಸೇರಿದಂತೆ ಪ್ರಪಂಚದಾದ್ಯಂತ ಐಫೋನ್ 17 ಸರಣಿಯ ಕ್ರೇಜ್ ಜೋರಾಗಿದೆ. ಸೆಪ್ಟೆಂಬರ್ 19 ರಂದು, ಆಪಲ್ ಅಂಗಡಿಗಳ ಮುಂದೆ ಐಫೋನ್ 17 ಸರಣಿಯನ್ನು ಖರೀದಿಸಲು ಜನರ ಸಾಲುಗಟ್ಟಿ ನಿಂತಿರುವುದು ಕಂಡುಬಂದವು. ಇದೀಗ ಈ ಆಪಲ್ ಐಫೋನ್ 17 ಮಧ್ಯೆ ಚೀನಾದ ಆಪಲ್ ಎಂದು ಕರೆಯಲ್ಪಡುವ ಶಿಯೋಮಿ (Xiaomi), ಐಫೋನ್ 17 ರಂತೆಯೇ ತನ್ನ ಶಕ್ತಿಶಾಲಿ ಫೋನ್ ಶಿಯೋಮಿ 17 ಸರಣಿಯನ್ನು ಬಿಡುಗಡೆ ಮಾಡಲು ತಯಾರಾಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯನ್ನು ಸೆಪ್ಟೆಂಬರ್ 30 ರಂದು ಅನಾವರಣಗೊಳ್ಳಲಿದೆ. ಶಿಯೋಮಿಯ ಈ ಪ್ರಮುಖ ಸ್ಮಾರ್ಟ್‌ಫೋನ್ ಸರಣಿಯ ಪೂರ್ವ-ಬುಕಿಂಗ್ ಚೀನಾದಲ್ಲಿ ಪ್ರಾರಂಭವಾಗಿದೆ. ಶಿಯೋಮಿ 17 ಜೊತೆಗೆ, ಶಿಯೋಮಿ 17 ಪ್ರೊ ಮತ್ತು ಶಿಯೋಮಿ 17 ಪ್ರೊ ಮ್ಯಾಕ್ಸ್ ಅನ್ನು ಸಹ ಈ ಸರಣಿಯಲ್ಲಿ ಬಿಡುಗಡೆ ಮಾಡಲಾಗುವುದು.

ಈ ಶಿಯೋಮಿ ಸ್ಮಾರ್ಟ್‌ಫೋನ್ ಸರಣಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಪ್ರೊಸೆಸರ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಫೋನ್ ಹಿಂಭಾಗದಲ್ಲಿ ಲೈಕಾ-ಬ್ರಾಂಡೆಡ್ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ. ವರದಿಗಳ ಪ್ರಕಾರ, ಕಂಪನಿಯು ಶಿಯೋಮಿ ಪ್ಯಾಡ್ 8 ಸರಣಿಯನ್ನು ಸಹ ಬಿಡುಗಡೆ ಮಾಡಲಿದೆ.

ಶಿಯೋಮಿ ಈ ಸ್ಮಾರ್ಟ್‌ಫೋನ್ ಸರಣಿಗಾಗಿ ಮ್ಯಾಜಿಕ್ ಬ್ಯಾಕ್ ಸ್ಕ್ರೀನ್ ಅನ್ನು ಪ್ರದರ್ಶಿಸಿದೆ. ಈ ವಿಶಿಷ್ಟ ವೈಶಿಷ್ಟ್ಯವು ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಜೊತೆಗೆ ಫೋನ್‌ನ ದ್ವಿತೀಯ ಡಿಸ್​ಪ್ಲೇ ಆಗಿ ಕಾರ್ಯನಿರ್ವಹಿಸುತ್ತದೆ. ಈ ದ್ವಿತೀಯ ಡಿಎಸ್​ಪ್ಲೇಯು ಕರೆ ನೋಟಿಫಿಕೇಷನ್, ಮ್ಯೂಸಿಕ್ ಮತ್ತು ಬಳಕೆದಾರರಿಗೆ ಹಲವಾರು ಉಪಯುಕ್ತ ವಿಜೆಟ್‌ಗಳನ್ನು ಪ್ರದರ್ಶಿಸುತ್ತದೆ.

ಇದನ್ನೂ ಓದಿ
Image
ನೀವು ಹಳೆಯ ಫೋನ್ ಮಾರಾಟ ಮಾಡುವಾಗ ಕೇವಲ ಫ್ಯಾಕ್ಟರಿ ರೀಸೆಟ್ ಮಾಡಿದ್ರೆ ಸಾಲದು
Image
VIDEO: ಐಫೋನ್ 17 ಖರೀದಿಗೆ ನೂಕು-ನುಗ್ಗಲು: ಆಪಲ್ ಸ್ಟೋರ್ ಹೊರಗೆ ಹೊಡೆದಾಟ
Image
ಹೊಸ ಐಫೋನ್ ಖರೀದಿಗೆ ರಾತ್ರಿಯಿಂದಲೇ ಕ್ಯೂ ನಿಂತ ಜನರು: ಈ ಬಾರಿ ದಾಖಲೆ ಖಚಿತ
Image
ಯಾರಿಗೂ ತಿಳಿಯದಂತೆ ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ ನೋಡುವುದು ಹೇಗೆ?

ಶಿಯೋಮಿ 17 ಸರಣಿಯ ಫೀಚರ್ಸ್ ಏನು?

ಈ ಶಿಯೋಮಿ ಸ್ಮಾರ್ಟ್‌ಫೋನ್ ಸರಣಿಯು ಕಳೆದ ವರ್ಷ ಬಿಡುಗಡೆಯಾದ ಶಿಯೋಮಿ 15 ಸರಣಿಯ ಅಪ್‌ಗ್ರೇಡ್ ಆಗಿರುತ್ತದೆ. 15 ರ ನಂತರ ನೇರವಾಗಿ 17 ಸರಣಿಯನ್ನು ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ಶಕ್ತಿಯುತ ಕ್ಯಾಮೆರಾ ಮತ್ತು ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರುತ್ತದೆ. ಇದು ಆಂಡ್ರಾಯ್ಡ್ 16 ಆಧಾರಿತ ಹೈಪರ್‌ಓಎಸ್ 3 ನಲ್ಲಿಯೂ ಕಾರ್ಯನಿರ್ವಹಿಸುತ್ತದೆ.

Tech Tips: ನೀವು ಹಳೆಯ ಫೋನ್ ಮಾರಾಟ ಮಾಡುವಾಗ ಕೇವಲ ಫ್ಯಾಕ್ಟರಿ ರೀಸೆಟ್ ಮಾಡಿದ್ರೆ ಸಾಲದು

ಇತ್ತೀಚಿನ ಸೋರಿಕೆಯ ಪ್ರಕಾರ, ಶಿಯೋಮಿ 17 Pro 6.3-ಇಂಚಿನ LTPO AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಫೋನ್ 100W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 6,300mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ, ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 50MP ಟೆಲಿಫೋಟೋ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ.

ಶಿಯೋಮಿ 17 6.3-ಇಂಚಿನ 1.5K LTPO OLED ಡಿಸ್ಪ್ಲೇಯನ್ನು ಸಹ ಹೊಂದಿರುತ್ತದೆ. ಈ ಫೋನ್ 7000mAh ಬ್ಯಾಟರಿ ಮತ್ತು 100W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಇದು ಮೂರು 50MP ಕ್ಯಾಮೆರಾಗಳನ್ನು ಸಹ ಹೊಂದಿರುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು