AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲಾಡ್ ಅಲ್ಲ ಅವಲಕ್ಕಿ; ಅತಿಯಾಯಿತು ಇಂಡಿಗೋ ಪ್ರಚಾರ ತಂತ್ರ ಎನ್ನುತ್ತಿರುವ ನೆಟ್ಟಿಗರು

Indigo : ಇಂದೇ ತಯಾರಿಸಿದ ಫ್ರೆಷ್​ ಸಲಾಡ್ ತಿಂದು ನೋಡಿ! ಈ ಪೋಸ್ಟ್​ ಬಗ್ಗೆ ಗೇಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಲವರು. ಅವರ ಪ್ರಚಾರ ತಂತ್ರಕ್ಕೆ ನಕ್ಕು ಸುಮ್ಮನಾಗಬೇಕು ಎಂದು ಕೆಲವರು ಹೇಳಿದ್ದಾರೆ.

ಸಲಾಡ್ ಅಲ್ಲ ಅವಲಕ್ಕಿ; ಅತಿಯಾಯಿತು ಇಂಡಿಗೋ ಪ್ರಚಾರ ತಂತ್ರ ಎನ್ನುತ್ತಿರುವ ನೆಟ್ಟಿಗರು
ಅವಲಕ್ಕಿ ಫೋಟೋ ಹಾಕಿ ಫ್ರೆಷ್​ ಸಲಾಡ್​ ಎನ್ನುತ್ತಿರುವ ಇಂಡಿಗೋ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 30, 2023 | 3:54 PM

Viral News : ಅವಲಕ್ಕಿ ಫೋಟೋ ಹಾಕಿ ಇಂದೇ ಮಾಡಿದ ತಾಜಾ ಸಲಾಡ್ ತಿನ್ನಿ ಎಂದು ಆನ್​​ಲೈನ್​ನಲ್ಲಿ ಇಂಡಿಗೋ ಏರ್​ಲೈನ್ಸ್​ ಟ್ವೀಟ್ ಮಾಡಿದೆ. ನೆಟ್ಟಿಗರು ಈ ಪೋಸ್ಟ್​ ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಇನ್ನೂ ಕೆಲವರು ತಲೆ ಕೆಟ್ಟಿದೆಯೇ ನಿಮಗೆ ಯಾಕೆ ತಪ್ಪು ದಾರಿಗೆ ಎಳೆಯುತ್ತೀರಾ ಪ್ರಚಾರದ ಹಪಾಹಪಿಗೆ ಎಂದು ಬಯ್ಯುತ್ತಿದ್ದಾರೆ. ಇನ್ನೂ ಕೆಲವರು ಸರಿಯಾಗಿ ಕಾಲೆಳೆಯುತ್ತಿದ್ದಾರೆ.

ಅವಲಕ್ಕಿ ತುಂಬಿದ ತಟ್ಟೆಯ ಮೇಲಿನಿಂದ ನಿಂಬೆಹಣ್ಣನ್ನು ಹಿಂಡುತ್ತಿರುವ ಈ ಫೋಟೋ ನೋಡಿದ ನೆಟ್ಟಿಗರು, ಇದು ಅವಲಕ್ಕಿ, ಇದನ್ನು ಸಲಾಡ್​ ಎಂದು ಹೇಳಿ ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಾ, ಅದೂ ಭಾರತೀಯರಿಗೆ? ಎಂದು ಕೇಳುತ್ತಿದ್ದಾರೆ. ಇಂದೋರ್​ನಲ್ಲಿರುವ ಎಲ್ಲರೂ ತುಂಬಾ ಆರೋಗ್ಯದಿಂದ ಇದ್ದಾರೆ, ಏಕೆಂದರೆ ಅವರು ಶಾವಿಗೆ, ಅವಲಕ್ಕಿಯ ಸಲಾಡ್ ಅನ್ನು ತಿನ್ನುತ್ತಾರೆ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : ಚೀನಾದ ರೆಸ್ಟೋರೆಂಟ್​ನಲ್ಲಿ ಗ್ರಾಹಕರಿಗೆ ಜ್ಯೂಸ್​ ಬದಲು ಲಿಕ್ವಿಡ್​ ಡಿಟರ್ಜೆಂಟ್​; 7 ಜನರು ಅಸ್ವಸ್ಥ

ನೀವು ವಿಮಾನದಲ್ಲಿ ರುಚಿಯಾದ ಪದಾರ್ಥಗಳನ್ನು ಕೊಡುತ್ತೀರಿ. ಸುಮ್ಮನೆ ಪ್ರಚಾರಕ್ಕಾಗಿ ಹೀಗೆ ಟ್ವೀಟ್ ಮಾಡಿ ಸಾರ್ವಜನಿಕರ ದಾರಿ ತಪ್ಪಿಸಬೇಡಿ ಎಂದು ಹೇಳಿದ್ದಾರೆ ಮತ್ತೊಬ್ಬರು. ಅನೇಕರು ಈ ಪೋಸ್ಟ್​ ಅನ್ನು ಗೇಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಆಕ್ರೋಶ ವ್ಯಕ್ತಪಡಿಸುವ ಅಗತ್ಯವೇನಿದೆ? ಇದು ಅವರ ಪ್ರಚಾರ ತಂತ್ರ ನಕ್ಕು ಸುಮ್ಮನಾಗಬೇಕು ಎಂದು ಕೆಲವರು ಹೇಳಿದ್ದಾರೆ. ಅವಲಕ್ಕಿ ತಿನ್ನುವಾಗೆಲ್ಲ ಈ ಪೋಹಾ ಜೋಕ್ಸ್​ ನೆನಪಿಸಿಕೊಳ್ಳುತ್ತೇವೆ ಎಂದಿದ್ದಾರೆ ಮತ್ತೂ ಕೆಲವರು.

ಇಷ್ಟು ದಿನ ಇಂದೋರ್​ ಅವಲಕ್ಕಿಗೆ ಹೆಸರುವಾಸಿಯಾಗಿತ್ತು. ಈಗಿದು ಸಲಾಡ್​ನ ರಾಜಧಾನಿಯಾಯಿತೇ? ಎಂದು ಮತ್ತೊಬ್ಬರು ಕೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 3:54 pm, Mon, 30 January 23

ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು