Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ಟೆನ್​ ವೆಡ್ಸ್​ ಪವನ್​; ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ವೀಡಿಷ್​ ಯುವತಿ ಮದುವೆಯಾಗಲು ಭಾರತಕ್ಕೆ ಬಂದಳು

Facebook : 2012ರಲ್ಲಿ ಇವರಿಬ್ಬರೂ ಫೇಸ್​ಬುಕ್​ ಮೂಲಕ ಪರಿಚಯವಾದರು. ಕಳೆದ ವರ್ಷ ತಾಜ್​ಮಹಲಿನ ಎದುರು ಭೇಟಿಯಾಗಿ ಮದುವೆ ಒಪ್ಪಂದ ಮಾಡಿಕೊಂಡರು. ಇದೀಗ ಸ್ವೀಡಿಷ್​ ಯುವತಿ ಭಾರತದ ಸೊಸೆ.

ಕ್ರಿಸ್ಟೆನ್​ ವೆಡ್ಸ್​ ಪವನ್​; ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ವೀಡಿಷ್​ ಯುವತಿ ಮದುವೆಯಾಗಲು ಭಾರತಕ್ಕೆ ಬಂದಳು
ಕ್ರಿಸ್ಟೆನ್ ಮತ್ತು ಪವನ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 30, 2023 | 12:51 PM

Viral News : ಅಂತರ್ಜಾಲ ಈಗ ಎಲ್ಲ ದೂರವನ್ನು ಹತ್ತಿರ ಮಾಡಿಬಿಡುತ್ತದೆ. ಆದರೆ ಈ ಅವಕಾಶ ಅನುಕೂಲವನ್ನು ಹೇಗೆ ಉಪಯೋಗಿಸುತ್ತೇವೆ ಎನ್ನುವುದು ನಮ್ಮ ನಮ್ಮ ತಿಳಿವಳಿಕೆಗೆ ಬಿಟ್ಟಿದ್ದು. 2012ರಲ್ಲಿ ಸ್ವೀಡಿಷ್​ ಯುವತಿ ಮತ್ತು ಭಾರತೀಯ ಯುವಕ ಫೇಸ್​ಬುಕ್​ ಮೂಲಕ ಸ್ನೇಹಿತರಾದರು. ಸ್ನೇಹ ಪ್ರೇಮಕ್ಕೆ ತಿರುಗಿತು. ಪ್ರೇಮ ಸಂಬಂಧದಿಂದ ಮದುವೆಯತನಕ. ಇದೀಗ ಇವರಿಬ್ಬರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.

ಪ್ರೀತಿಗೆ ಯಾವ ಭಾಷೆ, ದೇಶ, ಗಡಿಯ ಹಂಗಿಲ್ಲ. ಒಂದುಗೂಡಿಸುವುದಷ್ಟೇ ಅದರ ಉದ್ದೇಶ. 2012ರಲ್ಲಿ ಪರಿಚಯವಾದ ಇವರು ಫೋನ್​ ಮತ್ತು ವಿಡಿಯೋ ಕಾಲ್​ ಮೂಲಕ ಒಡನಾಡಿಕೊಂಡಿದ್ದರು. ನಂತರ ಒಂದು ವರ್ಷದ ಹಿಂದೆ ಆಗ್ರಾದಲ್ಲಿ ಇವರಿಬ್ಬರೂ ಮೊದಲ ಸಲ ಭೇಟಿಯಾದರು. ಇವರ ಮದುವೆಯ ನಿರ್ಣಯಕ್ಕೆ ತಾಜ್​ಮಹಲ್​ ಸಾಕ್ಷಿಯಾಯಿತು.

ಇದನ್ನೂ ಓದಿ : ಟಾಮಿ ವೆಡ್ಸ್​ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್

ಜನವರಿ 28ಕ್ಕೆ ಮದುವೆ ಏರ್ಪಾಡಾಯಿತು. ಮಾರು 6,000 ಕಿ.ಮೀ ಪ್ರಯಾಣಿಸಿ ಉತ್ತರ ಪ್ರದೇಶದ ಎಟಾ ನಗರಕ್ಕೆ ಇಟಾಹ್​ಕ್ಕೆ ವಧು ಕ್ರಿಸ್ಟೆನ್​ ಬಂದೇ ಬಿಟ್ಟಳು. ನೆರೆದ ಬಂಧುಬಳಗದವರೆದುರು ಶುಕ್ರವಾರ ಎಟಾದ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಯ ಪ್ರಕಾರ ಪವನ್​ ಮತ್ತು ಕ್ರಿಸ್ಟೆನ್ ಮದುವೆಯಾದರು.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಪವನ್​ ಡೆಹ್ರಾಡೂನ್​ ವಿವಿಯಿಂದ ಬಿ.ಟೆಕ್​ ಪದವಿ ಪೂರೈಸಿದ್ದಾನೆ. ಖಾಸಗೀ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ‘ನನ್ನ ಕುಟುಂಬವನ್ನು ಈ ಮದುವೆಯನ್ನು ಸಂಪೂರ್ಣ ಸಂತೋಷದಿಂದ ಸ್ವೀಕರಿಸಿದೆ’ ಎಂದು ಹೇಳಿದ್ದಾನೆ. ‘ಈ ಮೊದಲು ಕೂಡ ನಾನು ಭಾರತಕ್ಕೆ ಭೇಟಿ ನೀಡಿದ್ದೆ. ನನಗೆ ಬಹಳ ಇಷ್ಟವಾಯಿತು. ಇದೀಗ ಇಲ್ಲಿಯವರನ್ನೇ ಮದುವೆಯಾಗಿದ್ದು ಖುಷಿ ಇದೆ’ ಎಂದಿದ್ದಾಳೆ ಕ್ರಿಸ್ಟೆನ್​

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:51 pm, Mon, 30 January 23

ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು