Shocking Video: ಫಾಸ್ಟ್​ಫುಡ್​ ತಯಾರಿಸಲು ತಡವಾಗಿದೆ ಎಂದು ವಾದಕ್ಕಿಳಿದ ಗ್ರಾಹಕ; ಸಿಟ್ಟಿನಲ್ಲಿ ಕತ್ತರಿ ಹಿಡಿದು ಬಿಸಾಡಿದ ಹೋಟೆಲ್​ ಸಿಬ್ಬಂದಿ

Viral Video: ಕೋಪಗೊಂಡ ಗ್ರಾಹಕರೂ ಫೇಸ್ಬುಕ್​ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ ಅನ್ನುವಾಗ ಸಿಟ್ಟಿಗೆದ್ದ ಹೋಟೆಲ್ ಸಿಬ್ಬಂದಿ ಎದುರಿಗಿದ್ದ ಕತ್ತರಿಯನ್ನು ಎಸೆದಿದ್ದಾಳೆ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Shocking Video: ಫಾಸ್ಟ್​ಫುಡ್​ ತಯಾರಿಸಲು ತಡವಾಗಿದೆ ಎಂದು ವಾದಕ್ಕಿಳಿದ ಗ್ರಾಹಕ; ಸಿಟ್ಟಿನಲ್ಲಿ ಕತ್ತರಿ ಹಿಡಿದು ಬಿಸಾಡಿದ ಹೋಟೆಲ್​ ಸಿಬ್ಬಂದಿ
Follow us
| Updated By: Digi Tech Desk

Updated on:Aug 19, 2021 | 12:13 PM

ರೆಸ್ಟೋರೆಂಟ್​ ಅಥವಾ ಹೋಟೆಲ್ ​ಆಗಿರಲಿ ಕೆಲಸಗಾರರು ಹೆಚ್ಚು ಒತ್ತಡದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಹೋಟೆಲ್​ಗೆ ಹೆಚ್ಚು ಗ್ರಾಹಕರು ಬೇಕು ಅಂದಾದಾಗ ಸಿಬ್ಬಂದಿ ಬಹಳ ಪ್ರೀತಿಯಿಂದ ಸಹನೆಯಿಂದ ವರ್ತಿಸುವುದು ಅವಶ್ಯಕ. ಆದರೆ ಇಲ್ಲಿರುವ ಹೋಟೆಲ್​ನ ಕೆಲಸಗಾರ್ತಿ ಸಿಟ್ಟಿಗೆದ್ದು ಎದುರಿಗಿದ್ದ ಕತ್ತರಿಯನ್ನು ಗ್ರಾಹಕರಿಗೆ ಬಿಸಾಡಿದ್ದಾಳೆ. ವಿಡಿಯೋ ಇದೀಗ ವೈರಲ್ ಆಗಿದೆ.

ಹೋಟೆಲ್ ಮ್ಯಾನೇಜ್ ಮಾಡುವುದು ಚಾಲೆಂಜಿಂಗ್ ಆಗಿರುತ್ತದೆ. ಹೆಚ್ಚು ತಾಳ್ಮೆಯಿಂದ ವರ್ತಿಸುವುದರ ಜೊತೆಗೆ ಗ್ರಾಹಕರೊಂದಿಗೆ ಸಹನೆಯಿಂದ ನಡೆದುಕೊಳ್ಳಬೇಕಾದುದು ಅವಶ್ಯಕ. ಅದರಲ್ಲಿಯೂ ಕೆಲವು ಬಾರಿ ಫಾಸ್ಟ್ ಫುಡ್ ಕೆಲಸಗಾರರು 12-14 ತಾಸುಗಳ ಕಾಲ ದುಡಿಯುತ್ತಾರೆ. ಹಾಗಿರುವಾಗ ಹೆಚ್ಚು ಒತ್ತಡದಿಂದ ಕೆಲಸ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರೋರ್ವರು ಆರ್ಡ್ರ್​ ಮಾಡಿದ ಪದಾರ್ಥವನ್ನು ತರಲು ತಡವಾಗಿದೆ ಎಂದು ವಾದಕ್ಕೆ ಇಳಿಯುತ್ತಾರೆ. ಮ್ಯಾನೇಜರ್ ಬಳಿ ಮಾತನಾಡುವಂತೆ ಕೇಳಿದ್ದಾರೆ.

ಕೆಲಸಗಾರ್ತಿ ನಾನೇ ಮ್ಯಾನೇಜರ್ ಎನ್ನುವಂತೆ ವರ್ತಿಸುತ್ತಾ ಗ್ರಾಹಕರೊಡನೆ ವಾದಕ್ಕೆ ಇಳಿದಿದ್ದಾಳೆ. ಕೋಪಗೊಂಡ ಗ್ರಾಹಕರೂ ಫೇಸ್ಬುಕ್​ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ ಅನ್ನುವಾಗ ಸಿಟ್ಟಿಗೆದ್ದ ಹೋಟೆಲ್ ಸಿಬ್ಬಂದಿ ಎದುರಿಗಿದ್ದ ಕತ್ತರಿಯನ್ನು ಎಸೆದಿದ್ದಾಳೆ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾನು ಪೊಲೀಸರಿಗೆ ಕರೆ ಮಾಡುತ್ತಿದ್ದೇನೆ.. ಹೋಟೆಲ್ ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಎಂದು ಗ್ರಾಹಕ ಹೇಳಿರುವುದು ವಿಡಿಯೋದಲ್ಲಿ ನೋಡಬಹುದು. ಘಟನೆ ಬಾಲ್ಟಿಮೋರ್ ನಗರದಲ್ಲಿ ನಡೆದಿದ್ದು ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:

Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್

Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್

(Fast food Worker Throwing Scissors at customer watch Shocking Video)

Published On - 2:01 pm, Wed, 18 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ