AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahesh Babu

Mahesh Babu

ಟಾಲಿವುಡ್​ನ ಸೂಪರ್​ ಸ್ಟಾರ್ ಮಹೇಶ್ ಬಾಬು ಅವರು ಚಿತ್ರರಂಗ ಹಿನ್ನೆಲೆಯಿಂದ ಬಂದವರು. ಅವರ ತಂದೆ ಕೃಷ್ಣ ತೆಲುಗಿನಲ್ಲಿ ಹೀರೋ ಹಾಗೂ ರಾಜಕಾರಣಿ ಆಗಿದ್ದರು. ಅವರು 1975ರ ಆಗಸ್ಟ್ 9ರಂದು ತಮಿಳುನಾಡಿನಲ್ಲಿ ಜನಿಸಿದರು. ಬಾಲ ಕಲಾವಿದನಾಗಿಯೇ ಮಹೇಶ್ ಬಾಬು ಚಿತ್ರರಂಗಕ್ಕೆ ಕಾಲಿಟ್ಟರು. 1999ರಲ್ಲಿ ‘ರಾಜ ಕುಮಾರುಡು’ ಸಿನಿಮಾ ಮೂಲಕ ಅವರು ಹೀರೋ ಆಗಿ ಮಿಂಚಿದರು. ಈ ಚಿತ್ರ ಅವರ ವೃತ್ತಿ ಜೀವನವನ್ನು ಬದಲಿಸಿತು. ‘ಪೋಕಿರಿ’, ‘ಮಹರ್ಷಿ’ ಮೊದಲಾದ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಮಹೇಶ್ ಬಾಬು ಅವರು ನಟಿ ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಹೇಶ್ ಬಾಬು ಮಗಳು ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.

ಇನ್ನೂ ಹೆಚ್ಚು ಓದಿ

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ ಗೌತಮ್

ಮಹೇಶ್ ಬಾಬು ಪುತ್ರ ಗೌತಮ್ ಅವರು ವಿಮರ್ಶೆ ನೀಡುವುದರಲ್ಲಿ ಯಾವುದೇ ಮುಲಾಜಿಗೆ ಒಳಗಾಗಿಲ್ಲ. ‘ಟಾಕ್ಸಿಕ್’ ಮಾತ್ರವಲ್ಲದೇ ಕೆಲವು ಬೇರೆ ಸಿನಿಮಾಗಳಿಗೂ ಕೂಡ ಅವರು ಕಡಿಮೆ ರೇಟಿಂಗ್ ನೀಡಿದ್ದಾರೆ. ಹಾಗಿದ್ದರೂ ಕೂಡ ‘ಟಾಕ್ಸಿಕ್’ ಚಿತ್ರಕ್ಕೆ ಅವರು ಅರ್ಧ ಸ್ಟಾರ್ ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ.

ಅನಿಲ್ ರವಿಪುಡಿ ಜೊತೆಗೆ ಮಹೇಶ್ ಬಾಬು ಸಿನಿಮಾ? ಸ್ಪಷ್ಟನೆ ಕೊಟ್ಟ ನಿರ್ದೇಶಕ

Mahesh Babu movie: ‘ವಾರಣಾಸಿ’ ಸಿನಿಮಾದ ಬಳಿಕ ಮಹೇಶ್ ಬಾಬು ಪ್ಯಾನ್ ವರ್ಲ್ಟ್ ನಟ ಆಗಲಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ‘ವಾರಣಾಸಿ’ ಸಿನಿಮಾ ಅನ್ನು ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ ರಾಜಮೌಳಿ. ಇದರ ನಡುವೆ ‘ವಾರಣಾಸಿ’ ಬಳಿಕ ಮಹೇಶ್ ಬಾಬು ತೆಲುಗಿನ ನಿರ್ದೇಶಕರೊಬ್ಬರ ಜೊತೆಗೆ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ಡಿಸಿ’ ಸಿನಿಮಾಗೆ ಅಲ್ಲು ಅರ್ಜುನ್, ಮಹೇಶ್ ಬಾಬು ಮೆಚ್ಚುಗೆ: ಹೆಚ್ಚಾಯಿತು ಕ್ರೇಜ್

ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಅವರು ಹೀರೋ ಆಗಿ ನಟಿಸಿರುವ ‘ಡಿಸಿ’ ಸಿನಿಮಾ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸುತ್ತಿದೆ. ತಮಿಳು ಹಾಗೂ ತೆಲುಗು ಮಾರುಕಟ್ಟೆಯಲ್ಲಿ ಈ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸ್ಟಾರ್ ಹೀರೋಗಳು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಮಹೇಶ್ ಬಾಬುಗೆ ಸಂದೀಪ್ ರೆಡ್ಡಿ ವಂಗಾ ವಿಶೇಷ ಶುಭಾಶಯ: ‘ಡೆವಿಲ್’ ಮತ್ತೆ ಮುನ್ನೆಲೆಗೆ?

ಸಂದೀಪ್ ರೆಡ್ಡಿ ವಂಗಾ ಮತ್ತು ಮಹೇಶ್ ಬಾಬು ಅವರು ಮಾಡಬೇಕಿದ್ದ ‘ಡೆವಿಲ್’ ಸಿನಿಮಾ ಈವರೆಗೂ ಸೆಟ್ಟೇರಿಲ್ಲ. ಆದರೆ ಆ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳಿಗೆ ಆಸೆ ಚಿಗುರಿದೆ. ಅದಕ್ಕೆ ಕಾರಣ ಆಗಿರುವುದು ಸಂದೀಪ್ ರೆಡ್ಡಿ ವಂಗಾ ಅವರ ಹೊಸ ಪೋಸ್ಟ್. ಆ ಬಗ್ಗೆ ಇಲ್ಲಿದೆ ಮಾಹಿತಿ..

ಮಾರುಕಟ್ಟೆಗೆ ಬರಲಿದೆ ‘ವಾರಣಾಸಿ’ ‘ರುದ್ರ ಲಾಕೆಟ್’ ಹಾಗೂ ಟೀ-ಶರ್ಟ್ಸ್

ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 'ವಾರಾಣಸಿ' ಸಿನಿಮಾದಿಂದ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರತಂಡವು ಅಧಿಕೃತ ಮರ್ಚಂಡೈಸ್ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದರಲ್ಲಿ ರುದ್ರ ಲಾಕೆಟ್ ಹಾಗೂ ಟೀ-ಶರ್ಟ್‌ಗಳು ಲಭ್ಯವಿರಲಿವೆ. ಈ ಅಪರೂಪದ ಪ್ರಚಾರದ ವೈಖರಿ ಮಹೇಶ್ ಬಾಬು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹಾಗೂ ಸಂಭ್ರಮವನ್ನು ಹೆಚ್ಚಿಸಿದೆ.

ಅಣ್ಣನ ಮಗನ ಸಿನಿಮಾ ಬೆಂಬಲಕ್ಕೆ ನಿಲ್ಲದ ಮಹೇಶ್ ಬಾಬು; ಅಭಿಮಾನಿಗಳ ಬೇಸರ

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ತಮ್ಮ ಅಣ್ಣನ ಮಗನ ಚೊಚ್ಚಲ ಸಿನಿಮಾದ ಪ್ರಚಾರದಿಂದ ದೂರ ಉಳಿದು ದೊಡ್ಡ ಚರ್ಚೆಗೆ ಕಾರಣವಾಗಿದ್ದಾರೆ. ಕೇವಲ ಟ್ವೀಟ್ ಮೂಲಕ ಶುಭ ಹಾರೈಸಿದ ಮಹೇಶ್ ನಡವಳಿಕೆಗೆ ಟೀಕೆ ವ್ಯಕ್ತವಾಗಿದೆ. ಸಿನಿಮಾ ಉದ್ಯಮದಲ್ಲಿ ಕೌಟುಂಬಿಕ ಸಂಬಂಧಗಳಿಗಿಂತ ವ್ಯವಹಾರ ಹಾಗೂ ವೈಯಕ್ತಿಕ ಲೆಕ್ಕಾಚಾರಗಳೇ ಮುಖ್ಯವಾಗುತ್ತಿವೆಯೇ ಎಂಬ ಪ್ರಶ್ನೆ ಈಗ ಮೂಡಿದೆ.  

‘ವಾರಣಾಸಿ’ ಸಿನಿಮಾ ಅಬ್ಬರ; 3,500 ಜೂನಿಯರ್ ಆರ್ಟಿಸ್ಟ್‌ಗಳ ಜತೆ ಮಹೇಶ್ ಬಾಬು ಮಹಾಯುದ್ಧ

ಹಿಂದೆಂದೂ ಕಂಡಿರದ ದೃಶ್ಯವೈಭವ ಸೃಷ್ಟಿಸಲು ನಿರ್ದೇಶಕ ರಾಜಮೌಳಿ ಅವರು ತಯಾರಾಗಿದ್ದಾರೆ. ‘ವಾರಣಾಸಿ’ ಸಿನಿಮಾದಲ್ಲಿ ಅತಿ ದೊಡ್ಡ ಯುದ್ಧದ ಸೀನ್ ಇರಲಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಆ್ಯಕ್ಷನ್ ಸೀಕ್ವೆನ್ಸ್ ಆಗಿರಲಿದೆ ಎನ್ನಲಾಗಿದೆ. ಆ ಬಗ್ಗೆ ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ.

ರಾಜಮೌಳಿಯ ಐಮ್ಯಾಕ್ಸ್ ಥಿಯೇಟರ್ ಕನಸು ನನಸು ಮಾಡಿದ ನಟ ಮಹೇಶ್ ಬಾಬು

ದೃಶ್ಯ ವೈಭವ ಹಾಗೂ ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರಾಗಿರುವ ತೆಲುಗು ಚಿತ್ರರಂಗಕ್ಕೆ ಈ ಬೆಳವಣಿಗೆಯು ಬಹುದೊಡ್ಡ ಮೈಲಿಗಲ್ಲಾಗಿದೆ. ಪ್ರೇಕ್ಷಕರು ಇನ್ಮುಂದೆ ಜಾಗತಿಕ ಮಟ್ಟದ ಸಿನಿಮಾ ವೀಕ್ಷಣೆಯ ಅನುಭವವನ್ನು ಹೈದರಾಬಾದ್‌ನಲ್ಲೇ ಪಡೆಯಬಹುದಾಗಿದೆ ಎಂದು ಟಾಲಿವುಡ್ ಮಂದಿ ಖುಷಿಪಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ವಾರಣಾಸಿ’ ಸಿನಿಮಾಗೆ ಲೀಕ್ ಕಾಟ; ಭದ್ರತೆ ಹೆಚ್ಚಿಸಿದ ನಿರ್ದೇಶಕ ರಾಜಮೌಳಿ

ಈಗ ಲೀಕ್ ಆಗಿರುವ ಫೋಟೋದಲ್ಲಿ ಯಾವುದೇ ಕಲಾವಿದರು ಕಾಣಿಸಿಕೊಂಡಿಲ್ಲವಾದರೂ, ಚಿತ್ರದಲ್ಲಿ ಬಳಸಲಾಗುತ್ತಿರುವ ಬೃಹತ್ ಬ್ಲೂ-ಸ್ಕ್ರೀನ್‌ಗಳು ಈ ಸೀಕ್ವೆನ್ಸ್‌ಗೆ ಬೇಕಾದ ಹೈ-ಲೆವೆಲ್ ಗ್ರಾಫಿಕ್ಸ್ ಮತ್ತು ದೃಶ್ಯ ವೈಭವದ ಮುನ್ಸೂಚನೆಯನ್ನು ನೀಡುತ್ತಿವೆ. ಆದರೆ ಪದೇ ಪದೇ ಈ ರೀತಿ ಲೀಕ್ ಆಗುತ್ತಿರುವುದರಿಂದ ಸಿನಿಮಾದ ಹಲವು ಅಂಶಗಳು ಬಹಿರಂಗ ಆದಂತೆ ಆಗುತ್ತಿದೆ.

ಸದ್ಯಕ್ಕಂತೂ ಸೆಟ್ಟೇರಲ್ಲ ಮಹೇಶ್​ ಬಾಬು-ಪ್ರಶಾಂತ್ ನೀಲ್ ಸಿನಿಮಾ; ಇಲ್ಲಿದೆ ಕಾರಣಗಳ ಪಟ್ಟಿ

ಮಹೇಶ್ ಬಾಬು ಮತ್ತು ಪ್ರಶಾಂತ್ ನೀಲ್ ಸಿನಿಮಾ ಕುರಿತ ಚರ್ಚೆಗಳು ಭಾರೀ ಸದ್ದು ಮಾಡುತ್ತಿವೆ. 'ಡ್ರಾಗನ್' ಗ್ಲಿಂಪ್ಸ್ ನಂತರ ಈ ನಿರೀಕ್ಷೆ ಹೆಚ್ಚಿದ್ದರೂ, ಸದ್ಯಕ್ಕೆ ಈ ಕಾಂಬಿನೇಷನ್ ಸಾಧ್ಯವಿಲ್ಲ. ಪ್ರಶಾಂತ್ ನೀಲ್ ಅವರ 'ಡ್ರಾಗನ್' ಮತ್ತು 'ಸಲಾರ್ 2' ಹಾಗೂ ಮಹೇಶ್ ಬಾಬು ಅವರ ಮುಂದಿನ ಬಿಡುವಿಲ್ಲದ ಶೆಡ್ಯೂಲ್‌ನಿಂದಾಗಿ ಈ ಬಿಗ್ ಪ್ರಾಜೆಕ್ಟ್ ತಡವಾಗಲಿದೆ. ಅಸಲಿ ಕಾರಣಗಳನ್ನು ಇಲ್ಲಿ ತಿಳಿಯಿರಿ.

‘ವಾರಣಾಸಿ’ ಶೂಟಿಂಗ್​​ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು

ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಶೂಟಿಂಗ್ ನೀರಿಲ್ಲದೆ ಸ್ಥಗಿತಗೊಂಡಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಮುದ್ರದ ಸೆಟ್ ಹಾಕಲು 150 ಟ್ಯಾಂಕರ್ ನೀರು ಕೇಳಿದ್ದ ಮನವಿಯನ್ನು ಜಲ ಮಂಡಳಿ ತಿರಸ್ಕರಿಸಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಮಹೇಶ್ ಬಾಬು ನಟನೆಯ ಚಿತ್ರದ ರಿಲೀಸ್ ಮುಂದಕ್ಕೆ ಹೋಗುವ ಭೀತಿ ಅಭಿಮಾನಿಗಳನ್ನು ಕಾಡುತ್ತಿದೆ.

ವಾರಣಾಸಿಯನ್ನೇ ಮರುಸೃಷ್ಟಿಸಿದ ರಾಜಮೌಳಿ; ಫೋಟೋ ವೈರಲ್

SS Rajamouli: ಮಹೇಶ್ ಬಾಬು-ರಾಜಮೌಳಿ ಸಿನಿಮಾದ ವಾರಣಾಸಿ ಸೆಟ್ ಫೋಟೋಗಳು ಲೀಕ್ ಆಗಿವೆ. ನಿಜವಾದ ವಾರಣಾಸಿಯಲ್ಲಿ ಶೂಟಿಂಗ್ ಕಷ್ಟವಾದ್ದರಿಂದ ರಾಜಮೌಳಿ ಹೈದರಾಬಾದ್‌ನಲ್ಲಿ ಭವ್ಯವಾದ ಸೆಟ್ ಮರುಸೃಷ್ಟಿಸಿದ್ದಾರೆ. ಹಿಂದಿನ ಲೀಕ್‌ಗಳಿಂದಾಗಿ ಕಠಿಣ ನಿಯಮಗಳ ನಡುವೆಯೂ ಫೋಟೋಗಳು ವೈರಲ್ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿವೆ.