AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blackbucks Death: ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವು

ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿ ಗುಡ್ಡದ ಮಧ್ಯೆ ಹೊಸದಾಗಿ ನಿರ್ಮಿಸಿದ ಹೆದ್ದಾರಿ ಸೇತುವೆ ಬಳಿ ಹಿಂಡಾಗಿ ಬರುತ್ತಿದ್ದ ಕೃಷ್ಣಮೃಗಗಳು ರಸ್ತೆ ದಾಟುವ ಪ್ರಯತ್ನದಲ್ಲಿ 30 ಅಡಿ ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಎಲ್ಲಾ 15 ಕೃಷ್ಣಮೃಗಗಳು ಗಂಭೀರವಾಗಿ ಗಾಯಗೊಂಡಿವೆ. ಇವುಗಳ ಪೈಕಿ 12 ಪ್ರಾಣಿಗಳು ಸತ್ತುಹೋಗಿವೆ.

Blackbucks Death: ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವು
ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವುImage Credit source: PTI
TV9 Web
| Edited By: |

Updated on:Jan 30, 2023 | 2:07 PM

Share

ಮುಂಬೈ: ಕಾಡಿನ ಮಧ್ಯೆ ಇರುವ ರಸ್ತೆಗಳನ್ನು ದಾಟಲು ಹೋಗಿ ಕಾಡು ಪ್ರಾಣಿಗಳು ಸಾಯುವ ಘಟನೆ ಬಹಳಷ್ಟು ವರದಿಯಾಗುತ್ತವೆ. ಜಿಂಕೆಗಳು ನಾಡಿಗೆ ಬಂದು ನಾಯಿಗಳ ಬಾಯಿಗೆ ಆಹಾರವಾಗುವುದೂ ಇದೆ. ಆದರೆ, ಸೇತುವೆಯಿಂದ ಕೆಳಗೆ ಹಾರಿ 12 ಕೃಷ್ಣಮೃಗಗಳು (Blackbucks) ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ಸಂಭವಿಸಿದೆ.

ಸೋಲಾಪುರ್ ಜಿಲ್ಲೆಯಲ್ಲಿ ಮಾಂದರುಪ್ ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಕೇಗಾಂವದಿಂದ ಬಿಜಾಪುರ ರಸ್ತೆಗೆ ಹೋಗುವ ಈ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಹಿಂಡಾಗಿ ಬರುತ್ತಿದ್ದ ಕೃಷ್ಣಮೃಗಗಳು ರಸ್ತೆ ದಾಟುವ ಪ್ರಯತ್ನದಲ್ಲಿ ಕೃಷ್ಣ ಮೇಲ್ಸೇತುವೆಯಿಂದ 30 ಅಡಿ ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಎಲ್ಲಾ 15 ಕೃಷ್ಣಮೃಗಗಳು ಗಂಭೀರವಾಗಿ ಗಾಯಗೊಂಡಿವೆ. ಇವುಗಳ ಪೈಕಿ 12 ಪ್ರಾಣಿಗಳು ಸತ್ತುಹೋಗಿವೆ.

ಸೋಲಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಪ್ರಾಣಿಗಳ ಕಳೆಬರವನ್ನು ಹೆದ್ದಾರಿಯಿಂದ ತೆರವುಗೊಳಿಸಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ರಸ್ತೆಯನ್ನು ಗುಡ್ಡ ಕತ್ತರಿಸಿ ನಿರ್ಮಿಸಿದ್ದು ನಾಲ್ಕು ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಸ್ಥಳದ ಸುತ್ತ ಹಸಿರು ಪ್ರದೇಶಗಳಿದ್ದು ಇಲ್ಲಿ ಜಿಂಕೆ ಇತ್ಯಾದಿ ವನ್ಯಜೀವಿಗಳು ಆಹಾರಕ್ಕಾಗಿ ತಿರುಗಾಡುತ್ತಿರುತ್ತವೆ. ಇವುಗಳ ಸಹಜ ಪರಿಸರದಲ್ಲಿ ರಸ್ತೆ ನಿರ್ಮಾಣ ಆಗಿರುವುದು ಈ ಪ್ರಾಣಿಗಳಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಹಿಂದೆಯೂ ಹೀಗೆ ರಸ್ತೆ ಸೇತುವೆಯಿಂದ ಬಿದ್ದು ಪ್ರಾಣಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದ್ದಿದೆ.

ಕೃಷ್ಣಮೃಗ ಮತ್ತು ಜಿಂಕೆ

ಕೃಷ್ಣಮೃಗ ಎಂದರೆ ಸಾಮಾನ್ಯವಾಗಿ ಸಲ್ಮಾನ್ ಖಾನ್ ಬೇಟೆ ಪ್ರಕರಣ ನೆನಪಿಗೆ ಬರುತ್ತದೆ. ಕೃಷ್ಣಮೃಗ ಮತ್ತು ಜಿಂಕೆ ಎರಡೂ ಒಂದೇ. ಕೃಷ್ಣಮೃಗ ಗಂಡು ಜಿಂಕೆ ಎಂಬುದಷ್ಟೇ ವ್ಯತ್ಯಾಸ. ಗಂಡು ಜಿಂಕೆಗೆ ಕೋಡುಗಳಿರುತ್ತವೆ. ಜಿಂಕೆಗೆ ಕೋಡು ಇರುವುದಿಲ್ಲ.

Published On - 4:05 pm, Sun, 29 January 23

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!