AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ​ಮಾರ್ಕೆಟ್​ನಲ್ಲಿ ಶಾಪಿಂಗ್​ಗಾಗಿ ಹೋದವರಿಗೆ ಕಂಡಿದ್ದು ಹೆಬ್ಬಾವು! ಗ್ರಾಹಕರು ಕಂಗಾಲು

ಹೆಬ್ಬಾವು ನೋಡಿದ ಗ್ರಾಹರು ಒಮ್ಮೆಲೆ ಭಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಸೂಪರ್ ​ಮಾರ್ಕೆಟ್​ನಲ್ಲಿ ಶಾಪಿಂಗ್​ಗಾಗಿ ಹೋದವರಿಗೆ ಕಂಡಿದ್ದು ಹೆಬ್ಬಾವು! ಗ್ರಾಹಕರು ಕಂಗಾಲು
ಸೂಪರ್ ​ಮಾರ್ಕೆಟ್​ನಲ್ಲಿ ಶಾಪಿಂಗ್​ಗಾಗಿ ಹೋದವರಿಗೆ ಕಂಡಿದ್ದು ಹೆಬ್ಬಾವು!
Follow us
TV9 Web
| Updated By: Digi Tech Desk

Updated on:Aug 19, 2021 | 12:13 PM

ಹಾವು ಅಂದಾಕ್ಷಣ ಭಯವಾಗುವುದಂತೂ ಸತ್ಯ. ಅದರಲ್ಲಿಯೂ ಹೆಬ್ಬಾವು ಒಮ್ಮೆಲೆಗೆ ನಿಮ್ಮ ಮುಂದೆ ಬಂದುಬಿಟ್ಟರೆ? ಕ್ಷಣವನ್ನೂ ಊಹಿಸಿಕೊಳ್ಳಲೂ ಭಯವಾಗುತ್ತದೆ. ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್​ನಲ್ಲಿ ಮಸಾಲೆ ಪದಾರ್ಥಗಳು ಸಿಗುವ ಜಾಗದಲ್ಲಿ ಹೆಬ್ಬಾವು ಪತ್ತೆಯಾಗಿದೆ. ನೋಡಿದ ಗ್ರಾಹಕರು ಒಮ್ಮೆಲೆ ಭಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಹಿಲರಿ ಲೇಹ್ ಎಂಬ ಮಹಿಳೆಯು ಸೂಪರ್​ ಮಾರ್ಕೆಟ್​ನಲ್ಲಿ ಕಂಡು ಬಂದು ಹೆಬ್ಬಾವಿನ ಫೋಟೋವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಅದೆಷ್ಟೋ ಸಮಯದಿಂದ ಹೆಬ್ಬಾವು ಇದ್ದ ಜಾಗದಲ್ಲಿಯೇ ಇತ್ತು. ಮಸಾಲೆ ಪದಾರ್ಥಗಳ ಹಿಂದೆ ಅಡಿಗಿತ್ತು. ಯಾರಿಗೂ ಕಾಣಿಸುತ್ತಿರಲಿಲ್ಲ. ಮಸಾಲೆ ಪದಾರ್ಥಗಳನ್ನು ತೆಗೆಯಲು ಹೋದಾಗ ಹಾವು ಮುಖವನ್ನು ಹೊರಗೆ ಹಾಕಿದೆ. ಒಮ್ಮೆಲೆ ಭಯವಾಯಿತು ಎಂದು ಹೇಳಿದ್ದಾರೆ.

ಹಾವು ಸುಮಾರು 10 ಅಡಿ ಉದ್ದವಾಗಿತ್ತು. ಹಾವನ್ನು ಹೊರಗಡೆ ತರಲು ಹರಸಾಹಸವನ್ನೇ ಪಡಬೇಕಾಯಿತು. ಹಾವು ಹಿಡಿಯುವವರಿಗೆ ಕರೆಮಾಡಿ ಹಾವು ಸುರಕ್ಷಿತವಾಗಿರುವಂತೆ ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ.

ಸೂಪರ್​ಮಾರ್ಕೆಟ್​ ಮಾಲೀಕರು ಮಾತನಾಡಿ, ನಮ್ಮ ಅಂಗಡಿಗೆ ಹೊಸ ಗ್ರಾಹಕರೊಬ್ಬರು ಆಗಮಿಸಿದ್ದರು. ಮಸಾಲೆ ಪದಾರ್ಥಗಳ ಹಿಂದೆ ಅಡಗಿ ಕುಳಿತಿದ್ದರು. ಗ್ರಾಹಕರು ತುಂಬಾ ಅಪರೂಪದವರು ಎಂದು ಹೇಳಿದ್ದಾರೆ. ಹಾವು ಇತರ ಗ್ರಾಹಕರಿಗೆ ಏನಾದರೂ ಮಾಡಬಹುದೆಂಬ ಭಯವಿತ್ತು, ಗ್ರಾಹಕರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ:

Shocking News: ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!

Video: ವಿಮಾನವೇರಿದ ಹಾವು..; ಸರಕು ಹಾಕುವ ಜಾಗದಲ್ಲಿ ಸ್ನೇಕ್​ ನೋಡಿ ಕಂಗಾಲಾದ ಸಿಬ್ಬಂದಿ

Published On - 11:55 am, Wed, 18 August 21

ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು