AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!

ಬೈಕ್ ವೇಗವನ್ನು ಹೆಚ್ಚಿದ ತಕ್ಷಣ ವಿಚಿತ್ರವಾದ ಶಬ್ದ ಕೇಳಿಸಿದೆ. ಬಳಿಕ ಹ್ಯಾಂಡಲ್ ಕಡೆ ನೋಡಿದಾಕ್ಷಣ ಏನೋ ಅಂಟಿಕೊಂಡಂತೆ ಭಾಸವಾಗಿದೆ.

Shocking News: ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!
ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ ದೈತ್ಯಾಕಾರದ ನಾಗರಹಾವು!
TV9 Web
| Edited By: |

Updated on:Aug 10, 2021 | 1:41 PM

Share

ಮಹಾರಾಷ್ಟ್ರದ ಪುಣೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿ ಬೈಕ್​ನಲ್ಲಿ ಮನೆಗೆ ತೆರಳುತ್ತಿರುವಾಗ ಇದ್ದಕ್ಕಿದ್ದಂತೆ ಬೈಕ್​ನಿಂದ ವಿಚಿತ್ರ ಶಬ್ದವೊಂದು ಕೇಳಿಸಲು ಪ್ರಾರಂಭಿಸಿದೆ. ತಕ್ಷಣವೇ ಬೈಕ್ ನಿಲ್ಲಿಸಿ ಹ್ಯಾಂಡಲ್ ತೆರೆದು ನೋಡುವಷ್ಟರಲ್ಲಿ ದೈತ್ಯಾಕಾರದ ನಾಗರ ಹಾವು ಅಡಗಿರುವುದು ಕಂಡು ಬಂದಿದೆ.

ಘಟನೆ ಪುಣೆಯ ಇಂದಾಪುರ ನಿಮಗಾಂವ್ ಕೆಟ್ಟಿ ಗ್ರಾಮದ ಬಳಿ ನಡೆದಿದೆ. ಮಂಗಳವಾರ ಎಂದಿನಂತೆ ಕೃಷಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಘಟನೆ ನಡೆದಿದೆ. ಬೈಕ್ ವೇಗವನ್ನು ಹೆಚ್ಚಿದ ತಕ್ಷಣ ವಿಚಿತ್ರವಾದ ಶಬ್ದ ಕೇಳಿಸಿದೆ. ಬಳಿಕ ಹ್ಯಾಂಡಲ್ ಕಡೆ ನೋಡಿದಾಕ್ಷಣ ಏನೋ ಅಂಟಿಕೊಂಡಂತೆ ಭಾಸವಾಗಿದೆ. ಬೈಕ್ ನಿಲ್ಲಿಸಿದ ತಕ್ಷಣ ನಾಗರ ಹಾವು ಅಡಿಗಿ ಕುಳಿತಿರುವುದು ಕಂಡು ಬಂದಿದೆ.

Pune black cobra

ನಾಗರ ಹಾವು

ಹಾವು ಬೈಕ್ ಹ್ಯಾಂಡಲ್​ನ ಪೈಪ್​ನಲ್ಲಿ ಸಿಲುಕಿಕೊಂಡಿರುವುದರಿಂದ ಹೊರಬರಲು ಕಷ್ಟವಾಗುತ್ತಿತ್ತು. ಹಾವನ್ನು ನೋಡಿ ಸವಾರ ಕಂಗಾಲಾಗಿದ್ದಾರೆ. ಆದರೂ ಸಹ ಧೈರ್ಯದಿಂದ ಗ್ಯಾರೇಜ್​ವರೆಗೆ ಬೈಕ್ಅನ್ನು ತಳ್ಳಿಕೊಂಡು ಸಾಗಿದ್ದಾರೆ. ಹಾವು ಹಿಡಿಯುವವರನ್ನು ಕರೆಸಿ ಬೈಕ್​ ಹೆಡ್​ಲೈಟ್​ ತೆರೆದು ಹಾವನ್ನು ಹೊರತೆಗೆಯಲಾಗಿದೆ. ಹ್ಯಾಂಡಲ್​ ಕೊಳವೆಯಲ್ಲಿ ಸಿಲುಕಿದ್ದ ಹಾವನ್ನು ಹೊರತೆಗೆಯಲಾಗಿದೆ. ಹಾವು ಸುಮಾರು 5 ಅಡಿ ಉದ್ದವಾಗಿದೆ. ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.

ಇದನ್ನೂ ಓದಿ:

5 ಅಡಿ ಉದ್ದದ ಹಾವು ಸೆರೆ ಹಿಡಿದ ಮಹಾರಾಷ್ಟ್ರದ ಬಿಜೆಪಿ ನಾಯಕ ಗಿರೀಶ್ ಮಹಾಜನ್; ಧೈರ್ಯಕ್ಕೆ ನೆಟ್ಟಿಗರ ಶ್ಲಾಘನೆ

ಕಾಳಿಂಗ ಸರ್ಪಗಳು ದುರ್ಬಲ ಹಾವುಗಳನ್ನೇ ತಮ್ಮ ಆಹಾರ ಮಾಡಿಕೊಂಡಿರುವುದು ನಿಮಗೆ ಗೊತ್ತಾ?

Published On - 1:29 pm, Tue, 10 August 21

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್