AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ಟೆನ್​ ವೆಡ್ಸ್​ ಪವನ್​; ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ವೀಡಿಷ್​ ಯುವತಿ ಮದುವೆಯಾಗಲು ಭಾರತಕ್ಕೆ ಬಂದಳು

Facebook : 2012ರಲ್ಲಿ ಇವರಿಬ್ಬರೂ ಫೇಸ್​ಬುಕ್​ ಮೂಲಕ ಪರಿಚಯವಾದರು. ಕಳೆದ ವರ್ಷ ತಾಜ್​ಮಹಲಿನ ಎದುರು ಭೇಟಿಯಾಗಿ ಮದುವೆ ಒಪ್ಪಂದ ಮಾಡಿಕೊಂಡರು. ಇದೀಗ ಸ್ವೀಡಿಷ್​ ಯುವತಿ ಭಾರತದ ಸೊಸೆ.

ಕ್ರಿಸ್ಟೆನ್​ ವೆಡ್ಸ್​ ಪವನ್​; ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ವೀಡಿಷ್​ ಯುವತಿ ಮದುವೆಯಾಗಲು ಭಾರತಕ್ಕೆ ಬಂದಳು
ಕ್ರಿಸ್ಟೆನ್ ಮತ್ತು ಪವನ್
TV9 Web
| Edited By: |

Updated on:Jan 30, 2023 | 12:51 PM

Share

Viral News : ಅಂತರ್ಜಾಲ ಈಗ ಎಲ್ಲ ದೂರವನ್ನು ಹತ್ತಿರ ಮಾಡಿಬಿಡುತ್ತದೆ. ಆದರೆ ಈ ಅವಕಾಶ ಅನುಕೂಲವನ್ನು ಹೇಗೆ ಉಪಯೋಗಿಸುತ್ತೇವೆ ಎನ್ನುವುದು ನಮ್ಮ ನಮ್ಮ ತಿಳಿವಳಿಕೆಗೆ ಬಿಟ್ಟಿದ್ದು. 2012ರಲ್ಲಿ ಸ್ವೀಡಿಷ್​ ಯುವತಿ ಮತ್ತು ಭಾರತೀಯ ಯುವಕ ಫೇಸ್​ಬುಕ್​ ಮೂಲಕ ಸ್ನೇಹಿತರಾದರು. ಸ್ನೇಹ ಪ್ರೇಮಕ್ಕೆ ತಿರುಗಿತು. ಪ್ರೇಮ ಸಂಬಂಧದಿಂದ ಮದುವೆಯತನಕ. ಇದೀಗ ಇವರಿಬ್ಬರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.

ಪ್ರೀತಿಗೆ ಯಾವ ಭಾಷೆ, ದೇಶ, ಗಡಿಯ ಹಂಗಿಲ್ಲ. ಒಂದುಗೂಡಿಸುವುದಷ್ಟೇ ಅದರ ಉದ್ದೇಶ. 2012ರಲ್ಲಿ ಪರಿಚಯವಾದ ಇವರು ಫೋನ್​ ಮತ್ತು ವಿಡಿಯೋ ಕಾಲ್​ ಮೂಲಕ ಒಡನಾಡಿಕೊಂಡಿದ್ದರು. ನಂತರ ಒಂದು ವರ್ಷದ ಹಿಂದೆ ಆಗ್ರಾದಲ್ಲಿ ಇವರಿಬ್ಬರೂ ಮೊದಲ ಸಲ ಭೇಟಿಯಾದರು. ಇವರ ಮದುವೆಯ ನಿರ್ಣಯಕ್ಕೆ ತಾಜ್​ಮಹಲ್​ ಸಾಕ್ಷಿಯಾಯಿತು.

ಇದನ್ನೂ ಓದಿ : ಟಾಮಿ ವೆಡ್ಸ್​ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್

ಜನವರಿ 28ಕ್ಕೆ ಮದುವೆ ಏರ್ಪಾಡಾಯಿತು. ಮಾರು 6,000 ಕಿ.ಮೀ ಪ್ರಯಾಣಿಸಿ ಉತ್ತರ ಪ್ರದೇಶದ ಎಟಾ ನಗರಕ್ಕೆ ಇಟಾಹ್​ಕ್ಕೆ ವಧು ಕ್ರಿಸ್ಟೆನ್​ ಬಂದೇ ಬಿಟ್ಟಳು. ನೆರೆದ ಬಂಧುಬಳಗದವರೆದುರು ಶುಕ್ರವಾರ ಎಟಾದ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಯ ಪ್ರಕಾರ ಪವನ್​ ಮತ್ತು ಕ್ರಿಸ್ಟೆನ್ ಮದುವೆಯಾದರು.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಪವನ್​ ಡೆಹ್ರಾಡೂನ್​ ವಿವಿಯಿಂದ ಬಿ.ಟೆಕ್​ ಪದವಿ ಪೂರೈಸಿದ್ದಾನೆ. ಖಾಸಗೀ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ‘ನನ್ನ ಕುಟುಂಬವನ್ನು ಈ ಮದುವೆಯನ್ನು ಸಂಪೂರ್ಣ ಸಂತೋಷದಿಂದ ಸ್ವೀಕರಿಸಿದೆ’ ಎಂದು ಹೇಳಿದ್ದಾನೆ. ‘ಈ ಮೊದಲು ಕೂಡ ನಾನು ಭಾರತಕ್ಕೆ ಭೇಟಿ ನೀಡಿದ್ದೆ. ನನಗೆ ಬಹಳ ಇಷ್ಟವಾಯಿತು. ಇದೀಗ ಇಲ್ಲಿಯವರನ್ನೇ ಮದುವೆಯಾಗಿದ್ದು ಖುಷಿ ಇದೆ’ ಎಂದಿದ್ದಾಳೆ ಕ್ರಿಸ್ಟೆನ್​

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:51 pm, Mon, 30 January 23

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ