AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blackbucks Death: ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವು

ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿ ಗುಡ್ಡದ ಮಧ್ಯೆ ಹೊಸದಾಗಿ ನಿರ್ಮಿಸಿದ ಹೆದ್ದಾರಿ ಸೇತುವೆ ಬಳಿ ಹಿಂಡಾಗಿ ಬರುತ್ತಿದ್ದ ಕೃಷ್ಣಮೃಗಗಳು ರಸ್ತೆ ದಾಟುವ ಪ್ರಯತ್ನದಲ್ಲಿ 30 ಅಡಿ ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಎಲ್ಲಾ 15 ಕೃಷ್ಣಮೃಗಗಳು ಗಂಭೀರವಾಗಿ ಗಾಯಗೊಂಡಿವೆ. ಇವುಗಳ ಪೈಕಿ 12 ಪ್ರಾಣಿಗಳು ಸತ್ತುಹೋಗಿವೆ.

Blackbucks Death: ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವು
ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವುImage Credit source: PTI
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on:Jan 30, 2023 | 2:07 PM

Share

ಮುಂಬೈ: ಕಾಡಿನ ಮಧ್ಯೆ ಇರುವ ರಸ್ತೆಗಳನ್ನು ದಾಟಲು ಹೋಗಿ ಕಾಡು ಪ್ರಾಣಿಗಳು ಸಾಯುವ ಘಟನೆ ಬಹಳಷ್ಟು ವರದಿಯಾಗುತ್ತವೆ. ಜಿಂಕೆಗಳು ನಾಡಿಗೆ ಬಂದು ನಾಯಿಗಳ ಬಾಯಿಗೆ ಆಹಾರವಾಗುವುದೂ ಇದೆ. ಆದರೆ, ಸೇತುವೆಯಿಂದ ಕೆಳಗೆ ಹಾರಿ 12 ಕೃಷ್ಣಮೃಗಗಳು (Blackbucks) ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ಸಂಭವಿಸಿದೆ.

ಸೋಲಾಪುರ್ ಜಿಲ್ಲೆಯಲ್ಲಿ ಮಾಂದರುಪ್ ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಕೇಗಾಂವದಿಂದ ಬಿಜಾಪುರ ರಸ್ತೆಗೆ ಹೋಗುವ ಈ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಹಿಂಡಾಗಿ ಬರುತ್ತಿದ್ದ ಕೃಷ್ಣಮೃಗಗಳು ರಸ್ತೆ ದಾಟುವ ಪ್ರಯತ್ನದಲ್ಲಿ ಕೃಷ್ಣ ಮೇಲ್ಸೇತುವೆಯಿಂದ 30 ಅಡಿ ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಎಲ್ಲಾ 15 ಕೃಷ್ಣಮೃಗಗಳು ಗಂಭೀರವಾಗಿ ಗಾಯಗೊಂಡಿವೆ. ಇವುಗಳ ಪೈಕಿ 12 ಪ್ರಾಣಿಗಳು ಸತ್ತುಹೋಗಿವೆ.

ಸೋಲಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಪ್ರಾಣಿಗಳ ಕಳೆಬರವನ್ನು ಹೆದ್ದಾರಿಯಿಂದ ತೆರವುಗೊಳಿಸಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ರಸ್ತೆಯನ್ನು ಗುಡ್ಡ ಕತ್ತರಿಸಿ ನಿರ್ಮಿಸಿದ್ದು ನಾಲ್ಕು ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಸ್ಥಳದ ಸುತ್ತ ಹಸಿರು ಪ್ರದೇಶಗಳಿದ್ದು ಇಲ್ಲಿ ಜಿಂಕೆ ಇತ್ಯಾದಿ ವನ್ಯಜೀವಿಗಳು ಆಹಾರಕ್ಕಾಗಿ ತಿರುಗಾಡುತ್ತಿರುತ್ತವೆ. ಇವುಗಳ ಸಹಜ ಪರಿಸರದಲ್ಲಿ ರಸ್ತೆ ನಿರ್ಮಾಣ ಆಗಿರುವುದು ಈ ಪ್ರಾಣಿಗಳಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಹಿಂದೆಯೂ ಹೀಗೆ ರಸ್ತೆ ಸೇತುವೆಯಿಂದ ಬಿದ್ದು ಪ್ರಾಣಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದ್ದಿದೆ.

ಕೃಷ್ಣಮೃಗ ಮತ್ತು ಜಿಂಕೆ

ಕೃಷ್ಣಮೃಗ ಎಂದರೆ ಸಾಮಾನ್ಯವಾಗಿ ಸಲ್ಮಾನ್ ಖಾನ್ ಬೇಟೆ ಪ್ರಕರಣ ನೆನಪಿಗೆ ಬರುತ್ತದೆ. ಕೃಷ್ಣಮೃಗ ಮತ್ತು ಜಿಂಕೆ ಎರಡೂ ಒಂದೇ. ಕೃಷ್ಣಮೃಗ ಗಂಡು ಜಿಂಕೆ ಎಂಬುದಷ್ಟೇ ವ್ಯತ್ಯಾಸ. ಗಂಡು ಜಿಂಕೆಗೆ ಕೋಡುಗಳಿರುತ್ತವೆ. ಜಿಂಕೆಗೆ ಕೋಡು ಇರುವುದಿಲ್ಲ.

Published On - 4:05 pm, Sun, 29 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ