AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಲೆಂಟೈನ್ಸ್ ಡೇ ಸೇಲ್​ನಲ್ಲಿ ಖರೀದಿಗೆ ಕ್ಯೂ: ಅತಿ ಕಡಿಮೆ ಬೆಲೆಗೆ 200MP ಕ್ಯಾಮೆರಾ ಫೋನ್

Xiaomi Valentine's Day Offer: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಅತಿ ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶವಿದೆ. ನೀವು ಶವೋಮಿ ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ ರಿಯಾಯಿತಿ ಕೊಡುಗೆಗಳ ಲಾಭವನ್ನು ಪಡೆಯಬಹುದು. ಈ ಸೇಲ್​ನಲ್ಲಿ 200 ಮೆಗಾ ಫಿಕ್ಸೆಲ್ ಕ್ಯಾಮೆರಾದ ರೆಡ್ಮಿ ನೋಟ್ 13 ಪ್ರೊ ಪ್ಲಸ್ ಫೋನನ್ನು ಅನ್ನು ಖರೀದಿಸಲು ಬಯಸಿದರೆ, ಇದರ ಕೊಡುಗೆಗಳ ವಿವರ ಇಲ್ಲಿದೆ.

ವ್ಯಾಲೆಂಟೈನ್ಸ್ ಡೇ ಸೇಲ್​ನಲ್ಲಿ ಖರೀದಿಗೆ ಕ್ಯೂ: ಅತಿ ಕಡಿಮೆ ಬೆಲೆಗೆ 200MP ಕ್ಯಾಮೆರಾ ಫೋನ್
redmi note 13 pro plus
Vinay Bhat
|

Updated on: Feb 12, 2024 | 1:57 PM

Share

ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಪ್ರಸಿದ್ಧ ಶವೋಮಿ ಕಂಪನಿ ಬಂಪರ್ ಆಫರ್ ಬಿಡುಗಡೆ ಮಾಡಿದೆ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಕಂಪನಿಯು ವ್ಯಾಲೆಂಟೈನ್ಸ್ ಡೇ ಸೇಲ್ (Xiaomi Valentine’s Day) ಅನ್ನು ನಡೆಸುತ್ತಿದೆ. ಇದರಲ್ಲಿ, ಶವೋಮಿಯ ವಿವಿಧ ಉತ್ಪನ್ನಗಳ ಮೇಲೆ ರಿಯಾಯಿತಿಗಳು ಮತ್ತು ಕೊಡುಗೆಗಳು ಲಭ್ಯವಿದೆ. ಕಳೆದ ವರ್ಷವಷ್ಟೇ ಕಂಪನಿಯು ರೆಡ್ಮಿ ನೋಟ್ 13 ಸರಣಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ನೀವು ರೆಡ್ಮಿ ನೋಟ್ 13 ಪ್ರೊ ಪ್ಲಸ್ ಅನ್ನು ಖರೀದಿಸಲು ಬಯಸಿದರೆ ಭರ್ಜರಿ ಡಿಸ್ಕೌಂಟ್​ನಲ್ಲಿ ಲಭ್ಯವಿದೆ. ಈ ಫೋನ್ 200 ಮೆಗಾ ಫಿಕ್ಸೆಲ್ ಕ್ಯಾಮೆರಾ ಆಯ್ಕೆಯಿಂದ ಕೂಡಿದೆ.

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಲೆದರ್ ಫಿನಿಶಿಂಗ್‌ನೊಂದಿಗೆ ಬರುತ್ತದೆ. IP68 ರೇಟಿಂಗ್ ಅನ್ನು ಹೊಂದಿದೆ. ಫೋಟೋಗ್ರಫಿಗೆ ಹೇಳಿ ಮಾಡಿಸಿದ ಕ್ಯಾಮೆರಾ ಅನುಭವ ಪಡೆಯಬಹುದು. ನೀವು ಈ ಫೋನ್ ಅನ್ನು ಖರೀದಿಸಲು ಬಯಸಿದರೆ, ಶವೋಮಿಯ ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ ಲಭ್ಯವಿರುವ ಕೊಡುಗೆಗಳ ವಿವರಗಳ ಕುರಿತು ಇಲ್ಲಿ ಓದಿ.

ಉಚಿತ OTT, ಅನಿಯಮಿತ 5G ಡೇಟಾ: ಇದು ಏರ್‌ಟೆಲ್​ನ ಬಂಪರ್ ಪ್ಲಾನ್

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಬೆಲೆ:

ಈ ಫೋನ್‌ನಲ್ಲಿ 8GB+256GB, 12GB+256GB ಮತ್ತು 12GB+512GB ಮಾದರಿಗಳನ್ನು ಒಳಗೊಂಡಿರುವ ಮೂರು ಸ್ಟೋರೇಜ್ ಆಯ್ಕೆಗಳು ಲಭ್ಯವಿವೆ. 8GB+256GB ಬೆಲೆ 31,999 ರೂ., 12GB + 256GB ಮಾದರಿಯ ಬೆಲೆ 33,999 ರೂ., 12GB + 512GB ಮಾದರಿಯ ಬೆಲೆ 35,999 ರೂ. ಆಗಿದೆ. ರೆಡ್ಮಿ ನೋಟ್ 13 ಪ್ರೊ ಪ್ಲಸ್ ಫ್ಯೂಷನ್ ಬ್ಲಾಕ್, ಫ್ಯೂಷನ್ ಪರ್ಪಲ್, ಫ್ಯೂಷನ್ ವೈಟ್ ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ.

ರೆಡ್ಮಿ ನೋಟ್ 13 ಪ್ರೊ ಪ್ಲಸ್ ವ್ಯಾಲೆಂಟೈನ್ಸ್ ಡೇ ಕೊಡುಗೆ:

ಈ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಲು, ನೀವು ಬ್ಯಾಂಕ್ ಕೊಡುಗೆಗಳ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಶವೋಮಿಯ Mi ಸ್ಟೋರ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಫೋನ್ ಅನ್ನು ಖರೀದಿಸಬಹುದು. ಐಸಿಐಸಿಐ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್-ಡೆಬಿಟ್ ಇಎಂಐ ಮೇಲೆ ರೂ. 2,000 ರಿಯಾಯಿತಿ ಲಭ್ಯವಿರುತ್ತದೆ. ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ರೂ 2,000 ತ್ವರಿತ ರಿಯಾಯಿತಿ ಪಡೆಯಬಹುದು.

ವಾಟ್ಸ್​ಆ್ಯಪ್​ನಿಂದ ಬಳಕೆದಾರರಿಗೆ ಉಪಯುಕ್ತವಾದ ಫೀಚರ್: ಇನ್ನುಂದೆ ಕಿರಿಕಿರಿ ಇರುವುದಿಲ್ಲ

ಎಮ್​ಐ ಎಕ್ಸ್​ಚೇಂಜ್ ಆಫರ್‌ನ ಅಡಿಯಲ್ಲಿ, ನೀವು ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಹೊಸ ಫೋನ್ ಖರೀದಿಸಲು ರೂ. 2,500 ವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ. ಈ ರೀತಿಯಾಗಿ ನೀವು ರೆಡ್ಮಿ ನೋಟ್ 13 ಪ್ರೊ ಪ್ಲಸ್ ಅನ್ನು ರೂ. 30,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ.

ರೆಡ್ಮಿ ನೋಟ್ 13 ಪ್ರೊ ಪ್ಲಸ್ ಫೀಚರ್ಸ್:

ರೆಡ್ಮಿಯ ಈ ಫೋನ್ 6.67 ಇಂಚಿನ 1.5K 3D ಕರ್ವ್ಡ್ AMOLED 120Hz ಡಿಸ್​ಪ್ಲೇಯೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಶನ್ 7200 ಅಲ್ಟ್ರಾ ಚಿಪ್‌ಸೆಟ್‌ನ ಬೆಂಬಲವನ್ನು ಹೊಂದಿದೆ. ಆಂಡ್ರಾಯ್ಡ್ 14 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಛಾಯಾಗ್ರಹಣಕ್ಕಾಗಿ 200MP+8MP+2MP ಕ್ಯಾಮೆರಾ ಲಭ್ಯವಿದೆ. ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 16MP ಮುಂಭಾಗದ ಕ್ಯಾಮೆರಾ ಇದೆ. ನೀವು 120W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?
Daily horoscope: ಈ ರಾಶಿಯವರಿಗೆ ಏಳು ಗ್ರಹಗಳ ಶುಭಫಲ, ಧನಯೋಗ
Daily horoscope: ಈ ರಾಶಿಯವರಿಗೆ ಏಳು ಗ್ರಹಗಳ ಶುಭಫಲ, ಧನಯೋಗ
ವಿಷ್ಣುವರ್ಧನ್ ಸಮಾಧಿ ಉಳಿವಿಗೆ ಪ್ರಯತ್ನಿಸಿದ ಸ್ಟಾರ್ ನಟರು ಯಾರು?
ವಿಷ್ಣುವರ್ಧನ್ ಸಮಾಧಿ ಉಳಿವಿಗೆ ಪ್ರಯತ್ನಿಸಿದ ಸ್ಟಾರ್ ನಟರು ಯಾರು?
ಒಡಿಶಾದಲ್ಲಿ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿ
ಒಡಿಶಾದಲ್ಲಿ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿ
ವಿಷ್ಣು ಸಮಾಧಿ ಧ್ವಂಸ: ವಿಷಯ ತಿಳಿದಾಗ ಸುದೀಪ್ ಮೊದಲ ಪ್ರತಿಕ್ರಿಯೆ ಹೇಗಿತ್ತು
ವಿಷ್ಣು ಸಮಾಧಿ ಧ್ವಂಸ: ವಿಷಯ ತಿಳಿದಾಗ ಸುದೀಪ್ ಮೊದಲ ಪ್ರತಿಕ್ರಿಯೆ ಹೇಗಿತ್ತು
ಅನುದಾನ ಕೇಳಿದ್ರೆ ಜಾತಿ ಯಾವುದು ಅಂದ್ರು: ಸಚಿವರ ವಿರುದ್ಧ ಶಾಸಕ ಆರೋಪ
ಅನುದಾನ ಕೇಳಿದ್ರೆ ಜಾತಿ ಯಾವುದು ಅಂದ್ರು: ಸಚಿವರ ವಿರುದ್ಧ ಶಾಸಕ ಆರೋಪ
ಅಹಮದಾಬಾದ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಕೊಲೆ; ತೀವ್ರಗೊಂಡ ಪ್ರತಿಭಟನೆ
ಅಹಮದಾಬಾದ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಕೊಲೆ; ತೀವ್ರಗೊಂಡ ಪ್ರತಿಭಟನೆ
ಅನುದಾನದ ಕೊರತೆಯಿಂದ ನಗರದ ರಸ್ತೆ, ಕೆರೆ, ಪಾರ್ಕುಗಳು ಹಾಳಾಗಿವೆ: ವಿಶ್ವನಾಥ್
ಅನುದಾನದ ಕೊರತೆಯಿಂದ ನಗರದ ರಸ್ತೆ, ಕೆರೆ, ಪಾರ್ಕುಗಳು ಹಾಳಾಗಿವೆ: ವಿಶ್ವನಾಥ್
ಉಚ್ಚಾಟನೆಯಿಂದ ರಾಜಣ್ಣಗಾಗಿರುವಷ್ಟು ಅಪಮಾನ ನಂಗಾಗಿಲ್ಲ: ಯತ್ನಾಳ್
ಉಚ್ಚಾಟನೆಯಿಂದ ರಾಜಣ್ಣಗಾಗಿರುವಷ್ಟು ಅಪಮಾನ ನಂಗಾಗಿಲ್ಲ: ಯತ್ನಾಳ್