AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 40 ವರ್ಷ ಹಿಂದಿನ ಕೇಕ್ ತುಂಡು​ 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!

ಬ್ರಿಟನ್ ರಾಜ ಚಾರ್ಲ್ಸ್​ ಮತ್ತು ಪ್ರಿನ್ಸೆಸ್ ಡಯಾನಾ ಅವರ ಮದುವೆಯ ಸಂದರ್ಭದಲ್ಲಿ ಕತ್ತರಿಸಿದ್ದ ಕೇಕ್ ತುಂಡನ್ನು 19 ಲಕ್ಷ ರೂ.ಗೆ ಹರಾಜು ಹಾಕಲಾಗಿದೆ.

Viral News: 40 ವರ್ಷ ಹಿಂದಿನ ಕೇಕ್ ತುಂಡು​ 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!
ಹರಾಜಾದ ಕೇಕ್
TV9 Web
| Edited By: |

Updated on: Aug 13, 2021 | 7:43 PM

Share

ಲಂಡನ್​ನಲ್ಲಿ 40 ವರ್ಷಗಳ ಹಿಂದಿನ ಕೇಕ್ ಅನ್ನು ಹರಾಜಿಗೆ ಇಡಲಾಗಿದೆ. ಈ ಕೇಕ್​ನ ಒಂದು ತುಂಡಿಗೆ ಬರೋಬ್ಬರಿ 19 ಲಕ್ಷ ರೂ. ನೀಡಲಾಗಿದೆ. 4 ದಶಕಗಳ ಹಿಂದಿನ ಕೇಕ್​ಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಲು ಕಾರಣವೇನು? ಎಂದು ನಿಮಗೆ ಅಚ್ಚರಿಯಾಗಬಹುದು. ಇದು ಅಂತಿಂಥಾ ಕೇಕ್ ಅಲ್ಲ. ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯ ಕೇಕ್ ಎಂಬುದೇ ವಿಶೇಷ. 40 ವರ್ಷಗಳ ಹಿಂದೆ ಡಯಾನಾ ಹಾಗೂ ಚಾರ್ಲ್ಸ್​ ಮದುವೆಯ ಸಂದರ್ಭದಲ್ಲಿ ಕಟ್ ಮಾಡಲಾಗಿದ್ದ ಕೇಕ್ ಅನ್ನು ಹರಾಜಿಗಿಡಲಾಗಿದೆ.

ಬ್ರಿಟನ್ ರಾಜ ಚಾರ್ಲ್ಸ್​ ಮತ್ತು ಪ್ರಿನ್ಸೆಸ್ ಡಯಾನಾ ಅವರ ಮದುವೆಯ ನೆನಪಿಗಾಗಿ ಈ ಬೃಹತ್ ಕೇಕ್ ಅನ್ನು ಸಂರಕ್ಷಿಸಿ ಇಡಲಾಗಿತ್ತು. ಆ. 11ರಂದು ಈ ಕೇಕ್ ಅನ್ನು ಹರಾಜಿಗಿಡಲಾಗಿದ್ದು, 700 ಗ್ರಾಂಗಿಂತ ಹೆಚ್ಚು ಇರುವ ಕೇಕ್ ತುಂಡು ಸರಿಸುಮಾರು 19 ಲಕ್ಷ ರೂ.ಗೆ ಮಾರಾಟವಾಗಿದೆ. 1981ರ ಜುಲೈ 29ರಂದು ಚಾರ್ಲ್ಸ್​ ಹಾಗೂ ಡಯಾನಾ ಅವರ ಮದುವೆ ನಡೆದಿತ್ತು. ಆ ಮದುವೆಯಲ್ಲಿ ಕಟ್ ಮಾಡಲಾಗಿದ್ದ ಕೇಕ್ ತುಂಡೊಂದನ್ನು ಮೊಯಿರಾ ಸ್ಮಿತ್ ಎಂಬ ವ್ಯಕ್ತಿಗೆ ನೀಡಲಾಗಿತ್ತು. ಅವರು ಡಯಾನಾ ಹಾಗೂ ಚಾರ್ಲ್ಸ್ ಮದುವೆಯ ನೆನಪಿಗಾಗಿ ಆ ಕೇಕ್ ಅನ್ನು ಸಂರಕ್ಷಿಸಿ ಇಟ್ಟಿದ್ದರು. ಬಳಿಕ 2008ರಲ್ಲಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಆ ಕೇಕ್ ಅನ್ನು ಖರೀದಿಸಿದ ವ್ಯಕ್ತಿ ಆ ಕೇಕ್ ಅನ್ನು ಈಗ ಹರಾಜಿಗಿಟ್ಟಿದ್ದಾರೆ.

Cake Viral Photo

ಹರಾಜಾದ ಕೇಕ್

40 ವರ್ಷಗಳ ಹಿಂದೆ ಈ ಕೇಕ್ ತಯಾರಿಸಲು 14 ವಾರಗಳು ಬೇಕಾಗಿತ್ತು. ಕೇಕ್ ಮಾರ್ಜಿಪಾನ್ ಬೇಸ್ ಅನ್ನು ಹೊಂದಿರುವ ಈ ಕೇಕ್ ಅನ್ನು ಕೆಂಪು, ನೀಲಿ ಮತ್ತು ಬೆಳ್ಳಿಯಲ್ಲಿ ಚಿತ್ರಿಸಿದ ರಾಯಲ್ ಕೋಟ್ ಆಫ್ ಆರ್ಮ್ಸ್‌ನ ಸಕ್ಕರೆ ರೂಪದಲ್ಲಿ ಅಲಂಕರಿಸಲಾಗಿದೆ. ಈ ಕೇಕ್ ಅನ್ನು ಪಡೆದಿದ್ದ ಮೊಯಿರಾ ಸ್ಮಿತ್ ಕ್ಲಾರೆನ್ಸ್ ಹೌಸ್‌ನಲ್ಲಿರುವ ರಾಣಿ ಎಲಿಜಬೆತ್ ಕುಟುಂಬದ ಸದಸ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಮದುವೆಯ ದಿನ ಅವರಿಗೆ ಕೇಕ್ ನೀಡಲಾಗಿತ್ತು.

ಮದುವೆಯಾದ 11 ವರ್ಷಗಳಲ್ಲೇ ಚಾರ್ಲ್ಸ್ ಹಾಗೂ ಡಯಾನಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. 1996ರಲ್ಲಿ ಅವರಿಬ್ಬರೂ ವಿಚ್ಛೇದನ ಪಡೆದಿದ್ದರು. 1997ರಲ್ಲಿ ಕಾರು ಅಪಘಾತದಲ್ಲಿ ಡಯಾನಾ ಸಾವನ್ನಪ್ಪಿದ್ದರು.

ಇದನ್ನೂ ಓದಿ: Viral News: ವಿಚಿತ್ರವಾದರೂ ಸತ್ಯ; ಚಲಿಸುತ್ತಿದ್ದ ಆಟೋ ಮೇಲೆ ಹಲಸಿನ ಹಣ್ಣು ಬಿದ್ದು ಆಸ್ಪತ್ರೆ ಸೇರಿದ ಚಾಲಕ!

Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

(40-year-old piece of the wedding cake Piece of Prince Charles and Diana was auctioned with Large Amount)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್